Thursday, November 6, 2025
Home Blog Page 43

ಬೆಂಗಳೂರಿನ ಮಹಿಳೆಯರೇ ಹುಷಾರ್ : 1 ರೂ. ಬಡ್ಡಿಗೆ ಲೋನ್‌ ಕೊಡುವುದಾಗಿ ಹಣ ದೋಚುತ್ತಿದೆ ಗ್ಯಾಂಗ್

ಬೆಂಗಳೂರು,ಅ.15-ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಹಣ ದೋಚುವ ಮಹಿಳಾ ಗ್ಯಾಂಗ್‌ ನಗರದಲ್ಲಿದೆ ಎಚ್ಚರಿಕೆ. ಕೇವಲ 1 ರೂ. ಬಡ್ಡಿಗೆ ಲೋನ್‌ ಕೊಡಿಸುವುದಾಗಿ ಹೇಳಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಅವರನ್ನು ಸಂಪರ್ಕಿಸಿ ಮರುಳು ಮಾಡುವ ಈ ಗ್ಯಾಂಗ್‌ ತದನಂತರದಲ್ಲಿ ಮೊದಲ ಮೂರು ಕಂತಿನ ಹಣವೆಂದು ಹಾಗೂ ಸರ್ವಿಸ್‌‍ ಚಾರ್ಜ್‌ ಎಂದು ಹಣ ಪಡೆದು ಲೋನ್‌ ಕೊಡದೆ ಕಣರೆಯಾಗುತ್ತಿದೆ.

ಈ ಮಹಿಳಾ ಗ್ಯಾಂಗ್‌ ನಗರದ ವಿವಿಧ ಕಡೆಗಳಲ್ಲಿ ಸುತ್ತಾಡುತ್ತಾ ಅಮಾಯಕ ಮಹಿಳೆಯರನ್ನು ಯಾಮಾರಿಸಿ ಹಣ ಪೀಕಿ ವಂಚಿಸುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದಿರಬೇಕಿದೆ.
ಸುಬ್ಬಲಕ್ಷ್ಮಿ ಚಿಟ್‌ ಫಂಡ್‌ ಹೆಸರಿನಲ್ಲಿ 1 ರೂ. ಬಡ್ಡಿಗೆ 5 ಲಕ್ಷ, 10 ಲಕ್ಷ, 15 ಲಕ್ಷ ಲೋನ್‌ ಕೊಡಿಸುವುದಾಗಿ ಗ್ರಾಹಕರೊಬ್ಬರಿಂದ ಲೋನ್‌ ಸರ್ವಿಸ್‌‍ ಚಾರ್ಜ್‌ ಎಂದು ಹೇಳಿ 30 ರೂ. ಹಣ ಈ ಗ್ಯಾಂಗ್‌ ಪಡೆದುಕೊಂಡಿತ್ತು.

ಈ ಗ್ಯಾಂಗ್‌ನ ಪ್ರಮುಖ ಆರೋಪಿಯೊಬ್ಬಳು ಚಿಟ್‌ ಫಂಡ್‌ನಲ್ಲಿ ನಮ ಸಂಬಂಧಿ ಕೆಲಸ ಮಾಡುತ್ತಿದ್ದು, ಅವರ ಕಡೆಯಿಂದ 10 ಲಕ್ಷ ಲೋನ್‌ಕೊಡಿಸುತ್ತೇನೆ ಕೇವಲ 1 ರೂ. ಬಡ್ಡಿಯಷ್ಟೆ ಎಂದು ಗ್ರಾಹಕರನ್ನು ನಂಬಿಸಿದ್ದಾಳೆ.

ಲೋನ್‌ ಬೇಕಾದರೆ ಮೂರು ಕಂತಿನ ಇಎಂಐ ಹಣವನ್ನು ಮೊದಲೇ ಕೊಡಬೇಕು. ತಿಂಗಳಿಗೆ 10 ಸಾವಿರದಂತೆ 30 ಸಾವಿರ ಹಣದ ಜೊತೆಗೆ ಸರ್ವಿಸ್‌‍ ಶುಲ್ಕ 5 ಸಾವಿರ ರೂ. ಕಟ್ಟಬೇಕೆಂದು ಹೇಳಿ ಹಣ ಪಡೆದುಕೊಂಡು ಲೋನ್‌ ಕೊಡಿಸದೆ ಪ್ರಮುಖ ಆರೋಪಿ ಸೇರಿದಂತೆ ಗ್ಯಾಂಗ್‌ನ ಇತರರು ತಲೆ ಮರೆಸಿಕೊಂಡಿದ್ದಾರೆೆ.

ಈ ರೀತಿ ವಂಚಿಸಿರುವ ಬಗ್ಗೆ ಕೆಪಿ ಅಗ್ರಹಾರ ಹಾಗೂ ಬಸವೇಶ್ವರ ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.ಈ ಗ್ಯಾಂಗ್‌ ಕೆಪಿ ಅಗ್ರಹಾರದಲ್ಲಿ 16 ಮಹಿಳೆಯರಿಗೆ ಹಾಗೂ ಬಸವೇಶ್ವರ ನಗರದಲ್ಲಿ 1 ಮಹಿಳೆಗೆ ಮೋಸ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಪೊಲೀಸರು ಈ ಗ್ಯಾಂಗ್‌ನ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ. ಈ ಮಹಿಳಾ ಗ್ಯಾಂಗ್‌ ನಗರದ ಬೇರೆ ಬೇರೆ ಕಡೆಗಳಲ್ಲಿಯೂ ವಂಚಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೊಬೈಲ್‌ ಕಳೆದುಹೋದರೆ-ಕಳ್ಳತನವಾದರೆ ದೂರು ನೀಡಿ, ಇಲ್ಲದಿದ್ರೆ ಸಂಕಷ್ಟ ಗ್ಯಾರಂಟಿ

– ವಿ.ರಾಮಸ್ವಾಮಿ ಕಣ್ವ
ಒಂದ್‌ ಕಾಲದಲ್ಲಿ ದೂರವಾಣಿ ದೂರವಾಗಿಯೇ ಉಳಿದಿತ್ತು. ಉಳ್ಳವರು ಮಾತ್ರ ಹಲೋ ಎನ್ನುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಮೊಬೈಲ್‌ ಇಲ್ಲದ ಕೈಗಳಿಲ್ಲ. ಹಣ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರತಿಯೊಬ್ಬ ಶ್ರೀಸಾಮಾನ್ಯನ ಬಳಿ ಈಗ ವಿವಿಧ ರೀತಿಯ ಮೊಬೈಲ್‌ ಸೆಟ್‌ಗಳು ಇದ್ದೇ ಇರುತ್ತವೆ. ಇನ್ನೂ ಕೆಲವರ ಬಳಿ ಎರಡಲ್ಲ, ಮೂರು ಸೆಟ್‌ಗಳು ಸಹ ಇವೆ.

ಮೊಬೈಲ್ಲೇ ಸರ್ವಸ್ವ:
ಸಂಪರ್ಕ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಯಿಂದ ಈಗ ಎಲ್ಲರ ಕೈಗಳಲ್ಲೂ ಮೊಬೈಲ್‌ಗಳು ರಿಂಗಾಣಿಸುತ್ತಿವೆ. ಬಹುತೇಕರ ದೈನಂದಿನ ಜೀವನ ಮೊಬೈಲ್‌ನಿಂದಲೇ ಆರಂಭವಾಗುತ್ತದೆ. ಅಂಗೈನಲ್ಲೇ ಕನ್ನಡಿ ಎನ್ನುವಂತೆ ಸುದ್ದಿ, ಸಿನಿಮಾ, ಧಾರಾವಾಹಿ, ಆರೋಗ್ಯ ಸೇರಿದಂತೆ ಹಲವಾರು ಮಾಹಿತಿಗಳು ಕುಳಿತಲ್ಲೇ, ನಿಂತಲ್ಲೇ ವೀಕ್ಷಿಸಬಹುದಾಗಿದೆ. ವ್ಯಾಪಾರ ಕ್ಷೇತ್ರದಲ್ಲೂ ಮೊಬೈಲ್‌ ತನ್ನ ಛಾಪು ಮೂಡಿಸಿವೆ.

ಇದರಿಂದ ದಿನಪತ್ರಿಕೆಗಳನ್ನು ಓದುವುದು, ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದು, ಬ್ಯಾಂಕ್‌ಗಳಿಗೆ ತೆರಳಿ ಹಣಕಾಸು ವ್ಯವಹಾರ ಮಾಡುವುದು, ಸ್ನೇಹಿತರು ಹಾಗೂ ನೆಂಟರ ಮನೆಗಳಿಗೆ ಹೋಗುವುದನ್ನು ಬಹುತೇಕ ಮಂದಿ ಮರೆತುಬಿಟ್ಟಿದ್ದಾರೆ. ಕೆಲವರಂತೂ ಕುಟುಂಬವನ್ನೇ ಬಿಟ್ಟಿಯಾರು, ಆದರೆ ಮೊಬೈಲ್‌ಅನ್ನು ಬಿಟ್ಟು ಇರಲಾರರು. ಅಷ್ಟರಮಟ್ಟಿಗೆ ಅದರ ಗೀಳು ಅಂಟಿಸಿಕೊಂಡಿದ್ದಾರೆ. ಇನ್ನೂ ಕೆಲವರಿಗೆ ಮೊಬೈಲ್‌ ನೋಡದಿದ್ದರೆ ನಿದ್ರೆಯೇ ಬರುವುದಿಲ್ಲವಂತೆ. ನಿಜ, ಮೊಬೈಲ್‌ ಬಳಸುವುದರಿಂದ ಬಹಳಷ್ಟು ಉಪಯೋಗಗಳಿವೆ. ಇದರಲ್ಲಿ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ. ಒಳ್ಳೆಯದಕ್ಕೆ ಮಾತ್ರ ಬಳಸಬೇಕು. ಇಲ್ಲದಿದ್ದರೆ ಸಂಕಷ್ಟ ಎದುರಾಗುತ್ತದೆ.

ಜೋಪಾನ ಬಲು ಕಷ್ಟ:
ಒಮೆ ಮೊಬೈಲ್‌ ಸೆಟ್‌ ಕೊಳ್ಳುವುದು ಸುಲಭ. ಆದರೆ, ಅದನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಕಷ್ಟ. ಏಕೆಂದರೆ ಬಸ್‌‍, ರೈಲುಗಳಲ್ಲಿ ಪ್ರಯಾಣಿಸುವಾಗ, ಸ್ನೇಹಿತರ ಜೊತೆ ಕುಳಿತು ಹರಟೆ ಹೊಡೆಯುವಾಗ, ಹೊಟೇಲ್‌ಗಳಲ್ಲಿ ತಿಂಡಿ, ಊಟ ಮಾಡುವಾಗ ಕರೆ ಬಂದರೆ ಮಾತನಾಡಿ ಅಲ್ಲೇ ಇಟ್ಟು ತೆಗೆದುಕೊಂಡು ಹೋಗುವುದನ್ನೇ ಮರೆತುಬಿಡುತ್ತೇವೆ. ಯಾರಾದರೂ ಪ್ರಾಮಾಣಿಕರಿಗೆ ಅಥವಾ ಸ್ನೇಹಿತರಿಗೆ ಸಿಕ್ಕಿದಾಗ ಮಾತ್ರ ಮೊಬೈಲ್‌ ವಾಪಸ್‌‍ ತಂದು ಕೊಡುತ್ತಾರೆ. ಕಳ್ಳಕಾಕರ ಕೈಗೆ ಸಿಕ್ಕಿದರೆ ಅಪಾಯ ಕಟ್ಟಿಟ್ಟ ಬುತ್ತಿ..! ಬೆಂಗಳೂರು ನಗರದಲ್ಲಿ ಈ ಹಿಂದೆ ಸಿಕ್ಕ ಸಿಕ್ಕ ರಸ್ತೆಗಳಲ್ಲಿ ಹಗಲು-ರಾತ್ರಿ ಎನ್ನದೆ ದರೋಡೆಕೋರರು ಸರ ಅಪಹರಣ ಮಾಡುತ್ತಿದ್ದರು. ಈಗ ಅದೇ ರೀತಿ ಮೊಬೈಲ್‌ ಸೆಟ್‌ಗಳ ಅಪಹರಣವಾಗುತ್ತಿವೆ.

2023ರಲ್ಲಿ 385 ಮತ್ತು 2024ರಲ್ಲಿ 296 ಮೊಬೈಲ್‌ ಸೆಟ್‌ಗಳನ್ನು ದರೋಡೆಕೋರರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದರಲ್ಲಿ ಭಾರೀ ಬೆಲೆಯ ಸೆಟ್‌ಗಳೂ ಸೇರಿವೆ. ಕದ್ದ ದ್ವಿಚಕ್ರ ವಾಹನಗಳಲ್ಲಿ ನಗರದಲ್ಲಿ ಸುತ್ತಾಡುವ ದರೋಡೆಕೋರರು ರಾತ್ರಿ ವೇಳೆ ಒಂಟಿಯಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದು ಹೋಗುವವರು ಅಥವಾ ನಿರ್ಜನ ಪ್ರದೇಶದಲ್ಲಿ ನಿಂತು ಕ್ಯಾಬ್‌ ಬುಕ್‌ ಮಾಡುವವರು ಅಥವಾ ಡೆಲಿವರಿ ಮಾಡಲು ರಸ್ತೆ ಬದಿ ನಿಂತಿರುವ ಡೆಲಿವರಿ ಬಾಯ್‌ಗಳನ್ನೇ ಗುರಿ ಮಾಡಿಕೊಂಡು ಅವರುಗಳ ಮೊಬೈಲ್‌ಗಳಣ್ನು ಕಿತ್ತುಕೊಂಡು ಪರಾರಿಯಾಗುತ್ತಾರೆ.ಇನ್ನೂ ಕೆಲವು ದರೋಡೆಕೋರರು ತಡರಾತ್ರಿ ನಡೆದು ಹೋಗುವ ವ್ಯಕ್ತಿಗಳನ್ನೇ ಅಡ್ಡಗಟ್ಟಿ ಬೆದರಿಸಿ ಇಲ್ಲವೆ ಹಲ್ಲೆ ಮಾಡಿ ಹಣ-ಆಭರಣಗಳ ಜೊತೆಗೆ ಮೊಬೈಲ್‌ ಸೆಟ್‌ಗಳನ್ನೂ ಸಹ ಕಸಿದುಕೊಂಡು ಹೋಗುತ್ತಾರೆ.

ದುರಂತವೆಂದರೆ ದರೋಡೆಗೆ ಒಳಗಾದ ಅಥವಾ ಮೊಬೈಲ್‌ ಕಳೆದುಕೊಂಡ ಬಹುತೇಕ ಮಂದಿ ಪೊಲೀಸರಿಗೆ ದೂರು ನೀಡುವುದಿಲ್ಲ. ಹೋದರೆ ಹೋಗಲಿ ಹೊಸದೊಂದು ಸೆಟ್‌ ತೆಗೆದುಕೊಳ್ಳುವ ಎಂದು ನಿರ್ಧರಿಸುತ್ತಾರೆ. ಇದು ಮಹಾ ತಪ್ಪು. ದರೋಡೆಕೋರ ಅಥವಾ ಕಳ್ಳ ನಿಮ ಮೊಬೈಲ್‌ಅನ್ನು ಕಡಿಮೆ ಬೆಲೆಗೆ ಉಗ್ರಗಾಮಿಗಳಿಗೋ ಅಥವಾ ಸಮಾಜಘಾತುಕರಿಗೋ ಅಥವಾ ಅಪರಾಧದ ಹಿನ್ನೆಲೆಯುಳ್ಳ ಕ್ರಿಮಿನಲ್‌ಗಳಿಗೋ ಮಾರಾಟ ಮಾಡಿದರೆ ಏನು ಮಾಡುತ್ತೀರಿ..? ಕ್ರಿಮಿನಲ್‌ಗಳು ನಿಮ ನಂಬರ್‌ ಅಥವಾ ಮೊಬೈಲ್‌ ಸೆಟ್‌ ಬಳಸಿ ಘೋರ ಅಪರಾಧ ಕೃತ್ಯವೆಸಗಿದರೆ ತಕ್ಷಣವೇ ಪೊಲೀಸರು ನಿಮ ಮನೆ ಬಾಗಿಲು ತಟ್ಟುತ್ತಾರೆ. ಆಗ ಮಾಡದೆ ಇರುವ ತಪ್ಪಿಗೆ ಅಲೆದಾಡಬೇಕಾಗುತ್ತದೆ. ಮಿತಿಮೀರಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಚ್ಚರ..!

ಒಂದು ವೇಳೆ ನಿಮ ಮೊಬೈಲ್‌ ಸೆಟ್‌ ಕಳೆದುಹೋದರೆ ಅಥವಾ ಕಳುವಾದರೆ ಅಥವಾ ದರೋಡೆಯಾದರೆ ಮೊದಲು ಸಂಬಂಧಿಸಿದ ಟೆಲಿಕಾಂ ಸಂಸ್ಥೆಯನ್ನು ಸಂಪರ್ಕಿಸಿ ನಿಮ ಮೊಬೈಲ್‌ ನಂಬರ್‌ನ ಸಂಪರ್ಕವನ್ನು ಸ್ಥಗಿತಗೊಳಿಸಿ ನಂತರ ಹತ್ತಿರದ ಪೊಲೀಸ್‌‍ ಠಾಣೆಗೆ ಹೋಗಿ ದೂರು ಕೊಡಿ.

ಉದಾಸೀನ ಮಾಡಬೇಡಿ ಜೋಕೆ.!
ಪೊಲೀಸ್‌‍ ಇಲಾಖೆ ಜಾರಿಗೆ ತಂದಿರುವ ಇ-ಪೋರ್ಟಲ್‌ (CEIR Portal) ನಲ್ಲಿ ದೂರು ದಾಖಲಿಸಿ ಮನೆಯಲ್ಲೇ ಕುಳಿತು ಪೋರ್ಟಲ್‌ನಲ್ಲಿ ಸುಲಭವಾಗಿ ಸಂಪರ್ಕಿಸಬಹುದು ಅಥವಾ ಇ-ಲಾಸ್ಟ್‌ನಲ್ಲಿ ತಿಳಿಸಿ ಯಾವುದೇ ಸಂದರ್ಭವಾದರೂ ಸರಿಯೇ ದೂರು ದಾಖಲಿಸುವುದನ್ನು ಮಾತ್ರ ಮರೆಯಬೇಡಿ. ಉದಾಸೀನ ಮಾಡಿದರೆ ಸಂಕಷ್ಟಕ್ಕೆ ಒಳಗಾಗುತ್ತೀರಿ ಜೋಕೆ..!

ಹೆಚ್ಚಿನ ಸಂಖ್ಯೆಯಲ್ಲಿ
ಮೊಬೈಲ್‌ ಕಳ್ಳರು, ದರೋಡೆಕೋರ ರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಬೆಂಗಳೂರು ನಗರ ಪೊಲೀಸರು ವಿಫಲರಾಗಿದ್ದಾರೆ. ಇದು ಪೊಲೀಸರ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತದ ಸಾರಥ್ಯ

ನ್ಯೂಯಾರ್ಕ್‌, ಅ.15 (ಪಿಟಿಐ)- ಭಾರತವು 2026-28ರ ಅವಧಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ಆಯ್ಕೆಯಾಗಿದ್ದು, ಇದು ಜಿನೀವಾ ಮೂಲದ ಹಕ್ಕುಗಳ ಸಂಸ್ಥೆಯಲ್ಲಿ ದೇಶದ ಏಳನೇ ಅವಧಿಯನ್ನು ಗುರುತಿಸುತ್ತದೆ. ನಿನ್ನೆ ನಡೆದ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಿದ ಯುಎನ್‌ಎಚ್‌ಆರ್‌ಸಿ, ಭಾರತದ ಮೂರು ವರ್ಷಗಳ ಅವಧಿ ಜನವರಿ 1, 2026 ರಂದು ಪ್ರಾರಂಭವಾಗಲಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್‌‍, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಎಲ್ಲಾ ನಿಯೋಗಗಳ ಅಗಾಧ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದರು.2026-28ರ ಅವಧಿಗೆ ಭಾರತ ಇಂದು ಏಳನೇ ಬಾರಿಗೆ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿದೆ ಎಂದು ಅವರು ಹೇಳಿದರು.

ಈ ಚುನಾವಣೆಯು ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಭಾರತದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಜತಾಂತ್ರಿಕರು ಹೇಳಿದರು.ನಮ್ಮ ಅಧಿಕಾರಾವಧಿಯಲ್ಲಿ ಈ ಉದ್ದೇಶವನ್ನು ಪೂರೈಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.ಯುಎನ್‌ ಮಾನವ ಹಕ್ಕುಗಳ ಮಂಡಳಿಯು ಸಮಾನ ಭೌಗೋಳಿಕ ವಿತರಣಾ ನಿಯಮಗಳ ಅಡಿಯಲ್ಲಿ ಮೂರು ವರ್ಷಗಳ ಅವಧಿಗೆ ಯುಎನ್‌ ಜನರಲ್‌ ಅಸೆಂಬ್ಲಿಯಿಂದ ಆಯ್ಕೆಯಾದ 47 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

ಐದು ಪ್ರಾದೇಶಿಕ ಗುಂಪುಗಳಿಗೆ ಕೌನ್ಸಿಲ್‌ ಸ್ಥಾನಗಳನ್ನು ಈ ಕೆಳಗಿನಂತೆ ಹಂಚಲಾಗಿದೆ: ಆಫ್ರಿಕನ್‌ ರಾಜ್ಯಗಳು, 13 ಸ್ಥಾನಗಳು; ಏಷ್ಯಾ-ಪೆಸಿಫಿಕ್‌ ರಾಜ್ಯಗಳು, 13 ಸ್ಥಾನಗಳು; ಪೂರ್ವ ಯುರೋಪಿಯನ್‌ ರಾಜ್ಯಗಳು, 6 ಸ್ಥಾನಗಳು; ಲ್ಯಾಟಿನ್‌ ಅಮೇರಿಕನ್‌ ಮತ್ತು ಕೆರಿಬಿಯನ್‌ ರಾಜ್ಯಗಳು, 8 ಸ್ಥಾನಗಳು; ಮತ್ತು ಪಶ್ಚಿಮ ಯುರೋಪಿಯನ್‌ ಮತ್ತು ಇತರ ರಾಜ್ಯಗಳು, 7 ಸ್ಥಾನಗಳು.

ಸತತ ಎರಡು ಅವಧಿಗಳ ನಂತರ 2024 ರಲ್ಲಿ ಯುಎನ್‌ಎಚ್‌ಆರ್‌ಸಿಯಲ್ಲಿ ಕೊನೆಯ ಬಾರಿಗೆ ಸೇವೆ ಸಲ್ಲಿಸಿದ ಭಾರತ, ಈ ವರ್ಷ ಸ್ವಲ್ಪ ಅಂತರವನ್ನು ತೆಗೆದುಕೊಂಡು 2026-28 ಅವಧಿಗೆ ಚುನಾವಣೆಗೆ ಸ್ಪರ್ಧಿಸುವ ಮೊದಲು ಮೂರನೇ ನೇರ ಅಧಿಕಾರಾವಧಿಯನ್ನು ನಿರ್ಬಂಧಿಸುವ ನಿಯಮಗಳಿಗೆ ಅನುಸಾರವಾಗಿದೆ.2011, 2018 ಮತ್ತು 2025 ರಲ್ಲಿ ಮೂರು ಕಡ್ಡಾಯ ವಿರಾಮಗಳನ್ನು ಹೊರತುಪಡಿಸಿ, 2006 ರಲ್ಲಿ ರಚನೆಯಾದಾಗಿನಿಂದ ಭಾರತವು ನಿರಂತರವಾಗಿ ಕೌನ್ಸಿಲ್‌ನ ಸದಸ್ಯ ರಾಷ್ಟ್ರವಾಗಿದೆ.

ಎಗ್ಗಿಲ್ಲದೆ ನಡೆಯುತ್ತಿದೆ ಪಡಿತರ ಅಕ್ಕಿ ಕಳ್ಳಸಾಗಾಣಿಕೆ : ಆರ್‌.ಅಶೋಕ್‌ ಆಕ್ರೋಶ

ಬೆಂಗಳೂರು,ಅ.15– ಕಲ್ಯಾಣ ಕರ್ನಾಟಕದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಪಡಿತರ ಅಕ್ಕಿ ಕಳ್ಳಸಾಗಾಣಿಕೆ ದಂಧೆಯಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲೆಷ್ಟು? ಎಂದು ಸಚಿವ ಪ್ರಿಯಾಂಕ ಖರ್ಗೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಬಡವರಿಗೆ ಸೇರಬೇಕಾದ ಅಕ್ಕಿಯಲ್ಲೂ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ ಮಾಡುತ್ತಿರುವ ಲಜ್ಜೆಗೆಟ್ಟ ಕಾಂಗ್ರೆಸ್‌‍ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಈ ಕಳ್ಳದಂಧೆಯಲ್ಲಿ ನಿಮ ಪಾಲೆಷ್ಟು? ನಿಮ ಪರಮೋಚ್ಛ ನಾಯಕ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಪಾಲೆಷ್ಟು? ಎಂದು ಪ್ರಶ್ನಿಸಿದ್ದಾರೆ.

ಪಡಿತರ ಅಕ್ಕಿ ಕಳ್ಳಸಾಗಾಣಿಕೆ ದಂಧೆಯನ್ನು ಸಚಿವ ಪ್ರಿಯಾಂಕ ಖರ್ಗೆ ಅವರೇ ಯಾವಾಗ ನಿಷೇಧ ಮಾಡುತ್ತೀರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಬಿಡಿಗಾಸಿನ ಯುವನಿಧಿ ಅಲ್ಲ ಸ್ವಾಮಿ. ಶಾಶ್ವತವಾಗಿ ಅನ್ನ ಹಾಕುವ ಉದ್ಯೋಗದ ಗ್ಯಾರಂಟಿ ಕೊಡಿ. ಸಿಎಂ ಹಾಗೂ ಡಿಸಿಎಂ ಅವರೇ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 3 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಭರ್ತಿ ಮಾಡಿಕೊಂಡು ನಮ ಯುವಕರಿಗೆ ಉದ್ಯೋಗದ ಗ್ಯಾರಂಟಿ ಕೊಡಿ ಸ್ವಾಮಿ ಎಂದು ಒತ್ತಾಯಿಸಿದ್ದಾರೆ.

ಯುವನಿಧಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಯುವಕರ ಮೂಗಿಗೆ ತುಪ್ಪ ಸವರುವ ನಾಟಕ ಸಾಕು. ನಿಮಗೆ ನಿಜವಾಗಿಯೂ ನಾಡಿನ ಯುವಕರ ಭವಿಷ್ಯದ ಬಗ್ಗೆ ಬದ್ಧತೆ ಇದ್ದರೆ, ನೀವು ಹೇಳಿಕೊಳ್ಳುವಂತೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಖಾಲಿ ಇರುವ ಎಲ್ಲಾ 3 ಲಕ್ಷ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಿಕೊಂಡು ಉದ್ಯೋಗದ ಗ್ಯಾರಂಟಿ ಕೊಡಿ ಎಂದು ಆಗ್ರಹಿಸಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ ಬೆಂಗಳೂರಿನ ರಸ್ತೆಗುಂಡಿಗಳ ದುಸ್ಥಿತಿಯ ಬಗ್ಗೆ ಉದ್ಯಮಿಗಳು, ಸಾರ್ವಜನಿಕರು ದನಿ ಎತ್ತಿದರೆ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ವಿಶ್ವಾಸ ತುಂಬುವುದು ಬಿಟ್ಟು ಕಾಂಗ್ರೆಸ್‌‍ ಸಚಿವರು, ಅವರ ಮೇಲೆಯೇ ಮುಗಿಬೀಳುತ್ತಿದ್ದಾರೆ. ಸಚಿವ ಎಂ.ಬಿ.ಪಾಟೀಲ್‌ ಅವರೇ, ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಡಿಸಿಎಂ ಶಿವಕುಮಾರ್‌ ಅವರು ನೋಡಿದರೆ, ಇದ್ದರೆ ಇರಿ ಇಲ್ಲವೇ ಹೋಗಿ ಎನ್ನುವ ಬೇಜವಾಬ್ದಾರಿ ಮಾತುಗಳ ಮೂಲಕ ಉದ್ಯಮಿಗಳ, ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಸದಾ ಆರ್‌ಎಸ್‌‍ಎಸ್‌‍ ಜಪದಲ್ಲಿ ಬ್ಯುಸಿ ಆಗಿರುವ ಐಟಿ-ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಅವರ ಖಾತೆ ಯಾವುದು? ಅವರ ಜವಾಬ್ದಾರಿ ಏನು? ಎನ್ನುವುದೇ ನೆನಪಿದ್ದಂತಿಲ್ಲ. ಆದರೆ ತಮಂತಹ ಹಿರಿಯ ಅನುಭವಿ ಸಚಿವರಿಂದ ಈ ರೀತಿಯ ಬೇಜವಾಬ್ದಾರಿ ಮಾತುಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಉದ್ಯಮಿಗಳು, ಕೈಗಾರಿಕೆಗಳು ತಾವೇ ರಸ್ತೆ ಗುಂಡಿ ಮುಚ್ಚಬೇಕು ಎನ್ನುವುದಾದರೆ ಅವರು ತೆರಿಗೆ ಯಾಕೆ ಕಟ್ಟಬೇಕು? ಸರ್ಕಾರ ಯಾಕೆ ಇರಬೇಕು? ಸಚಿವರು ಯಾಕಿರಬೇಕು? ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವದ ಪಾಲುದಾರರಾದ ಉದ್ಯಮಿಗಳು, ಸಾರ್ವಜನಿಕರು ಟೀಕೆ ಮಾಡುವುದು ಸಹಜ. ಅದು ಮತದಾರರ ಸಂವಿಧಾನದತ್ತ ಹಕ್ಕು. ಅದನ್ನು ಸಕಾರಾತಕವಾಗಿ ತೆಗೆದುಕೊಂಡು ಸ್ಪಂದಿಸುವುದು ಬಿಟ್ಟು ಈ ರೀತಿ ಬೇಜವಾಬ್ದಾರಿಯ ಮಾತುಗಳನ್ನು ಆಡಿದರೆ ಕರ್ನಾಟಕದ ಪ್ರಜ್ಞಾವಂತ ಮತದಾರರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಕಾಂಗ್ರೆಸ್‌‍ ನಾಯಕರು ಆರ್‌ ಎಸ್‌‍ ಎಸ್‌‍ ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಅಲ್ಲಿ ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ. ಇದಕ್ಕೆ ಯಾರು ಕಾರಣ? ಕಾಂಗ್ರೆಸ್‌‍ ಸರ್ಕಾರದ ಬೇಜವಾಬ್ದಾರಿತನ, ಅಸಮರ್ಥ ಆಡಳಿತ, ಉದ್ಯಮ-ವಿರೋಧಿ ನೀತಿಗಳು.ಇದರಿಂದ ಯಾರಿಗೆ ನಷ್ಟ? ಉದ್ಯೋಗ ಸೃಷ್ಟಿ ಇಲ್ಲದೆ ಕರ್ನಾಟಕದ ಯುವಕರಿಗೆ ನಷ್ಟ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇನ್ನಾದರೂ ಕಾಂಗ್ರೆಸ್‌‍ ಸರ್ಕಾರದ ಮಂತ್ರಿಗಳು ಅನವಶ್ಯಕ ಹೇಳಿಕೆಗಳನ್ನು ಕೊಡುವುದನ್ನು ಬಿಡಬೇಕು. ಉದ್ಯಮ-ಸ್ನೇಹಿ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದ ವರ್ಚಸ್ಸಿಗೆ ಕಳಂಕ ತರದೇ ಉದ್ಯಮ, ಹೂಡಿಕೆಯನ್ನು ಆಕರ್ಷಿಸುವ ಮೂಲಕ ನಮ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವತ್ತ ಗಮನ ಹರಿಸಬೇಕು ಎಂದು ಅಶೋಕ್‌ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ನಾಳೆ ಆಂಧ್ರಕ್ಕೆ ಮೋದಿ : 13,430 ಕೋಟಿ ರೂ.ಗಳ ಯೋಜನೆಗೆ ಚಾಲನೆ

ಅಮರಾವತಿ, ಅ. 15– ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ಆಂಧ್ರಪ್ರದೇಶಕ್ಕೆ ಬಹು ಕಾರ್ಯಕ್ರಮಗಳಿಗಾಗಿ ಭೇಟಿ ನೀಡಲಿದ್ದಾರೆ, ಈ ಸಂದರ್ಭದಲ್ಲಿ ಅವರು 13,430 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕರ್ನೂಲ್‌ನಲ್ಲಿ ಸೂಪರ್‌ ಜಿಎಸ್‌‍ಟಿ ಸೂಪರ್‌ ಸೇವಿಂಗ್ಸ್ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಲಿದ್ದಾರೆ.ಈ ಯೋಜನೆಗಳು ಕೈಗಾರಿಕೆ, ವಿದ್ಯುತ್‌ ಪ್ರಸರಣ, ರಸ್ತೆಗಳು,
ರೈಲ್ವೆಗಳು, ರಕ್ಷಣಾ ಉತ್ಪಾದನೆ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಪ್ರಮುಖ ಕ್ಷೇತ್ರಗಳನ್ನು ವ್ಯಾಪಿಸಿವೆ.ಪ್ರಧಾನಿ ಮೋದಿ ಗುರುವಾರ ಬೆಳಿಗ್ಗೆ ನಂದ್ಯಾಲ್‌ ಜಿಲ್ಲೆಯ ಶ್ರೀಶೈಲಂನಲ್ಲಿರುವ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

ನಂತರ, ಅವರು ಶ್ರೀಶೈಲಂನಲ್ಲಿರುವ ಶ್ರೀ ಶಿವಾಜಿ ಸ್ಪೂರ್ತಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ನಂತರ ಕರ್ನೂಲ್‌ಗೆ ತೆರಳಿ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ.ಮೋದಿ ಸುಮಾರು 13,430 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ ಮತ್ತು ದೇಶಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆಗಳು ಪ್ರಮುಖ ವಲಯಗಳಲ್ಲಿ ವ್ಯಾಪಿಸಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕರ್ನೂಲ್‌‍- ಪೂಲಿಂಗ್‌ ಸ್ಟೇಷನ್‌ನಲ್ಲಿ 2,880 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯಲ್ಲಿ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸಲು ಅವರು ಅಡಿಪಾಯ ಹಾಕಲಿದ್ದಾರೆ.ಈ ಯೋಜನೆಯು 765 ಕೆವಿ ಡಬಲ್‌‍-ಸರ್ಕ್‌ಯೂಟ್‌ ಕರ್ನೂಲ್‌‍- ಪೂಲಿಂಗ್‌ ಸ್ಟೇಷನ್‌‍-ಚಿಲಕಲುರಿಪೇಟೆ ಪ್ರಸರಣ ಮಾರ್ಗದ ನಿರ್ಮಾಣವನ್ನು ಒಳಗೊಂಡಿದೆ, ಇದು 6,000 ರಷ್ಟು ರೂಪಾಂತರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ರಾಷ್ಟ್ರದ ಬೆಳವಣಿಗೆಯನ್ನು ಬೆಂಬಲಿಸಲು ನವೀಕರಿಸಬಹುದಾದ ಶಕ್ತಿಯ ದೊಡ್ಡ ಪ್ರಮಾಣದ ಪ್ರಸರಣವನ್ನು ಸಕ್ರಿಯಗೊಳಿಸುತ್ತದೆ.

ಅದೇ ರೀತಿ, ಕರ್ನೂಲ್‌ನ ಓರ್ವಕಲ್‌ ಕೈಗಾರಿಕಾ ಪ್ರದೇಶ ಮತ್ತು ಕಡಪದ ಕೊಪ್ಪರ್ತಿ ಕೈಗಾರಿಕಾ ಪ್ರದೇಶಕ್ಕೆ ಅವರು ಶಿಲಾನ್ಯಾಸ ಮಾಡಲಿದ್ದಾರೆ, ಒಟ್ಟು 4,920 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯೊಂದಿಗೆ.ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್‌ ಮತ್ತು ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಲಿಮಿಟೆಡ್‌ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಆಧುನಿಕ ಬಹು-ವಲಯ ಕೈಗಾರಿಕಾ ಕೇಂದ್ರಗಳು ಪ್ಲಗ್‌‍-ಅಂಡ್‌‍-ಪ್ಲೇ ಮೂಲಸೌಕರ್ಯ ಮತ್ತು ವಾಕ್‌‍-ಟು-ವರ್ಕ್‌ ಪರಿಕಲ್ಪನೆಯನ್ನು ಹೊಂದಿವೆ.

ಈ ಕೇಂದ್ರಗಳು 21,000 ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಇದು ದಕ್ಷಿಣ ರಾಜ್ಯದ ರಾಯಲಸೀಮಾ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.ಪ್ರಧಾನಮಂತ್ರಿಯವರು 960 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಸಬ್ಬಾವರಂನಿಂದ ಶೀಲಾನಗರದವರೆಗಿನ ಆರು ಪಥಗಳ ಹಸಿರುಮನೆ ಹೆದ್ದಾರಿಗೆ ಅಡಿಪಾಯ ಹಾಕಲಿದ್ದಾರೆ.

ಈ ಯೋಜನೆಯು ಬಂದರು ನಗರ ವಿಶಾಖಪಟ್ಟಣದಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ವ್ಯಾಪಾರ ಮತ್ತು ಉದ್ಯೋಗವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.ಇದಲ್ಲದೆ, ಪ್ರಧಾನಮಂತ್ರಿಯವರು ಕಡಪ – ನೆಲ್ಲೂರು ಗಡಿಯಿಂದ ಸಿಎಸ್‌‍ ಪುರಂವರೆಗೆ ಅಗಲೀಕರಣಗೊಳಿಸುವ ಪಿಲೇರು-ಕಲೂರು ವಿಭಾಗದ ರಸ್ತೆಯ ಚತುಷ್ಪಥ ಮತ್ತು -165 ರಲ್ಲಿ ಗುಡಿವಾಡ ಮತ್ತು ನುಜೆಲ್ಲಾ ರೈಲು ನಿಲ್ದಾಣಗಳ ನಡುವಿನ ಚತುಷ್ಪಥ ರೈಲ್‌ ಓವರ್‌ ಬ್ರಿಡ್‌್ಜ ಅನ್ನು ಉದ್ಘಾಟಿಸಲಿದ್ದಾರೆ.

ಅದೇ ರೀತಿ, ಅವರು -565 ರಲ್ಲಿ ಕಣಿಗಿರಿ ಬೈಪಾಸ್‌‍ ಅನ್ನು ಉದ್ಘಾಟಿಸಲಿದ್ದಾರೆ ಮತ್ತು -544 ಯಲ್ಲಿ . ಗುಂಡ್ಲಪಲ್ಲಿ ಪಟ್ಟಣದಲ್ಲಿ ಬೈಪಾಸ್‌‍ ಮಾಡಿದ ವಿಭಾಗವನ್ನು ಸುಧಾರಿಸಲಿದ್ದಾರೆ.ಮೋದಿ 1,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ರೈಲ್ವೆ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ.ಅವರು ಕೊಥವಲಸ-ವಿಜಯನಗರಂ ನಾಲ್ಕನೇ ರೈಲ್ವೆ ಮಾರ್ಗ ಮತ್ತು ಪೆಂಡುರ್ಟಿ ಮತ್ತು ಸಿಂಹಾಚಲಂ ಉತ್ತರ ನಡುವಿನ ರೈಲು ಮೇಲ್ಸೇತುವೆಗೆ ಅಡಿಪಾಯ ಹಾಕಲಿದ್ದಾರೆ.ಅವರು ಕೊಟ್ಟವಲಸ-ಬೊಡ್ಡಾವರ ವಿಭಾಗ ಮತ್ತು ಶಿಮಿಲಿಗುಡ-ಗೋರಾಪುರ ವಿಭಾಗದ ದ್ವಿಗುಣಗೊಳಿಸುವಿಕೆಯನ್ನು ಉದ್ಘಾಟಿಸಲಿದ್ದಾರೆ.

ಇಂಧನ ವಲಯದಲ್ಲಿ, ಪ್ರಧಾನ ಮಂತ್ರಿ ಅವರು ಗೈಲ್‌ ಇಂಡಿಯಾ ಲಿಮಿಟೆಡ್‌ನ ಶ್ರೀಕಾಕುಲಂ-ಅಂಗುಲ್‌ ನೈಸರ್ಗಿಕ ಅನಿಲ ಪೈಪ್‌ಲೈನ್‌‍ ಅನ್ನು ಉದ್ಘಾಟಿಸಲಿದ್ದಾರೆ, ಇದನ್ನು ಆಂಧ್ರಪ್ರದೇಶದಲ್ಲಿ ಸುಮಾರು 124 ಕಿ.ಮೀ ಮತ್ತು ಒಡಿಶಾದಲ್ಲಿ 298 ಕಿ.ಮೀ. ವೆಚ್ಚದಲ್ಲಿ ನಿರ್ಮಿಸಲಾಗಿದೆ.ಅದೇ ರೀತಿ, ಚಿತ್ತೂರಿನಲ್ಲಿ ಇಂಡಿಯನ್‌ ಆಯಿಲ್‌ನ 60 ಟಿಎಂಟಿಪಿಎ (ವಾರ್ಷಿಕ ಸಾವಿರ ಮೆಟ್ರಿಕ್‌ ಟನ್‌‍) ಎಲ್‌ಪಿಜಿ ಬಾಟ್ಲಿಂಗ್‌ ಸ್ಥಾವರವನ್ನು ಅವರು ಉದ್ಘಾಟಿಸಲಿದ್ದಾರೆ, ಇದನ್ನು ಸುಮಾರು 200 ಕೋಟಿ ರೂ. ಹೂಡಿಕೆಯಲ್ಲಿ ಸ್ಥಾಪಿಸಲಾಗಿದೆ.

ರಸ್ತೆ ಸರಿಪಡಿಸದಿದ್ದರೆ ತೆರಿಗೆ ಕಟ್ಟಲ್ಲ : ರೊಚ್ಚಿಗೆದ್ದ ಐಟಿ-ಬಿಟಿ ಮಂದಿ

ಬೆಂಗಳೂರು, ಅ.15– ಸೂಕ್ತ ಸೌಲಭ್ಯ ಕಲ್ಪಿಸಿ ಇಲ್ಲವೇ ನಾವು ಇನ್ನು ಮುಂದೆ ಆಸ್ತಿ ತೆರಿಗೆ ಪಾವತಿಸುವುದಿಲ್ಲ ಎಂದು ಐಟಿ-ಬಿಟಿ ಮಂದಿ ಪಟ್ಟು ಹಿಡಿದಿದ್ದಾರೆ. ಇಲ್ಲಿನ ರಸ್ತೆ ಗುಂಡಿಗ ಳಿಂದ ಆಗಬಾರದ ಅನಾಹುತಗಳಾಗುತ್ತಿವೆ ಇಂತಹ ಸನ್ನಿವೇಶದಲ್ಲಿ ನಾವು ಯಾಕೆ ಆಸ್ತಿ ತೆರಿಗೆ ಪಾವತಿಸಬೇಕು ಎಂದು ಟ್ಯಾಕ್ಸ್ ಪೇಯರ್‌ರ‍ಸ ಫೋರಂ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಅತಿ ಹೆಚ್ಚು ಐಟಿ-ಬಿಟಿ ಮಂದಿ ವಾಸಿಸುವ ವರ್ತೂರು ಹಾಗೂ ಪಣತ್ತೂರಿನ ನಿವಾಸಿಗಳು ಟ್ಯಾಕ್ಸ್ ಪೇಯರ್‌ರ‍ಸ ಫೋರಂ ರಚನೆ ಮಾಡಿಕೊಂಡು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.ನಗರದ ಇಂತಹ ದುಸ್ಥಿತಿ ತಲುಪಿರುವ ಸಂದರ್ಭದಲ್ಲಿ ನಾವು ಆಸ್ತಿ ತೆರಿಗೆ ಕಟ್ಟುವುದಿಲ್ಲ, ನಮ್ಮಿಂದ ತೆರಿಗೆ ಕೇಳಬೇಡಿ ಎಂದು ಅವರು ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದಾರೆ.

ವರ್ತೂರು ಮತ್ತು ಪಣತ್ತೂರು ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇರುವ ರಸ್ತೆಗಳಲ್ಲಿ ಗುಂಡಿಗಳಿವೆ ಹೀಗಾಗಿ ಇಲ್ಲಿ ನಿತ್ಯ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌‍ ಉಂಟಾಗುತ್ತಿದೆ. ನಿತ್ಯ ಸ್ಕೂಲ್‌ ಬಸ್‌‍ಗಳ ಅಪಘಾತದಿಂದ ಬೆಸತ್ತು ನಾವು ಈ ರೀತಿಯ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಫೋರಂ ಸದಸ್ಯರು ತಿಳಿಸಿದ್ದಾರೆ.

ಗುಂಡಿ ಮುಕ್ತ ರಸ್ತೆ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಿದ ನಂತರ ತೆರಿಗೆ ಕೇಳಿ ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ… ಈ ಭಾಗದ ಜನ ವಾರ್ಷಿಕ ಅಂದಾಜು 800 ಕೋಟಿ ತೆರಿಗೆ ಪಾವತಿ ಮಾಡುತ್ತಿದ್ದಾರಂತೆ. ಇಲ್ಲಿನ ಪರಿಸ್ಥಿತಿಯಿಂದಾಗಿ ಹೂಡಿಕೆದಾರರ ಎದುರು ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗುತ್ತಿದೆ ಎಂದು ಅವರುಗಳು ಅಲವತ್ತುಕೊಂಡಿದ್ದಾರೆ. ಉದ್ಯಮಿ ಕಿರಣ್‌ ಮಜುಂದಾರ್‌ ಶಾ ಅವರು ಬೆಂಗಳೂರಿನ ಪರಿಸ್ಥಿತಿ ಬಗ್ಗೆ ಎಕ್‌್ಸ ಮಾಡಿದ ನಂತರ ಐಟಿ-ಬಿಟಿ ಉದ್ದಿಮೆದಾರರು ಇದೀಗ ಒಂದಾಗಿ ಹೋರಾಟ ನಡೆಸಲು ಮುಂದಾಗಿದ್ದಾರೆ.

ಸಾರ್ವಕಾಲಿಕ ದಾಖಲೆ ಬರೆದ ಚಿನ್ನ, ಬೆಳ್ಳಿ ಬೆಲೆ

ನವದೆಹಲಿ,ಅ.15- ರಾಷ್ಟ್ರ ರಾಜಧಾನಿ ಯಲ್ಲಿ ಚಿನ್ನದ ಬೆಲೆ ಒಂದೇ ದಿನದಲ್ಲಿ 2,850 ರೂ. ಏರಿಕೆಯಾಗುವುದರ ಮೂಲಕ 10 ಗ್ರಾಂಗೆ 1,30,800 ರೂ. ತಲುಪಿದೆ. ಧಂತೇರಾಸ್‌‍ ಹಬ್ಬದ ಹಿನ್ನೆಲೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಮತ್ತು ಆಭರಣ ವ್ಯಾಪಾರಿಗಳಿಂದ ಭಾರೀ ಪ್ರಮಾಣದಲ್ಲಿ ಹಬ್ಬದ ಖರೀದಿ ನಡೆದಿದೆ.

ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಅಮೂಲ್ಯ ಲೋಹ ಸೋಮವಾರ 10 ಗ್ರಾಂಗೆ 1,27,950 ರೂ.ಗೆ ಮುಕ್ತಾಯಗೊಂಡಿತ್ತು.99.5 ಪ್ರತಿಶತ ಶುದ್ಧ ಚಿನ್ನವು ಮಂಗಳವಾರ 2,850 ರೂ. ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ದಾಖಲೆಯ 1,30,200 ರೂ. ತಲುಪಿದೆ. ಇಲ್ಲಿವರೆಗೆ ಬಂಗಾರದ ಬೆಲೆ ಅಂದರೆ 2024ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಶೇ.65.67ರಷ್ಟು ಏರಿಕೆಯಾಗಿದೆ.

ಜಾಗತಿಕ ರಾಜಕೀಯ ಕಾರಣಗಳು, ಪೂರೈಕೆ ನಿರ್ಬಂಧಗಳು ಮತ್ತು ಬಲವಾದ ದೇಶೀಯ ಹೂಡಿಕೆ ಬೇಡಿಕೆ ಹಾಗೂ ದುರ್ಬಲ ರೂಪಾಯಿಯಿಂದ ಚಿನ್ನ ಮತ್ತು ಬೆಳ್ಳಿ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ. ಏರಿಕೆಯ ಪ್ರವೃತ್ತಿ ಹಾಗೇ ಮುಂದುವರೆದಿದೆ.

ಬೆಳ್ಳಿ ಕೂಡ 6,000 ರೂ.ಗಳಷ್ಟು ಏರಿಕೆಯಾಗಿ ಪ್ರತಿ ಕಿಲೋಗ್ರಾಂಗೆ 1,85,000 ರೂ.ಗಳ ಜೀವಮಾನದ ಗರಿಷ್ಠ ಮಟ್ಟ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ), ಇದು ಸತತ 5ನೇ ದಿನದ ಏರಿಕೆಯನ್ನು ಸೂಚಿಸುತ್ತದೆ. ಹಿಂದಿನ ಮಾರುಕಟ್ಟೆ ಅವಧಿಯಲ್ಲಿ ಬಿಳಿ ಲೋಹವು ಪ್ರತಿ ಕೆಜಿಗೆ 1,79,000 ರೂ.ಗಳಲ್ಲಿ ಸ್ಥಿರವಾಗಿತ್ತು.

ರೂಪಾಯಿ ಕುಸಿತವೇ ಬೆಲೆ ಏರಿಕೆಗೆ ಕಾರಣ:
ಹಬ್ಬ ಮತ್ತು ಮದುವೆ ಋತುವಿಗೆ ಮುಂಚಿತವಾಗಿ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ನಿರಂತರ ಬೇಡಿಕೆ ಹೆಚ್ಚಾಗಿದೆ. ಮಂಗಳವಾರ ಯುಎಸ್‌‍ ಡಾಲರ್‌ ವಿರುದ್ಧ 12 ಪೈಸೆ ಕುಸಿದು 88.80ರಷ್ಟು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಮರಳಿದ್ದು, ಬೆಳ್ಳಿ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಬೆಳ್ಳಿ ಬೆಲೆ 95,300 ರೂ. ಅಥವಾ ಶೇ. 106.24ರಷ್ಟು ಏರಿಕೆಯಾಗಿದೆ. ಡಿಸೆಂಬರ್‌ 31, 2024 ರಂದು ಪ್ರತಿ ಕಿಲೋಗ್ರಾಂಗೆ 89,700 ರೂಪಾಯಿ ಇತ್ತು. ಸತತ ಎಂಟು ವಾರಗಳ ಕಾಲ ಏರಿಕೆ ಕಂಡ ಸ್ಪಾಟ್‌ ಚಿನ್ನ, ಪ್ರತಿ ಔನ್‌್ಸಗೆ 4,179 ಡಾಲರ್‌ಗಳ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ.

ವಿಶ್ವದ ಅತಿದೊಡ್ಡ ಬೆಳ್ಳಿ ಬಳಕೆದಾರ ರಾಷ್ಟ್ರವಾದ ಭಾರತದಲ್ಲಿ, ಬಿಳಿ ಲೋಹದ ಬೆಲೆಗಳು ಜಾಗತಿಕ ಮಾನದಂಡಗಳಿಗಿಂತ ಶೇ. 10-15ರಷ್ಟು ಹೆಚ್ಚಿನ ಏರಿಕೆಯಾಗಿ ವಹಿವಾಟು ನಡೆಸುತ್ತಿವೆ. ಬಲವಾದ ಹೂಡಿಕೆ ಮತ್ತು ಹಬ್ಬ ಸಂಬಂಧಿತ ಬೇಡಿಕೆಯಿಂದಾಗಿ, ಭೌತಿಕವಾಗಿ ಬೆಂಬಲಿತ ಇಟಿಎಪ್‌ಗಳು ಹೊಸ ಚಂದಾದಾರಿಕೆಗಳನ್ನು ನಿಲ್ಲಿಸಲು ಪ್ರೇರೇಪಿಸುತ್ತಿವೆ ಎಂದು ಸರಕು ಮತ್ತು ಕರೆನ್ಸಿಗಳ ಮುಖ್ಯಸ್ಥ ಪ್ರವೀಣ್‌ ಸಿಂಗ್‌ ಹೇಳಿದ್ದಾರೆ.

ದೇಶೀಯ ಮಾರುಕಟ್ಟೆಗಳಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾಂಗೆ ರೂ. 1,94,639 ಕ್ಕೆ ಏರುವ ಸಾಧ್ಯತೆಯಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಇದು ಔನ್‌್ಸಗೆ ಯುಎಸ್‌‍ಡಿ 59.89 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣ ಇದೆ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಅ.15- ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣ ಇದೆ. ಗೂಗಲ್‌ ಸಂಸ್ಥೆಯವರು ರಾಜ್ಯ ಬಿಟ್ಟು ಹೊರ ಹೋಗಲು ಬೇರೆಯೇ ಕಾರಣ ಇರಬಹುದು. ಆದರೆ ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ವ್ಯತಿರಿಕ್ತವಾದ ಪರಿಸರ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೆಲಸ ಪ್ರಗತಿಯಲ್ಲಿರುವಾಗಲೇ ಟೀಕೆ ಮಾಡುವುದು ಸರಿಯಲ್ಲ. ಕೆಲಸ ಮುಗಿದ ಮೇಲೆ ಬೇಕಾದರೆ ಸರಿಯಿಲ್ಲ ಎಂದರೆ ಟೀಕೆ ಮಾಡಲಿ ಎಂದರು.

ರಾಜ್ಯದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10.22 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ಸಹಿ ಹಾಕಲಾಗಿದೆ. ಈವರೆಗೂ 3.5ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ ಎಂದರು.ನೆರೆ ರಾಜ್ಯಗಳಿಂದ ಉದ್ಯಮಿಗಳು ಕರ್ನಾಟಕದತ್ತ ಮುಖ ಮಾಡಿದ್ದಾರೆ. ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಕೈಗಾರಿಕಾ ವಿರೋಧಿಯಾದ ವಾತಾವರಣವನ್ನು ನಾವು ಸೃಷ್ಟಿಸಿಲ್ಲ ಎಂದರು.

ಆರ್‌ಎಸ್‌‍ಎಸ್‌‍ನ ಚಟುವಟಿಕೆಗಳನ್ನು ಸರ್ಕಾರಿ ಆಸ್ತಿಗಳಲ್ಲಿ ನಿರ್ಬಂಧಿಸಲು ಪತ್ರ ಬರೆದಿರುವ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಯಾರು ಬೆದರಿಕೆ ಹಾಕಿದ್ದಾರೆ ಮತ್ತು ಅದರ ಮೂಲ ಎಲ್ಲಿಯದು ಎಂಬುದನ್ನು ತನಿಖೆ ಮಾಡುತ್ತೇವೆ ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಚಿವರು ತಮ ಅಭಿಪ್ರಾಯಗಳನ್ನು ತಿಳಿಸಿರಬಹುದು. ಆದರೆ, ಸರ್ಕಾರ ಇನ್ನೂ ತನ್ನ ನಿರ್ಧಾರ ತೆಗೆದುಕೊಂಡಿಲ್ಲ. ಕೆಲವರು ಕರೆ ಮಾಡಿ, ಬೆದರಿಕೆ ಹಾಕುತ್ತಿರುವುದನ್ನು ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ತಾಂತ್ರಿಕತೆಯ ಕಾರಣಕ್ಕೆ ಪತ್ತೆ ಹಚ್ಚಲು ಕಷ್ಟ ಆಗಬಹುದು. ಆದರೆ ಅಸಾಧ್ಯ ಅಲ್ಲ ಎಂದರು.

ಶಾಲೆಗಳಿಗೆ ಹುಸಿಬಾಂಬ್‌ ಬೆದರಿಕೆ ಹಾಕುವ ಕರೆಗಳನ್ನು ಪತ್ತೆ ಹಚ್ಚುತ್ತೇವೆ. ವಿದೇಶದಲ್ಲಿರುವ ಐಪಿ ಅಡೆ್ರಸ್‌‍ಗಳನ್ನು ಬಳಸಿಕೊಂಡು ಬೆದರಿಕೆ ಹಾಕಿರುವುದನ್ನೂ ನಾವು ತನಿಖೆ ಮಾಡಿದ್ದೇವೆ. ಇನ್ನು ಭಾರತದ ಒಳಗಿನಿಂದಲೇ ಬೆದರಿಕೆ ಬಂದಿದ್ದರೆ ಕ್ರಮ ಕೈಗೊಳ್ಳುವುದು ಕಷ್ಟವೇನಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಪ್ರದಾಯಿಕವಾಗಿ ಔತಣಕೂಟ ಆಯೋಜಿಸಿದರು. ಈಗಾಗಲೇ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದೆ. ಬಾಕಿಯಿರುವ ಅವಧಿಯಲ್ಲಿ ಎಲ್ಲರೂ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರ ಹೊರತಾಗಿ ಬೇರೆ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದರು.

ಮರಳು ದಂಧೆಕೋರರು ಯಾದಗಿರಿಯಲ್ಲಿ ಎಎಸ್‌‍ಐ ಒಬ್ಬರನ್ನು ಅಪಹರಣ ಮಾಡಿ, ಹಲ್ಲೆ ನಡೆಸಿರುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಘಟನೆ ಬಗ್ಗೆ ವರದಿ ನೀಡುವಂತೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರಿಗೆ ಸೂಚನೆ ನೀಡಿದೇನೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬಿಜೆಪಿಯವರು ಪ್ರತಿಯೊಂದು ವಿಚಾರಕ್ಕೂ ಟೀಕೆ ಮಾಡುವುದರಲ್ಲಿ ನಿಸ್ಸೀಮರು. ಅದು ಅವರ ಕರ್ತವ್ಯವೂ ಕೂಡ. ಆದರೆ ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಾ ಹೋದರೆ ಅರ್ಥ ಇರುವುದಿಲ್ಲ. ಸಕಾರಾತಕ ಟೀಕೆ ಮಾಡಲಿ ಎಂದು ಸಲಹೆ ನೀಡಿದರು.

6ನೇ ಗ್ಯಾರಂಟಿ ಜಾರಿ ಮುಂದಾದ ಕಾಂಗ್ರೆಸ್‌‍ ಸರ್ಕಾರ : ಬಿ -ಖಾತಾದಾರರಿಗೆ ಎ-ಖಾತಾ ಭಾಗ್ಯ

ಬೆಂಗಳೂರು, ಅ.15- ರಾಜ್ಯ ಕಾಂಗ್ರೆಸ್‌‍ ಸರ್ಕಾರ ಭೂಮಿ ಹಕ್ಕಿನ 6ನೇ ಗ್ಯಾರಂಟಿಯನ್ನು ಜಾರಿಗೊಳಿಸುತ್ತಿದ್ದು, ಬಿ ಖಾತಾಗಳನ್ನು ಎ ಖಾತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.ವಿಧಾನಸೌಧದ ಸಮೇಳನ ಸಭಾಂಗಣದಲ್ಲಿಂದು ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ಪರಿವರ್ತಿಸಲು ಸಿದ್ಧಪಡಿಸಿರುವ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿವೆ. ಅದರಲ್ಲಿ 7.5 ಲಕ್ಷ ಎ ಖಾತೆಗಳಿದ್ದು, ಇನ್ನೂ 7.5 ಲಕ್ಷ ಬಿ ಖಾತೆಗಳಿವೆ. ಸುಮಾರು 8 ರಿಂದ 9 ಲಕ್ಷ ಅಸ್ತಿಗಳನ್ನೂ ಖಾತೆ ನೋಂದಣಿಗಾಗಿ ಮನವಿ ಸಲ್ಲಿಕೆಯಾಗಿವೆ ಎಂದು ವಿವರಿಸಿದರು.ನಮ ರಾಜ್ಯದಲ್ಲಿನ ಆಸ್ತಿ ದಾಖಲಾತಿಗಳ ಕ್ರಮ ಬದ್ಧತೆ ಮತ್ತು ಡಿಜಿಟಲೀಕರಣಕ್ಕಾಗಿ ಕೇಂದ್ರ ಸರ್ಕಾರ ನಮಗೆ ಪ್ರಶಸ್ತಿ ನೀಡಿದೆ ಎಂದು ಹೇಳಿಕೊಂಡರು.

ಕರ್ನಾಟಕ ಪಟ್ಟಣ ಮತ್ತು ನಗರ ಯೋಜನಾ ಕಾಯ್ದೆ (ಕೆಟಿಸಿಪಿ ಆ್ಯಕ್ಟ್‌) 1961ರ ಅಡಿಯಲ್ಲಿ ಅನುಮೋದನೆಗೊಂಡ ಕೃಷಿ ಜಮೀನುಗಳ ಕಂದಾಯ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿದ್ದರೆ, ಕೆಲವು ಪರಿವರ್ತನೆಯಾಗಿದ್ದು, ಇನ್ನೂ ಕೆಲವು ಪರಿವರ್ತನೆಯಾಗದೇ ಇದ್ದರೆ, ಈ ಆಸ್ತಿಗಳ ಮಾಲೀಕರಿಗೆ ಬ್ಯಾಂಕಿನಿಂದ ಸಾಲ ಪಡೆಯಲು ಮತ್ತು ಕಟ್ಟಡ ನಿರ್ಮಾಣಕ್ಕೆ ನಿಯಮ ಬದ್ಧವಾಗಿ ನಕ್ಷೆ ಅನುಮೋದನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಎ ಪರಿವರ್ತನಾ ಅಭಿಯಾನವನ್ನು ಆರಂಭಿಸಿದ್ದೇವೆ.

ನಿರ್ಮಾಣಗೊಂಡಿರುವ ಕಟ್ಟಡದ ಸಕ್ರಮೀಕರಣಕ್ಕೆ ನಾವು ಕೈ ಹಾಕುತ್ತಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.ಕಂದಾಯ ಲೇಔಟ್‌ಗಳಲ್ಲಿ ಭೂ ಮಾಲೀಕರು ರಸ್ತೆಗಳನ್ನು ತಮ ಹೆಸರಿಗೆ ಇರಿಸಿಕೊಂಡು, ಇಬ್ಬಿಬ್ಬರಿಗೆ ನೋಂದಣಿ ಮಾಡಿ, ಸಾರ್ವಜನಿಕರಿಗೆ ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ಮೂರ್ನಾಲ್ಕು ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತಂದು ಎಲ್ಲಾ ರಸ್ತೆಗಳನ್ನು ಸರ್ಕಾರದ ಆಸ್ತಿಗಳೆಂದು ಘೋಷಣೆ ಮಾಡಿದ್ದೇವೆ ಎಂದರು.

ಕಂದಾಯ ನಿವೇಶನಗಳು, ಪರಿವರ್ತನೆಯಾಗದ ಭೂಮಿ, ಯೋಜನೆ ಅನುಮೋದನೆಯಿಲ್ಲದ ಬಿ ಖಾತೆ ನಿವೇಶನಗಳನ್ನು ಎ ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಲು 100 ದಿನಗಳ ಕಾಲಾವಕಾಶ ನೀಡಲಾಗುತ್ತಿದೆ.
ನವೆಂಬರ್‌ 1 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು 500 ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದರು.

ಪ್ರತಿಯೊಂದು ಪಾಲಿಕೆಯಲ್ಲೂ ಎರಡು ಕಡೆ ಕಚೇರಿಗಳನ್ನು ಆರಂಭಿಸಿ, ಸಹಾಯ ಕೇಂದ್ರಗಳ ಮೂಲಕ ನೆರವು ನೀಡಲಾಗುವುದು. ಬೆಂಗಳೂರು ಒನ್‌ ಕೇಂದ್ರದಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಯಾರಿಗೆ ಯಾರೂ ಕೂಡ ಒಂದು ರೂ. ಲಂಚ ನೀಡಬಾರದು. ಅಧಿಕೃತವಾದ ಶುಲ್ಕ ಮಾತ್ರ ಪಾವತಿಸಬೇಕು ಎಂದರು.
ಸಧ್ಯಕ್ಕೆ 2 ಸಾವಿರ ಚದರ ಮೀಟರ್‌ (20 ಸಾವಿರ ಚದರ ಅಡಿ) ನಿವೇಶನಗಳನ್ನು ಎ ಖಾತೆಗಳನ್ನಾಗಿ ಯಾಂತ್ರಿಕೃತವಾಗಿ ಪರಿವರ್ತಿಸಲಾಗುತ್ತದೆ. ಅದಕ್ಕೆ ಮೇಲ್ಪಟ್ಟ ನಿವೇಶನಗಳ ಪರಿವರ್ತನೆಗೆ ದಾಖಲಾತಿಗಳ ಪರಿಶೀಲನೆ ಹಾಗೂ ಇತರ ಪ್ರಕ್ರಿಯೆಗಳನ್ನು ಪಾಲಿಸಬೇಕಿದೆ ಎಂದರು.

ಕಂದಾಯ ಇಲಾಖೆಗೆ ಭೂ ಪರಿವರ್ತನೆಗಾಗಿ (ಅಲಿನೇಷನ್‌)ಗಾಗಿ ಶುಲ್ಕ ಪಾವತಿಸದೇ ಇದ್ದವರಿಂದ ಈಗ ಶುಲ್ಕ ವಸೂಲಿ ಮಾಡಿ ಆ ಹಣವನ್ನು ಕಂದಾಯ ಇಲಾಖೆಗೆ ಪಾವತಿಸಲಾಗುತ್ತದೆ. ನಗರ ಯೋಜನಾ ಪ್ರಾಧಿಕಾರವಾದ ಬಿಡಿಎ ಅಥವಾ ಬಿಬಿಎಂಪಿಗೆ ಡೆವಲಪ್‌ಮೆಂಟ್‌ ಚಾರ್ಜ್‌ ಕಟ್ಟದೇ ಇದ್ದರೆ ಅದನ್ನು ಕೂಡ ಈ ಸಂದರ್ಭದಲ್ಲಿ ವಸೂಲಿ ಮಾಡಲಾಗುವುದು. ಈ ಎರಡು ಶುಲ್ಕಗಳಿಗಾಗಿ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ಶುಲ್ಕವನ್ನು ವಸೂಲಿ ಮಾಡಲಾಗುವುದು. 100 ದಿನದ ಬಳಿಕ ಈ ಶುಲ್ಕವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದರು.

ಎ ಖಾತಾ ಪರಿವರ್ತನೆಯಾದ ನಿವೇಶನಗಳಿಗೆ ವಿದ್ಯುತ್‌, ನೀರು, ಒಳಚರಂಡಿ, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಪಾಲಿಕೆ ಒದಗಿಸಲಿದೆ. ಬೆಂಗಳೂರು ಹಾಗೂ ಹೊರ ವಲಯದ ನಿವೇಶನಗಳಲ್ಲಿ ಈ ಅಭಿಯಾನ ಚಾಲ್ತಿಯಲ್ಲಿರುತ್ತದೆ. ಎ ಖಾತಾ ಪರಿವರ್ತನೆಯಿಂದ ಆಸ್ತಿಯ ಮೌಲ್ಯ ಹೆಚ್ಚಾಗಲಿದ್ದು, ಅಧಿಕೃತ ಗೌರವವು ಕೂಡ ದೊರೆಯುತ್ತದೆ ಎಂದರು.

ಓಸಿ ಮತ್ತು ಸಿಸಿಗೂ ಇದಕ್ಕೂ ಸಂಬಂಧ ಇಲ್ಲ. ಬೆಂಗಳೂರು ನಗರದಲ್ಲಿ 15 ಲಕ್ಷ ಆಸ್ತಿ ಮಾಲೀಕರಿಗೆ ಅಭಿಯಾನದಿಂದ ಅನುಕೂಲವಾಗಬಹುದು. ಕಳೆದ 50 ವರ್ಷಗಳಿಂದಲೂ ಯಾವ ಸರ್ಕಾರವು ಜಾರಿ ಮಾಡದೇ ಇರುವ ವ್ಯವಸ್ಥೆಯನ್ನು ನಮ ಸರ್ಕಾರ ರೂಪಿಸಿದೆ. ಏಕಗವಾಕ್ಷಿ ಯೋಜನೆಯಡಿ ಖಾತೆ ಪರಿವರ್ತನೆ ಮಾಡಿಕೊಡಲಾಗುತ್ತದೆ ಎಂದರು. ಅನಧಿಕೃತ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಗಳ ಮಾರಾಟಕ್ಕೆ ಇನ್ನು ಮುಂದೆ ಅವಕಾಶವಿರುವುದಿಲ್ಲ. ಬಿ ಖಾತಾ ಫ್ಲಾಟ್‌ಗಳು ಅಥವಾ ಬಹುಮಹಡಿ ಕಟ್ಟಡಗಳಿಗೆ ಇದು ಅನ್ವಯಿಸುವುದಿಲ್ಲ. ಮೊದಲಿಗೆ ನಿವೇಶನ ಮತ್ತು ಅದರಲ್ಲಿ ನಿರ್ಮಿಸಿರುವ ಕಟ್ಟಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.

ಪಾಲಿಕೆ ಅಧಿಕಾರಿಗಳು ಪ್ರತಿ ಆಸ್ತಿಗಳನ್ನು ಮಾಲೀಕರ ಸಹಿತವಾಗಿ ಫೋಟೋ, ವಿಡಿಯೋ ತೆಗೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದಾರೆ. ಜನ ಅದನ್ನು ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸಬಹುದು. ಯಾರದೋ ಜಾಗಕ್ಕೆ ಇನ್ಯಾರೋ ಖಾತೆ ಮಾಡಿಸಿಕೊಳ್ಳಲು ಅವಕಾಶವಿರುವುದಿಲ್ಲ ಎಂದರು.

ಸರ್ಕಾರದ ಆಸ್ತಿ, ಪಿಟಿಸಿಎಲ್‌ ವಿವಾದಿತ ಮತ್ತು ನ್ಯಾಯಾಲಯದ ತಗಾದೆ ಇರುವ ಆಸ್ತಿಗಳಿಗೆ ಈ ಅಭಿಯಾನ ಅನ್ವಯಿಸುವುದಿಲ್ಲ. ಸ್ವಂತ ಮಾಲೀಕರು ಪಂಚಾಯಿತಿ ಸೇರಿದಂತೆ ಯಾವುದೇ ಸಂಸ್ಥೆಗಳಲ್ಲಿ ಭೂಮಿ ನೋಂದಾಯಿಸಿಕೊಂಡಿದ್ದರೆ ಅವರು ಸದಾವಕಾಶ ಬಳಸಿಕೊಳ್ಳಬಹುದು ಎಂದರು.ಖಾತಾ ಪರಿವರ್ತನ ಅಭಿಯಾನದಲ್ಲಿ ಸಂಗ್ರಹವಾಗುವ ಶುಲ್ಕಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಇದು ಆಯಾ ಪಾಲಿಕೆಗಳ ಗಳಿಕೆ ಮಾತ್ರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬೆಂಗಳೂರು ಬಿಟ್ಟು ಯಾವ ಖಾಸಗಿ ಸಂಸ್ಥೆಗಳೂ ಹೊರಹೋಗುವುದಿಲ್ಲ. ಉದ್ಯಮಗಳು ಹಾಗೂ ಕೈಗಾರಿಕೆಗಳಿಗೆ ಸರ್ಕಾರ ಭೂಮಿ ಸೇರಿದಂತೆ ಸಾಕಷ್ಟು ನೆರವು ನೀಡಿದೆ. ಅದನ್ನು ಮರೆತು ಟೀಕೆ ಮಾಡಿದರೆ ಅದು ದೇಶ ದ್ರೋಹವಾಗುತ್ತದೆ. ಉದ್ಯಮದವರು ನೀವೇ ನಿಮ ಮನೆಯನ್ನು ಹಾಳುಮಾಡಿಕೊಳ್ಳಬೇಡಿ ಎಂದು ಕೈ ಮುಗಿದು ಪ್ರಾರ್ಥಿಸುವುದಾಗಿ ಹೇಳಿದರು.

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ : ಶಾಸಕ ಬಾಲಕೃಷ್ಣ ಭವಿಷ್ಯ

ಬೆಂಗಳೂರು ದಕ್ಷಿಣ, ಅ.15– ಕಾಂಗ್ರೆಸ್‌‍ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಅವರಿಗೆ ಹೈಕಮಾಂಡ್‌ ಮುಖ್ಯಮಂತ್ರಿಯಾಗುವ ಅವಕಾಶ ಮಾಡಿಕೊಡುವ ವಿಶ್ವಾಸವಿದೆ ಎಂದು ಕ್ಷೇತ್ರದ ಶಾಸಕ ಡಾ. ಎಚ್‌.ಸಿ. ಬಾಲಕೃಷ್ಣ ಪುನರುಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಯಾವುದೇ ಕ್ರಾಂತಿಯಾಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆಯಂತಹ ವಿಚಾರಗಳು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಮಂಥವರ ಹಂತದಲ್ಲಿ ಈ ರೀತಿಯ ಚರ್ಚೆಗಳು ಸಾಧುವಲ್ಲ ಎಂದರು.

ಸಂಪುಟ ಪುನಾರಚನೆಯಾದರೆ, ನನ್ನ ಹಿರಿತನಕ್ಕೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಒಂದು ವೇಳೆ ಪುನಾರಚನೆಯಾಗದೆ ಇದ್ದರೆ ಅವಕಾಶ ಮಾಡಿಕೊಡಿ ಎಂದು ಕೇಳುವ ಸಾಧ್ಯತೆಯೂ ಇರುವುದಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್‌‍ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕಮಾರ್‌ ಅವರ ಕಾಣಿಕೆಯಿದೆ. ಅದನ್ನು ಪರಿಗಣಿಸಿ, ಅವಕಾಶ ನೀಡಬಹುದು. ಹೈಕಮಾಂಡ್‌ ಗಮನಕ್ಕೂ ನನ್ನ ಹಿರಿತನದ ಬಗ್ಗೆ ಮಾಹಿತಿ ಇದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಈ ವಿಚಾರವಾಗಿ ಭರವಸೆ ಕೊಟ್ಟಿದ್ದಾರೆ. ನನಗೂ ವಿಶ್ವಾಸವಿದೆ ಎಂದರು.

ಯಾವುದೇ ಸಂಘಟನೆಗೆ ಜವಾಬ್ದಾರಿ ಇರಬೇಕಾದರೆ, ಮೊದಲು ನೋಂದಣಿಯಾಗಬೇಕು. ಆರ್‌ಎಸ್‌‍ಎಸ್‌‍ ಸಂಘಟನೆ ಸರ್ಕಾರ ಮಟ್ಟದಲ್ಲಿ ನೋಂದಣಿಯಾಗಿಲ್ಲ. ಯಾವುದಾದರೂ ಕೃತ್ಯಗಳಾದರೆ ನೋಂದಣಿಯಾಗದ ಹೊರತು ಕ್ರಮಕೈಗೊಳ್ಳುವುದು ಕಷ್ಟಸಾಧ್ಯ. ಕೇರಳದಲ್ಲಿ ವ್ಯಕ್ತಿಯೊಬ್ಬರು ಆತಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಆತ ಆರ್‌ಎಸ್‌‍ಎಸ್‌‍ನಲ್ಲಿ ಸಲಿಂಗಕಾಮಿಗಳು ಹೆಚ್ಚಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ರಮ ಕೈಗೊಳ್ಳಬೇಕಾದರೆ ಸಂಘಟನೆಗಳು ನೋಂದಣಿಯಾಗುವುದು ಸೂಕ್ತ ಎಂದರು.

ಆರ್‌ಎಸ್‌‍ಎಸ್‌‍ನವರು ಮೊದಲು ನೋಂದಣಿ ಮಾಡಿಸಿಕೊಳ್ಳಲಿ. ಅವರನ್ನು ಹತ್ತಿಕ್ಕುವ ಅಗತ್ಯವಿಲ್ಲ. ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ ಪರಸ್ಪರ ತಮಷ್ಟಕ್ಕೇ ತಾವೇ ಹತ್ತಿಕ್ಕಿಕೊಳ್ಳುತ್ತಿವೆ ಎಂದು ತಿರುಗೇಟು ನೀಡಿದರು.ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರ ಬಗ್ಗೆ ಮಾತನಾಡುವುದೇ ಅವಮಾನಕರ. ಆತ ಒಬ್ಬ ಜೋಕರ್‌. ಮಾಧ್ಯಮಗಳು ಆತನ ಸುದ್ದಿ ಪ್ರಸಾರ ಮಾಡುವ ಮೂಲಕ ತಮ ಗೌರವ ಕಳೆದುಕೊಳ್ಳುತ್ತಿವೆ ಎಂದು ತಿರುಗೇಟು ನೀಡಿದರು.

ಶಾಸಕರಾಗಿದ್ದವರಿಗೆ ತಮ ಹಕ್ಕುಗಳನ್ನು ಕೇಳಲು ವಿಧಾನಸಭೆ ಎಂಬ ವೇದಿಕೆ ಇದೆ. ಅದನ್ನು ಬಿಟ್ಟು ಸಾರ್ವಜನಿಕ ದೂರುದುಮಾನ ಕಾರ್ಯಕ್ರಮದಲ್ಲಿ ಹೋಗಿ ನಾಟಕ ಮಾಡುವುದು ಹಾಸ್ಯಾಸ್ಪದ. ಆತನ ನಡವಳಿಕೆ ಮೊದಲಿನಿಂದಲೂ ಎಲ್ಲರ ಗಮನದಲ್ಲಿದೆ. ಅವರದೇ ಪಕ್ಷದ ನಾಯಕ ಆರ್‌.ಅಶೋಕ್‌ ಅವರಿಗೆ ಏಡ್ಸ್ ಇಂಜೆಕ್ಷನ್‌ ಚುಚ್ಚಲು ಹೋಗಿದ್ದಂತಹ ವ್ಯಕ್ತಿಯ ಬಗ್ಗೆ ಚರ್ಚೆ ಮಾಡಬೇಕೆ? ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಅಭಿವೃದ್ಧಿ ಸಂಬಂಧಪಟ್ಟಂತೆ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಭೂ ಸ್ವಾಧೀನ ಸಂದರ್ಭದಲ್ಲಿ 60:40 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ಭೂಮಿ ಕುರಿತಂತೆ ಚರ್ಚೆ ನಡೆಯುತ್ತಿದೆ ಎಂದರು. ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಬಗ್ಗೆ ಉದ್ಯಮಿ ಕಿರಣ್‌ ಮಜೂಂದಾರ್‌ಶಾ ಟೀಕೆ ಮಾಡಿರುವುದಕ್ಕೆ ಡಿ.ಕೆ.ಶಿವಕುಮಾರ್‌ ಈಗಾಗಲೇ ಉತ್ತರ ನೀಡಿದ್ದಾರೆ. ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆೆ. ಈ ಹಂತದಲ್ಲಿ ಅಪಸ್ವರ ಸರಿಯಲ್ಲ ಎಂದರು.