ಕೋಲಾರ, ಜು. 9- ಉಗ್ರರಿಗೆ ಮೊಬೈಲ್ ಜತೆಗೆ ನೆರವು ನೀಡಿದ ಮೂವರನ್ನು ವಶಕ್ಕೆ ಪಡೆದ ಎನ್ಐಎ ಈಗ ಸಿಮ್ ನೀಡಿದ್ದ ಕೋಲಾರ ಮೂಲದ ಯುವಕನಿಗೆ ನೋಟೀಸ್ ಜಾರಿ ಮಾಡಿದೆ.
ಬೆಂಗಳೂರಿನ ವೈಟ್ಫೀಲ್್ಡನ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂಲತಃ ಕೋಲಾರದ ಭಟ್ರಹಳ್ಳಿ ಗ್ರಾಮದ ಸತೀಶ್ಗೆ ಈಗ ಸಂಕಷ್ಟ ಎದುರಾಗಿದೆ.
ಕಳೆದ ರಾತ್ರಿ ಎನ್ಐಎ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದ್ದು, ಸತೀಶ್ ಇಲ್ಲದ ಕಾರಣ ಅವರ ಮನೆಯವರಿಗೆ ನೋಟಿಸ್ ನೀಡಲಾಗಿದೆ.ಇಂದು ಬೆಳಗ್ಗೆ 10 ಗಂಟೆಯೊಳಗೆ ಬೆಂಗಳೂರಿನ ಎನ್ಐಎ ಕಚೇರಿಗೆ ಹಾಜರಾಗಬೇಕೆಂದು ತಿಳಿಸಲಾಗಿತ್ತು. ಆದರೆ, ಈವರೆಗೂ ಆತನ ಸುಳಿವಿಲ್ಲ ಎಂದು ಮೂಲಗಳು ತಿಳಿಸಿವೆ.
ಘಟನೆ ಚುರುಕು ಪಡೆಯುತ್ತಿದ್ದಂತೆ ಸರಿಯಾದ ದಾಖಲೆ ಪಡೆಯದೆ ಸಿಮ್ ನೀಡಿದವರಿಗೂ ಸಂಕಷ್ಟ ಎದುರಾಗಿದ್ದು, ಪ್ರಸ್ತುತ ಸತೀಶ್ನ ಹುಡುಕಾಟ ನಡೆಸಲಾಗಿದೆ. ಸತೀಶ್ ಭಟ್ರಹಳ್ಳಿಯ ಅತ್ತೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ.
- ಮುಸುಕುಧಾರಿ ಚಿನ್ನಯ್ಯ ಕ್ರಿಶ್ಚಿಯನ್ ಮತಾಂತರಿ..?
- ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ : ಟಿಎಂಸಿ ಶಾಸಕನಿಗೆ ಇ.ಡಿ.ಶಾಕ್
- ಬಿಡಿಎ ಸೈಟ್ ಖಾಲಿ ಬಿಟ್ರೆ ತೆರಬೇಕಾಗುತ್ತೆ ದುಬಾರಿ ದಂಡ
- ಧರ್ಮಸ್ಥಳದ ಪ್ರಕರಣ : ತಮಿಳುನಾಡಿನಲ್ಲಿ ಮುಸುಕುಧಾರಿ ಪತ್ನಿಯ ವಿಚಾರಣೆ
- ಕೆಜಿಎಫ್ ಚಿತ್ರದಲ್ಲಿ ‘ಬಾಂಬೆ ಡಾನ್’ ಆಗಿ ಖ್ಯಾತಿ ಪಡೆದಿದ್ದ ನಟ ದಿನೇಶ್ ಮಂಗಳೂರು ನಿಧನ