Sunday, September 8, 2024
Homeರಾಜ್ಯಬಿಎಸ್‌‍ವೈ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ : ಸಚಿವ ತಿಮ್ಮಾಪೂರ

ಬಿಎಸ್‌‍ವೈ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ : ಸಚಿವ ತಿಮ್ಮಾಪೂರ

ಮುಧೋಳ ,ಜೂ.17- ಜೂ.17- ಮಾಜಿ ಮುಖ್ಯಮಂತ್ರಿ ಬಿ.ಎಸ್‌‍. ಯಡೆಯೂರಪ್ಪನವರ ವಿರುದ್ಧದ ಫೋಕ್ಸೊ ಪ್ರಕರಣದಲ್ಲಿ ಸರ್ಕಾರ ಯಾವುದೇ ರೀತಿ ಹಸ್ತಕ್ಷೇಪ ಮಾಡುವುಲ್ಲ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸಿಐಡಿ ಸಂಸ್ಥೆ ತನಿಖೆ ನಡೆಸುತ್ತಿದ್ದು, ನ್ಯಾಯಾಲಯದ ನಿರ್ದೇಶನದಂತೆ ತನಿಖಾಧಿಕಾರಿಗಳ ಮುಂದೆ ವಿಚಾರಣೆಗಾಗಿ ಹಾಜರಾಗುವಂತೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ಇಳಿವಯಸಿನಲ್ಲಿ ಅವರಿಗೆ ಇಂತಹ ಪ್ರಕರಣ ಎದುರಾಗಬಾರದಿತ್ತು. ಆದರೆ ಸಂತ್ರಸ್ತೆ ದೂರು ದಾಖಲಿಸಿರುವುದರಿಂದ ಪ್ರಕರಣಕ್ಕೆ ಅವರು ತನಿಖೆಗೆ ಸಹಕರಿಸಲೇಬೇಕಾಗುತ್ತದೆ. ಇದರಿಂದ ಕೆಲವರು ಮುಂಡಿಟ್ಟುಕೊಂಡು ಜಾತಿ ಲೇಪನ ಮಾಡಲು ಮುಂದಾಗುತ್ತಿದ್ದಾರೆ.

ಇದರಲ್ಲಿ ಸರ್ಕಾರದ ಯಾವುದೇ ರೀತಿಯ ಪಾತ್ರವಿರುವುದಿಲ್ಲ. ಮುಖ್ಯಮಂತ್ರಿಗಳಾಗಲೀ, ಉಪಮುಖ್ಯಮಂತಿಗಳಾಗಲೀ ಈ ಪ್ರಕರಣದಲ್ಲಿ ಯಾವುದೇ ರೀತಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES

Latest News