Thursday, June 5, 2025
Homeಕ್ರೀಡಾ ಸುದ್ದಿ | SportsRCB ವಿಜಯೋತ್ಸವ : ಬೆಂಗಳೂರಲ್ಲಿ ರಾಯಲ್ ಚಾಂಪಿಯನ್ಸ್‌ ಗ್ರ್ಯಾಂಡ್ ಸೆಲೆಬ್ರೆಷನ್ (Live)

RCB ವಿಜಯೋತ್ಸವ : ಬೆಂಗಳೂರಲ್ಲಿ ರಾಯಲ್ ಚಾಂಪಿಯನ್ಸ್‌ ಗ್ರ್ಯಾಂಡ್ ಸೆಲೆಬ್ರೆಷನ್ (Live)

Lucky 18 For Virat Kohli As RCB Win First IPL Trophy

ಬೆಂಗಳೂರು, ಜೂ.4- ಟಾಟಾ ಐಪಿಎಲ್‌-2025 ಚಾಂಪಿಯನ್‌ ರಾಯಲ್‌ ಚಾಲೆಂಜರ್‌ರ‍ಸ ಬೆಂಗಳೂರು ತಂಡ ಇಂದು ಉದ್ಯಾನನಗರಿಗೆ ಆಗಮಿಸಿದ್ದು, ಅಭಿಮಾನಿಗಳ ಸಾಗರವೇ ಅದ್ಧೂರಿ ಸ್ವಾಗತ ನೀಡಿದೆ.ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದ ವಿರಾಟ್‌ ಕೊಹ್ಲಿ ಬಳಗವನ್ನು ಸಾಂಪ್ರದಾಯಿಕ ಮೈಸೂರು ಪೇಟ, ಮಲ್ಲಿಗೆ ಹಾರ ಹಾಕಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು.

ನಂತರ ಅಲ್ಲಿಂದ ತೆರಳುವ ಮಾರ್ಗದಲ್ಲಿ ನೆರೆದಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಆರ್‌ಸಿಬಿ…. ಆರ್‌ಸಿಬಿ… ಎಂದು ಕೂಗಿದರು. ರಾತ್ರಿಯಿಡೀ ಕ್ರಿಕೆಟ್‌ ಪ್ರಿಯರು ತಮ ನೆಚ್ಚಿನ ಆಟಗಾರರಿಗೆ ಜಯಘೋಷಗಳನ್ನು ಕೂಗಿ ಕಪ್‌ ನಮದೇ ಎಂದು ಘೋಷಣೆ ಕೂಗಿ ಸಿಹಿ ಹಂಚಿ ದೊಡ್ಡಮಟ್ಟದಲ್ಲಿ ಖುಷಿಪಟ್ಟಿದ್ದಾರೆ.ಇನ್ನು ಪ್ರತ್ಯಕ್ಷವಾಗಿ ಆರ್‌ಸಿಬಿ ಆಟಗಾರರ ತಂಡವನ್ನು ಕಂಡು ಪುಳಕಿತರಾದ ಜನಸಮೂಹ ಪುಷ್ಪ ಎರಚಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಸತತ 18 ವರ್ಷಗಳ ಕಾಲ ನಮ ಜತೆ ಇದ್ದು, ಸದಾಕ್ಷಣ ನಮನ್ನು ಬೆಂಬಲಿಸಿದ ಬೆಂಗಳೂರಿಗೆ ನನ್ನ ತನುಮನ ಎಲ್ಲವೂ ಸಮರ್ಪಿತ ಎಂದು ಕಿಂಗ್‌ ವಿರಾಟ್‌ ಕೊಹ್ಲಿ ಅವರ ಭಾವನಾತಕ ಮಾತುಗಳು ಕ್ರಿಕೆಟ್‌ ಪ್ರಿಯರ ಮನತಟ್ಟಿದೆ.ವಿಮಾನ ನಿಲ್ದಾಣದಲ್ಲೇ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟ ನಂತರ ಅವರು ನೇರವಾಗಿ ವೆಸ್ಟ್‌ಎಂಡ್‌ ಹೊಟೇಲ್‌ಗೆ ಆಗಮಿಸಿ ಅಲ್ಪಕಾಲ ವಿಶ್ರಾಂತಿ ಪಡೆದ ನಂತರ ಸಂವಿಧಾನದ ದೇಗುಲ ವಿಧಾನಸೌಧಕ್ಕೆ ಆಗಮಿಸಿ ರಾಜ್ಯ ಸರ್ಕಾರದಿಂದ ಗೌರವ ಸ್ವೀಕರಿಸಿದ ಆಟಗಾರರು ಭಾವಪರವಶರಾದರು.

ಕನ್ನಡ ನಾಡಿನ ಅಭಿಮಾನಕ್ಕೆ ನಾವು ಚಿರಋಣಿಗಳು. ನಮ ಇಡೀ ಯೌವನವನ್ನು ಬೆಂಗಳೂರು ಆರ್‌ಸಿಬಿಗೆ ಹರಿಸಿದ್ದೇನೆ. ನನ್ನ ಪ್ರತಿ ಹಂತದಲ್ಲೂ ನನ್ನ ಕೈಹಿಡಿದು ಸಲಹಿದ ನನ್ನ ಧರ್ಮಪತ್ನಿ ಅನುಷ್ಕಾ ಶರ್ಮ ಕೂಡ ಬೆಂಗಳೂರಿನವರು. ನನಗೆ ಬೆಂಗಳೂರಿನ ಬಗ್ಗೆ ಅಪಾರ ಪ್ರೀತಿ-ಗೌರವ ಇದೆ ಎಂದು ಕೊಹ್ಲಿ ಹೇಳಿದ್ದಾರೆ.

ಆರ್‌ಸಿಬಿ ಆಟಗಾರರಿಗೆ ಸಚಿವಾಲಯದ ಸಿಬ್ಬಂದಿ ಕೂಡ ಅಭಿನಂದನೆ ಸಲ್ಲಿಸಿದ್ದು, ಅವರೊಂದಿಗೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.ನಂತರ ವಿಧಾನಸೌಧದ ಮುಂಭಾಗ ಭವ್ಯ ವೇದಿಕೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಆಟಗಾರರನ್ನು ರಾಜ್ಯ ಸರ್ಕಾರದ ವತಿಯಿಂದ ಅಭಿನಂದಿಸಲಾಯಿತು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸೇರಿದಂತೆ ಹಲವಾರು ಸಚಿವರು, ಶಾಸಕರು ಪಾಲ್ಗೊಂಡಿದ್ದರು.

ನಂತರ ನಡೆಯಬೇಕಿದ್ದ ಪರೇಡ್‌ಅನ್ನು ರದ್ದುಗೊಳಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆಗೆ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌ ಮತ್ತು ರಾಯಲ್‌ ಚಾಲೆಂಜರ್‌ರ‍ಸ ಬೆಂಗಳೂರು ಪ್ರಾಂಚೈಸಿಗಳು ಅಭಿನಂದನಾ ಸಮಾರಂಭ ಹಮಿಕೊಂಡಿದ್ದಾರೆ.

ಇದಕ್ಕಾಗಿ ವಿಶೇಷ ಪಾಸ್‌‍ಗಳನ್ನು ಕೂಡ ನೀಡಲಾಗಿದ್ದು, ಆಹ್ವಾನಿತರಿಗೆ ಮಾತ್ರ ಕ್ರೀಡಾಂಗಣದೊಳಗೆ ಪ್ರವೇಶ ನೀಡಲಾಗುತ್ತಿದೆ. ಆದರೂ ಸಾವಿರಾರು ಜನರು ಮೈದಾನದ ಸುತ್ತ ಜಮಾಯಿಸಿ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರು.

ಅನ್ನದಾನ- ಸಿಹಿ ಹಂಚಿಕೆ:
ಆರ್‌ಸಿಬಿ ಗೆಲ್ಲುತ್ತಿದ್ದಂತೆ ಹಲವೆಡೆ ಹೊಟೇಲ್‌ಗಳು, ಪಬ್‌ಗಳಲ್ಲಿ ಉಚಿತವಾಗಿ ಆಹಾರ ಮತ್ತು ಪಾನೀಯಗಳನ್ನು ನೀಡಲಾಗುತ್ತಿದೆ. ಇನ್ನೂ ಕೆಲವೆಡೆ ಹೋಳಿಗೆ, ಲಾಡು ಕೂಡ ಹಂಚಲಾಗುತ್ತಿದೆ. ಇದಲ್ಲದೆ ರಾಜಾಜಿನಗರ, ಇಂದಿರಾನಗರ, ಬಸವೇಶ್ವರನಗರ, ನಾಗರಬಾವಿ, ರಾಜರಾಜೇಶ್ವರಿನಗರ, ಸದಾಶಿವನಗರ, ಕೋರಮಂಗಲ, ಎಚ್‌ಎಸ್‌‍ಆರ್‌ ಲೇಔಟ್‌, ಹೆಬ್ಬಾಳ, ಕೆಆರ್‌ ಪುರಂ, ಮಹದೇವಪುರ ಸೇರಿದಂತೆ ನಗರದ ವಿವಿಧೆಡೆ ಬಿರಿಯಾನಿ ಕೂಡ ಉಚಿತವಾಗಿ ವಿತರಿಸಲಾಗುತ್ತಿದೆ.

ದೇವಾಲಯಗಳಲ್ಲಿ ಪೂಜೆ:
ಆರ್‌ಸಿಬಿ ಗೆಲ್ಲುತ್ತಿದ್ದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ಹರಕೆ ಕೂಡ ತೀರಿಸಿದ್ದಾರೆ. ತೆಂಗಿನಕಾಯಿ ಒಡೆದು ವಿಶೇಷ ಹೋಮ-ಹವನಗಳನ್ನು ಕೂಡ ಮಾಡಿದ್ದಾರೆ.

18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ 18 ವರ್ಷಗಳ ತಪಸ್ಸಿಗೆ ಫಲ ಸಿಕ್ಕಂತಾಗಿದೆ. ಕೋಟಿ ಕೋಟಿ ಅಭಿಮಾನಿಗಳ ಹರಕೆ ಫಲಿಸಿದೆ.ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಕನವರಿಸುತ್ತಿದ್ದ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೋಮಾಂಚಕ ಪಂದ್ಯದಲ್ಲಿ ಗೆಲ್ಲಲು 192 ರನ್ ಗಳ ಸವಾಲಿನ ಗುರಿ ಪಡೆದ ಶ್ರೇಯಸ್ ಅಯ್ಯರ್ ಪಡೆ ನಿಗದಿತ ಓವರ್ ಗಳು ಮುಗಿದಾಗ 7 ವಿಕೆಟ್ ಕಳೆದುಕೊಂಡು 184 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 190/9, ಕೊಹ್ಲಿ 43, ರಜತ್ ಪಾಟೀದಾರ್ 26, ಲಿವಿಂಗ್ ಸ್ಟನ್ 25, ಮಾಯಾಂಕ್ ಅಗರ್ವಾಲ್ 24, ಜಿತೇಶ್ ಶರ್ಮಾ 24, ಅರ್ಶದೀಪ್ ಸಿಂಗ್ 40ಕ್ಕೆ 3, ಕೈಲ್ ಜಾಮಿಸನ್ 48ಕ್ಕೆ 3,

ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 184/7, ಶ್ ಇಂಗ್ಲಿಸ್ 39, ಪ್ರಭಾ ಸಿಮ್ರಾನ್ ಸಿಂಗ್ 26, ಪ್ರಿಯಾಂಶ್ ಆರ್ಯ 24, ಕೃನಾಲ್ ಪಾಂಡ್ಯ 17ಕ್ಕೆ 2

ಆರ್‌ಸಿಬಿ ತಂಡಕ್ಕೆ ಗೌರವ ಸಲ್ಲಿಸುವ ಕುರಿತು ಚರ್ಚೆ : ಡಿ.ಕೆ.ಶಿ
ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ಗೆದ್ದು ರಾಜ್ಯಕ್ಕಾಗಮಿಸುತ್ತಿರುವ ಆರ್‌ಸಿಬಿ ತಂಡಕ್ಕೆ ಗೌರವ ಸಲ್ಲಿಸುವ ಸಂಬಂಧಪಟ್ಟಂತೆ ರೂಪುರೇಷೆಗಳನ್ನು
ಚರ್ಚಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಪಂದ್ಯಾವಳಿಯನ್ನು ನಾನು ವೀಕ್ಷಿಸಿದ್ದೇನೆ. ಗೆಲುವು ಸಾಧಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಐಪಿಎಲ್ ಸರಣಿ ಗೆದ್ದಿರುವುದು ಹೆಮ್ಮೆಯ ವಿಚಾರ. ರಾಜ್ಯದ ಜನರ ಪರವಾಗಿ ಆಟಗಾರರನ್ನು ಅಭಿನಂದಿಸುತ್ತೇನೆ. ಅವರಿಗೆ ಯಾವ ರೀತಿ ಗೌರವ ಸಲ್ಲಿಸಬೇಕು ಎಂಬ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದರು. ಸರ್ಕಾರದಿಂದ ಸನ್ಮಾನ, ಎಲ್ಲಿಂದ ಮೆರವಣಿಗೆ ಕರೆತರಬೇಕು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಗೃಹಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಆರ್‌ಸಿಬಿ ತಂಡ ಸಂಜೆ 4 ಗಂಟೆಗೆ ಅಭಿನಂದನಾ ಕಾರ್ಯಕ್ರಮವಿದೆ. ಅವರಿಗೆ ಉತ್ಸಾಹ ಹೆಚ್ಚಿದೆ. ಯುವಕರು ಹೆಚ್ಚು ಜನ ಬರುತ್ತಾರೆ. ಅದನ್ನು ನಿಯಂತ್ರಿಸುವುದು ಪೊಲೀಸರ ಜವಾಬ್ದಾರಿ. ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚರ್ಚೆಗಳಾಗುತ್ತಿವೆ ಎಂದರು. ಕನಕಪುರದಲ್ಲಿ ಒಂದು ಸಣ್ಣ ಕೇಸಿನ ವಿಚಾರಣೆ ಇದೆ. ಅಲ್ಲಿಗೆ ಹೋಗಿ ಶೀಘ್ರದಲ್ಲಿ ವಾಪಸ್ ಬರುತ್ತೇನೆ ಎಂದು ಹೇಳಿದರು.

ಆರ್‌ಸಿ ತಂಡವನ್ನು ಅಭಿನಂದಿಸಿದ ಎಚ್‌ಡಿಕೆ
ಐಪಿಎಲ್ 2025 ಟೂರ್ನಿಯಲ್ಲಿ ರೋಚಕ ಗೆಲುವು ಸಾಧಿಸಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ(ಆರ್‌ಸಿಬಿ)ವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಸಲ ಕಪ್ ನಮ್ಮು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಂಡ ಸ್ಪೂರ್ತಿಯಿಂದ ಆಡಿದ ಪಟಿದಾರ್ ಪಡೆಯನ್ನು ಹಾಗೂ ವಿಶೇಷವಾಗಿ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಐತಿಹಾಸಿಕ ದ್ವಿಗಿಜಯ ಸಾಧಿಸಿದ ಆರ್‌ಸಿಬಿ ಬೆಂಗಳೂರು ತಂಡಕ್ಕೆ ಹೃತ್ತೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ ಎಂದು ಹೊಗಳಿದ್ದಾರೆ.

ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News