ನವದೆಹಲಿ, ಜೂ.10- ಕೂಲ್ ಕ್ಯಾಪ್ಟನ್, ಹಾಲ್ ಆಫ್ ಫೇಮ್ ವಿಜೇತ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಗಳ ಹಿಂದಿನ ಕೈಚಳಕವು ಪಿಕ್ ಪ್ಯಾಕೆಟರ್ಗಳಿಗಿಂತ ಚುರುಕಾಗಿದೆ ಎಂದು ಟೀಮ್ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಎಂಎಸ್ಡಿ ತೋರಿರುವ ಅಪ್ರತಿಮ ಸಾಧನೆಯನ್ನು ಗೌರವಿಸುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯು ಹಾಲ್ ಆಫ್ ಫೇಮ್ ಗೌರವ ಸಲ್ಲಿಸಿದ ಬೆನ್ನಲ್ಲೇ ರವಿಶಾಸ್ತ್ರಿ ನೀಡಿರುವ ಹೇಳಿಕೆಯು ಧೋನಿಯವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯು ಜೇಬುಗಳ್ಳನಿಗಿಂತ ಅತಿವೇಗದ ಕೈಚಳಕ ಹೊಂದಿದ್ದಾನೆ. ಒಂದು ವೇಳೆ ನೀವು ಭಾರತದ ಅತಿ ದೊಡ್ಡ ಕ್ರೀಡಾಂಗಣವಾದ ಆಹಮದಬಾದ್ನ ಶ್ರೀ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಆಡುತ್ತಿದ್ದಾಗ ಎಂ.ಎಸ್.ಧೋನಿ ಅವರು ವಿಕೆಟ್ ಕೀಪರ್ ಆಗಿರಬಾರದು. ಏಕೆಂದರೆ ಒಬ್ಬ ಜೇಬುಗಳ್ಳ ಹೇಗೆ ಜನರಿಗೆ ಅರಿವಿಲ್ಲದೆ ಅವರ ಜೇಬನ್ನು ಎಗರಿಸುತ್ತಾನೋ ಅದೇ ರೀತಿ ಧೋನಿ ಅವರು ಬ್ಯಾಟರ್ ಗಳಿಗೆ ಗೊತ್ತಿಲ್ಲದೆ ಅವರ ವಿಕೆಟ್ ಅನ್ನು ಕಬಳಿಸುತ್ತಾನೆ ಎಂದು ರವಿಶಾಸ್ತ್ರಿ ಐಸಿಸಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಅಮಹೇಂದ್ರ ಸಿಂಗ್ ಧೋನಿ ಅವರು ಮೈದಾನದಲ್ಲಿ ಸದಾ ಶಾಂತರೂಪಿಯಾಗಿರುತ್ತಾರೆ. ಆತ ಗೋಲ್ಡನ್ ಡಕ್ಔಟ್ ಆಗಲಿ, ದ್ವಿಶತಕ ಗಳಿಸಲಿ ಅಥವಾ ಐಸಿಸಿ ವಿಶ್ವಕಪ್ ಟೂರ್ನಿಯನ್ನೇ ಗೆಲ್ಲಲಿ ಅವರ ಸ್ವಭಾವವು ಒಂದೇ ರೀತಿ ಇರುತ್ತದೆ’ ಎಂದು ರವಿಶಾಸ್ತ್ರಿ ಶ್ಲಾಘಿಸಿದ್ದಾರೆ.
ವಿಶ್ವಶ್ರೇಷ್ಠ ವಿಕೆಟ್ ಕೀಪರ್ ಗಳಲ್ಲಿ ಒಬ್ಬರಾಗಿರುವ ಎಂ.ಎಸ್.ಧೋನಿ 829 ಬ್ಯಾಟ್ಸ್ಮನ್ಗಳನ್ನು ವಿಕೆಟ್ ಹಿಂದೆ ಔಟ್ ಮಾಡಿದ್ದರೆ, ಅಲ್ಲದೆ ಭಾರತಕ್ಕೆ ಬಹುತೇಕ ಎಲ್ಲ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಇದರಿಂದ ಎಂಎಸ್ಡಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ಸಂದಿದೆ