ಬೆಂಗಳೂರು, ಮೇ 7 – ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಹೋಗಿದ್ದ ಕಾಂತರಾ-1 ಚಿತ್ರದ ಸಹನಟ ಕಪಿಲ್ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ನಿನ್ನೆ ಕಾಂತರಾ-1ರ ಚಿತ್ರೀಕರಣ ಮುಗಿಸಿ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಸ್ನೇಹಿತರೊಂದಿಗೆ ಕಪಿಲ್ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸುಳಿಯಲ್ಲಿ ಸಿಲುಕಿದ ಕೇರಳ ಮೂಲದ ನಟ ಕಪಿಲ್ ಅವರನ್ನು ಸ್ನೇಹಿತರು ಹಾಗೂ ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಸಾವನ್ನಪ್ಪಿದ್ದಾರೆ. ಕೊಲ್ಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತರಾ-1 ಚಿತ್ರಕ್ಕೆ ಆರಂಭದಿಂದಲೂ ಸಂಕಷ್ಟಗಳು ಎದುರಾಗುತ್ತಿದ್ದು, ಈ ಹಿಂದೆ ಚಿತ್ರದ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾಗಿ 6 ಜನ ಗಂಭೀರವಾಗಿ ಗಾಯಗೊಂಡಿದ್ದರು.
2022ರಲ್ಲಿ ತೆರೆ ಕಂಡಿದ್ದ ಕಾಂತಾರ ಸಿನಿಮಾಕ್ಕೆ ಫ್ಯಾನ್ ಇಂಡಿಯಾದ ಸ್ಪರ್ಶ ಸಿಕ್ಕಿದ್ದು ದಾಖಲೆ ಮಟ್ಟದಲ್ಲಿ ಸದ್ದು ಮಾಡಿ ಆ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಈಗ ಕಾಂತರಾ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತರಾ-1 ಸಿನಿಮಾವು ಸಾಕಷ್ಟು ಕ್ರೇಜ್ ಹುಟ್ಟು ಹಾಕಿದ್ದು, ಸ್ಯಾಂಡಲ್ವುಡ್ ಅಲ್ಲದೆ ಕೇರಳ ಹಾಗೂ ಹಾಲಿವುಡ್ನ ಸಾಕಷ್ಟು ಸಹ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.