Wednesday, July 30, 2025
Homeರಾಷ್ಟ್ರೀಯ | National'ಆಪರೇಷನ್‌ ಮಹಾದೇವ್‌' ಮುಂದುವರಿಕೆ, ಅಡಗಿರುವ ಉಗ್ರರಿಗಾಗಿ ಶೋಧ

‘ಆಪರೇಷನ್‌ ಮಹಾದೇವ್‌’ ಮುಂದುವರಿಕೆ, ಅಡಗಿರುವ ಉಗ್ರರಿಗಾಗಿ ಶೋಧ

'Operation Mahadev' continues, search for hidden terrorists

ಶ್ರೀನಗರ, ಜು. 29- ಕಣಿವೆ ರಾಜ್ಯ ಜಮು-ಕಾಶೀರದ ಶ್ರೀನಗರ ಬಳಿಯ ದಚಿಗಾಮ್‌ನ ದಟ್ಟ ಕಾಡುಗಳಲ್ಲಿ ಇನ್ನೂ ಹೆಚ್ಚಿನ ಭಯೋತ್ಪಾದಕರು ಇರುವ ಬಗ್ಗೆ ಗುಪ್ತಚರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭಯೋತ್ಪಾದಕರ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಆಪರೇಷನ್‌ ಮಹಾದೇವ್‌ ಮತ್ತು ಶೋಧ ಕಾರ್ಯವನ್ನು ಎರಡನೇ ದಿನವೂ ಭದ್ರತಾ ಪಡೆಗಳು ಮತ್ತಷ್ಟು ತೀವ್ರಗೊಳಿಸಿವೆ.

ಸೋಮವಾರ ಮುಂಜಾನೆ, ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ನಡೆದ ಎನ್ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದು ಹಾಕಿದ್ದರು. ಹತ್ಯೆಗೀಡಾದವರು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪಿನ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಸದಸ್ಯರಾಗಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಅವರ ಗುರುತುಗಳನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಹತ್ಯೆಗೀಡಾದ ಭಯೋತ್ಪಾದಕರನ್ನು ಗುರುತಿಸಲು ಬಯೋಮೆಟ್ರಿಕ್‌, ಮುಖ ಗುರುತಿಸುವಿಕೆ ಬಳಸಲಾಗುತ್ತದೆ. ಗುರುತುಗಳನ್ನು ಪರಿಶೀಲಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.

ಜಮು ಮತ್ತು ಕಾಶೀರ ಪೊಲೀಸರು, ಎನ್‌ಐಎ ಮತ್ತು ಮಿಲಿಟರಿ ಗುಪ್ತಚರ ವಿಭಾಗವು ಶಂಕಿತರೊಂದಿಗೆ ಶವಗಳ ಗುರುತಿಸುವಿಕೆಯನ್ನು ಪತ್ತೆ ಮಾಡಲು ಬಯೋಮೆಟ್ರಿಕ್‌ ಡೇಟಾ ಮತ್ತು ಮುಖ ಗುರುತಿಸುವಿಕೆ ದಾಖಲೆಗಳನ್ನು ವಿಶ್ಲೇಷಿಸುತ್ತಿದೆ. ಇತರ ಗುಪ್ತಚರ ಸಂಸ್ಥೆಗಳು ಸಹ ಈ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಿವೆ. ಭಯೋತ್ಪಾದಕರ ಮೊಬೈಲ್‌ ಫೋನ್‌ಗಳು ಮತ್ತು ಇತರ ವಸ್ತುಗಳನ್ನು ವಿವರವಾದ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಭಾರತೀಯ ಸೇನೆ, ಜಮು ಮತ್ತು ಕಾಶೀರ ಪೊಲೀಸರು ಮತ್ತು ಸಿಆರ್‌ಪಿಎಫ್‌ ಜಂಟಿ ಪತ್ರಿಕಾಗೋಷ್ಠಿ ನಡೆಸುವ ನಿರೀಕ್ಷೆಯಿದೆ. ಅರಣ್ಯ ಪ್ರದೇಶದಲ್ಲಿ ಇನ್ನೂ ಇಬ್ಬರು ಅಥವಾ ಹೆಚ್ಚಿನ ಶಂಕಿತರು ಅಡಗಿಕೊಂಡಿರಬಹುದು ಎಂದು ಭದ್ರತಾ ಪಡೆಗಳು ನಂಬಿವೆ. ಶೋಧ ಕಾರ್ಯಾಚರಣೆ ಸಕ್ರಿಯವಾಗಿದ್ದು, ಎಲ್ಲಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.

ಮಾಸ್ಟರ್‌ ಮೈಂಡ್‌ ಹತ್ಯೆ:
ಅಧಿಕಾರಿಗಳ ಪ್ರಕಾರ, ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರಲ್ಲಿ ಒಬ್ಬನಾದ ಸುಲೈಮಾನ್‌ ಶಾ ಏಪ್ರಿಲ್‌ 22 ರ ಪಹಲ್ಗಾಮ್‌ ದಾಳಿಯ ಮಾಸ್ಟರ್‌ ಮೈಂಡ್‌ ಎಂದು ನಂಬಲಾಗಿದೆ. ಇತರ ಇಬ್ಬರು ಭಯೋತ್ಪಾದಕರನ್ನು ಜಿಬ್ರಾನ್‌ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಗಂಗೀರ್‌ನಲ್ಲಿರುವ ಸೋನಾಮಾರ್ಗ್‌ ಸುರಂಗ ಯೋಜನೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಜಿಬ್ರಾನ್‌ ಭಾಗಿಯಾಗಿದ್ದ ಎನ್ನಲಾಗಿದೆ.

26 ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಗುಂಪುಗಳ ವಿರುದ್ಧ ಬೃಹತ್‌ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಆಪರೇಷನ್‌ ಸಿಂಧೂರ್‌ ಅಡಿಯಲ್ಲಿ ಭಾರತವು ತೀವ್ರವಾದ ಮತ್ತು ನಿಖರವಾದ ದಾಳಿಗಳನ್ನು ನಡೆಸಿ, ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತ್ತು.

ಈ ಸ್ಥಳಗಳು ಜೈಶ್‌-ಎ-ಮೊಹಮದ್‌ (ಜೆಇಎಂ) ಮತ್ತು ಲಷ್ಕರ್‌-ಎ-ತೊಯ್ಬಾ (ಎಲ್‌‍ಇಟಿ) ಯ ಪ್ರಮುಖ ಕಮಾಂಡ್‌ ಕೇಂದ್ರಗಳಾಗಿದ್ದು, ಪುಲ್ವಾಮಾ (2019) ಮತ್ತು ಮುಂಬೈ (2008) ನಂತಹ ಪ್ರಮುಖ ದಾಳಿಗಳಿಗೆ ಕಾರಣವಾಗಿವೆ. ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು. ಪ್ರತೀಕಾರವಾಗಿ, ಪಾಕಿಸ್ತಾನವು ಮುಂದಿನ ಮೂರು ದಿನಗಳಲ್ಲಿ – ಮೇ 8, 9 ಮತ್ತು 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು.

ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಪ್ರಮುಖ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡೋನ್‌ ದಾಳಿಗಳನ್ನು ನಡೆಸಿತು. ನಾಲ್ಕು ದಿನಗಳ ಕಾಲ ನಡೆದ ಗಡಿಯಾಚೆಗಿನ ತೀವ್ರ ಡೋನ್‌ ಮತ್ತು ಕ್ಷಿಪಣಿ ವಿನಿಮಯದ ನಂತರ, ಎರಡೂ ದೇಶಗಳು ಮೇ 10 ರಂದು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಯುದ್ಧವನ್ನು ಕೊನೆಗೊಳಿಸಲು ಒಪ್ಪಿಕೊಂಡಿದ್ದವು.

RELATED ARTICLES

Latest News