Friday, April 19, 2024
Homeರಾಷ್ಟ್ರೀಯಮೋದಿ ವಿರುದ್ಧ ಹರಿಹಾಯ್ದ ಅಸಾದುದ್ದೀನ್ ಓವೈಸಿ

ಮೋದಿ ವಿರುದ್ಧ ಹರಿಹಾಯ್ದ ಅಸಾದುದ್ದೀನ್ ಓವೈಸಿ

ಹೈದರಾಬಾದ್, ನ.8 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ ಗುರುತಿನ ಮೇಲೆ ಮತ ಕೇಳುತ್ತಿದ್ದಾರೆ, ಆದರೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ನ್ಯಾಯ ಒದಗಿಸಲು ಅವರು ಬಯಸುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ಲಾಲ್ ಬಹುದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮೋದಿ ಅವರು ತೆಲಂಗಾಣದಲ್ಲಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಬಿಜೆಪಿ ಮುಖ್ಯಮಂತ್ರಿ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ ಎಂಬ ಹೇಳಿಕೆ ಕುರಿತಂತೆ ಎಕ್ಸ್ ಮಾಡಿರುವ ಅಸಾದುದ್ದೀನ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿಯನ್ನು ತೆಗೆದುಹಾಕುವುದಾಗಿ ಪ್ರಧಾನಿ ಮೋದಿ ಭರವಸೆ ನೀಡುತ್ತಾರೆ, ಆದರೆ ಶೇ.27 ರ ಕೋಟಾವನ್ನು ವಿರೋಧಿಸುತ್ತಾರೆ ಮತ್ತು ಮೀಸಲಾತಿ ಮೇಲಿನ ಶೇ.50ರ ಸೀಲಿಂಗ್ ಅನ್ನು ತೆಗೆದುಹಾಕಲಿಲ್ಲ ಎಂದಿದ್ದಾರೆ.

ಎರಡು ತಲೆ ಹಾವು, ಜಿಂಕೆ ಕೊಂಬು, ಆನೆ ದಂತ ವಶ

ಪ್ರಧಾನಿ ಜಾತಿ ಗುರುತಿನ ಮೇಲೆ ಮತಕ್ಕಾಗಿ ಮನವಿ ಮಾಡುತ್ತಿದ್ದಾರೆ, ಆದರೆ ಒಬಿಸಿಗಳಿಗೆ ನ್ಯಾಯವನ್ನು ನೀಡಲು ಬಯಸುವುದಿಲ್ಲ…ಭಾರತೀಯ ರಾಜಕೀಯದಲ್ಲಿ ಮುಸ್ಲಿಮರು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎಂದು ನಾನು ಹೇಳಿದಾಗ, ನನ್ನನ್ನು ದೇಶವಿರೋ ಮತ್ತು ಕೋಮುವಾದಿ ಎಂದು ಕರೆಯುತ್ತಾರೆ. ಮೋದಿ ಹತಾಶರಾಗಿದ್ದಾರೆ ಮತ್ತು ಅದನ್ನು ತೋರಿಸುತ್ತಿದ್ದಾರೆ ಎಂದು ಹರಿ ಹಾಯ್ದಿದ್ದಾರೆ.

RELATED ARTICLES

Latest News