Wednesday, June 4, 2025
Homeರಾಜ್ಯಆಲಮಟಿ ಅಣೆಕಟ್ಟು ಎತ್ತರಕ್ಕೆ ಮಹಾರಾಷ್ಟ್ರ ಆಕ್ಷೇಪ : ಡಿಸಿಎಂ ಡಿಕೆಶಿ ಆಕ್ರೋಶ

ಆಲಮಟಿ ಅಣೆಕಟ್ಟು ಎತ್ತರಕ್ಕೆ ಮಹಾರಾಷ್ಟ್ರ ಆಕ್ಷೇಪ : ಡಿಸಿಎಂ ಡಿಕೆಶಿ ಆಕ್ರೋಶ

Maharashtra objects to Almatti dam height: DCM DK Shivkumar's outcry

ಬೆಂಗಳೂರು,ಜೂ.2- ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಸಂಬಂಧಪಟ್ಟಂತೆ ಈವರೆಗೂ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಇದ್ದ ಮಹಾರಾಷ್ಟ್ರ ಸರ್ಕಾರ ಖ್ಯಾತೆ ತೆಗೆದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲ ಸಂಪನೂಲ ಸಚಿವ ಡಿ.ಕೆ.ಶಿವಕುಮಾರ್‌ ಆಕ್ಷೇಪಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 9 ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍ ನಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಲಮಟ್ಟಿ ಅಣೆಕಟ್ಟು ಎತ್ತರವನ್ನು 519 ಮೀಟರ್‌ನಿಂದ 524.63 ಮೀಟರ್‌ಗೆ ಹೆಚ್ಚಿಸುವುದರಿಂದ ಮಹಾರಾಷ್ಟ್ರದಲ್ಲಿ ನೆರೆ ಪರಿಸ್ಥಿತಿ ಉಂಟಾಗುತ್ತದೆ.

ಸಾಂಗ್ಲಿ, ಕೊಲ್ಲಾಪುರಕ್ಕೆ ತೊಂದರೆಯಾಗುತ್ತದೆ ಎಂದು ಆಕ್ಷೇಪಿಸಿದ್ದು, ಆಲಮಟ್ಟಿ ಅಣೆಕಟ್ಟು ಎತ್ತರ ಕಾಮಗಾರಿ ಪ್ರಕ್ರಿಯೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇದು ಅಚ್ಚರಿ ಮತ್ತು ಆಘಾತದ ವಿಚಾರ ಎಂದು ಹೇಳಿದರು.

ಕೃಷ್ಣ ನ್ಯಾಯಾಧೀಕರಣದ ತೀರ್ಪಿನಲ್ಲಿ ಆಲಮಟ್ಟಿ ಎತ್ತರದ ಬಗ್ಗೆ ಅನುಮೋದಿಸಲಾಗಿದೆ. ಕರ್ನಾಟಕ ತನ್ನ ಪಾಲಿನ ನೀರನ್ನು ಬಳಕೆ ಮಾಡಲು ಮಹಾರಾಷ್ಟ್ರದಿಂದ ಇಲ್ಲಿವರೆಗೂ ಯಾವುದೇ ಆಕ್ಷೇಪಣೆ ಇರಲಿಲ್ಲ. 2010 ಹಾಗೂ 2013 ರಲ್ಲಿನ ತೀರ್ಪುಗಳಿಗೂ ಮಹಾರಾಷ್ಟ್ರ ತಗಾದೆ ತೆಗೆದಿರಲಿಲ್ಲ.

ನ್ಯಾಯಾಧೀಕರಣದ ತೀರ್ಪನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ನ್ಯಾಯಾಲಯಕ್ಕೆ ಮಹಾರಾಷ್ಟ್ರ ಸರ್ಕಾರವೇ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಆಲಮಟ್ಟಿ ಎತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ಆಘಾತಕಾರಿಯಾಗಿದೆ ಎಂದರು.
ಇತ್ಯರ್ಥವಾಗಿರುವ ವಿಚಾರದಲ್ಲಿ ಈಗಾಗಲೇ ಎಲ್ಲಾ ವಿಚಾರಗಳೂ ಇತ್ಯರ್ಥವಾಗಿವೆ.

ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆಗೆ ಬಾಧ್ಯಸ್ಥ ರಾಜ್ಯಗಳ ಜೊತೆಗೆ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ರವರಿಗೆ ತಾವು ಮತ್ತು ಮುಖ್ಯಮಂತ್ರಿ ದೆಹಲಿಗೆ ಹೋಗಿದ್ದಾಗ ಮನವಿ ಸಲ್ಲಿಸಿದ್ದೆವು. ಅದರಂತೆ ಅಂತರರಾಜ್ಯ ಸಭೆಗಳೂ ನಿಗದಿಯಾಗಿತ್ತು. ಅದಕ್ಕೆ ಪೂರ್ವಭಾವಿಯಾಗಿ ನಾವು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಆಂತರಿಕ ಸಭೆ ನಡೆಸಿದ್ದೆವು. ಸಂಬಂಧಪಟ್ಟ ಜಿಲ್ಲೆಗಳ ಜನ ಪ್ರತಿನಿಧಿಗಳ ಜೊತೆಗೆ ಚರ್ಚೆ ನಡೆಸಲಾಗಿತ್ತು. ಸಭೆಯಲ್ಲಿ ಪಾಲ್ಗೊಳ್ಳಲು ನಮ ಅಧಿಕಾರಿಗಳು ಮುಂಚಿತವಾಗಿ ಹೋಗಿದ್ದರು. ನಾವು ಇನ್ನೇನು ವಿಮಾನ ಏರಬೇಕು ಎಂಬ ಹಂತದಲ್ಲಿ ಸಭೆ ರದ್ದಾಗಿದೆ ಎಂಬ ಸಂದೇಶ ಬಂದಿತು ಎಂದರು.

ಇದಕ್ಕೆ ಕಾರಣ ಹುಡುಕಿದಾಗ ಮಹಾರಾಷ್ಟ್ರ ಸರ್ಕಾರದ ತಗಾದೆ ಕಂಡುಬಂದಿದೆ. ರಾಜ್ಯದ ಹಿತರಕ್ಷಣೆಗೆ ನಮ ಎಲ್ಲಾ ಸಂಸದರು ಪಕ್ಷಬೇಧ ಮರೆತು ಒಗ್ಗಟ್ಟಿನ ದನಿಯಾಗಬೇಕು. ಕೇಂದ್ರ ಸಚಿವರೂ ಕೂಡ ಸಹಕರಿಸಬೇಕು. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಯಾರನ್ನ ಬೇಕಾದರೂ ಭೇಟಿಯಾಗಲು ಹಾಗೂ ಈ ವಿಚಾರದಲ್ಲಿ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಸಹಕರಿಸಲು ರಾಜ್ಯಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಆಲಮಟ್ಟಿ ಅಣೆಕಟ್ಟು ಎತ್ತರ ನಮ ಹಕ್ಕು. ಇದಕ್ಕೆ ಅಡ್ಡಿಪಡಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರಕ್ಕೆ ಆಂತರಿಕವಾಗಿ ತೊಂದರೆಯಾಗುತ್ತಿದ್ದರೆ ಅದನ್ನು ಅವರು ಸರಿಪಡಿಸಿಕೊಳ್ಳಬೇಕು. ನಮ ಯೋಜನೆಗೆ ಅಡ್ಡಿಪಡಿಸಬಾರದು ಎಂದು ವಿನಮ್ರವಾಗಿ ಮನವಿ ಮಾಡುತ್ತೇವೆ ಎಂದರು.

ಹೇಮಾವತಿ ರಾಜಕೀಯ :
ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆಯಲ್ಲಿ ಅನಗತ್ಯವಾದ ರಾಜಕೀಯ ನಡೆಯುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಆಕ್ಷೇಪಿಸಿದ್ದಾರೆ.ಇದು ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೂಪುಗೊಂಡ ಯೋಜನೆ. ಅನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತಡೆ ನೀಡಿದರು. ಆರಂಭದಲ್ಲಿ ಯೋಜನಾ ಗಾತ್ರ 600 ಕೋಟಿ ರೂ. ಇತ್ತು. ವಿಳಂಬದಿಂದಾಗಿ 400 ಕೋಟಿ ರೂ. ಹೆಚ್ಚಾಗಿ ಈಗ 1000 ಕೋಟಿ ರೂ. ತಲುಪಿದೆ. ರಾಜ್ಯಸರ್ಕಾರ ಈಗಾಗಲೇ 400 ಕೊಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ತುಮಕೂರು ಜಿಲ್ಲೆಯ ಶಾಸಕರಾದ ಸುರೇಶ್‌ಗೌಡ ಹಾಗೂ ಎಂ.ಪಿ.ಕೃಷ್ಣಪ್ಪ ಅವರ ಸಲಹೆಯಿಂದ ತಾಂತ್ರಿಕ ಸಮಿತಿಯನ್ನು ರಚಿಸಲಾಗಿತ್ತು. ವರದಿ ಆಧರಿಸಿ ಈಗ ನಾವು ಯೋಜನೆ ಕೈಗೊಳ್ಳುತ್ತಿದ್ದೇವೆ. ಇದಕ್ಕೆ ನಮ ರಾಜಕೀಯ ಹಿತಾಸಕ್ತಿಯೂ ಇದೆ ಎಂದರು.
ಕುಣಿಗಲ್‌ ತಾಲೂಕಿಗೆ 2014 ರಿಂದಲೂ ಹೇಮಾವತಿಯಿಂದ ಹಂಚಿಕೆಯಾಗಿದ್ದ 2 ಟಿಎಂಸಿಯಲ್ಲಿ ಶೇ.10 ರಷ್ಟು ಕೂಡ ಹರಿದಿಲ್ಲ. ನಿರಂತರವಾಗಿ ಅನ್ಯಾಯವಾಗಿದೆ. ಕುಣಿಗಲ್‌ಗೆ 3.3 ಟಿಎಂಸಿ ನೀರು ಹೋಗಬೇಕು. ಮಾಗಡಿಗೆ 0.6 ಟಿಎಂಸಿ ತಲುಪಬೇಕು. ಈ ಎಲ್ಲಾ ತಾಲೂಕುಗಳು ಕಾವೇರಿ ನದಿಪಾತ್ರದಲ್ಲಿಯೇ ಬರುತ್ತದೆ. ಇದು ಅಂತಾರಾಜ್ಯ ನದಿ ವಿವಾದ ಅಲ್ಲ ಎಂದು ತಿರುಗೇಟು ನೀಡಿದರು.

ತುಮಕೂರಿಗೆ ಕೃಷ್ಣಾ ನದಿ ಪಾತ್ರದಿಂದ ನೀರು ತರಲಾಗಿದೆ. ಎತ್ತಿನಹೊಳೆ ಆರಂಭದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಮಾತ್ರ ಸೀಮಿತವಾಗಿತ್ತು. ಯೋಜನೆಯಲ್ಲಿ ಬದಲಾವಣೆ ಮಾಡಿ ತುಮಕೂರು, ಚಿಕ್ಕನಾಯಕನಹಳ್ಳಿ, ಶಿರಾ ತಾಲೂಕಿನ ಕೆರೆಗಳಿಗೂ ತುಂಬಿಸಲು ಮಾರ್ಪಾಡು ಮಾಡಲಾಗಿದೆ. ಅದೇ ರೀತಿ ಕುಣಿಗಲ್‌, ಮಾಗಡಿ ತಾಲೂಕುಗಳಿಗೆ ನೀರು ಬೇಡವೇ? ಎಂದು ಪ್ರಶ್ನಿಸಿದರು.

ರಾಮನಗರಕ್ಕೆ ಸಾಕಷ್ಟು ನೀರಿದೆ. ಹೇಮಾವತಿಯಿಂದ ಅಲ್ಲಿಗೆ ನೀರು ಹರಿಯುವುದು ಬೇಕಿಲ್ಲ. ಅನಗತ್ಯವಾಗಿ ರಾಜಕಾರಣ ಮಾಡುವುದು ಅಮಾಯಕ ಸ್ವಾಮೀಜಿಗಳನ್ನು ಪ್ರತಿಭಟನೆಗೆ ಕೂರಿಸುವುದು, ಸರ್ಕಾರವನ್ನು ಬ್ಲಾಕ್‌ಮೇಲ್‌ ಮಾಡುವುದು ಸರಿಯಲ್ಲ ಎಂದರು.
ಶಾಸಕರಾದ ಸುರೇಶ್‌ಗೌಡ ಹಾಗೂ ಇತರರ ಬೇಡಿಕೆಗಳು ಬೇರೆಯೇ ಇವೆ. ಸದ್ಯಕ್ಕೆ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಾನೂನು ಕೈಗೆತ್ತಿಕೊಂಡಾಗ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ. ಈ ಮೊದಲು ಮೇಕೆದಾಟು ಪಾದಯಾತ್ರೆ ಮಾಡಿದಾಗ ನಾವು ಕಾನೂನು ಪಾಲನೆ ಮಾಡಿದ್ದೆವು ಎಂದು ಸರಿಸಿಕೊಂಡರು.ತುಮಕೂರಿನ ಶಾಸಕರು ಬಳಸುವ ಶಬ್ದಗಳನ್ನು ಕೇಳಿದ್ದೇನೆ. ಅದರಂತೆ ನನಗೂ ಶಕ್ತಿ ಸಾಮರ್ಥ್ಯವಿದೆ. ಆದರೆ ಕಾಲದಲ್ಲಿ ಎಲ್ಲವೂ ಉಳಿದುಹೋಗುತ್ತದೆ. ಆ ಕಾರಣಕ್ಕೆ ಎಚ್ಚರಿಕೆ ವಹಿಸಬೇಕಿದೆ ಎಂದರು.

RELATED ARTICLES

Latest News