ನವದೆಹಲಿ, ಆ. 20 (ಪಿಟಿಐ) ರಾಷ್ಟ್ರ ರಾಜಧಾನಿ ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ನಿರಂತರವಾಗತೊಡಗಿದೆ. ಈ ಹಿಂದೆ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಬೆನ್ನಲ್ಲೇ ಇಂದು ಅಲ್ಲಿನ ಐವತ್ತಕ್ಕೂ ಹೆಚ್ಚಿನ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ.
ತಕ್ಷಣ ಅಲರ್ಟ್ ಆದ ಪೊಲೀಸರು ಮತ್ತು ಇತರ ತುರ್ತು ಸಂಸ್ಥೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೆಹಲಿ ಅಗ್ನಿಶಾಮಕ ಸೇವೆಗಳ ಪ್ರಕಾರ, ಮಾಲ್ವಿಯಾ ನಗರದ ಎಸ್ಕೆವಿ ಮತ್ತು ಪ್ರಸಾದ್ ನಗರದ ಆಂಧ್ರ ಶಾಲೆ ಎಂಬ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆಗಳ ಬಗ್ಗೆ ಕ್ರಮವಾಗಿ ಬೆಳಿಗ್ಗೆ 7.40 ಮತ್ತು 7.42 ಕ್ಕೆ ಮಾಹಿತಿ ಬಂದಿದೆ.
ಅದೇ ರೀತಿ ನಗರದ ಇತರ ಹಲವಾರು ಪ್ರದೇಶಗಳಲ್ಲಿರುವ ಶಾಲೆಗಳಿಗೂ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಹೀಗಾಗಿ ಪೊಲೀಸ್ ತಂಡಗಳು, ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ತಕ್ಷಣ ಆವರಣಕ್ಕೆ ಧಾವಿಸಿದವು.
ಆಗಸ್ಟ್ 18 ರಂದು ನಗರದಾದ್ಯಂತ 32 ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದ ಕೇವಲ ಎರಡು ದಿನಗಳ ನಂತರ ಹೊಸ ಬೆದರಿಕೆಗಳು ಬರುತ್ತಿರುವುದು ಆತಂಕ ತಂದಿದೆ, ಆದರೆ ಇದುವರೆಗೂ ಬಂದಿರುವ ಎಲ್ಲಾ ಕರೆಗಳು ಹುಸಿಯಾಗಿವೆ ಎನ್ನುವುದು ಸಮಾಧಾನಕರ ವಿಷಯವಾದರೂ ಭವಿಷ್ಯದಲ್ಲಿ ಏನಾಗುವುದೋ ಎನ್ನುವ ಆತಂಕ ಪೋಷಕರನ್ನು ಕಾಡತೊಡಗಿದೆ.
- ಕಿಲ್ಲರ್ ಬಿಎಂಟಿಸಿ ಬಸ್ಗೆ ಕೂಲಿ ಕಾರ್ಮಿಕ ಬಲಿ
- ಸತ್ತ ವ್ಯಕ್ತಿಗೂ ಡಯಾಲಿಸಿಸ್ ಮಾಡಿದ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪ
- ಅತಿವೃಷ್ಠಿ ಹಾನಿ ಕುರಿತು ಗಿರುವ ಅತಿವೃಷ್ಠಿ ಹಾನಿ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ
- ವಿಧಾನಸಭೆಯಲ್ಲಿ ಮೂರು ವಿಧೇಯಕಗಳು ವಾಪಸ್
- ಧಾರ್ಮಿಕ ಹಬ್ಬ, ಉತ್ಸವಗಳ ಆಚರಣೆ ಕುರಿತು ಭಾವನೆಗಳಿಗೆ ಧಕ್ಕೆಯಾಗದಂತೆ ಸರ್ಕಾರ ಕ್ರಮ : ಸಚಿವ ಚಲುವರಾಯಸ್ವಾಮಿ