ಅಹಮದಾಬಾದ್, ಜೂ.14- ಐಪಿಎಲ್-2025ರ 18ನೇ ಆವೃತ್ತಿಯ ಚಾಂಪಿಯನ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 20 ಕೋಟಿ ನಗದು ಬಹುಮಾನ ದೊರೆತರೆ, ರನ್ನರ್ ಅಪ್ ಪಂಜಾಬ್ ಕಿಂಗ್ಗೆ 13 ಕೋಟಿ ನಗದು ಬಹುಮಾನ ಪಡೆದುಕೊಂಡಿದೆ. ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 06 ರನ್ಗಳ ಅಂತರದಿಂದ ಸೋಲಿಸಿದ ಆರ್ಸಿಬಿ ತಂಡ ಮೊದಲ ಬಾರಿಗೆ ಟ್ರೋಫಿ ಪಡೆದುಕೊಂಡಿದೆ.
ವಿಶ್ವದ ಅತಿದೊಡ್ಡ ಐಪಿಎಲ್-2025, 18ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಡೈನಾಮಿಕ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಈ ಬಾರಿಯ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಬ್ಯಾಟರ್ ಸಾಯಿ ಸುದರ್ಶನ್ ಉದಯೋನ್ಮುಖ ಆಟಗಾರ ನಾಗಿ ಹೊರಹೊಮ್ಮಿದರು.
RCB ಹಬ್ಬ : ಬೆಂಗಳೂರಲ್ಲಿ ರಾಯಲ್ ಚಾಂಪಿಯನ್ಸ್ ಗ್ರ್ಯಾಂಡ್ ಸೆಲೆಬ್ರೆಷನ್ (Live)
ಫೈನಲ್ ಪಂದ್ಯ ಮುಗಿದ ನಂತರ ಟೀಂ ಇಂಡಿಯಾ ಟಿ-20 ನಾಯಕ ಸೂರ್ಯ ಕುಮಾರ್ ಯಾದವ್ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ಸ್ವೀಕರಿಸಿದರು. ಈ ಬಾರಿಯ ಟೂರ್ನಿಯಲ್ಲಿ ಅವರು 65.18 ರ ಸರಾಸರಿಯಲ್ಲಿ ಐದು ಅರ್ಧ ಶತಕಗಳೊಂದಿಗೆ 717 ರನ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಇದೇ ಮೊದಲ ಬಾರಿಗೆ ಆರಂಭಿಕರಲ್ಲದ ಆಟಗಾರನಾಗಿ 700 ರನ್ ಗಳಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾದರು. ಈ ಮಧ್ಯೆ ಸಾಯಿ ಸುದರ್ಶನ್ ಅತಿ ಹೆಚ್ಚು 759 ರನ್ ಗಳಿಸುವ ಮೂಲಕ ಆರಂಜ್ ಕ್ಯಾಪ್ ಮುಡಿಗೇರಿಸಿಕೊಂಡರೆ, ಪ್ರಸಿದ್ ಕೃಷ್ಣ ಅತಿ ಹೆಚ್ಚು 25 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಡೆದರು.
ಪ್ರಶಸ್ತಿ ವಿಜೇತರ ಪಟ್ಟಿ:
ಈ ಬಾರಿಯ ಮೌಲ್ಯಯುತ ಆಟಗಾರ- ಸೂರ್ಯಕುಮಾರ್ ಯಾದವ್
ಆರೆಂಜ್ ಕ್ಯಾಪ್ ವಿಜೇತ- ಸಾಯಿ ಸುದರ್ಶನ್ (759 ರನ್)
ಅತ್ಯಂತ ಹೆಚ್ಚಿನ ಕ್ಯಾಚ್ ಪಡೆದ ಆಟಗಾರ: ಕಮಿಂದು ಮೆಂಡಿಸ್
ಪರ್ಪಲ್ ಕ್ಯಾಪ್ ವಿಜೇತ- ಪ್ರಸಿದ್ ಕೃಷ್ಣ (25 ವಿಕೆಟ್)
ಫೇಪೈ ಪ್ರಶಸ್ತಿ- ಚೆನ್ನೈ ಸೂಪರ್ ಕಿಂಗ್ಸ್
ಈ ಬಾರಿಯ ಉದಯೋನ್ಮುಖ ಆಟಗಾರ- ಸಾಯಿ ಸುದರ್ಶನ್
ಸಾಯಿ ಸುದರ್ಶನ್ ಅವರು ಉದಯೋನ್ಮುಖ ಆಟಗಾರ, ಹೆಚ್ಚು ಬೌಂಡರಿ ಬಾರಿಸಿದ ಆಟಗಾರ ಮತ್ತಿತರ ಪ್ರಶಸ್ತಿಗೆ ಭಾಜನರಾಗಿದ್ದು, ಇವರೆಲ್ಲರೂ ತಲಾ ರೂ. 10 ಲಕ್ಷನಗದು ಬಹುಮಾನ ಸ್ವೀಕರಿಸಿದರು.