ಬೆಂಗಳೂರು, ಜೂ. 4- ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯ ಹರಾಜಿನ ವೇಳೆಯೇ ಈ ಬಾರಿ ಟ್ರೋಫಿ ಗೆಲ್ಲಲು ರೂಪಿಸಿದ್ದ ರಣತಂತ್ರದ ಕುರಿತು ತಂಡದ ಹೆಡ್ಕೋಚ್ ಆ್ಯಂಡಿ ಫ್ಲವರ್ ಅವರು ಸಂತಸ ಹಂಚಿಕೊಂಡಿದ್ದಾರೆ. ಬರೋಬ್ಬರಿ 83 ಕೋಟಿ ರೂ.ಗಳೊಂದಿಗೆ ಹರಾಜಿನ ಅಖಾಡಕ್ಕೆ ಧುಮುಕಿದ್ದ ನಾವು (ಆರ್ ಸಿಬಿ ಮಾಲೀಕರು), ಈ ಬಾರಿ ಕಪ್ ನಮದಾಗಿಸಿಕೊಳ್ಳಲು ಯಾವ ರೀತಿ ತಂಡವನ್ನು ಬಲಿಷ್ಠ ಗೊಳಿಸಿಕೊಳ್ಳಬೇಕೆಂಬುದರ ಬಗ್ಗೆ ಬೆಳಕು ಹರಿಸಿ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಡುವ ಆಟಗಾರರನ್ನೇ ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದ್ದೆವು ಎಂದು ಫ್ಲವರ್ ಹೇಳಿದ್ದಾರೆ.
ಟ್ರೋಫಿ ಗೆಲ್ಲಲು ಹರಾಜೇ ದೊಡ್ಡಹೆಜ್ಜೆ: ಆ್ಯಂಡಿ ಫ್ಲವರ್
ಒಂದು ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲು ಹರಾಜು ಒಂದು ದೊಡ್ಡ ಮೊದಲ ಹೆಜ್ಜೆ, ಮತ್ತು ನೀವು ಅದನ್ನು ಸಾಧ್ಯವಾದಷ್ಟು ಸರಿಯಾಗಿ ಪಡೆಯಲು ಪ್ರಯತ್ನಿಸಬೇಕು. ನಮ ತಂಡದ ಸಲಹೆಗಾರರಾದ ಮೊಬೊಬಾಟ್ ಅವರು ತಂಡಕ್ಕೆ ಸ್ಟಾರ್ ಆಟಗಾರರ ಖರೀದಿಗೆ ಹೆಚ್ಚು ಗಮನ ಹರಿಸದೆ ತಂಡಕ್ಕೆ ಟ್ರೋಫಿ ಗೆದ್ದುಕೊಡುವತ್ತ ಆಟಗಾರರ ಕಡೆಗೆ ಹೆಚ್ಚು ಮಹತ್ವ ನೀಡಿದ್ದರು. ಮುಖ್ಯವಾಗಿ ಬೌಲಿಂಗ್ ಬಲವನ್ನು ಬಲಪಡಿಸಿ ಕೊಳ್ಳುವತ್ತ ಚಿತಯ ಹರಿಸಿದ್ದರು. ಅವರ ಆ ಕಾರ್ಯತಂತ್ರದಿಂದಲೇ ತಂಡವು ಇಂದು ಚಾಂಪಿಯನ್ ಪಟ್ಟ ಅಲಂಕರಿಸಿದೆ ಎಂದು ಹೇಳಿದ್ದಾರೆ.
ಟೀಕೆಗಳನ್ನು ಎದುರಿಸಿದ್ದೆವು:
ಮೊದಲ ದಿನದ ಹರಾಜಿನ ನಂತರ ನಾವು ಅಭಿಮಾನಿಗಳಿಂದ ಸಾಕಷ್ಟು ಟೀಕೆಗಳನ್ನು ಸ್ವೀಕರಿಸಿದ್ದೆವು, ಈ ಬಾರಿಯು ಟ್ರೋಫಿ ಗೆದ್ದುಕೊಡಲು ಸಾಮರ್ಥ್ಯವಿಲ್ಲದ ಆಟಗಾರರನ್ನೇ ಖರೀದಿಸಿ ಹಣ ಪೋಲು ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಎರಡನೇ ದಿನದಂದು ತಮ ರಣತಂತ್ರವನ್ನು ಬದಲಿಸಿದೆವು. ಈ ಹಿಂದೆ ತಮ ತಂಡಗಳಿಗೆ ಟ್ರೋಫಿ ಗೆದ್ದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆರ್ಡ್ರಂತಹ ಆಟಗಾರರಿಗೆ ಸಹಿ ಮಾಡಿದೆವು. ಇನ್ನು ಯುವ ಸ್ಪಿನ್ನರ್ ಸುಯಾಶ್ ಶರ್ಮಾರನ್ನು ಖರೀದಿಸಿದು ಕೂಡ ತಂಡಕ್ಕೆ ಸಾಕಷ್ಟು ನೆರವು ಸಿಕ್ಕಿದೆ ಎಂದು ಫ್ಲವರ್ ಹೇಳಿದ್ದಾರೆ.
ಬೌಲರ್ಗಳ ಅಬ್ಬರ:
ಐಪಿಎಲ್ ಟೂರ್ನಿ ಆರಂಭವಾದ ದಿನದಿಂದಲೂ ಆರ್ಸಿಬಿ ತಂಡವು ಟ್ರೋಫಿ ಗೆಲ್ಲಲು ಕೆಲವೇ ಆಟಗಾರರನ್ನು ಅವಲಂಬಿಸಿತ್ತು. ಆದರೆ ಈ ಬಾರಿ ತಂಡವು ಸಂಘಟಿತವಾಗಿ ಹೋರಾಡಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದಕ್ಕೆ ತಕ್ಕಂತೆ ಜೋಶ್ ಹ್ಯಾಜಲ್ವುಡ್ (22 ವಿಕೆಟ್), ಕೃನಾಲ್ ಪಾಂಡ್ಯ (17 ವಿಕೆಟ್), ಭುವನೇಶ್ವರ್ ಕುಮಾರ್ (17 ವಿಕೆಟ್), ಯಶ್ ದಯಾಳ್ (13 ವಿಕೆಟ್) ಮತ್ತು ಸುಯಾಶ್ ಶರ್ಮಾ (8 ವಿಕೆಟ್ಗಳು) ಆರ್ಸಿಬಿ ಪರ ವಿಕೆಟ್ಗಳನ್ನು ಕಬಳಿಸಿ ್ರಾಂಚೈಸಿಗೆ ಐತಿಹಾಸಿಕ ಗೆಲುವು ತಂದುಕೊಟ್ಟರು.