ಮುಂಬೈ,ಜೂನ್.1-ಕರಾವಳಿ ಬಳಿ ಸ್ನೇಹಿತರೊಂದಿಗೆ ಫೋಟೋ ತೆಗೆಯುತ್ತಿದ್ದಾಗ ಸಮುದ್ರಕ್ಕೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ಇಲ್ಲಿ ನಡೆದಿದೆ. ಅನಿಲ್ ಅರ್ಜುನ್ ರಜಪೂತ್ (20) ಮೃತ ಯುವಕನಾಗಿದ್ದು, ಜುಹು ಜೆಟ್ಟಿಯಲ್ಲಿ ಸಮುದ್ರಕ್ಕೆ ಬಿದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮುಂಬೈ ಅಗ್ನಿಶಾಮಕ ದಳವು ಸ್ಥಳಕ್ಕೆ ದಾವಿಸಿದ್ದು, ಸ್ಥಳದಲ್ಲಿದ್ದ ಜೀವರಕ್ಷಕರು ನಂತರ ಯುವಕನನ್ನು ನೀರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು. ನಂತರ ಹತ್ತಿರದ ಕೂಪರ್ ಆಸ್ಪತ್ರೆಗೆ ಸಾಗಿಸಿರೂ ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು ಎಂದು ಅಧಿಕಾರಿ ಹೇಳಿದರು.
ಅನಿಲ್ ಅರ್ಜುನ್ ರಜಪೂತ್ ತನ್ನಸೇಹಿತನ ಜೊತೆ ನಿನ್ನೆ ಸಂಜೆ ಸಮುದ್ರ ತೀರಕ್ಕೆ ಬಂದು ವಿಹರಿಸುತ್ತಿದ್ದರು ಈ ವೇಳೆ ಸಮುದ್ರದ ತಡೆಗೋಡೆ ಮೇಲೆ ನಿಂತಿದ್ದಗ ಆಯ ತಪ್ಪಿ ನೀರಿಗೆ ಬಿದ್ದಿದ್ದಾರೆ.