Tuesday, July 2, 2024
Homeರಾಷ್ಟ್ರೀಯತಮಿಳುನಾಡಿನ 10 ಕಡೆ ಎನ್‌ಐಎ ದಾಳಿ

ತಮಿಳುನಾಡಿನ 10 ಕಡೆ ಎನ್‌ಐಎ ದಾಳಿ

ಚೆನ್ನೈ,ಜೂ.30- ಹಿಜ್ಬ್ ಉತ್‌ ತಾಹೀರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಬೆಳಿಗ್ಗೆ ತಮಿಳುನಾಡಿನ ಹತ್ತು ಕಡೆ ಶೋಧ ನಡೆಸಿದೆ.ಹಿಜ್ಬ್‌‍ ಉತ್‌ ತಾಹೀರ್‌ ಕೇಸಿಗೆ ಸಂಬಂಧ ಪಟ್ಟಂತೆ ತನಿಖೆ ನಡೆಯುತ್ತಿದ್ದು, ತಮಿಳುನಾಡಿನ ಈರೋಡ್‌, ತಂಜಾವೂರು ಸೇರಿದಂತೆ ಹತ್ತು ಕಡೆಗಳಲ್ಲಿ ತನಿಖೆ ನಡೆಯುತ್ತಿದೆ.

ಹಿಜ್ಬ್‌‍ ಉತ್‌ ತಾಹೀರ್‌ ವಿರುದ್ಧ 2021ರಲ್ಲಿ ದೂರು ದಾಖಲಾಗಿತ್ತು. ಕೇಸಿಗೆ ಸಂಬಂಧ ಪಟ್ಟಂತೆ ಮೊಹದ್‌ ಇಕ್ಬಾಲ್‌ ಎಂಬುವನನ್ನು ಬಂಧಿಸಲಾಗಿತ್ತು. ಈತ ಫೇಸ್‌‍ಬುಕ್‌ನಲ್ಲಿ ಕಾಶೀರದ ಬಗ್ಗೆ ಪೋಸ್ಟ್‌ ಹಾಕಿದ್ದ. ಈ ಬಗ್ಗೆ ಮಧುರೈನಲ್ಲಿ ದೂರು ದಾಖಲಾಗಿತ್ತು.

ಈ ರೀತಿ ಪೋಸ್ಟ್‌ ಹಾಕಿದ್ದ ವ್ಯಕ್ತಿಯನ್ನು ಕಾಶೀರ ಪ್ರತ್ಯೇಕವಾದಿ ಎಂದು ಮೊಹದ್‌ ಇಕ್ಬಾಲ್‌ ಎಂದು ಗುರುತಿಸಲಾಗಿದ್ದು, ಈ ಬಗ್ಗೆತನಿಖೆ ನಡೆಯುತ್ತಿದೆ. ಹೀಗಾಗಿ ಇಂದು ಬೆಳಿಗ್ಗೆ ಎನ್‌ಐಎ ಅಧಿಕಾರಿಗಳು ತಮಿಳುನಾಡಿನ ಹತ್ತು ಕಡೆಗಳಲ್ಲಿ ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES

Latest News