Thursday, June 19, 2025
Homeರಾಜ್ಯಕೆಆರ್‌ಎಸ್ ಜಲಾಶಯ ಭರ್ತಿಗೆ ಕೇವಲ 9 ಅಡಿ ಬಾಕಿ, ಅನ್ನದಾತರಲ್ಲಿ ಹರ್ಷ

ಕೆಆರ್‌ಎಸ್ ಜಲಾಶಯ ಭರ್ತಿಗೆ ಕೇವಲ 9 ಅಡಿ ಬಾಕಿ, ಅನ್ನದಾತರಲ್ಲಿ ಹರ್ಷ

Only 9 feet left to fill KRS reservoir

ಬೆಂಗಳೂರು, ಜೂ.19- ಕಾವೇರಿ ಜಲಾನಯನಪ್ರದೇಶ ವ್ಯಾಪ್ತಿಯಲ್ಲಿ ಮುಂಗಾರು ಮಳೆ ವ್ಯಾಪಕವಾಗಿ ಬೀಳುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಲ್ಲಿ ನೀರಿನಮಟ್ಟ ಏರಿಕೆಯಾಗಿದ್ದು ಭರ್ತಿಗೆ ಇನ್ನೂ 9 ಅಡಿಯಷ್ಟೇ ಬಾಕಿ ಇದೆ.

ಪ್ರತಿವರ್ಷ ಕೆಆರ್‌ಎಸ್ ಜಲಾಶಯ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಭರ್ತಿಯಾಗುತ್ತಿತ್ತು. ಜುಲೈ ತಿಂಗಳಲ್ಲಿ ಭರ್ತಿಯಾದ ಒಂದೆರಡು ಉದಾಹರಣೆಗಳಿವೆ. ಆದರೆ ಈ ಬಾರಿ ಜೂನ್ ತಿಂಗಳಲ್ಲೇ ಭರ್ತಿಯಾಗುವ ಸಾಧ್ಯತೆ ಇದೆ. ಜಲಾಶಯ ತುಂಬಲು ಇನ್ನು 9 ಅಡಿ ಮಾತ್ರ ಉಳಿದಿದೆ.

ಅಂದರೆ 12 ಟಿಎಂಸಿ ಮಾತ್ರ ಈದೇ ರಿತಿ ಮಳೆ ಮುಂದು ವರೆದರೆ ಇನ್ನು ಕೆಲವೇ ದಿನಗಳಲ್ಲಿ ತುಂಬಲಿದೆ.1980ರಿಂದ ಇಲ್ಲಿಯವರೆಗೂ ಜೂನ್ ತಿಂಗಳಲ್ಲಿ ಜಲಾಶಯ ಭರ್ತಿಯಾದ ಉದಾಹರಣೆಗಳಿಲ್ಲ. ಈ ತಿಂಗಳು ಭರ್ತಿಯಾದರೆ ವಿಶೇಷ ದಾಖಲೆಯಾಗಲಿದೆ.

ಇಂದು ಡ್ಯಾಂಗೆ 34,092 ಕ್ಯೂಸೆಕ್ ಒಳಹರಿವು ಇದ್ದು ಜಲಾಶಯದ ನೀರಿನ ಮಟ್ಟ 115,78 ಅಡಿ ತಲುಪಿದೆ. ಸಧ್ಯ 37.947 ಟಿಎಂಸಿ ನೀರು ಸಂಗ್ರಹವಾಗಿದ್ದು ಭರ್ತಿಗೆ 9 ಅಡಿ ಮಾತ್ರ ಬಾಕಿ ಇದೆ.

ಹಳೆ ಮೈಸೂರು ಬಾಗದ ಅನ್ನದಾತರ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯ ಇದೆ ತಿಂಗಲ್ಲಿ ತುಂಬುವತ್ತ ಸಾಗುತ್ತಿದ್ದು ಅನ್ನದಾತರ ಮೂಗದಲ್ಲಿ ಮಂದಹಾಸ ಮೂಡಿದೆ.
ಅದರೀತಿ ಕಾವೇರಿ ಕೊಳ್ಳದ ಕಂಬಿನ, ಹಾರಂಗಿ, ಹೇಮಾವತಿ ಅಣೆಕಟ್ಟೆಗಳಲ್ಲೂ ಸಹ ಒಳಹರಿವು ಹೆಚ್ಚಳವಾಗಿದ್ದು ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನೀರು ಹೊರಬೀಡಲಾಗುತ್ತಿದೆ.

RELATED ARTICLES

Latest News