Sunday, September 8, 2024
Homeರಾಜ್ಯಮಗಳ ಮೇಲಿನ ವ್ಯಾಮೋಹವೇ ನಾಲ್ವರ ಕೊಲೆಗೆ ಕಾರಣ..?

ಮಗಳ ಮೇಲಿನ ವ್ಯಾಮೋಹವೇ ನಾಲ್ವರ ಕೊಲೆಗೆ ಕಾರಣ..?

ಬೆಂಗಳೂರು, ನ.16- ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದ ಹಂತಕ ಪ್ರವೀಣ್ ಅರುಣ್ ಚೌಗಲೆ , ಹಸೀನಾ ಅವರ ಎರಡನೇ ಮಗಳ ಮೇಲಿನ ವ್ಯಾಮೋಹದಿಂದ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಹಸೀನಾ ಅವರ ಎರಡನೇ ಮಗಳು ಅಜ್ಞಾಝ್‍ಳನ್ನು ವಿಮಾನದಲ್ಲಿ ಕರ್ತವ್ಯದಲ್ಲಿದ್ದಾಗ ಆರೋಪಿ ಪ್ರವೀಣ್ ಆಕೆಯ ಸ್ನೇಹ ಬೆಳೆಸಿದ್ದ. ಆರೋಪಿ ಪ್ರವೀಣ್ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳಿರುವ ವಿಷಯ ಅಜ್ಞಾಝ್‍ಗೆ ಗೊತ್ತಾಗಿ ಪ್ರವೀಣ್‍ನಿಂದ ಅಂತರ ಕಾಯ್ದುಕೊಂಡು ಆತನನ್ನು ದೂರ ಮಾಡಿದ್ದಳು.

ಆರೋಪಿ ಪ್ರವೀಣ್ ತನ್ನಿಂದ ದೂರವಿದ್ದ ಅಜ್ಞಾಝ್‍ಳ ಪ್ರೀತಿ ಸಿಗುವುದಿಲ್ಲವೆಂದು ತಿಳಿದು ಆಕೆಯ ಜೊತೆ ಕುಟುಂಬವನ್ನೆ ಮುಗಿಸಲು ಸಂಚು ರೂಪಿಸಿ ಅ.12ರಂದು ಅವರ ಮನೆಗೆ ನುಗ್ಗಿ ಮೊದಲು ಆಕೆಯ ತಾಯಿಯನ್ನು ಕೊಲೆ ಮಾಡಿ ನಂತರ ಅಜ್ಞಾಝ್, ಈಕೆಯ ಸಹೋದರಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಲೆ ಮಾಡಿ ಬೆಳಗಾವಿಯಲ್ಲಿ ತಲೆಮರೆಸಿಕೊಂಡಿದ್ದನು.

ಪ್ರವೀಣ್ ಈ ಹಿಂದೆ ಮಹರಾಷ್ಟ್ರದಲ್ಲಿ ಎರಡು ವರ್ಷ ಪೊಲೀಸ್ ಸೇವೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

RELATED ARTICLES

Latest News