Home Blog Page 1905

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ನವದೆಹಲಿ,ಅ.9- ತೀವ್ರ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 7 ರಿಂದ ನವೆಂಬರ್ 30 ರವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರೋಂ ರಾಜ್ಯಗಳ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ಮತದಾನ ನಡೆದರೆ ನಕ್ಸಲ್‍ಪೀಡಿತ ಛತ್ತೀಸ್‍ಗಢದಲ್ಲಿ ಎರಡು ಹಂತದಲ್ಲಿ ಮತದಾನ ಜರುಗಲಿದೆ. ಸೋಮವಾರ ನವದೆಹಲಿಯಲ್ಲಿ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‍ಕುಮಾರ್ ಪ್ರಕಟಿಸಿದರು.

ರಾಜ್ಯದಲ್ಲಿ ಒಂದು ವಾರ ಮಳೆ ಸಾಧ್ಯತೆ

ಈ ಐದು ರಾಜ್ಯಗಳಲ್ಲಿ ನೀತಿ ಸಂಹಿತೆ ಸೋಮವಾರದಿಂದಲೇ ಜಾರಿಗೆ ಬಂದಿದ್ದು, ಮುಖ್ಯಮಂತ್ರಿ ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಸರ್ಕಾರಿ ಕಾರು, ವಾಹನಗಳು ಸೇರಿದಂತೆ ಸವಲತ್ತುಗಳಿಗೆ ನಿರ್ಬಂಧ ಹಾಕಲಾಗಿದೆ.90 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ನಕ್ಸಲ್‍ಪೀಡಿತ ಛತ್ತೀಸ್‍ಗಢದಲ್ಲಿ ನವೆಂಬರ್ 7 ರಂದು ಮೊದಲ ಹಂತದಲ್ಲಿ 20 ಕ್ಷೇತ್ರ ಹಾಗೂ ನವೆಂಬರ್ 17 ರಂದು 70 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

230 ವಿಧಾನಸಭಾ ಕ್ಷೇತ್ರ ಹೊಂದಿರುವ ಮಧ್ಯಪ್ರದೇಶದಲ್ಲಿ ನವೆಂಬರ್ 17, 200 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ರಾಜಸ್ತಾನದಲ್ಲಿ ನವೆಂಬರ್ 23, 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮಿಜೊರಾಂನಲ್ಲಿ ನವೆಂಬರ್ 7, 119 ಕ್ಷೇತ್ರಗಳನ್ನು ಒಳಗೊಂಡಿರುವ ತೆಲಂಗಾಣದಲ್ಲಿ ನವೆಂಬರ್ 30 ರಂದು ಮತದಾನ ಜರುಗಲಿದೆ.

ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಈ ಬಾರಿಯೂ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಹಿಂದಿಗಿಂತಲೂ ಬಿಗಿಯಾದ ನಿಯಮಗಳನ್ನು ರೂಪಿಸಲಾಗಿದೆ.

ಮೂರು ಸ್ನೇಹಿತರ ಪ್ರೇಮಕಥೆ ಅಭಿರಾಮಚಂದ್ರ

ಐದೂ ರಾಜ್ಯಗಳ 679 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1.77 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. 17,734 ಮಾದರಿ ಮತಗಟ್ಟೆ ಕೇಂದ್ರಗಳು ಇರಲಿವೆ. 621 ಮತಗಟ್ಟೆಗಳನ್ನು ಅಂಗವಿಕಲ ಸಿಬ್ಬಂದಿಯು ನಿರ್ವಹಿಸಲಿದ್ದಾರೆ. 8,192 ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿ ನಿರ್ವಹಿಸಲಿದ್ದಾರೆ.

ಡಿಸಿಎಂ ಡಿಕೆಶಿ ವಿರುದ್ಧ ಜೆಡಿಎಸ್ ವಾಗ್ದಾಳಿ

ಬೆಂಗಳೂರು,ಅ. 9- ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎರಡೂವರೆ ವರ್ಷ ಮುಖ್ಯಮಂತ್ರಿಯಾಗುತ್ತೇನೆಂದು ಹೇಳುವ ಎದೆಗಾರಿಕೆ ತೋರುತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ. ದೇವೇಗೌಡರು ಇಂದಿಲ್ಲಿ ಟೀಕಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಡಿಕೆ ಶಿವಕುಮಾರ್ ಅವರು ಉತ್ತರನ ಪೌರುಷವಿದ್ದಂತೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗುವ ಹೇಳಿಕೆಯ ಧೈರ್ಯವೂ ತೋರಲಿಲ್ಲ ಎಂದು ವ್ಯಂಗ್ಯವಾಡಿದರು.

ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರು, ಎಸ್‍ಎಂ ಕೃಷ್ಣ, ಡಿವಿ ಸದಾನಂದ ಗೌಡ, ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ ಒಮ್ಮೆ ಅವಕಾಶ ಕೊಡಿ ನಾನು ಸಿಎಂ ಆಗುತ್ತೇನೆ ಎಂದು ಕೋರಿದ್ದರು. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಉಪಮುಖ್ಯಮಂತ್ರಿ ಆಗಿದ್ದಾರೆ, ಆದರೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಾವೇ ಮುಖ್ಯಮಂತ್ರಿ ಎನ್ನುತ್ತಾರೆ. ಕೆಎನ್ ರಾಜಣ್ಣ ಮೂವರು ಉಪಮುಖ್ಯಮಂತ್ರಿಗಳಾಬೇಕು ಎಂದರೆ, ಮಾಜಿ ಸಚಿವ ಬಸವರಾಜರಾಯರೆಡ್ಡಿ 6 ಮಂದಿ ಉಪಮುಖ್ಯಮಂತ್ರಿಗಳಾಗಲಿ ಎಂದು ಹೇಳಿಕೆ ನೀಡಿದ್ದಾರೆ.

ಫೈಟರ್ ಮನಮೋಹಕ, ಗೆದ್ದ ನಿರ್ಮಾಪಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬರ ಸಮಾವೇಶದಲ್ಲಿ ಕಾವೇರಿಯಿಂದ ಕನ್ಯಾಕುಮಾರಿಯವರೆಗೂ ಕುರುಬ ಸಮುದಾಯವಿದೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.ಆದರೆ ಐದು ವರ್ಷ ಅಧಿಕಾರದಲ್ಲಿ ಮುಂದುವರಿಯುವುದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು. ಪರಿಹಾರ ಸಿಕ್ಕಿಲ್ಲ ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಭೀಕರ ಬರಗಾಲವಿದ್ದು, 40 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದರೂ ಇದುವರೆಗೂ ರಾಜ್ಯ ಸರ್ಕಾರ ಬೆಳೆನಷ್ಟ ಪರಿಹಾರ ನೀಡಿಲ್ಲ.

ಬರಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ರೈತರಿಗೆ, ಜನರಿಗೆ ಧೈರ್ಯ ತುಂಬಿಲ್ಲ. ರೈತರ ಸ್ಥಿತಿ ರಾಜ್ಯದಲ್ಲಿ ಜೀವನ್ಮರಣದ ಪರಿಸ್ಥಿತಿ ಉಂಟಾಗಿದೆ. ಕೃಷಿ ಪಂಪ್ ಸೆಟ್‍ಗಳಿಗೆ 7 ಗಂಟೆ ಬದಲಿಗೆ 2 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. 10 ಸಾವಿರ ರೂ. ಕಟ್ಟಿದರೆ ಕೃಷಿ ಪಂಪ್ ಸೆಟ್‍ಗೆ ವಿದ್ಯುತ್ ಸಂಪರ್ಕ ದೊರಕುತ್ತಿತ್ತು.

ಈಗ ನಾಲ್ಕರಿಂದ 5 ಲಕ್ಷ ರೂ. ಕಟ್ಟಬೇಕಾಗಿದೆ. ರೈತರು ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಂಡರೆ ನಿರಂತರ ಜ್ಯೋತಿ ನೀಡುವುದಿಲ್ಲ. ಇಂತಹ ಸರ್ಕಾರ ಇರಬೇಕೇ ಎಂದು ಪ್ರಶ್ನಿಸಿದರು. ಆಸ್ಪತ್ರೆ, ಶಾಲೆ, ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ, ಮದ್ಯದ ಪಾಪದ ಹಣದಿಂದ ಸರ್ಕಾರ ನಡೆಸಬೇಕೇ ಎಂದು ಕಾಂಗ್ರೆಸ್ ಮುಖಂಡರೇ ಹೇಳಿದ್ದಾರೆ.

ಲಡಾಕ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು

ಮೈಸೂರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗೆ ಬಸವಣ್ಣ ಪ್ರೇರಣೆ ಎಂದಿದ್ದಾರೆ. ಬಸವಣ್ಣನವರು ಕಾಯಕ ಮಾಡಿ ಬದುಕಬೇಕು ಎಂದು ಹೇಳಿದ್ದರೆ ಹೊರತು ಬಿಟ್ಟಿಭಾಗ್ಯದಿಂದಲ್ಲ ಎಂದರು.

ರಾಜ್ಯದಲ್ಲಿ ಒಂದು ವಾರ ಮಳೆ ಸಾಧ್ಯತೆ

ಬೆಂಗಳೂರು, ಅ.9- ರಾಜ್ಯಾದ್ಯಂತ ಅಕ್ಟೋಬರ್ ಮೊದಲ ವಾರದಿಂದ ಹಿಂಗಾರು ಮಳೆ ಪ್ರಾರಂಭವಾಗಿದ್ದು, ಆರಂಭದಲ್ಲಿ ಮಂದವಾಗಿದ್ದ ಮಳೆ ಚುರುಕುಗೊಂಡಿದ್ದು, ನಿನ್ನೆ ಸಂಜೆಯಿಂದ ರಾಜಧಾನಿ ಸೇರಿದಂತೆ ವಿವಿಧೆಡೆ ತುಂತುರು ಮಳೆಯಾಗುತ್ತಿದ್ದು, ವಾತಾವರಣ ತಂಪಾಗಿದೆ.

ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸಂಜೆಯಿಂದ ಪ್ರಾರಂಭವಾದ ಜಿಟಿಜಿಟಿ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣವಿದೆ. ಇನ್ನೂ ಒಂದು ವಾರ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ, ದಾವಣಗೆರೆ ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ.

ನಟ ಶಾರುಖ್​ ಖಾನ್​ಗೆ ವೈ ಪ್ಲಸ್ ಭದ್ರತೆ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸುತ್ತಮುತ್ತ ನಿನ್ನೆ ಸಂಜೆ ಗುಡುಗು ಸಿಡಿಲು ಸಮೇತ ಉತ್ತಮ ಮಳೆಯಾಗಿದೆ.
ಕೆಲದಿನಗಳಿಂದ ಬಿಸಿಲಿನ ತಾಪದಿಂದ ಬಳಲಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ.

ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತ

ನವದೆಹಲಿ,ಅ.9- ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತವಾಗಿದ್ದಾರೆ. ಭಾರತೀಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸರ್ಕಾರದ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಟೆಲ್ ಅವೀವ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತೀಯರ ಮನವಿಗಳನ್ನು ಸಂಗ್ರಹಿಸಲಾಗಿದೆ.

ಯುದ್ಧದಲ್ಲಿ ಸಿಲುಕಿರುವ ಪ್ರವಾಸಿಗರು ಸೇರಿದಂತೆ ಭಾರತೀಯ ಪ್ರಜೆಗಳು ತಮ್ಮ ಸುರಕ್ಷಿತ ನಿರ್ಗಮನಕ್ಕೆ ಅನುಕೂಲವಾಗುವಂತೆ ಮನವಿ ಮಾಡುತ್ತಿದ್ದಾರೆ. ಇಸ್ರೇಲ್‍ನಲ್ಲಿ ವಾಸಿಸುವ ಹಲವಾರು ಭಾರತೀಯರು ಆರೈಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು, ಹಲವಾರು ಐಟಿ ವೃತ್ತಿಪರರು ಮತ್ತು ವಜ್ರದ ವ್ಯಾಪಾರಿಗಳು ಇದ್ದಾರೆ.

ಲಡಾಕ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು

ಇಸ್ರೇಲ್‍ಗೆ ಭೇಟಿ ನೀಡುವ ಕೆಲವು ಉದ್ಯಮಿಗಳು ಸಂಘರ್ಷದಲ್ಲಿ ಸಿಲುಕಿಕೊಂಡಿದ್ದಾರೆ. ಶೀಘ್ರದಲ್ಲೇ ಸ್ಥಳಾಂತರಿಸಲು ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.

ನಟ ಶಾರುಖ್​ ಖಾನ್​ಗೆ ವೈ ಪ್ಲಸ್ ಭದ್ರತೆ

ಮುಂಬೈ,ಅ.9-ಮುಂಬೈ- ಪಠಾಣ್ ಹಾಗೂ ಜವಾನ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಮಹಾರಾಷ್ಟ್ರ ಸರ್ಕಾರವು ದಿಢೀರನೆ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ. ಬಾಲಿವುಡ್ ನಟನಿಗೆ ಹಲವು ರೀತಿಯಲ್ಲಿ ಜೀವ ಬೆದರಿಕೆ ಇರುವ ಕಾರಣ ವೈ ಪ್ಲಸ್ ಕೆಟಗರಿ ಭದ್ರತೆ ಒದಗಿಸಲಾಗಿದೆ ಎಂಬುದನ್ನು ಮುಂಬೈ ಪೊಲೀಸ್ ಮೂಲಗಳು ದೃಢಪಡಿಸಿವೆ.

ಮಹಾರಾಷ್ಟ್ರದ ಉನ್ನತ ಪ್ರಭಾವಿ ಸಮಿತಿಯು ಶಾರುಖ್ ಖಾನ್ ಅವರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಭದ್ರತೆ ಒದಗಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆ ವೇಳೆ ಉಂಟಾದ ವಿವಾದದ ಬಳಿಕ ನಟನಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಇದೇ ಕಾರಣಕ್ಕಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಅವರ ಭದ್ರತೆಗೆ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಜೊತೆಗೆ ಭದ್ರತೆಗಾಗಿ ಅವರದೇ ಆದ ವೈಯಕ್ತಿಕ ಅಂಗರಕ್ಷಕರಿದ್ದರು. ಆದರೀಗ ಹೈ-ಪರ್ವ ಕಮಿಟಿಯ ಶಿಫಾರಸುಗಳನ್ನು ಅನುಸರಿಸಿ ಶಾರುಖ್ ಖಾನ್ ಅವರ ಭದ್ರತೆಯನ್ನು ವೈ ಪ್ಲಸ್ ಭದ್ರತೆಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.

ಕಂದಕಕ್ಕೆ ಬಸ್ ಉರುಳಿ ಬಿದ್ದು 6 ಪ್ರಯಾಣಿಕರ ಸಾವು

ಜವಾನ್ ನಟ ಶಾರುಖ್ ಖಾನ್ ಜೊತೆಗೆ ಸದ್ಯ ರಾಜ್ಯದ ವಿಐಪಿ ಭದ್ರತಾ ಘಟಕದ 6 ಟ್ರೆಂಡ್ ಕಮಾಂಡೋಗಳ ತಂಡ ಯಾವಾಗಲೂ ಇರುತ್ತದೆ. ಭದ್ರತಾ ತಂಡ ಯಾವಾಗಲು ಎಂಪಿ -5 ಮೆಷಿನ್ ಗನ್‍ಗಳನ್ನು ಮತ್ತು ಎಕೆ -47 ಅಸಾಲ್ಟ ರೈಫಲ್‍ಗಳನ್ನು ಮತ್ತು ಗ್ಲಾಕ್ ಪಿಸ್ತೂಲ್‍ಗಳನ್ನು ಹೊಂದಿರುತ್ತದೆ.

ಶಾರುಖ್ ಖಾನ್ ಅವರಿಗೆ ನೀಡಿದ ಹೆಚ್ಚುವರಿ ಭದ್ರತೆಯ ಹೊರತಾಗಿ ಅವರ ನಿವಾಸವಾದ ಮನ್ನತ್ ಸುತ್ತಲೂ 24/7 ಪೊಲೀಸರು ಉಪಸ್ಥಿತರಿರುತ್ತಾರೆ. ಅವರ ಬಂಗಲೆಯ ಸುತ್ತಮುತ್ತಲಿನ ಜನರ ಮೇಲೆ ನಿಗಾ ಇಡಲಾಗಿದೆ.ಹೆಚ್ಚುವರಿ ಭದ್ರತೆ ವರದಿಯ ಪ್ರಕಾರ ವೈ ಪ್ಲಸ್ ವಿಭಾಗದಲ್ಲಿ ನಟ ಆರು ಕಮಾಂಡೋಗಳು, ನಾಲ್ಕು ಪೊಲೀಸ್ ಸಿಬ್ಬಂದಿ ಮತ್ತು ಟ್ರಾಫಿಕ್ ಕ್ಲಿಯರೆನ್ಸ್ ವಾಹನ ಸೇರಿದಂತೆ 11 ಭದ್ರತಾ ಸಿಬ್ಬಂದಿಯನ್ನು ಪಡೆಯುತ್ತಾರೆ.

ಗೇಮಿಂಗ್ ಮತ್ತು ಬೇಷರಮ್ ಸಾಂಗ್ ವಿವಾದ ಈ ವರ್ಷದ ಆಗಸ್ಟ್‍ನಲ್ಲಿ ಆನ್‍ಲೈನ್ ಗೇಮಿಂಗ್ ಅಪ್ಲಿಕೇಶನ್‍ಗಳನ್ನು ಅನುಮೋದಿಸುವ ಸೆಲೆಬ್ರಿಟಿಗಳ ವಿರುದ್ಧ ಪ್ರತಿಭಟನೆಯಿಂದಾಗಿ ನಟನ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಯಿತು.ಇಂತಹ ಅನುಮೋದನೆಗಳು ಯುವ ಪೀಳಿಗೆಯನ್ನು ದಾರಿ ತಪ್ಪಿಸಬಹುದು ಮತ್ತು ಭ್ರಷ್ಟಗೊಳಿಸಬಹುದು ಎಂಬ ಕಳವಳವನ್ನು ಈ ಪ್ರತಿಭಟನೆಗಳು ಎತ್ತಿ ತೋರಿಸಿದವು.

ಇದಲ್ಲದೆ ಶಾರುಖ್ ಖಾನ್ ಅವರ ಪಠಾಣ ಚಿತ್ರದ ಬೇಷರಂ ರಂಗ್ ಹಾಡಿನ ಸುತ್ತ ವಿವಾದವೆದ್ದಿತ್ತು. ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನೆಲೆಸಿರುವ ಪರಮಹಂಸ ಆಚಾರ್ಯ ಅವರು ನಟನ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದರು. ಇದು ಶಾರುಖ್ ಖಾನ್ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಕಾರಣವಾಯಿತು.

ಲಡಾಕ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು

ಈ ವಿವಾದದ ಮಧ್ಯೆಯೂ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಜಾಗತಿಕವಾಗಿ ಒಂದು ಸಾವಿರ ಕೋಟಿ ರೂ. ಗಳಿಸಿದೆ ಎಂದು ತಿಳಿದುಬಂದಿದೆ. ಇದರ ನಂತರ ಬಂದ ಜವಾನ್ ಸಿನಿಮಾ ಕೂಡ 1,100 ಕೋಟಿ ರೂ. ಗಳಿಸಿದೆ. ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಡಂಕಿ ಸಿನಿಮಾ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ.

ಮೂರು ಸ್ನೇಹಿತರ ಪ್ರೇಮಕಥೆ ಅಭಿರಾಮಚಂದ್ರ

ಈ ವಾರ ತೆರೆ ಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಅಭಿರಾಮಚಂದ್ರ ಚಿತ್ರ ಯುವಕರನ್ನ ಬಾಲ್ಯದ ನೆನಪುಗಳ ಅಂಗಳಕ್ಕೆ ಕೊಂಡೊಯ್ದು ಎರಡು ಗಂಟೆಗಳ ಕಾಲ ನಾವೆಲ್ಲಿದ್ದೇವೆ ಅನ್ನುವುದನ್ನ ಮರೆಸಿ ಹೃದಯವನ್ನ ಭಾರಮಾಡುತ್ತದೆ. ವಸ್ತು, ಪ್ರೀತಿ ಇರಲಿ, ಎಮೋಷನ್ ಅಥವಾ ಆಕ್ಷನ್ ಇರಲಿ ಆ ವಸ್ತುವನ್ನು ಗಟ್ಟಿಯಾಗಿ ಹಿಡಿದು ಅದರ ಸುತ್ತ ಮುತ್ತ ಒಂದಿಷ್ಟು ಕಲರ್ಫುಲ್ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರ ಬಳಿ ತೆಗೆದುಕೊಂಡು ಹೋಗಿ ಯಶಸ್ವಿಯಾಗುವುದು ಸುಲಭವಲ್ಲ. ಈ ಪ್ರಯತ್ನದಲ್ಲಿ ನಿರ್ದೇಶಕ ನಾಗೇಂದ್ರ ಗಾಣಿಗ ಯಶಸ್ವಿಯಾಗಿದ್ದಾರೆ.

ಅಭಿ,ರಾಮ,ಚಂದ್ರ ಬೆಂಗಳೂರಲ್ಲಿ ಉದ್ಯೋಗ ನಿಮಿತ್ತ ಬಂದಿರುತ್ತಾರೆ ಒಂದೇ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಒಬ್ಬ ರಂಗಭೂಮಿ ಕಲಾವಿದ, ಮತ್ತೊಬ್ಬ ಕ್ಯಾಬ್ ಡ್ರೈವರ್ ಇನ್ನೊಬ್ಬ ಹೋಟಲ್ ಕ್ಯಾಶಿಯರ್. ಉದ್ಯೋಗಿಗಳಾಗಿದ್ದರೂ ಮನೆಗೆ ಬಾಡಿಗೆ ಕಟ್ಟಲಾದಷ್ಟು ಬಡತನ. ಕಾರಿಗೆ ಇಎಂಐ ಕಟ್ಟಲು ತಿಣುಕಾಟ. ಪ್ರತಿಯೊಬ್ಬರ ಬಳಿಯೂ ಸಾಲದ ಭಿಕ್ಷೆ. ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳುತ್ತಿರುವ ಅದೆಷ್ಟೋ ಮಂದಿಗೆ ಇದು ಅನುಭವವಾಗಿರುತ್ತದೆ. ಮೂರು ಹುಡುಗರ ತರಲೆ ತುಂಟಾಟಗಳು ನೋಡುಗರಿಗೆ ಮನರಂಜನೆಯನ್ನು ನೀಡುತ್ತವೆ.

ನಿಜ್ಜರ್ ಹತ್ಯೆಯಲ್ಲಿ ಚೀನಿ ಕೈವಾಡ : ಜೆನ್ನಿಫರ್ ಝೆಂಗ್

ಇದೇ ಸಂದರ್ಭದಲ್ಲಿ ನಾಯಕ ಅಭಿ ಪ್ರೇಮ ಕಥೆಯ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಇದು ಮೊದಲರ್ಧಕ್ಕೆ ಮತ್ತಷ್ಟು ರಂಗನ್ನ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಕುಂದಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಯಕ ನಾಯಕಿಯ ಬಾಲ್ಯದ ಪ್ರೀತಿ ಅಭಿರಾಮಚಂದ್ರ ಚಿತ್ರದ ಹೈಲೆಟ್. ಕುಂದಾಪುರದ ಭಾಷೆ ಮತ್ತು ಅಲ್ಲಿಯ ಹಳ್ಳಿ ಸೊಗಡು ಕಥೆಗೆ ತುಂಬ ಪೂರಕವಾಗಿದೆ.

ಬಾಲ್ಯದಲ್ಲಿ ಹುಟ್ಟಿದ ಪ್ರೀತಿಯನ್ನು ಸದಾ ನೆನೆಯುತ್ತಾ ಆಕೆಯ ನೆನಪಲ್ಲೇ ಕಾಲ ಕಳೆಯುತ್ತಿರುವ ನಾಯಕನಿಗೆ ನಾಯಕಿ ಸಿಗುತ್ತಾಳ ಎಂಬ ಪ್ರಶ್ನೆಗೆ ದ್ವಿತೀಯಾರ್ಧದಲ್ಲಿ ಉತ್ತರ ಕೊಡುವ ಪ್ರಯತ್ನವಾಗಿದೆ.ಇಲ್ಲಿ ಕಥೆ ಪ್ರೇಕ್ಷರನ್ನ ತುಂಬಾ ಕುತೂಹಲಕ್ಕೆ ದೂಡುತ್ತದೆ ಅದೇನೆಂಬ ಪ್ರಶ್ನೆಗೆ ಚಿತ್ರ ನಮ್ಮ ಗೊತ್ತಾಗುತ್ತದೆ.

ನಾಯಕನಾಗಿ ರಥಕಿರಣ ಸ್ನೇಹಿತರ ಪಾತ್ರಗಳಲ್ಲಿ ಸಿದ್ದು ಮೂಲಿಮನಿ ವತ್ತು ನಾಟ್ಯರಂಗ ಅಭಿನಯಿಸಿದ್ದು ಇಡೀ ಕತೆಯನ್ನು ಈ ನಾಲ್ವರು ಹೆಗಲ ಮೇಲೆ ಎತ್ತಿಕೊಂಡು ಹೋಗಿದ್ದಾರೆ. ನಿರ್ದೇಶಕ ಇವರ ಬಳಿ ಅಭಿನಯ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.

ರವಿ ಬಸ್ರೂರು ಮ್ಯೂಸಿಕ್‌ ಕುಂದಾಪುರದ ವಾತಾವರಣಕ್ಕೆ ರಂಗು ತುಂಬಿದ್ದು ಎ. ಜಿ. ಸುರೇಶ್‌ ಹಾಗೂ ಮಲ್ಲೇಶ್‌ ಈ ಚಿತ್ರ ಸೊಗಸಾಗಿ ಮೂಡಿ ಬರುವಂತೆ ನಿರ್ಮಾಣ ಮಾಡಿದ್ದಾರೆ.

ಅಪ್ರಾಪ್ತ ಸಹೋದರಿಯರನ್ನು ಕತ್ತು ಸೀಳಿ ಕೊಂದ ಹಂತಕರು

ಮೊದಲಾರ್ದದಲ್ಲಿ ನಾಯಕಿ ಶಿವಾನಿ ರೈ ಕಾಶಿಕೊಳ್ಳದಿದ್ದರು ಎರಡನೇ ಭಾಗದಲ್ಲಿ ನಿರ್ದೇಶಕರು ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವೀಣಾ ಸುಂದರ್‌, ಸುಂದರ್‌, ಎಸ್‌. ನಾರಾಯಣ್‌, ಪ್ರಕಾಶ್‌ ತುಮ್ಮಿನಾಡು ಕೂಡ ಅಭಿರಾಮಚಂದ್ರನಿಗೆ ನೆರವಾಗಿದ್ದಾರೆ. ಯಾವುದೇ ವಯೋಮಿತಿ ಇಲ್ಲದೆ ಅಭಿರಾಮಚಂದ್ರನನ್ನ ಕಣ್ತುಂಬಿಕೊಳ್ಳಲು ಅಡ್ಡಿ ಇಲ್ಲ

ಫೈಟರ್ ಮನಮೋಹಕ, ಗೆದ್ದ ನಿರ್ಮಾಪಕ

ಕನ್ನಡ ಚಿತ್ರಗಳನ್ನು ನೋಡಲು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ. ಪರಭಾಷೆ ಚಿತ್ರಗಳಿಗೆ ಕನ್ನಡಿಗರು ಮಣೆ ಹಾಕುತ್ತಾರೆ ಎಂಬೆಲ್ಲ ಆಪಾದನೆಗಳು ಆಗಾಗ ಕೇಳಿ ಬರುತ್ತವೆ. ಹೀಗೆ ಹೇಳುವವರಿಗೆ ಈ ವಾರ ಕರೆಕೊಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಫೈಟರ್ ಚಿತ್ರವನ್ನು ಚಿತ್ರಮಂದಿರಗಳತ್ತಿರ ಹೋಗಿ ನೋಡಿದಾಗ ಗೊತ್ತಾಗುತ್ತದೆ, ಸಿನಿಮಾ ಚೆನ್ನಾಗಿದ್ದರೆ ಹುಡುಕಿಕೊಂಡು ಬಂದು ನೋಡುತ್ತಾರೆ ಎಂದು .

ಫೈಟರ್ ಒಬ್ಬ ರೈಟರ್. ದುಷ್ಟರಿಂದ ಹುಡುಗಿಯ ರಕ್ಷಣೆ.ರೈಟರ್ ನ ಫೈಟಿಂಗ್ ನೋಡಿ ನಾಯಕಿ ಮೋಹಕ ವಿಸ್ಮಯ.ಕಥೆಯಲ್ಲಿ ನಾಯಕನ ಹೆಸರು ಮೋಹಕ್ ನಾಯಕಿ ವಿಸ್ಮಯ.ಫೈಟ್ ಅಂಡ್ ಲವ್ ಇಂದ ಶುರುವಾಗುವ ಕಥೆ ಹೇಳುವ ವಿಷಯಗಳನ್ನು ವೀಕ್ಷಕರಿಗೆ ಎಲ್ಲಿಯೂ ಬೋರ್ ಆಗದಂತೆ ಹೇಳುತ್ತಾ ವೇಗವಾಗಿ ಸಾಗುತ್ತದೆ.

ಅಪ್ರಾಪ್ತ ಸಹೋದರಿಯರನ್ನು ಕತ್ತು ಸೀಳಿ ಕೊಂದ ಹಂತಕರು

ಮೊದಲಾರ್ಧದಲ್ಲಿ ಪ್ರೀತಿ ಮತ್ತು ತಾಯಿ ಸೆಂಟಿಮೆಂಟ್ ಆವರಿಸಿಕೊಂಡಿದೆ. ಬ್ಲಡ್, ಕರೋನ ಔಷಧಿಗಳ ಮಾಫಿಯಾ ಗಳ ವಿರುದ್ಧ ನಾಯಕನ ತಾಯಿ ಜಿಲ್ಲಾಧಿಕಾರಿ ರಾಧ ಪ್ರಾಮಾಣಿಕವಾಗಿ ಹೋರಾಟ ನಡೆಸಿದಾಗ ಮಾಫಿಯಾದಿಂದಲೇ ಅಪಹರಣ. ತಾಯಿ ಎಂದರೆ ತುಂಬಾ ಇಷ್ಟ ಪಡುವ ನಾಯಕ ಹೆತ್ತವಳನ್ನು ಉಳಿಸಿಕೊಳ್ಳಲು ತಾನು ಪ್ರೀತಿಸುವ ಪ್ರೀತಿಯನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ತಾಯಿಯ ಅಪಹರಣ ಮತ್ತು ಪ್ರೇಯಸಿ ಕೊಲೆಗೆ ಕಾರಣಗಳೇನು ಎಂಬ ಪ್ರಶ್ನೆಗೆ ದ್ವಿತೀಯಾರ್ಧದಲ್ಲಿ ಉತ್ತರ ಸಿಗುತ್ತದೆ.ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ನಿರ್ದೇಶಕ ನೂತನ್ ಉಮೇಶ್, ರೈತರ ಸಮಸ್ಯೆಗಳಿಂದ ಹಿಡಿದು ಕರೋನ ಮಾಫಿಯಾ ತನಕ ಒಂದಷ್ಟು ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾ, ಪ್ರೇಕ್ಷಕನಿಗೆ ಲವ್, ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲವನ್ನು ಏಕಕಾಲದಲ್ಲಿ ಕಟ್ಟಿಕೊಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.ಚಿತ್ರದಲ್ಲಿ ಆಕ್ಷನ್ ಎಪಿಸೊಡ್ ಗಳು ಮೈನವಿರೇಳಿಸುವಂತಿವೆ.ಸಿನಿಮಾದುದ್ದಕ್ಕೂ ಸಂಭಾಷಣೆ ಗಟ್ಟಿಯಾಗಿದ್ದು ಯುವಕರಿಗೆ ಇಷ್ಟವಾಗುತ್ತದೆ. ಅದರಲ್ಲೂ ನಾಯಕಿಯ ಡೈಲಾಗ್ಗಳಿಗೆ ಥಿಯೇಟರ್ ನಲ್ಲಿ ಶಿಳ್ಳೆಗಳ ಮಳೆಯ ಸರಿಯುತ್ತದೆ‌‌. ಇನ್ನು ಗುರುಕಿರಣ್ ಸಂಗೀತ, ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಫೈಟರ್ ಮೆರಗನ್ನ ಹೆಚ್ಚಿಸಿದೆ.

ನಾಯಕ ವಿನೋದ್ ಪ್ರಭಾಕರ್ ಈ ಹಿಂದಿನ ಚಿತ್ರಗಳಿಗಿಂತ ಫೈಟರ್ ಕಥೆಯಲ್ಲಿ ವಿಭಿನ್ನವಾಗಿ ಕಾಣುತ್ತಾರೆ. ಡೈಲಾಗ್ ಡೆಲವರಿ, ಆಕ್ಷನ್ ಮ್ಯಾನರಿಸಂ ಇವೆಲ್ಲವೂ ಇವರಿಗೆ ಕಥೆಯಲ್ಲಿ ಪ್ಲಸ್ ಪಾಯಿಂಟ್ ಆಗಿವೆ.ನಾಯಕಿ ಲೇಖ ಚಂದ್ರ ಕೂಡ ಇಂಟರ್ವಲ್ ಬರುವವರೆಗೂ ಕಥೆಯಲ್ಲಿ ಆವರಿಸಿಕೊಂಡಿದ್ದಾರೆ‌. ಅವರು ಮಾತನಾಡುವ ಪ್ರತಿಯೊಂದು ಮಾತು ಆಕರ್ಷಕ. ಇವರಿಬ್ಬರ ಜೋಡಿ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.

ದೆಹಲಿಯಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಂದ ಹಂಗೇರಿ ಪ್ರಜೆಯ ದರೋಡೆ

ಹಾಸ್ಯಕ್ಕಿ ಕಥೆಯಲ್ಲಿ ಒತ್ತುಕೊಡಲಾಗಿದೆ. ಕುರಿ ಪ್ರತಾಪ್ ಮತ್ತು ಗಿರಿಜಾ ಲೋಕೇಶ್ ನಡುವೆ ನಡೆಯುವ ಪ್ರಸಂಗಗಳಿಗೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಉಳಿದಂತೆ ನಟಿ ಪಾವನ, ಶರತ್ ಲೋಹಿತಾಶ್ವ, ರಾಜೇಶ್ ನಟರಂಗ ಸೇರಿದಂತೆ ಎಲ್ಲಾ ನಟರಿಗೂ ಒಳ್ಳೆ ಪಾತ್ರಗಳು ಸಿಕ್ಕಿವೆ. ಪ್ರತಿಯೊಂದು ದೃಶ್ಯವು ಶ್ರೀಮಂತಿಕೆಯಿಂದ ಕೂಡೊ ಅದ್ದೂರಿಯಾಗಿ ಮೂಡಿಬರಲು ಕಾರಣವಾಗಿರುವುದು ನಿರ್ಮಾಪಕ ಕಟ್ಟಿಗೆನಹಳ್ಳಿ ಸೋಮಶೇಖರ್. ಸದ್ಯ ರಾಜ್ಯದ್ಯಂತ ಅದ್ದೂರಿಯಾಗಿ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿರುವ ಫೈಟರ್ ಈಗಾಗಲೇ ಇವರಿಗೆ ಗೆಲುವನ್ನು ತಂದುಕೊಟ್ಟು ಜೇಬು ತುಂಬಿಸಿದೆ. ಮತ್ತೊಂದು ಪ್ರಮುಖ ವಿಷಯ ಎಂದರೆ ಚಿತ್ರದ ಕೊನೆಯಲ್ಲಿ ಎರಡನೇ ಭಾಗದ ಸುಡಿ ವನ್ನು ಕೊಟ್ಟಿದ್ದಾರೆ. ಫೈಟರನ್ನು ಕಣ್ತುಂಬಿಕೊಂಡ ಪ್ರೇಕ್ಷಕ ಈ ಗೆಲುವು ಬೇರೆ ಚಿತ್ರಗಳಿಗೂ ನೆರವಾಗಲಿದೆ ಎನ್ನುತ್ತಾನೆ

ಲಡಾಕ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು

ಶ್ರೀನಗರ,ಅ.9-ಲಡಾಕ್-ಕಾರ್ಗಿಲ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. 26 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನಿರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟವು 22 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ನ್ಯಾಷನಲ್ ಕಾನರೆನ್ಸ್ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದಿದೆ. ಮೂರು ಸ್ಥಾನಗಳಲ್ಲಿ ಪಕ್ಷೇತರರು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಇನ್ನೂ ಎರಡು ಸ್ಥಾನಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಪಿಡಿಪಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.

ಎನ್‌ಸಿಯಿಂದ 17 ಮತ್ತು ಕಾಂಗ್ರೆಸ್‍ನ 22 ಸೇರಿದಂತೆ ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ 17 ಸ್ಥಾನಗಳಲ್ಲಿ ಸ್ರ್ಪಧಿಸಿತ್ತು. ಎನ್‌ಸಿಪಿ-ಕಾಂಗ್ರೆಸ್ ಎರಡು ಪ್ರಬಲ ಧಾರ್ಮಿಕ ಸಂಸ್ಥೆಗಳ ಬೆಂಬಲವನ್ನು ಹೊಂದಿತ್ತು ಎಂದು ಹೇಳಲಾಗುತ್ತಿದೆ. ಜಮಿಯತ್ ಉಲೇಮಾ ಕಾರ್ಗಿಲ್ ಮತ್ತು ಇಮಾಮ್ ಖುಮೈನಿ ಸ್ಮಾರಕ ಟ್ರಸ್ಟ್‌ಗಳು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಿದ್ದವು. ಎರಡು ಧಾರ್ಮಿಕ ಸಂಸ್ಥೆಗಳ ಧರ್ಮ ಗುರುಗಳು ಬಿಜೆಪಿ ವಿರುದ್ಧ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ.

ಬಹುಜನರನ್ನು ಗುಲಾಮಗಿರಿಯಿಂದ ಹೊರತರುವಲ್ಲಿ ಕಾನ್ಶಿರಾಮ್ ಪಾತ್ರ ಮಹತ್ವದ್ದು : ಮಾಯಾವತಿ

ಜನರ ತೀರ್ಪಿಗೆ ಪ್ರತಿಕ್ರಿಯಿಸಿದ ನ್ಯಾಷನಲ್ ಕಾನಿರೆನ್ಸ್ ನಾಯಕ ಒರ್ಮ ಅಬ್ದುಲ್ಲಾ, ನ್ಯಾಷನಲ್ ಕಾನಿರೆನ್ಸ್ -ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿ ಹೀನಾಯ ಸೋಲನ್ನು ಕಂಡಿದೆ ಎಂದು ಹೇಳಿದ್ದಾರೆ. ಈ ಫಲಿತಾಂಶವು ಪ್ರಜಾಸತ್ತಾತ್ಮಕವಾಗಿದೆ. ಅಸಾಂವಿಧಾನಿಕವಾಗಿ ಜನರ ಒಪ್ಪಿಗೆಯಿಲ್ಲದೆ ರಾಜ್ಯವನ್ನು ವಿಭಜಿಸಿದ ಎಲ್ಲಾ ಶಕ್ತಿಗಳು ಮತ್ತು ಪಕ್ಷಗಳಿಗೆ ಇದು ಸಂದೇಶವನ್ನು ಕಳುಹಿಸಿದೆ. ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಜಯವು ನ್ಯಾಷನಲ್ ಕಾನರನ್ಸ್-ಕಾಂಗ್ರೆಸ್ ಮೈತ್ರಿಯನ್ನು ಬೆಂಬಲಿಸಿದೆ ಝನ್ಸ್ಕಾರ್, ಕಾರ್ಗಿಲ್ ಮತ್ತು ಡ್ರಾಸ್ ಜನರಿಗೆ ಸೇರಿದೆ. ಚುನಾಯಿತ ಎಲ್ಲಾ ಕೌನ್ಸಿಲರ್‍ಗಳಿಗೆ ನಾವು ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಜನರ ಸೇವೆಗಾಗಿ ಅವರ ಸಮರ್ಪಣೆಯನ್ನು ಗೌರವಿಸುತ್ತೇವೆ. ಅವಿರತ ಬೆಂಬಲಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ನಿಜ್ಜರ್ ಹತ್ಯೆಯಲ್ಲಿ ಚೀನಿ ಕೈವಾಡ : ಜೆನ್ನಿಫರ್ ಝೆಂಗ್

ನ್ಯೂಯಾರ್ಕ್,ಅ.9- ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಚೀನಾದ ಕಮ್ಯುನಿಸ್ಟ ಪಕ್ಷದ (ಸಿಸಿಪಿ) ಏಜೆಂಟರು ಭಾಗಿಯಾಗಿದ್ದಾರೆ ಎಂದು ಸ್ವತಂತ್ರ ಬ್ಲಾಗರ್ ಜೆನ್ನಿಫರ್ ಝೆಂಗ್ ಆರೋಪಿಸಿದ್ದಾರೆ. ಭಾರತ ಮತ್ತು ಪಶ್ಚಿಮದ ನಡುವೆ ಅಪಶ್ರುತಿ ಮೂಡಿಸುವುದು, ತೈವಾನ್‍ಗೆ ಸಂಬಂಧಿಸಿದಂತೆ ಕ್ಸಿ ಜಿನ್‍ಪಿಂಗ್‍ರ ಮಿಲಿಟರಿ ಕಾರ್ಯತಂತ್ರಕ್ಕೆ ಅನುಗುಣವಾಗಿ ಜಗತ್ತನ್ನು ಅಡ್ಡಿಪಡಿಸುವ ಉದ್ದೇಶದಿಂದ ಚೀನಾ ಇಂತಹ ಕೃತ್ಯಕ್ಕೆ ಕೈ ಹಾಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಜೆನ್ನಿಫರ್ ಝೆಂಗ್ ಚೀನೀ ಮೂಲದ ಹಕ್ಕುಗಳ ಕಾರ್ಯಕರ್ತೆ ಹಾಗೂ ಪತ್ರಕರ್ತೆಯಾಗಿದ್ದು ಪ್ರಸ್ತುತ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ ಪಾರ್ಮ್ Xನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಝೆಂಗ್ ನಿಜ್ಜರ ಸಾವನ್ನು ಹತ್ಯೆ ಎಂದು ಕರೆದಿದ್ದಾರೆ, ಇಂದು ಕೆನಡಾದಲ್ಲಿ ಸಿಖ್ ಧಾರ್ಮಿಕ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯೂ ಸಿಸಿಪಿ ಏಜೆಂಟರಿಂದ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ದೆಹಲಿಯಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಂದ ಹಂಗೇರಿ ಪ್ರಜೆಯ ದರೋಡೆ

18 ಜೂನ್ 2023 ರಂದು, ಭಾರತದಲ್ಲಿ ಗೊತ್ತುಪಡಿಸಿದ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಅವರನ್ನು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.

ಸ್ವತಂತ್ರ ಬ್ಲಾಗರ್ ತನ್ನ ಆರೋಪಗಳನ್ನು ಚೀನೀ ಬರಹಗಾರ ಮತ್ತು ಯೂಟ್ಯೂಬರ್ ಲಾವೊ ಡೆಂಗ್‍ಗೆ ಕಾರಣವೆಂದು ಹೇಳಿದ್ದಾರೆ, ಅವರ ಪ್ರಕಾರ, ಅವರು ಈಗ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಕೆನಡಾದಲ್ಲಿ ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಹತ್ಯೆ ಮಾಡುವ ಕೆಲಸವನ್ನು ಏಜೆಂಟರಿಗೆ ವಹಿಸಲಾಯಿತು. ಸಭೆಯ ನಂತರ ಏಜೆಂಟ್ಗಳು ಹತ್ಯೆಯ ಯೋಜನೆಯನ್ನು ನಿಖರವಾಗಿ ಕಾರ್ಯಗತಗೊಳಿಸಿದರು ಎಂದು ಅವರು ಹೇಳಿಕೊಂಡಿದ್ದಾರೆ.

ಕಂದಕಕ್ಕೆ ಬಸ್ ಉರುಳಿ ಬಿದ್ದು 6 ಪ್ರಯಾಣಿಕರ ಸಾವು

ಡೆಹ್ರಾಡೂನ್,ಅ.9- ನೈನಿತಾಲ್ ಜಿಲ್ಲೆಯ ಕಲಾಧುಂಗಿ ಪ್ರದೇಶದಲ್ಲಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ ಆರು ಪ್ರಯಾಣಿಕರು ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಬಸ್ ಹರ್ಯಾಣದ ಹಿಸಾರ್ ಜಿಲ್ಲೆಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿತ್ತು. ನೈನಿತಾಲ್ ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿಯ ಪ್ರಕಾರ, ಪ್ರವಾಸಿಗರು ನೈನಿತಾಲ್‍ಗೆ ಭೇಟಿ ನೀಡಿ ಹಿಂದಿರುಗುತ್ತಿದ್ದಾಗ ಅವರ ಬಸ್ ಕಲಾಧುಂಗಿಯ ನಲ್ನಿ ಪ್ರದೇಶದಲ್ಲಿ 100 ಮೀಟರ್ ಆಳದ ಕಮರಿಗೆ ಬಿದ್ದಿದೆ.

ಮಾಹಿತಿ ಪ್ರಕಾರ ರಾತ್ರಿ 8 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಆರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ದೆಹಲಿಯಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಂದ ಹಂಗೇರಿ ಪ್ರಜೆಯ ದರೋಡೆ

ಅಪಘಾತದ ವೇಳೆ ಬಸ್‍ನಲ್ಲಿ 33 ಮಂದಿ ಪ್ರಯಾಣಿಕರಿದ್ದರು. ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಅಪಘಾತಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ.