Wednesday, June 25, 2025
Homeಇದೀಗ ಬಂದ ಸುದ್ದಿಹತ್ತೇ ದಿನದಲ್ಲಿ ಪ್ರೀತಿ, ಪ್ರೇಮ, ಪ್ರಣಯ, ಕೊಲೆ..!

ಹತ್ತೇ ದಿನದಲ್ಲಿ ಪ್ರೀತಿ, ಪ್ರೇಮ, ಪ್ರಣಯ, ಕೊಲೆ..!

Love, romance murder in ten days..!

ಮಂಡ್ಯ,ಜೂ.25– ಇನ್ಸ್ಟಾಗ್ರಾಮ್‌‍ನಲ್ಲಿ ವಿವಾಹಿತ ಮಹಿಳೆಯೊಂದಿಗೆ ಅರಳಿದ ಪ್ರೇಮ ಸಲುಗೆ ಬೆಳಸಿ ಪ್ರೀತಿಯ ನಾಟಕವಾಡಿ, ಜಾಲಿರೈಡ್‌ಗೆ ಕರೆದೊಯ್ದು ಆಕೆಯನ್ನು ಕೊಲೆ ಮಾಡಿದ್ದ ಎಂಜಿನಿಯರಿಂಗ್‌ ಪದವಿದರನನ್ನು ಕಿಕ್ಕೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕರೋಟಿ ಗ್ರಾಮದ ಸಿವಿಲ್‌ ಎಂಜಿನಿಯರಿಂಗ್‌ ಪದವೀದರ ಪುನೀತ್‌(24) ಬಂಧಿತ ಆರೋಪಿಯಾಗಿದ್ದಾನೆ. ಕೇವಲ ಹತ್ತು ದಿನದಲ್ಲಿ ವಿವಾಹಿತ ಮಹಿಳೆಯೊಂದಿಗೆ ಪ್ರೀತಿ,ಪ್ರಯಣದ ಹೆಸರಲ್ಲಿ ಸುತ್ತಾಡಿ ಕೊಲೆಗೈದು ಇದೀಗ ಪುನೀತ್‌ ಜೈಲು ಪಾಲಾಗಿದ್ದಾನೆ. ಇನ್ಸ್ಟಾಗ್ರಾಮ್‌‍ನಲ್ಲಿ ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ ಎಂಬಾಕೆಯನ್ನು ಪರಿಚಯ ಮಾಡಿಕೊಂಡಿದ್ದ ಪುನೀತ್‌ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ.

ಇಬ್ಬರ ನಡುವೆ ಕೆಲವೇ ದಿನದಲ್ಲಿ ಪ್ರೀತಿ ಬೆಳೆದು ಅದು ಪ್ರಣಯಕ್ಕೆ ತಿರುಗಿದೆ.ವಿಚಿತ್ರವೆಂದರೆ ಪ್ರೀತಿಗೆ ಮದುವೆಯಾಗಿ ಗಂಡ ,ಮಕ್ಕಳೂಂದಿಗೆ ಆಯಾಗಿದ್ದರೂ ಸಹ ಪುನೀತ್‌ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು.

ಕಳೆದ ಭಾನುವಾರ ಮೈಸೂರಿಗೆ ಒಟ್ಟಿಗೆ ಕಾರಿನಲ್ಲಿ ತೆರಳಿದ್ದರು.ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡಿ ನಂತರ ಕೆ.ಆರ್‌ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶಕ್ಕೆ ಬಂದಿದ್ದಾರೆ. ಅಲ್ಲಿ ಸಣ್ಣ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆ ವೇಳೆ ಪುನೀತ್‌ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ನಂತರ ಆಕೆಯ ಮೇಲಿದ್ದ ಚಿನ್ನಾಭರಣ ದೋಚಿದ್ದಾನೆ. ನಂತರ ಯಾರಿಗೂ ತಿಳಿಯದಂತೆ ಶವವನ್ನು ತನ್ನ ಊರಿನಲ್ಲಿದ್ದ ಜಮೀನಿಗೆ ಸಾಗಿಸಿ ಸೌದೆಗಳಿಂದ ಮುಚ್ಚಿಟ್ಟು ಪರಾರಿಯಾಗಿದ್ದ.

ಈ ನಡುವೆ ಮನೆಯವರು ಪ್ರೀತಿ ನಾಪತ್ತೆಯಾದ ಬಗ್ಗೆ ಹುಡುಕುತ್ತಿದ್ದರು. ನಿನ್ನೆ ಪ್ರೀತಿ ಮೊಬೈಲ್‌ ಸ್ವೀಕರಿಸದಿದ್ದಾಗ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.ನಂತರ ತನಿಖೆ ಕೈಗೊಂಡು ಮೊಬೈಲ್‌‍ಗೆ ಬಂದಿದ್ದ ಕರೆಗಳನ್ನು ಪರಿಶೀಲಿಸಿದಾಗ
ಆರೋಪಿ ಪುನಿತ್‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಶವ ಮುಚ್ಚಿಟ್ಟಿದ್ದ ಸ್ಥಳವನ್ನು ಪತ್ತೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ.ಕೇವಲ 24 ತಾಸಿನಲ್ಲಿ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಈ ಸಂಬಂಧ ಕಿಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಇನ್ಸ್ ಪೆಕ್ಟರ್‌ ರೇವತಿ ಅವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News