Thursday, July 4, 2024
Homeರಾಷ್ಟ್ರೀಯBIG NEWS : ಮುಂದೊಂದು ದಿನ ಭಾರತದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಲಿದ್ದಾರೆ : ಅಲಹಾಬಾದ್‌ ಹೈಕೋರ್ಟ್‌ ಕಳವಳ

BIG NEWS : ಮುಂದೊಂದು ದಿನ ಭಾರತದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಲಿದ್ದಾರೆ : ಅಲಹಾಬಾದ್‌ ಹೈಕೋರ್ಟ್‌ ಕಳವಳ

ಅಲಹಬಾದ್‌,ಜು.2- ಸಭೆ ಸಮಾರಂಭಗಳಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಮತಾಂತರಗಳ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇಂತಹ ಪ್ರವೃತ್ತಿ ಮುಂದುವರೆದರೆ, ದೇಶದ ಬಹುಸಂಖ್ಯಾತ ಜನಸಂಖ್ಯೆಯು ಮುಂದೊಂದು ದಿನ ಅಲ್ಪಸಂಖ್ಯಾತವಾಗಲಿದೆ ಎಂದು ಎಚ್ಚರಿಸಿದೆ.

ಗ್ರಾಮವೊಂದರಲ್ಲಿ ಹಿಂದೂಗಳ ಗುಂಪನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಪರಿವರ್ತಿಸಿದ ಆರೋಪದ ಮೇಲೆ ಕೈಲಾಶ್‌ ಎಂಬಾತನ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ರೋಹಿತ್‌ ರಂಜನ್‌ ಅಗರ್‌ವಾಲ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಪ್ರಕ್ರಿಯೆಗೆ ಅವಕಾಶ ನೀಡಿದರೆ ಮುಂದೊಂದು ದಿನ ಈ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ, ಮತಾಂತರ ನಡೆಯುತ್ತಿದ್ದು, ಭಾರತದ ಪ್ರಜೆಗಳ ಧರ್ಮವನ್ನು ಬದಲಾಯಿಸುವ ಇಂತಹ ಧಾರ್ಮಿಕ ಸಭೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.

ವ್ಯಕ್ತಿಗಳ ಸಂಭಾಷಣೆಗಳು ನಡೆಯುವ ಧಾರ್ಮಿಕ ಸಭೆಗಳನ್ನು ತಕ್ಷಣವೇ ನಿಷೇಧಿಸುವಂತೆ ಹೈಕೋರ್ಟ್‌ ಆದೇಶಿಸಿದ್ದು, ಅಂತಹ ಚಟುವಟಿಕೆಗಳು ಸಂವಿಧಾನದ 25 ನೇ ವಿಧಿಯಲ್ಲಿ ಪ್ರತಿಪಾದಿಸಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೇರವಾಗಿ ಉಲ್ಲಂಸುತ್ತದೆ ಎಂದು ಆತಂಕ ಹೊರಹಾಕಿದೆ.

25 ನೇ ವಿಧಿಯು ವ್ಯಕ್ತಿಗಳು ಯಾವುದೇ ಧರ್ಮವನ್ನು ನಂಬಲು ಸ್ವತಂತ್ರರು ಎಂದು ಹೇಳುತ್ತದೆ, ಕೆಲವು ನಿರ್ಬಂಧಗಳಿಗೆ ಒಳಪಟ್ಟು ಅವರ ಧರ್ಮವನ್ನು ಪೂಜಿಸಲು ಮತ್ತು ಪ್ರಚಾರ ಮಾಡಲು ಅವಕಾಶವಿದೆ. ಪ್ರಚಾರ ಎಂದರೆ ಧರ್ಮವನ್ನು ಉತ್ತೇಜಿಸುವುದು ಮತ್ತು ಯಾವುದೇ ವ್ಯಕ್ತಿಯನ್ನು ಅವರ ಧರ್ಮದಿಂದ ಇನ್ನೊಬ್ಬರಿಗೆ ಪರಿವರ್ತಿಸುವುದು ಎಂದಲ್ಲ. ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಬಡವರನ್ನು ದಾರಿತಪ್ಪಿಸಿ ಅನೇಕ ಆಮಿಷಗಳನ್ನು ಒಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ ನಿದರ್ಶನಗಳನ್ನು ಗಮನಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಿದೆ.

ಇದೇ ವೇಳೆ ಸಂಭಾಷಣೆಯ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಹಮೀರ್‌ಪುರ ಜಿಲ್ಲೆಯ ಮೌದಾಹಾಗೆ ಸೇರಿದ ಕೈಲಾಶ್‌ಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಒಬ್ಬ ತನ್ನ ಮಾನಸಿಕ ಅಸ್ವಸ್ಥ ಸಹೋದರನನ್ನು ಒಂದು ವಾರ ದೆಹಲಿಗೆ ಕರೆದೊಯ್ದ ನಂತರ ಕೈಲಾಶ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಸಹೋದರನಿಗೆ ಚಿಕಿತ್ಸೆ ಕೊಡಿಸಿ ಗ್ರಾಮಕ್ಕೆ ವಾಪಸ್‌‍ ಕಳುಹಿಸುವುದಾಗಿ ಹೇಳಿದ್ದರೂ ಆರೋಪಿ ವಾಪಸ್‌‍ ಬಂದಿಲ್ಲ ಎಂದು ಎ್‌‍ಐಆರ್‌ ನಲ್ಲಿ ಹೇಳಲಾಗಿದೆ.

ಕೈಲಾಶ್‌ ಹಿಂದಿರುಗಿದಾಗ, ಅವರು ಹಳ್ಳಿಯ ಎಲ್ಲ ಜನರನ್ನು ದೆಹಲಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಕರೆದೊಯ್ದರು. ಅಲ್ಲಿ ಎಲ್ಲರೂ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡರು. ಎಫ್‌ಐಆರ್‌ ಪ್ರಕಾರ, ಪ್ರಜಾಪತಿ ಅವರ ಸಹೋದರನಿಗೆ ಮತಾಂತರಕ್ಕೆ ಬದಲಾಗಿ ಹಣವನ್ನು ನೀಡಲಾಗಿತ್ತು.

RELATED ARTICLES

Latest News