Monday, June 9, 2025
Homeರಾಷ್ಟ್ರೀಯ | Nationalಸಿನಿಮಾ ಶೈಲಿಯಲ್ಲಿ ನಡೆದ 'ಹನಿಮೂನ್ ಮರ್ಡರ್' ಮಿಸ್ಟರಿ ಬೇಧಿಸಿದ ಮೇಘಾಲಯ ಪೊಲೀಸರು, ಪತ್ನಿಯೇ ವಿಲನ್

ಸಿನಿಮಾ ಶೈಲಿಯಲ್ಲಿ ನಡೆದ ‘ಹನಿಮೂನ್ ಮರ್ಡರ್’ ಮಿಸ್ಟರಿ ಬೇಧಿಸಿದ ಮೇಘಾಲಯ ಪೊಲೀಸರು, ಪತ್ನಿಯೇ ವಿಲನ್

Meghalaya honeymoon murder mystery

ಶಿಲ್ಲಾಂಗ್, ಜೂನ್ 9-ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಮಧುಚಂದ್ರಕ್ಕೆ ಬಂದಿದ್ದ ನವದಂಪತಿ ನಾಪತ್ತೆ ರಹಸ್ಯಭೋಧಿಸುವಲ್ಲಿ ಮೇಘಾಲಯ ಪೊಲೀಸರು ಯಶಸ್ವಿಯಾಗಿದ್ದು ನಾಲ್ವರನ್ನು ಬಂಧಿಸಿದ್ದಾರೆ. ಸಿನಿಮಾ ರೀತಿ ಮಧುಚಂದ್ರಕ್ಕೆ ಬಂದು ಪತಿಯನ್ನು ಹತ್ಯೆ ಮಾಡಿಸಿದ ಮಹಾಸತಿ ತಂತ್ರಗಾರಿಕೆಗೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಮಧ್ಯ ಪ್ರದೇಶದ ಇಂದೋರ್‌ನ ನಿವಾಸಿ ರಾಜಾ ರಘುವಂಶಿ ಅವರನ್ನು ಕೊಲೆ ಮಾಡಲು ಪತ್ನಿ ನೇಮಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಐ ನೊಂಗ್ರಾಂಗ್ ತಿಳಿಸಿದ್ದಾರೆ. ಉತ್ತರ ಪ್ರದೇಶದ ಫಾಜಿಪುರದಲ್ಲಿ ಪೊಲೀಸರ ಮುಂದೆ ರಾಜಾ ರಘುವಂಶಿ ಪತ್ನಿ ಸೋನಮ್ ಶರಣಾಗಿದ್ದಾರೆ ಮತ್ತು ಇತರ ಮೂವರನ್ನು ರಾತ್ರಿಯಿಡೀ ಕರ್ಯಾಚರಣೆ ನಡೆಸಿದ ಬಂಧಿಸಲಾಗಿದೆ ಎಂದು ಹೇಳಿದರು.

ಕಳೆದ ಮೇ 23 ರಂದು ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಪ್ರವಾಸದಲ್ಲಿದ್ದಾಗ ರಘುವಂಶಿ ಮತ್ತು ಅವರ ಪತ್ನಿ ಸೋನಮ್ನನಾಪತ್ತೆಯಾಗಿದ್ದರು.ನಂತರ ಜೂನ್ 2 ರಂದು ಹುಡುಕಾಟ ನಡೆಯುತ್ತಿರುವಾಗ ಅವರ ರಘುವಂಶಿ ಮೃತದೇಹ ಕಮರಿಯಲ್ಲಿ ಪತ್ತೆಯಾಗಿತ್ತು.ತನಿಖೆ ತೀವ್ರಗೊಳಿಸಿದಾಗ ಉತ್ತರ ಪ್ರದೇಶ ಮತ್ತು ಇಂದೋರ್‌ನಲ್ಲಿ ಇಬ್ಬರನ್ನು ಎಸ್ ಐಟಿ ಪೊಲೀಸರುಬಂಧಿಸಿದೆ ನಂತರ ಸೋನಮ್ ಉತ್ತರ ಪ್ರದೇಶದ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು ಅವರನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.

ರಘುವಂಶಿಯನ್ನು ಕೊಲ್ಲಲು ಪತ್ನಿ ಸುಪಾರಿ ನೀಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಈ ಅಪರಾಧದಲ್ಲಿ ಭಾಗಿಯಾಗಿರುವ ಇನ್ನೂ ಕೆಲವರಿದ್ದು ಅವರನ್ನು ಹಿಡಿಯಲು ಮಧ್ಯಪ್ರದೇಶದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅವರು ಹೇಳಿದರು. ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಮುಖ್ಯಮಂತ್ರಿ ಕಾಸ್ರಾಡ್ ಸಂಗ್ಲಾ ರಾಜ್ಯ ಪೊಲೀಸರನ್ನು ಅಭಿನಂದಿಸಿದರು.

ರಾಜಾ ಕೊಲೆ ಪ್ರಕರಣದಲ್ಲಿ ಮೇಘಾಲಯ ಪೊಲೀಸರು 7 ದಿನಗಳಲ್ಲಿ ಪ್ರಮುಖ ಪ್ರಗತಿ ಸಾಧಿಸಿದ್ದಾರೆಮಧ್ಯ ಪ್ರದೇಶದ 3 ಹಂತಕರನ್ನು ಬಂಧಿಸಲಾಗಿದೆ. ಮಹಿಳೆ ಶರಣಾಗಿದ್ದಾಳೆ ಮತ್ತು ಇನ್ನೂ 1 ಹಂತಕನನ್ನು ಹಿಡಿಯಲು ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅವರು ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾವ್ ಲಾಖಿಯಾತ್‌ನಲ್ಲಿರುವ ಪ್ರವಾಸಿ ಮಾರ್ಗದರ್ಶಿ ಅಲ್ಬರ್ಟ್ ಪಿಡೆ, ರಘುವಂಶಿ ಮತ್ತು ಅವರ ಪತ್ನಿ ಕಾಣೆಯಾದ ದಿನ ಮೂವರು ಪುರುಷರೊಂದಿಗೆ ಇರುವುದನ್ನು ನೋಡಿದ್ದಾರೆ ಎಂದು ತಿಳಿಸಿದ್ದ ದಂಪತಿಯೊಂದಿಗೆ ಇದ್ದ ಮೂವರು ಪುರುಷರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಇದರಿಂದ ಅವರು ಸ್ಥಳೀಯರಲ್ಲ ಎಂದು ಗೊತ್ತಾಯಿತು.

ಈ ನಡುವೆ ಪತಿ ಮತ್ತು ಪತ್ನಿಯ ಕುಟುಂಬಗಳು ಸಿಬಿಐ ತನಿಖೆಯನ್ನು ಕೋರಿದ್ದರು.ರಘುವಂಶಿ ಅವರ ಮೃತದೇಹವು ವೈಸಾವ್‌ಡಾಂಗ್ ಜಲಪಾತದ ಬಳಿಯ ಕಮರಿಯಲ್ಲಿ ಪತ್ತೆಯಾದಾಗ ಅವರ ಬೆರಳಿನಲಕ್ಕಿದ್ದ ಚಿನ್ನದ ಉಂಗುರ ಮತ್ತು ಕುತ್ತಿಗೆಯ ಚಿನ್ನದ ಸರಕಾಣೆಯಾಗಿದ್ದು, ಅವರು ಕೊಲೆಯಾಗಿದ್ದಾರೆ ಎಂಬ ಆನುಮಾನಕ್ಕೆ ಕಾರಣವಾಗಿದೆ.

ಒಂದು ದಿನದ ನಂತರ, ರಕ್ತಸಿಕ್ತ ಮಚ್ಚೆಯು ಹತ್ತಿರದಲ್ಲಿ ಕಂಡುಬಂದಿತು, ಮತ್ತು ಎರಡು ದಿನಗಳ ನಂತರ, ದಂಪತಿಗಳು ಬಳಸಿದ ರೇನ್ ಕೋಟ್ಗೆ ಹೋಲುವ ರೇನ್‌ ಕೋಟ್ ಮಾವ್‌ಕಾ ಗ್ರಾಮದಲ್ಲಿ, ಸೊಹ್ರಾರಿಮ್ ಮತ್ತು ರಘುವಂಶಿ ಅವರ ಮೃತದೇಹ ಪತ್ತೆಯಾದ ಕಮರಿಯ ಅರ್ಧದಾರಿಯಲ್ಲೇ ಕಂಡುಬಂದಿದೆ.

ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಶನಿವಾರ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಕೇಂದ್ರ ಗೃಹ ಸಚಿವ ಆಮಿತ್ ಶಾ ಅವರನ್ನು ಕೋರಿದ್ದಾರೆ. ಕಳದ ಮೇ 11 ರಂದು ಅವರ ಮದುವೆಯ ನಂತರ, ದಂಪತಿಗಳು ತಮ್ಮ ಹನಿಮೂನ್‌ಗಾಗಿ ಮೇ 20 ರಂದು ಮೇಘಾಲಯಕ್ಕೆ ತೆರಳಿದರು.

ಮೇ 22 ರಂದು ಬಾಡಿಗೆ ಸ್ಕೂಟರ್‌ನಲ್ಲಿ ಅವರು ಮಾವ್ ಲಾಖಿಯಾತ್ ಗ್ರಾಮಕ್ಕೆ ಬಂದರು. ಮೇ 24 ರಂದು, ಶಿಲ್ಲಾಂಗ್‌ನಿಂದ ಸೊಹಾಗೆ ಹೋಗುವ ರಸ್ತೆಯ ಉದ್ದಕ್ಕೂ ಕೆಫೆಯೊಂದರಲ್ಲಿ ಅವರ ಸ್ಕೂಟರ್ ಅನ್ನು ಕೈಬಿಡಲಾಗಿತ್ತು. ನಂತರ ಅವರ ಹುಡುಕಾಟ ಪ್ರಾರಂಭವಾಯಿತು. ಎಸ್ಪಿ ನೇತೃತ್ವದಲ್ಲಿ ಮತ್ತು ನಾಲ್ವರು ಡಿಎಸ್ ಪಿಗಳ ನೆರವಿನೊಂದಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಪ್ರಕರಣದ ತನಿಖೆ ನಡೆಸಿತ್ತು.

RELATED ARTICLES

Latest News