Thursday, June 19, 2025
Homeರಾಜ್ಯRCB ಸಂಭ್ರಮಾಚರಣೆ ಕುರಿತು ಸರ್ಕಾರಕ್ಕೆ ಕೆಎಸ್‌‍ಸಿಎ ಬರೆದ ಪತ್ರ ಬಹಿರಂಗ

RCB ಸಂಭ್ರಮಾಚರಣೆ ಕುರಿತು ಸರ್ಕಾರಕ್ಕೆ ಕೆಎಸ್‌‍ಸಿಎ ಬರೆದ ಪತ್ರ ಬಹಿರಂಗ

KSCA's letter to government regarding celebrations revealed

ಬೆಂಗಳೂರು,ಜೂ.6- ದೇಶದದ್ಯಾಂತ ಭಾರೀ ವಿವಾದ ಸೃಷ್ಟಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌‍ಸಿಎ) ಜೂನ್‌ 3ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ವಿಧಾನಸೌಧದಲ್ಲಿ ಸನಾನ ಸಮಾರಂಭವನ್ನು ಆಯೋಜಿಸಲು ಅನುಮತಿ ಕೋರಿತ್ತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಈ ಮೊದಲು ಕೆಎಸ್‌‍ ಸಿಎ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಯಾವುದೇ ಪತ್ರ ಬರೆದಿಲ್ಲ ಎಂದು ಸರ್ಕಾರ ಹೇಳಿತ್ತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಐಪಿಎಲ್‌ 2025 ಪ್ರಶಸ್ತಿಯನ್ನು ಗೆದ್ದರೆ ಎಂದು ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಸರ್ಕಾರಕ್ಕೆ ತಿಳಿಸಲಾಗಿತ್ತು ಎಂಬುದು ಪತ್ರದಲ್ಲಿ ಬಹಿರಂಗಗೊಂಡಿದೆ.

ಜೂನ್‌ 4ರಂದು ವಿಧಾನಸೌಧ ಗ್ರ್ಯಾಂಡ್‌ ಸ್ಟೆಪ್‌್ಸನಲ್ಲಿ ನಡೆಯಲಿರುವ ಸನಾನ ಸಮಾರಂಭಕ್ಕೆ ವ್ಯವಸ್ಥೆ ಮಾಡಲು ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್‌ ಎಂಬ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗೆ ಅನುಮೋದನೆ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ.ಜೂನ್‌ 3 ರಂದು ಸಂಜೆ 7:30ರ ಹೊತ್ತಿಗೆ ಪತ್ರ ಸರ್ಕಾರವನ್ನು ತಲುಪಿತ್ತು.

ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಎಸ್‌‍ಸಿಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭೇಂದು ಘೋಷ್‌ ಸಹಿ ಮಾಡಿರುವ ಪತ್ರವು ಅತಿಥಿಗಳ ಪಟ್ಟಿಯ ಬಗ್ಗೆಯೂ ತಿಳಿಸಿದೆ. ಗೌರವಾನ್ವಿತ ಮುಖ್ಯಮಂತ್ರಿ ಮತ್ತು ಗೌರವಾನ್ವಿತ ಉಪಮುಖ್ಯಮಂತ್ರಿಗಳು ಈ ಸಂದರ್ಭಕ್ಕೆ ಆಗಮಿಸಿ ಆರ್‌ಸಿಬಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಸನಾನಿಸಲಿದ್ದಾರೆ ಎಂದು ತಿಳಿಸಲು ಸಹ ಪತ್ರದಲ್ಲಿ ತಿಳಿಸಲಾಗಿದೆ.
ಕೆಎಸ್‌‍ಸಿಎ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿ, ಡಿಪಿಎಆರ್‌ ಕಚೇರಿಯಿಂದ ಯಾವುದೇ ಹೆಚ್ಚಿನ ಸ್ಪಷ್ಟೀಕರಣಗಳು ಅಗತ್ಯವಿದ್ದರೆ, ಘೋಷ್‌ ಅವರನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಗಿತ್ತು.

ಜೂನ್‌ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ನಂತರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಎಸ್‌‍ಸಿಎ ಆಯೋಜಿಸಿದ್ದ ಕ್ರೀಡಾಂಗಣ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ಕ್ರೀಡಾಂಗಣದಲ್ಲಿ ಸಮಾರಂಭ ನಡೆಯುವ ಮೊದಲು, ವಿಧಾನಸೌಧದಲ್ಲಿ ಐಪಿಎಲ್‌ 2025 ವಿಜೇತರಿಗೆ ಸನಾನ ಕಾರ್ಯಕ್ರಮವಿತ್ತು.

ವಿಧಾನಸೌಧದ ಮುಂದೆ ಒಂದು ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದರು, ಆದರೆ ಅದೃಷ್ಟವಶಾತ್‌, ಅಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಆದಾಗ್ಯೂ, 35,000 ಸಾಮಥ್ರ್ಯವಿರುವ ಕ್ರೀಡಾಂಗಣದಲ್ಲಿ, ಸುಮಾರು ಎರಡರಿಂದ ಮೂರು ಲಕ್ಷ ಜನರು ಸೇರಿದ್ದರು. ಇದು ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು ಎಂದು ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ತಪ್ಪನ್ನು ಮರೆಮಾಚಿ ಕೆಎಸ್‌‍ ಸಿಎ ಮೇಲೆ ಬೊಟ್ಟು ಮಾಡಿದ್ದರು.

ಕ್ರೀಡಾಂಗಣದ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವಲ್ಲ, ಕೆಎಸ್‌‍ಸಿಎ ಆಯೋಜಿಸಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು. ಸರ್ಕಾರದ ಪಾತ್ರ ಅನುಮತಿ ನೀಡುವುದು ಮತ್ತು ಪೊಲೀಸ್‌‍ ಭದ್ರತೆ ಒದಗಿಸುವುದಕ್ಕೆ ಸೀಮಿತವಾಗಿದೆ ಎಂದು ಅವರು ಹೇಳಿದರು. ನಾವು ಅನುಮತಿ ನೀಡಿದ್ದೇವೆ ಮತ್ತು ಭದ್ರತೆಗಾಗಿ ಇಡೀ ಬೆಂಗಳೂರು ಪೊಲೀಸ್‌‍ ಪಡೆಯನ್ನು ನಿಯೋಜಿಸಿದ್ದೇವೆ. ಸರ್ಕಾರ ಕ್ರೀಡಾಂಗಣ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ ಎಂದು ಅವರು ಸಮರ್ಥನೆ ಮಾಡಿಕೊಂಡಿದ್ದರು.

RELATED ARTICLES

Latest News