ನವದೆಹಲಿ,ಏ.12- ಇರಾನ್ ವಿರುದ್ಧದ ಅಭಿಯಾನವು ಇಸ್ಲಾಮಿಕ್ ಗಣರಾಜ್ಯದ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳನ್ನು ಸದೆ ಬಡಿಯುವಲ್ಲಿ ಯಶಸ್ವಿಯಾಗಿದೆ. ಇರಾನ್ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದ್ದು, ಇದರಿಂದ ಅವರಿಗೆ ಕಾರ್ಯಾಚರಣೆ ನಡೆಸಲು ಕಷ್ಟವಾಗುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಈ ಅಭಿಯಾನ ಇನ್ನೂ ಮುಗಿದಿಲ್ಲ. ಆದರೆ, ನಾವು ಈಗಾಗಲೇ ಐತಿಹಾಸಿಕ ಸಾಧನೆ ಗಳನ್ನು ಮಾಡಿದ್ದೇವೆ ಎಂಬುದು ಸ್ಪಷ್ಟವಾಗಿದೆ. ಗಾಜಾದಲ್ಲಿ ಹಮಾಸ್, ಲೆಬನಾನ್ನಲ್ಲಿ ಹಿಜ್ಬುಲ್ಲಾ, ಸಿರಿಯಾದಲ್ಲಿ ಅಸ್ಸಾದ್ ಆಡಳಿತ, ಇರಾಕ್ನಲ್ಲಿ ಮಿಲಿಟಿಯಾಗಳು, ಯೆಮೆನ್ನಲ್ಲಿನ ಹೌಥಿ ಬಂಡುಕೋರರ ಮೂಲಕ ಇರಾನ್ ನಮ ಕತ್ತು ಹಿಸುಕಲು ಪ್ರಯತ್ನಿಸಿತು. ಆದರೆ, ನಾವೇ ಅದರ ಕತ್ತು ಹಿಸುಕುತ್ತಿದ್ದೇವೆ. ಅವರು ನಮ ಸರ್ವನಾಶದ ಬೆದರಿಕೆ ಹಾಕಿದರು ಮತ್ತು ಈಗ ಅವರೇ ಬದುಕುಳಿಯಲು ಹೋರಾಡು ತ್ತಿದ್ದಾರೆ ಎಂದು ಹೇಳಿದರು.
ಫೆ.28 ರಂದು ಇರಾನ್ ಮೇಲೆ ಯುಎಸ್-ಇಸ್ರೇಲ್ ಜಂಟಿ ದಾಳಿ ನಡೆಸಿದ ನಂತರ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾಗಿದೆ. ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ಶಾಂತಿ ಮಾತುಕತೆ ನಡೆಸುತ್ತಿದ್ದು, ಯಾವುದೇ ಒಪ್ಪಂದಕ್ಕೆ ಬಾರದ ಹಿನ್ನೆಲೆಯಲ್ಲಿ ಇಂದು ಮಾತುಕತೆ ಮುಂದುವರಿಯಲಿದೆ.
ಭಾನುವಾರ ಬೆಳಿಗ್ಗೆ, ಅಮೆರಿಕದ ಉಪಾಧ್ಯಕ್ಷ ಜೆ.ಡಿ .ವ್ಯಾನ್ಸ್ , ಎರಡೂ ಕಡೆಯವರ ನಡುವೆ 21 ಗಂಟೆಗಳ ಮಾತುಕತೆ ನಡೆದರೂ, ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಸುದ್ದಿ ಕೆಟ್ಟದಾಗಿದೆ. ಆದರೆ, ಇರಾನ್ಗೆ ಅಮೆರಿಕಕ್ಕಿಂತ ಕೆಟ್ಟದಾಗಿದೆ. ಅಮೆರಿಕವು ಉತ್ತಮ ನಂಬಿಕೆಯಿಂದ ಮಾತುಕತೆಗೆ ಪ್ರವೇಶಿಸಿತು ಮತ್ತು ಹೊಂದಿಕೊಳ್ಳುವಂತಿತ್ತು. ಆದರೆ, ಭವಿಷ್ಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂಬ ಸ್ಪಷ್ಟ ಮತ್ತು ದೃಢವಾದ ಬದ್ಧತೆ ಇರಾನ್ನಿಂದ ಸಿಕ್ಕಿಲ್ಲ. ಇದುವೇ ಅಮೆರಿಕದ ಪ್ರಮುಖ ಬೇಡಿಕೆ ಯಾಗಿದೆ ಎಂದು ಹೇಳಿದರು.
ಅಮೆರಿಕದ ಅಸಮಂಜಸ ಬೇಡಿಕೆಗಳೇ ಮಾತುಕತೆ ವಿಫಲ ವಾಗಲು ಕಾರಣ ಎಂದು ಟೆಹ್ರಾನ್ ಹೇಳಿದೆ. ಇರಾನ್ ನಿಯೋಗವು ಹಲವಾರು ಉಪಕ್ರಮಗಳನ್ನು ಮುಂದಿಟ್ಟಿತು. ಆದರೆ, ಅಮೆರಿಕದ ಕಡೆಯಿಂದ ಪ್ರಗತಿಗೆ ಅಡ್ಡಿಯಾಯಿತು. ಇದರಿಂದಾಗಿ ಮಾತುಕತೆಗಳು ಯಾವುದೇ ಫಲಿತಾಂಶಗಳಿಲ್ಲದೆ ಕೊನೆಗೊಳ್ಳಬೇಕಾಯಿತು ಎಂದು ಇರಾನ್ ರಾಜ್ಯ ಪ್ರಸಾರಕ ಹೇಳಿದೆ.
ಗಲ್್ಫ ಪ್ರದೇಶದಲ್ಲಿ ಸದ್ಯ ಎರಡು ವಾರಗಳ ಕಾಲ ಕದನ ವಿರಾಮ ಜಾರಿಯಲ್ಲಿದ್ದು, ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಮಾತುಕತೆ ಆಯೋಜಿಸಲಾಗಿದೆ.
ಎರಡೂ ಕಡೆಯವರು ಕದನ ವಿರಾಮ ಒಪ್ಪಂದವನ್ನು ಎತ್ತಿಹಿಡಿಯಬೇಕು ಎಂದು ಪಾಕಿಸ್ತಾನ ಒತ್ತಾಯಿಸಿತು. ಮುಂದಿನ ದಿನಗಳಲ್ಲಿ ಇಸ್ಲಾಮಿಕ್ ಗಣರಾಜ್ಯ ಇರಾನ್ ಮತ್ತು ಯುನೈಟೆಡ್ ಸ್ಟೇಟ್್ಸಆಫ್ ಅಮೆರಿಕ ನಡುವೆ ಒಪ್ಪಂದ ಮತ್ತು ಸಂವಾದವನ್ನು ಸುಗಮಗೊಳಿಸುವಲ್ಲಿ ಪಾಕಿಸ್ತಾನ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ ಮತ್ತು ಮುಂದುವರಿಸುತ್ತದೆ ಎಂದು ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದರು.
