Thursday, July 4, 2024
Homeರಾಷ್ಟ್ರೀಯಜುಲೈನಲ್ಲಿ ಮುಂಗಾರು ಮಳೆ ಹೇಗಿರಲಿದೆ..? ಹವಾಮಾನ ಇಲಾಖೆ ಹೇಳೋದೇನು..?

ಜುಲೈನಲ್ಲಿ ಮುಂಗಾರು ಮಳೆ ಹೇಗಿರಲಿದೆ..? ಹವಾಮಾನ ಇಲಾಖೆ ಹೇಳೋದೇನು..?

ನವದೆಹಲಿ,ಜು.2– ಮುಂಗಾರು ಮಾರುತಗಳು ಚುರುಕಾಗಿರುವುದರಿಂದ ಜುಲೈನಲ್ಲಿ ಭಾರತದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಐಎಂಡಿ ಮುನ್ಸೂಚನೆ ಪ್ರಕಾರ, ಈಶಾನ್ಯ ಭಾರತವನ್ನು ಹೊರತುಪಡಿಸಿ ದೇಶದ ಎಲ್ಲ ಪ್ರದೇಶಗಳಲ್ಲಿ ಜುಲೈನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಶೇಕಡಾ 80 ರಷ್ಟು ಸಂಭವನೀಯತೆ ಇದೆ.

ಮಾನ್ಸೂನ್‌ ಋತುವಿನ ದ್ವಿತೀಯಾರ್ಧದಲ್ಲಿ ಮಳೆ ಸುರಿಯಲು ಅನುಕೂಲಕರವಾಗುವ ಲಾ ನಿನಾ ಪರಿಣಾಮವು ಪ್ರಭಾವ ಬೀರುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್‌ ಮೊಹಾಪಾತ್ರ ಹೇಳಿದ್ದಾರೆ. ಮಾನ್ಸೂನ್‌ ಮೇ 30 ರಂದು ಬೇಗನೆ ಕೇರಳ ಮತ್ತು ಈಶಾನ್ಯದಲ್ಲಿ ಆವರಿಸಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಅದರ ಪ್ರಗತಿ ನಿಧಾನವಾಯಿತು.

ಇದು ವಾಯುವ್ಯ ಭಾರತದಲ್ಲಿ ಸುಡುವ ತೀವ್ರ ಶಾಖದ ಅಲೆಗಳಿಗೆ ಮತ್ತು ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್‌, ಬಿಹಾರ, ಛತ್ತೀಸ್‌‍ಗಢ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ದೀರ್ಘಕಾಲದ ಶುಷ್ಕ ಪರಿಸ್ಥಿತಿಗಳಿಗೆ ಕಾರಣವಾಯಿತು.

ಜೂನ್‌ 11 ರಿಂದ ಜೂನ್‌ 27 ರವರೆಗೆ ದೇಶದಲ್ಲಿ 16 ದಿನಗಳ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಇದು ಒಟ್ಟಾರೆ ಸಾಮಾನ್ಯಕ್ಕಿಂತ ಕಡಿಮೆ ಮಳೆಗೆ ಕಾರಣವಾಯಿತು ಎಂದು ಮೊಹಾಪಾತ್ರ ಹೇಳಿದರು. ಐಎಂಡಿ ಅಂಕಿ – ಅಂಶಗಳ ಪ್ರಕಾರ, ಜೂನ್‌ ನಲ್ಲಿ ದೇಶದಲ್ಲಿ 165.3 ಮಿ.ಮೀ ಸಾಮಾನ್ಯ ಮಳೆಗೆ ಬದಲಾಗಿ 147.2 ಮಿ.ಮೀ ಮಳೆಯಾಗಿದೆ. ಇದು ಒಂದು ತಿಂಗಳಲ್ಲಿ ಶೇಕಡಾ 11 ರಷ್ಟು ಮಳೆಯ ಕೊರತೆಯಾಗಿದೆ.

ಭಾರತೀಯ ಆರ್ಥಿಕತೆಯಲ್ಲಿ ಮಾನ್ಸೂನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಶೇಕಡಾ 50 ರಷ್ಟು ಕೃಷಿಭೂಮಿಗೆ ಮಳೆ ಬಿಟ್ಟರೆ ಬೇರೆ ಯಾವುದೇ ನೀರಾವರಿ ಮೂಲಗಳಿಲ್ಲ. ಮಾನ್ಸೂನ್‌ ಮಳೆಯು ದೇಶದ ಜಲಾಶಯಗಳು ಮತ್ತು ಜಲಾನಯನ ಪ್ರದೇಶಗಳನ್ನು ಮರುಪೂರಣ ಮಾಡಲು ಸಹ ನಿರ್ಣಾಯಕವಾಗಿದೆ.

ಭಾರತವು ಆಹಾರ ಧಾನ್ಯಗಳ ಪ್ರಮುಖ ರ್ತದಾರನಾಗಿ ಹೊರ ಹೊಮಿದೆ. ಆದರೆ, ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಕಳೆದ ವರ್ಷ ಅನಿಯಮಿತ ಮಾನ್ಸೂನ್‌ ಕಾರಣದಿಂದ ಬೆಲೆಗಳನ್ನು ನಿಯಂತ್ರಿಸಲು ಸಕ್ಕರೆ, ಅಕ್ಕಿ, ಗೋಽ ಮತ್ತು ಈರುಳ್ಳಿಯ ರ್ತಗಳನ್ನು ನಿರ್ಬಂಽಸಬೇಕಾಯಿತು.

ಆಹಾರವನ್ನು ಪೂರೈಕೆ ಮಾತ್ರವಲ್ಲದೇ ದ್ವಿಚಕ್ರ ವಾಹನಗಳು, ಫ್ರಿಜ್‌ಗಳು ಮತ್ತು ವೇಗವಾಗಿ ಮಾರಾಟವಾಗುವಗ್ರಾಹಕ ಸರಕುಗಳಿಗೆ (ಎಫ್‌ಎಂಸಿಜಿ) ಬೇಡಿಕೆಯನ್ನು ಹೆಚ್ಚಿಸವಲ್ಲಿ ಕೃಷಿ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಕೃಷಿ ಉತ್ಪಾದನೆ ಮತ್ತು ಆದಾಯದಲ್ಲಿನ ಹೆಚ್ಚಳವು ಜಿಡಿಪಿ ಬೆಳವಣಿಗೆಗೆ ನೇರವಾಗಿ ಕೊಡುಗೆ ನೀಡುವುದರ ಹೊರತಾಗಿ, ಕೈಗಾರಿಕಾ ಬೆಳವಣಿಗೆಯ ಹೆಚ್ಚಳಕ್ಕೂ ಕಾರಣವಾಗುತ್ತದೆ.

RELATED ARTICLES

Latest News