Wednesday, June 11, 2025
Homeರಾಜಕೀಯ | Politicsಮೋದಿ ಆಡಳಿತಕ್ಕೆ ಜೀರೋ ಅಂಕ ನೀಡಿದ್ದ ಸಿಎಂ ಸಿದ್ದರಾಮಯ್ಯಗೆ ಜೋಶಿ ತಿರುಗೇಟು

ಮೋದಿ ಆಡಳಿತಕ್ಕೆ ಜೀರೋ ಅಂಕ ನೀಡಿದ್ದ ಸಿಎಂ ಸಿದ್ದರಾಮಯ್ಯಗೆ ಜೋಶಿ ತಿರುಗೇಟು

Joshi hits back at CM Siddaramaiah for giving zero marks to Modi administration

ಬೆಂಗಳೂರು,ಜೂ.10- ಪ್ರಧಾನಿ ನರೇಂದ್ರಮೋದಿ ಸರ್ಕಾರದ ಸಾಧನೆಗೆ ಶೂನ್ಯ ಅಂಕ ನೀಡುವವರಿಗೆ ಓದುವಂತಹ ಬುದ್ದಿ ಇರಬೇಕು. ಇಲ್ಲವೇ ಕಡೆಪಕ್ಷ ಓದುವಂತರನ್ನಾದರೂ ಜೊತೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ತಿರುಗೇಟು ಕೊಟ್ಟಿದ್ದಾರೆ.

ಹಿಂದೆ ವಂದೇ ಭಾರತ್‌ ಯೋಜನೆಯನ್ನು ಅಪಹಾಸ್ಯ ಮಾಡಿದ್ದರು. ಜಲಮಾರ್ಗ ಸ್ಥಾಪನೆಗೂ ಅವಕಾಶ ನೀಡಿರಲಿಲ್ಲ. ದೇಶದ ರಾಜಕೀಯ ಇತಿಹಾಸದಲ್ಲಿ ಇದು ಪರಿ ವರ್ತನೆಯ ಪರ್ವವಾಗಿದೆ.
ವಿಕಾಸ ಪರ್ವ ನಮ ಪರ್ವ. ಅಭಿವೃದ್ಧಿ ನಮ ಬದ್ಧತೆ. ಮೋದಿ ಸರ್ಕಾರಕ್ಕೆ ಶೂನ್ಯ ಅಂಕ ಕೊಡುವವರು ಸರಿಯಾಗಿ ಓದಿ ತಿಳಿದುಕೊಂಡು ಮಾತನಾಡಲಿ ಎಂದು ವ್ಯಂಗ್ಯವಾಡಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಸಂಸದ ಗೋವಿಂದ ಕಾರಜೋಳ ಹಾಗೂ ರಾಜ್ಯಸಭಾಸದಸ್ಯ ಜಗ್ಗೇಶ್‌ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪ್ರಹ್ಲಾದ್‌ ಜೋಷಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಅನಾವರಣಗೊಳಿಸಿದರು.

ಯಾರಾದರೂ ಕಾಲು ಕೆರೆದು ಜಗಳಕ್ಕೆ ಬಂದರೆ ಕ್ಷಾತ್ರ ತೇಜಸ್‌‍ದ್ದು ಇರುವ ಸರ್ಕಾರ ನಮದು. ಮುಂದಿ ವರ್ಷಗಳಲ್ಲಿ ಭಾರತ 3ನೇ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ. 2047ಕ್ಕೆ ವಿಕಸಿತ ಭಾರತವಾಗಿ ರೂಪುಗೊಳ್ಳಲು ನಮ ಎಲ್ಲಾ ರೋಡ್‌ ಮ್ಯಾಪ್‌ಗಳು ಸಿದ್ಧವಾಗಿವೆ ಎಂದು ಹೇಳಿದರು.

ಆಪರೇಷನ್‌ ಸಿಂಧೂರ ವಿಚಾರದಲ್ಲಿ ಪಾಕಿಸ್ತಾನದ ವರ್ಷನ್‌ ಮಾತನಾಡುವವರಿಗೆ ನಾನು ಉತ್ತರ ಕೊಡುವುದಿಲ್ಲ. ಅವರ ವಾಯುವೆಲೆ ನಾಶವಾಗಿವೆ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಇಂದು ಪ್ರಪಂಚದಾದ್ಯಂತ ಹೋಗಿ ಅವರು ಅಳುತ್ತಿದ್ದಾರೆ. ಕಾಂಗ್ರೆಸ್‌‍ ಪಕ್ಷದವರು ಯಾಕೆ ಪಾಕಿಸ್ತಾನಕ್ಕೆ ಅನುಕೂಲ ಆಗುವ ರೀತಿ ಯಾಕೆ ಮಾತಾಡುತ್ತಿದ್ದಾರೆ? ಅಕ್ರಮ ನುಸುಳುಕೋರರನ್ನು ತಡೆಯುವ ಕೆಲಸ ಆಗುತ್ತಿದೆ ಎಂದರು.

ಭಾರತ ಜಗತ್ತಿನ ನಾಲ್ಕನೇ ಅರ್ಥಿಕ ಶಕ್ತಿಯಾಗಿ ಹೊರಹೊಮಿದೆ. ಕಡು ಬಡತನ ಶೇ.21ನಿಂದ ಶೇ.5ಕ್ಕೆ ಇಳಿದಿದೆ. 26 ಕೋಟಿಯಷ್ಟು ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಇದು ಸಮರ್ಥ ನಾಯಕತ್ವ ಮತ್ತು ಸ್ಥಿರ ಸರ್ಕಾರದ ಪರಿಣಾಮ ಎಂದು ಹೇಳಿದರು.

ಹಿಂದೆ ಮಿಲಿಟರಿ ವಿಚಾರದಲ್ಲಿ ಸಮರ್ಥ ನಿರ್ಧಾರ ಕೈಗೊಳ್ಳಲಾಗದ ಸರ್ಕಾರ ಇತ್ತು. ಗಡಿ ಭಾಗದಲ್ಲಿ ಸಿಡಿಎಸ್‌‍ಗೆ ಮೂಲಸೌಕರ್ಯ ಕೊಟ್ಟಿದ್ದೇವೆ. ಶತ್ರು ದೇಶದ ಒಳಗೆ ಹೋಗಿ ನಮ ಮಿಸೈಲ್‌ ಹೊಡೆದು ಬಂದಿದ್ದೇವೆ. ಉಗ್ರ ಚಟುವಟಿಕೆ ಈಗ ದೇಶದೊಳಗೆ ಬಹುತೇಕ ಇಳಿದಿದೆ. ಜಮು ಕಾಶೀರದಲ್ಲಿ 370ನೇ ವಿಧಿ ರದ್ದು, ಏಕತಾ ಮೂರ್ತಿ, ರಾಮಮಂದಿರ, ಕಾಶಿ ವಿಶ್ವನಾಥ ಕಾರಿಡಾರ್‌, ಮಹಾಕಾಲ್‌ ಪ್ರಾಜೆಕ್ಟ್‌ ಎಲ್ಲವೂ ಆಗಿದೆ. ಗಡಿ ಪ್ರದೇಶಕ್ಕೆ ಮಾತ್ರ ಈಗ ಉಗ್ರ ಚಟುವಟಿಕೆ ಸೀಮಿತವಾಗಿದೆ. ಅದಕ್ಕೂ ಭಾರತ ತಕ್ಕ ಉತ್ತರ ಕೊಟ್ಟಿದೆ ಎಂದು ಕೇಂದ್ರದ ಸಾಧನೆಗಳ ಬಗ್ಗೆ ವಿವರಿಸಿದರು.

ಮೋದಿ-3 ಸರ್ಕಾರ ಒಂದು ವರ್ಷ ಪೂರೈಸಿದೆ, ಮೋದಿ ಸರ್ಕಾರ ಒಟ್ಟಾರೆ 11 ವರ್ಷ ಪೂರೈಸಿದೆ. 2014ರಿಂದೀಚೆಗೆ ಮೋದಿ ಸರ್ಕಾರದ ದೊಡ್ಡ ಕೊಡುಗೆ ದೇಶದಲ್ಲಿ ಸುಸ್ಥಿರ ಆಡಳಿತ ನೀಡಿರುವುದು. ಸುಸ್ಥಿರತೆ ಇಲ್ಲದ ಕಾರಣ ಹಿಂದಿನ ಯುಪಿಎ ಸರ್ಕಾರ ಅಸಮರ್ಥತೆ ಪ್ರದರ್ಶಿಸಿತ್ತು ಎಂದು ಆರೋಪಿಸಿದರು.

ಆರ್ಥಿಕ ಪ್ರಗತಿಯಲ್ಲಿ ಭಾರತ ಜಗತ್ತಿನ ನಾಲ್ಕನೇ ದೊಡ್ಡ ರಾಷ್ಟ್ರವಾಗಿ ಹೊರಹೊಮಿದೆ. 1 ಟ್ರಿಲಿಯನ್‌ ಆರ್ಥಿಕತೆಗೆ 30-40 ವರ್ಷ, 2 ಟ್ರಿಲಿಯನ್‌ ಆಗಲು 65 ವರ್ಷ ಆಯ್ತು..ಈಗ 2 ರಿಂದ 4 ಟ್ರಿಲಿಯನ್‌ ಆರ್ಥಿಕತೆಯ ದೇಶವಾಗಿದೆ.

ದೇಶದ ಬಡತನ ಶೇ.25ರಿಂದ ಶೇ.5ಕ್ಕೆ ಇಳಿದಿದೆ. 26 ಕೋಟಿ ಜನ ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಇದನ್ನು ಹೇಳಿದ ತಕ್ಷಣ ಕಾಂಗ್ರೆಸ್‌‍ ಪ್ರಶ್ನೆ ಮಾಡಬಹುದು. ಇದು ನಮ ಅಂಕಿಅಂಶ ಅಲ್ಲ, ವಿಶ್ವಬ್ಯಾಂಕ್‌ ಅಂಕಿ ಅಂಶ. ಒಂದು ಸಮರ್ಥ ಸರ್ಕಾರ, ಸಮರ್ಥ ನಾಯಕ ಇರುವ ಕಾರಣ ಪ್ರಗತಿಗೆ ಪೂರಕವಾಗಿದೆ ಎಂದು ಹೇಳಿದರು.

ಪಶುಪತಿ ಟು ತಿರುಪತಿವರೆಗೆ ರೆಡ್‌ ಕಾರಿಡಾರ್‌ ಹಾಕಿಸುತ್ತೇವೆ ಎಂದು ನಕ್ಸಲರು ಹೇಳಿದ್ದರು. ಈಗ ನಮ ಸರ್ಕಾರ ನಕ್ಸಲ್‌ ಚಟುವಟಿಕೆಯನ್ನು ಸಂಪೂರ್ಣ ತೊಡೆದು ಹಾಕಿದೆ ಎಂದರು.
ಡಿಫೆನ್‌್ಸ ರಪ್ತು ಪ್ರಮಾಣ 25 ಸಾವಿರ ಕೋಟಿಯಷ್ಟು ಹೆಚ್ಚಾಗಿದೆ.

ಜಗತ್ತಿನಲ್ಲಿ ಎಲ್ಲೇ ಭಾರತೀಯರಿಗೆ ತೊಂದರೆ ಆದರೆ ನಾವು ಅತ್ಯಂತ ಯಶಸ್ವಿಯಾಗಿ ನಮ ಜನರನ್ನು ವಾಪಸ್‌‍ ಕರೆತಂದಿದ್ದೇವೆ ಎಂದ ಅವರು, 70% ನಕ್ಸಲಿಸಂ ಕಡಿಮೆಯಾಗಿದೆ. 34 ಬಾರಿ ನಮ ರಕ್ಷಣಾ ಸಾಮಗ್ರಿಗಳ ರಪ್ತು ಜಾಸ್ತಿ ಆಗಿದೆ. 20 ಸಾವಿರ ಕೋಟಿ ರಪ್ತು ಹೆಚ್ಚಾಗಿದೆ ಎಂದು ಅಂಕಿಅಂಶ ನೀಡಿದರು.

ಕೋವಿಡ್‌ ಭಾರತಕ್ಕೆ ಬಂದರೆ ಕೋಟಿ ಕೋಟಿ ಜನ ಸಾಯ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ನಾವು ಯಾವ ರೀತಿ ಎದುರಿಸಿದ್ದೇವೆ ಅನ್ನೋದು ಜಗತ್ತು ನೋಡಿದೆ. ನಮ 137 ಕೋಟಿ ಜನರಿಗೆ ವ್ಯಾಕ್ಸಿನ್‌ ಕೊಟ್ಟು ಬೇರೆ ದೇಶಗಳಿಗೂ ಕಳಿಸಿಕೊಟ್ಟಿದ್ದೇವೆ ಎಂದು ಹೇಳಿದರು.

ಕೋವಿಡ್‌ ಬಳಿಕ ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದೆ. 2024ರಲ್ಲಿ ಡಿಜಿಟಲ್‌ ಟ್ರಾನ್ಸಾಕ್ಷನ್‌ 24 ಲಕ್ಷ ಕೋಟಿ ಆಗಿದೆ. ಶೇ.83 ಯುಪಿಐ ಖಾತೆಗಳು ಇವೆ. ಹಿಂದೆ ಆರ್ಥಿಕ ತಜ್ಞರು ಮೋದಿಯವರನ್ನು ಗೇಲಿ ಮಾಡಿದ್ದರು.

44 ಲಕ್ಷ ಕೋಟಿ ರೂ. ಡಿಬಿಟಿ ಮೂಲಕ ಫಲಾನುಭವಿಗಳಿಗೆ ಪಾವತಿಯಾಗಿದೆ. 6 ಲಕ್ಷದ 93 ಸಾವಿರ ಕಿ.ಮೀ. ಓಎಫ್‌ ಸಿ ಹಾಕಲಾಗಿದೆ. 70 ವರ್ಷಗಳಲ್ಲಿ 70-80 ಸಾವಿರ ಕೋಟಿ ಅಷ್ಟೇ ಸಾಲ ಮನ್ನಾವಾಗಿದೆ. ಕಳೆದ 6 ವರ್ಷಗಳಲ್ಲಿ 3.60 ಲಕ್ಷ ಕೋಟಿ. ರೂ. ಸಾಲ ಮನ್ನಾ ಮಾಡಲಾಗಿದೆ.

ಮಹಿಳಾ ಪೈಲಟ್‌ ಗಳಿರುವ ದೇಶಗಳ ಪೈಕಿ ಭಾರತ ನಂಬರ್‌ ಒನ್‌, ಕೇಂದ್ರ ಸಚಿವ ಸಂಪುಟದಲ್ಲಿ ಶೇ.60ರಷ್ಟು ಎಸ್‌‍ ಸಿ, ಎಸ್‌‍ ಟಿ, ಒಬಿಸಿ ಇದ್ದಾರೆ ಎಂದು ವಿವರಿಸಿದರು.
ಪ್ರಧಾನಮಂತ್ರಿ ಎಂಬ ಶಬ್ದ 30 ವರ್ಷಗಳಿಂದ ಕಾಂಗ್ರೆಸ್‌‍ ನವರಿಗೆ ಅಲರ್ಜಿ. ಯಾಕೆಂದರೆ ಅಲ್ಲಿ ನಕಲಿ ಗಾಂಧಿ ಪರಿವಾರದವರು ಇಲ್ಲ. ಅದಕ್ಕೆ ಪ್ರಧಾನಮಂತ್ರಿ ಎಂದ ಕೂಡಲೇ ಕಾಂಗ್ರೆಸ್‌‍ನವರಿಗೆ ತಲೆ ಕೆಟ್ಟು ಬಿಡುತ್ತದೆ. ಅದಕ್ಕೆ ಜನೌಷಧಿ ಕೇಂದ್ರ ಮುಚ್ಚುವ ಹುಚ್ಚಾಟ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌‍ ನಾಯಕರಿಗೆ ಸರ್ವ ಪಕ್ಷ ನಿಯೋಗದ ನೇತೃತ್ವ ವಹಿಸಿ ಕಳುಹಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಸ್ತಿನಾಪುರದ ಮೇಲೆ ದಾಳಿ ನಡೆದಾಗ ಕೌರವರು ಪಾಂಡವರು ಒಂದೇ ಎಂದು ಧರ್ಮರಾಯ ಹೇಳಿದ್ದ.ಅದು ನಮ ನೀತಿ. ಸರ್ವ ಪಕ್ಷ ನಿಯೋಗದಿಂದ ಭಾರತಕ್ಕೆ ವಿಶ್ವಮಟ್ಟದಲ್ಲಿ ಸಹಾಯವಾಗಿದೆ ಎಂದು ಜೋಷಿ ಹೇಳಿದರು.

RELATED ARTICLES

Latest News