Friday, November 7, 2025
Home Blog Page 68

ಡಿಸಿಎಂ ಮನೆಯಿಂದಲೇ ಬೆಂಗಳೂರಲ್ಲಿ ಸಮೀಕ್ಷೆ ಶುರು, ಸಿಡಿಮಿಡಿಗೊಂಡು ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆಶಿ..!

ಬೆಂಗಳೂರು, ಅ.3- ಒಂಬತ್ತು ದಿನಗಳ ವಿಳಂಬವಾಗಿ ಗ್ರೆಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಇಂದಿನಿಂದ ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು.

ಸದಾಶಿವನಗರದಲ್ಲಿನ ತಮ ನಿವಾಸಕ್ಕೆ ಆಗಮಿಸಿದ್ದ ಸಮೀಕ್ಷಾದಾರರಿಗೆ ತಮ ಹಾಗೂ ಕುಟುಂಬದ ಮಾಹಿತಿ ನೀಡುವ ಮೂಲಕ ಡಿ.ಕೆ.ಶಿವಕುಮಾರ್‌ ಸಮೀಕ್ಷೆಗೆ ಚಾಲನೆ ನೀಡಿದರು. ಮೊಬೈಲ್‌ ಆ್ಯಪ್‌ನಲ್ಲಿ ಮಾಹಿತಿ ಭರ್ತಿ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸರ್ವರ್‌ ತೊಡಕು ಕಂಡು ಬಂತು.

ಇದರಿಂದ ಸಿಡಿಮಿಡಿಯಾದ ಡಿ.ಕೆ.ಶಿವಕುಮಾರ್‌ ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನನ್ನೊಬ್ಬನ ಮಾಹಿತಿ ಪಡೆಯಲು ಇಷ್ಟು ಸಮಯವಾದರೆ ಉಳಿದಂತೆ ಜನಸಾಮಾನ್ಯರ ಗತಿಯೆನು ಎಂದು ಪ್ರಶ್ನಿಸಿದರು. ಸಮಸ್ಯೆ ಸರಿ ಪಡಿಸಿ, ತೊಂದರೆಯಾಗದೆ ಸಮೀಕ್ಷೆ ಸುಲಲಿತವಾಗಿ ನಡೆಯಲು ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು. ಪಾಲಿಕೆ ಆಯುಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾಹಿತಿ ನೀಡದಿದ್ದವರಿಗಾಗಿ ಘೋಷಣಾ ಪತ್ರ:
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾಹಿತಿ ನೀಡಲು ಇಷ್ಟವಿಲ್ಲದವರು ಪ್ರತ್ಯೇಕವಾದ ನಮೂನೆಗೆ ಸಹಿ ಹಾಕಿ ಸಮೀಕ್ಷೆಯಲ್ಲಿ ಭಾಗವಹಿಸಲು ಇಷ್ಟವಿಲ್ಲ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ವಿಶೇಷವಾದ ನಮೂನೆಯನ್ನು ಸಿದ್ಧ ಪಡಿಸಲಾಗಿದೆ.

ಪ್ರತಿವಾರ್ಡ್‌ನಲ್ಲೂ ಮಸ್ಟರಿಂಗ್‌ ಸೆಂಟರ್‌ ಗಳನ್ನು ಆರಂಭಿಸಲಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ಸಮೀಕ್ಷಾದಾರರು ಈ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಎಲ್ಲರಿಗೂ ಗುರುತಿನ ಕಾರ್ಡ್‌ ವಿತರಣೆ, ಹಾಜರಾತಿ ಪಡೆಯಲಾಗಿದೆ. ಅಲ್ಲಿ ಆ್ಯಪ್‌ಗಳನ್ನು ಮೊಬೈಲ್‌ಗೆ ಡೌನ್‌ ಲೋಡ್‌ ಮಾಡಿಕೊಟ್ಟು, ಬ್ಯಾಗ್‌, ಟೋಪಿ ಸೇರಿದಂತೆ ಅಗತ್ಯ ಸಲಕರಣೆಗಳನ್ನು ನೀಡಲಾಯಿತು. ನಂತರ ಕಂದಾಯ ಅಧಿಕಾರಿಗಳು ಸಮೀಕ್ಷಾದಾರರನ್ನು ನಿಗದಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಮೀಕ್ಷೆಗೆ ಚಾಲನೆ ನೀಡಲಾಯಿತು. ಉಸ್ತುವಾರಿ ಅಧಿಕಾರಿಗಳು ವಾರ್ಡ್‌ ಹಂತದಲ್ಲಿ ಲಭ್ಯವಿದ್ದು, ದೂರವಾಣಿ ಮೂಲಕ ಅಗತ್ಯ ಸೂಚನೆ ನೀಡುತ್ತಿದ್ದರು.

ಸಮೀಕ್ಷೆಗಾಗಿ 12 ಸಮೀಕ್ಷಾದಾರರಿಗೆ ಒಬ್ಬ ಉಸ್ತುವಾರಿ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ವಾರ್ಡ್‌ ಹಂತದಲ್ಲಿ ಚಾರ್ಜ್‌ ಆಫಿಸರ್‌ ಗಳನ್ನು, ವಿಧಾನಸಭಾಕ್ಷೇತ್ರಕ್ಕೆ ಕೆಎಸ್‌‍ಎಸ್‌‍ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ವಾರ್ಡ್‌ ಮಟ್ಟದಲ್ಲಿ ಪ್ರತಿಯೊಂದು ಮತಗಟ್ಟೆಯನ್ನು ಪ್ರತ್ಯೇಕವಾದ ಘಟಕವನ್ನಾಗಿ ಗುರುತಿಸಲಾಗಿದೆ. ಯಾವ ಮನೆಯನ್ನು ಬಿಟ್ಟು ಹೋಗದಂತೆ ಸಮೀಕ್ಷೆ ನಡೆಸುವ ಪ್ರಯತ್ನಗಳನ್ನು ನಡೆಸಲಾಗಿದೆ. ಸ್ಥಳೀಯವಾಗಿ ಪ್ರತಿಯೊಂದು ಮನೆಯ ಮಾಹಿತಿ ಇರುವ ಕಂದಾಯ ಅಧಿಕಾರಿಗಳು ಮತ್ತು ಬಿಲ್‌ ಕಲೆಕ್ಟರ್‌ಗಳು ಸಮೀಕ್ಷೆಯ ನಿಗಾವಹಿಸಲಿದ್ದಾರೆ. ತಾಜ್ಯ ನಿರ್ವಹಣೆ ಘಟಕದ ಸಿಬ್ಬಂದಿಗಳನ್ನು ಬಳಕೆ ಮಾಡಲಾಗುತ್ತಿದೆ.

ಪ್ರತಿಯೊಂದು ಪಾಲಿಕೆಗೂ ಜಿಬಿಎ ಕೇಂದ್ರ ಕಚೇರಿಯಿಂದ ಸಮೀಕ್ಷಾದಾರರನ್ನು ನಿಯೋಜನೆ ಮಾಡಲಾಗಿತ್ತು. ಇದರಿಂದ ಹಲವಾರು ಗೊಂದಲಗಳಾದವು.ವೈದ್ಯಕೀಯ ಸಿಬ್ಬಂದಿಯನ್ನು ಸಮೀಕ್ಷೆಗೆ ಬಳಸಿಕೊಳ್ಳುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಗಣತಿಯ ವೇಳೆ ಕುಟುಂಬದ ಮನೆ ಯಜಮಾನರಿಗೆ 40 ಪ್ರಶ್ನೆಗಳು, ಉಳಿದ ಸದಸ್ಯರಿಗೆ ತಲಾ 20 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿಯೊಂದು ಮನೆಯ ಗಣತಿಗೂ 20ರಿಂದ 30 ನಿಮಷಗಳ ಸಮಯ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

ಉದ್ಯೋಗಗಳಿಗೆ ತೆರಳುವವರನ್ನು ಸಂಪರ್ಕಿಸಲು ಕಚೇರಿಯ ಸಮಯ ಹೊರತು ಪಡಿಸಿ ಬೆಳಗ್ಗೆ ಅಥವಾ ಸಂಜೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಮಾಹಿತಿ ನೀಡಲು ಮನೆಯಲ್ಲಿ ಯಾರು ಇಲ್ಲದಿದ್ದರೆ ಅಂತಹ ಮನೆಗೆ ಮತ್ತೊಂದು ಸ್ಟಿಕರ್‌ ಅಂಟಿಸಲಾಗುತ್ತಿದ್ದು, ಅದರಲ್ಲಿರುವ ದೂರವಾಣಿ ಸಂಖ್ಯೆ ಮನೆಯವರು ಕರೆ ಮಾಡಿ, ಯಾವ ಸಮಯಕ್ಕೆ ಲಭ್ಯ ಇರುತ್ತಾರೆ ಎಂದು ಮಾಹಿತಿ ನೀಡಬಹುದು. ಆ ಸಮಯಕ್ಕೆ ಬಂದು ಸಮೀಕ್ಷೆದಾರರು ಗಣತಿ ಮಾಡಲಿದ್ದಾರೆ.

ಅಪಾರ್ಟ್‌ಮೆಂಟ್‌, ಸ್ಲಂ ಸೇರಿ ಬೇರೆ ಬೇರೆ ಪ್ರದೇಶಕ್ಕೆ ಅನುಗುಣವಾಗಿ ಪ್ರತ್ಯೇಕ ಯೋಜನೆ ರೂಪಿಸಿ ಸಮೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಮೀಕ್ಷೆದಾರರಿಗೆ ಆ್ಯಪ್‌ ನಲ್ಲಿ ಬೇಕಾದ ವಾರ್ಡ್‌ ಆಯ್ಕೆ ಮಾಡಿಕೊಳ್ಳಲು ನಿನ್ನೆ ಅವಕಾಶ ನೀಡಲಾಗಿತ್ತು. ಆದರೆ ಬೆಳಗ್ಗೆ ಮಸ್ಟರಿಂಗ್‌ ಸೆಂಟರ್‌ಗೆ ಬಂದಾಗ ಬೇರೆಯ ಜಾಗಗಳನ್ನು ನಿಯೋಜಿಸಲಾಗಿತ್ತು. ಸಾಕಷ್ಟು ಗೊಂದಲಗಳು ಕಂಡು ಬಂದವು. ಸಮಸ್ಯೆ ಬಗೆಹರಿಯದ ಕಾರಣಕ್ಕೆ ಮನೆಗೆ ಹೋಗಿ ಮಧ್ಯಾಹ್ನದ ಬಳಿಕ ಬರುವಂತೆ ಕೆಲವರಿಗೆ ವಿನಾಯಿತಿ ನೀಡಲಾಗಿತ್ತು.

‘ಅಕ್ರಮ ಪ್ರಿಯಕರ’ನ ಜೊತೆ ಪಲ್ಲಂಗದಲ್ಲಿ ಸ್ನೇಹಿತೆಯನ್ನು ಕಂಡು ಆತ್ಮಹತ್ಯೆಗೆ ಶರಣಾದ ವಿವಾಹಿತ ಮಹಿಳೆ

ಬೆಂಗಳೂರು,ಅ.4- ತಾನೇ ಪರಿಚಯಿಸಿದ ಸ್ನೇಹಿತೆ ತನ್ನ ಪ್ರಿಯಕರನ ಜೊತೆ ಪಲ್ಲಂಗದಲ್ಲಿರುವುದನ್ನು ಕಂಡು ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರಸ್ತೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತಹತ್ಯೆ ಮಾಡಿಕೊಂಡಿರುವ ಗೃಹಿಣಿಯನ್ನು ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದ ಯಶೋಧಾ (38) ಎಂದು ಗುರುತಿಸಲಾಗಿದೆ.ಯಶೋಧಾ ಇಬ್ಬರು ಮಕ್ಕಳಿದ್ದರೂ ಆಡಿಟರ್‌ ವಿಶ್ವನಾಥ್‌ ಎಂಬುವವರ ಜೊತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದರು ಎನ್ನಲಾಗಿದೆ. ಆಡಿಟರ್‌ ಜೊತೆಗೆ ಸ್ನೇಹ ಹೊಂದಿರುವ ಬಗ್ಗೆ ಯಶೋಧಾ ತನ್ನ ಜೀವದ ಗೆಳತಿಗೆ ತಿಳಿಸಿ ಆಕೆಯನ್ನು ಆಡಿಟರ್‌ಗೆ ಪರಿಚಯ ಮಾಡಿಸಿದ್ದಳು.

ತದನಂತರ ಯಶೋಧಾ ಅವರಿಂದ ಆಡಿಟರ್‌ ವಿಶ್ವನಾಥ್‌ ಅಂತರ ಕಾಯ್ದುಕೊಂಡಿದ್ದ. ಇದರಿಂದ ಅನುಮಾನಗೊಂಡ ಯಶೋಧಾಳಿಗೆ ತಾನೇ ಪರಿಚಯ ಮಾಡಿಸಿದ ಸ್ನೇಹಿತೆಯೇ ಆಡಿಟರ್‌ ಜೊತೆಗೆ ಸಂಬಂಧವಿರಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಮೊನ್ನೆ ರಾತ್ರಿ ವಿಶ್ವನಾಥ್‌ ಹಾಗೂ ತನ್ನ ಸ್ನೇಹಿತೆ ಹೌಸಿಂಗ್‌ ಬೋರ್ಡ್‌ನಲ್ಲಿರುವ ಲಾಡ್‌್ಜವೊಂದಕ್ಕೆ ಹೋಗಿರುವ ಬಗ್ಗೆ ಯಶೋಧಾಗೆ ಗೊತ್ತಾದ ತಕ್ಷಣ ಲಾಡ್‌್ಜ ಗೆ ತೆರಳಿ ಆಕೆ ನೋಡಿದಾಗ ಇಬ್ಬರು ಒಟ್ಟಿಗೆ ಇರುವುದು ಕಂಡು ಅಲ್ಲೇ ಗಲಾಟೆ ಮಾಡಿದ್ದರು.ನಂತರ ಆಡಿಟರ್‌ ಮತ್ತು ಸ್ನೇಹಿತೆ ತಂಗಿದ್ದ ರೂಮ್‌ ಪಕ್ಕದಲ್ಲೇ ಮತ್ತೊಂದು ರೂಮ್‌ ಬುಕ್‌ ಮಾಡಿದ್ದ ಯಶೋಧಾ ಅದೇ ರೂಮ್‌ನಲ್ಲಿ ಫ್ಯಾನಿಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.

ಕೆಲ ಸಮಯದ ಬಳಿಕ ವಿಶ್ವನಾಥ್‌ಗೆ ಮೊಬೈಲ್‌ ಕರೆ ಬಂದಿದೆ. ಆತ ರೂಮ್‌ನಿಂದ ಹೊರಗೆ ಬಂದು ಮಾತನಾಡುತ್ತಾ, ಪಕ್ಕದ ರೂಮ್‌ನ ಬಾಗಿಲು ತಳ್ಳಿ ನೋಡಿದಾಗ ಯಶೋಧಾ ಆತಹತ್ಯೆ ಮಾಡಿಕೊಂಡಿರುವುದು ಗಮನಿಸಿ ನೇಣಿನಿಂದ ಆಕೆಯನ್ನು ಕೆಳಗೆ ಇಳಿಸಿ ಲಾಡ್‌್ಜ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದಾರೆ.

ಲಾಡ್‌್ಜ ಸಿಬ್ಬಂದಿ ಬಂದು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಗಡಿ ರಸ್ತೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಶೋಧಾ ಅವರ ಪತಿ ವಿಷಯ ತಿಳಿದು ಪತ್ನಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಬೆಂಗಳೂರಲ್ಲಿ ಇಂದಿನಿಂದ ಜಾತಿ ಸಮೀಕ್ಷೆ, ಆರಂಭದಲ್ಲೇ ಹಲವು ವಿಘ್ನ

ಬೆಂಗಳೂರು, ಅ.4- ಗ್ರೆಟರ್‌ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಆರಂಭದಲ್ಲೇ ಸಮೀಕ್ಷಾದಾರರು ಉಸ್ತುವಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಪ್ರತಿಯೊಬ್ಬ ಸಮೀಕ್ಷಾದಾರರಿಗೂ 200 ರಿಂದ 250ಕ್ಕೂ ಹೆಚ್ಚು ಮನೆಗಳನ್ನು ಗಣತಿಯ ಗುರಿ ನಿಗದಿ ಮಾಡಲಾಗಿದೆ.

ಆದರೆ ಸಮೀಕ್ಷಾದಾರರು ಕೆಲಸ ಮಾಡುವ ಸ್ಥಳ ಹಾಗೂ ವಾಸ ಸ್ಥಳಕ್ಕಿಂತಲೂ ಹೆಚ್ಚು ದೂರದ ಪ್ರದೇಶಕ್ಕೆ ಗಣತಿಗಾಗಿ ನಿಯೋಜನೆ ಮಾಡಿರುವುದು, ಅನಾರೋಗ್ಯ, ಗಂಭೀರ ಸ್ವರೂಪದ ಸಮಸ್ಯೆಗಳಿಂದ ಬಳಲುವವರಿಗೂ ವಿನಾಯಿತಿ ನೀಡದಿರುವ ಬಗ್ಗೆ ಅಸಹನೆಗಳು ಕೇಳಿ ಬಂದಿವೆ. ಬೆಂಗಳೂರಿನ ಐದು ಪಾಲಿಕೆಗಳಲ್ಲೂ ಕೇಂದ್ರ ಸ್ಥಾನದಲ್ಲಿ ಮಸ್ಟರಿಂಗ್‌ ಸೆಂಟರ್‌ ಆರಂಭಿಸಲಾಗಿದ್ದು, ವಾರ್ಡ್‌ ಮಟ್ಟದಲ್ಲೂ ಉಸ್ತುವಾರಿ ಕಚೇರಿಗಳು ಕಾರ್ಯನಿರ್ವಹಿಸಿವೆ.

ವಾರ್ಡ್‌ ಕಚೇರಿ ಬಳಿಗೆ ಇಂದು ಮುಂಜಾನಗೆ ಸಮೀಕ್ಷಾದಾರರು ಆಗಮಿಸಿದ್ದರು, ಅವರಿಗೆ ಗುರುತಿನಚೀಟಿ ಹಾಗೂ ಅಗತ್ಯ ಸಲಕರಣೆಗಳನ್ನು ನೀಡಲಾಯಿತು. ಜೊತೆಗೆ ಸಮೀಕ್ಷೆ ಬೇಕಾಗಿರುವ ಮೊಬೈಲ್‌ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಡಲಾಯಿತು. ಉಸ್ತುವಾರಿ ಕೇಂದ್ರಗಳ ಬಳಿ ಸಮೀಕ್ಷಾದಾರರು ತಮ ಅಸಮಧಾನವನ್ನು ಹೊರ ಹಾಕಿದ್ದು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಕೆಂಗೇರಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಗೋವಿಂದಯ್ಯ ತಮಗೆ ತೆರೆದ ಹೃದಯ ಚಿಕಿತ್ಸೆಯಾಗಿದೆ. ಪ್ರತಿ ದಿನವೂ ಐದಾರು ಮಾತ್ರೆಗಳನ್ನು ತೆಗೆದುಕೊಳ್ಳಬೇಕಿದೆ. ಮೆಟ್ಟಿಲು ಹತ್ತಿ ಇಳಿಯಬಾರದು ಎಂದು ವೈದ್ಯರು ಸೂಚನೆ ನೀಡಿದ್ದಾರೆ. ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಆಯುಕ್ತರಿಗೆ ಮನವಿ ಮಾಡಿದ್ದೇನೆ. ಅದನ್ನು ಪರಿಗಣಿಸದೇ ನನ್ನನ್ನು ಸಮೀಕ್ಷೆಗೆ ನಿಯೋಜನೆ ಮಾಡಿದ್ದಾರೆ ಎಂದು ಅಳಲು ತೊಡಿಕೊಂಡಿದ್ದಾರೆ.

ನನ್ನ ಮನೆ ಇರುವುದು ನಂದಿನಿ ಲೇಔಟ್‌ ನಲ್ಲಿ, ಕೆಲಸ ಮಾಡುವುದು ಕೆಂಗೇರಿಯಲ್ಲಿ, ಸಮೀಕ್ಷೆಗೆ ಗರುಡಾಚಾರ್‌ ಪಾಳ್ಯಕ್ಕೆ ನಿಯೋಜನೆ ಮಾಡಿದ್ದಾರೆ. ಎಲ್ಲಿಂದ ಎಲ್ಲಿ ಕೆಲಸ ಮಾಡುವುದು. ನನ್ನನ್ನು ಯಾವ ರೀತಿಯಲ್ಲಾದರೂ ಪರೀಕ್ಷೆಗೆ ಒಳ ಪಡಿಸಿ, ಸಮಸ್ಯೆ ಇರುವುದು ನಿಜವಾದರೆ ವಿನಾಯಿತಿ ನೀಡಲಿ ಎಂದು ಆಗ್ರಹಿಸಿದ್ದಾರೆ.

ಸಚಿವಾಲಯದಲ್ಲಿ ಕೆಲಸ ಮಾಡುವ ಸುಜಾತ ಎಂಬ ಅಧಿಕಾರಿ, ತಮ ಮಗನಿಗೆ ಥರ್ಡ್‌ಗ್ರೆಡ್‌ ಬ್ರೈನ್‌ ಇಂಚುರಿಯಾಗಿ ಹಾಸಿಗೆ ಹಿಡಿದಿದ್ದಾನೆ. ಅತನಿಗೆ ಮೂರು ಹೊತ್ತು ನಾನೇ ಊಟ ಮಾಡಿಸಬೇಕು. ಇಂತಹ ಸಮಸ್ಯೆ ನಡುವೆಯೂ ತರಬೇತಿಗೆ ಹಾಜರಾಗಿದ್ದೆ. ಅಲ್ಲಿ ನನ್ನ ಮೊಬೈಲ್‌ ನಂಬರ್‌ ತಪ್ಪಾಗಿ ನಮೂದಾಗಿತ್ತು. ಅದನ್ನು ಸರಿ ಮಾಡಿಕೊಟ್ಟಿದ್ದೆ.

ಅದನ್ನು ಪರಿಗಣಿಸಿಲ್ಲ, ನನಗೆ ಯಾವ ರೀತಿಯ ಸಂದೇಶಗಳು ಬಂದಿಲ್ಲ. ದೂರದ ಪ್ರದೇಶಕ್ಕೆ ಸಮೀಕ್ಷೆಗೆ ಹಾಕಿದ್ದಾರೆ. ಒಂದು ದಿನದ ಮಟ್ಟಿಗಾದರೆ ಮಗನ ಜವವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಬರಬಹುದು, ಸಮೀಕ್ಷೆ ನಡೆಯುವ 15 ದಿನವೂ ಹೇಗೆ ನಿಭಾಯಿಸುವುದು. ಇಂತಹ ಸ್ಥಿತಿಯಲ್ಲಿ ಏಕಾಗ್ರತೆಯಿಂದ ಹೇಗೆ ಸಮೀಕ್ಷೆ ಮಾಡಲಿ, ಮೂರು ಬಾರಿ ಇಲ್ಲಿ ಬಂದು ಮನವಿ ಮಾಡಿಕೊಂಡಿದ್ದೇನೆ ಆದರೂ ವಿನಾಯಿತಿ ನೀಡಿಲ್ಲ ಎಂದು ಅಳಲು ತೊಡಿಕೊಂಡಿದ್ದಾರೆ.

ರಾಜಾರಾಜೇಶ್ವರಿ ನಗರದಿಂದ ಬಂದಿರುವ ಮತ್ತೊಬ್ಬ ವ್ಯಕ್ತಿ, ತಮ ತಾಯಿಯನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಆಕೆ ಅಧಿಕ ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ಸೂಲಿನ್‌ ಇಂಜೆಕ್ಷನ್‌ ಹಾಗೂ ಮಾತ್ರೆಗಳನ್ನು ತೆಗೆದುಕೊಂಡು ನಾನು ನನ್ನ ಕೆಲಸ ಬಿಟ್ಟು ಆಕೆಯ ಜೊತೆಯಲ್ಲಿ ಬಂದಿದ್ದೇನೆ. ಸೋಮವಾರದಿಂದ ನಾನು ಕೆಲಸಕ್ಕೆ ಹೋಗಬೇಕು, ತಾಯಿ ಜೊತೆ ಬರಲು ಹೇಗೆ ಸಾಧ್ಯ. ಇಲ್ಲಿಂದ ಹೊರಮಾವು ಭಾಗಕ್ಕೆ ಗಣತಿಗಾಗಿ ನಿಯೋಜಿಸಿದ್ದಾರೆ. ಅಷ್ಟು ದೂರ ಹೋಗಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್‌ ಮಾತನಾಡಿ, ನಾನು ಸಂಪೂರ್ಣ ಅಂಧ, ಒಂದು ಚೂರು ಕಣ್ಣು ಕಾಣಿಸುವುದಿಲ್ಲ. ಹೇಗೆ ಸಮೀಕ್ಷೆ ಮಾಡಲಿ, ವಿನಾಯಿತಿ ನೀಡಿ ಎಂದರೆ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದರು.
ಮತ್ತೊಬ್ಬ ಸಮೀಕ್ಷಾದಾರರು ಮಾತನಾಡಿ, ಬೆಂಗಳೂರಿನಲ್ಲಿ ಬಹುತೇಕರು ಕೆಲಸಕ್ಕಾಗಿ ಬೆಳಗ್ಗೆ 8 ಗಂಟೆಗೆ ಮನೆ ಬಿಡುತ್ತಾರೆ.

ಅಷ್ಟರಲ್ಲಿ ನಾವು ಅವರ ಮನೆಗೆ ಹೋಗಿ ಮಾಹಿತಿ ಪಡೆದುಕೊಳ್ಳಬೇಕು. ಅದಕ್ಕಾಗಿ ನಾವು ಬೆಳಗ್ಗೆ 6 ಗಂಟೆಗೆ ಮನೆ ಬಿಡಬೇಕು, ರಾತ್ರಿ ವಾಪಾಸ್‌‍ ಬರುವುದು ಎಷ್ಟು ಹೊತ್ತಾಗಲಿದೆಯೋ ಗೊತ್ತಿಲ್ಲ. ಮನೆ ಹತ್ತಿರದ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ. ಆದರೆ ಅಧಿಕಾರಿಗಳು ತಮ ಮನಸೋಯಿಚ್ಚೆ ಸ್ಥಳವನ್ನು ನಿಗದಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರತಿಯೊಬ್ಬರಿಗೆ 250 ಮನೆಗಳ ಗುರಿ ನಿಗದಿ ಪಡಿಸಲಾಗಿದೆ. ನಾಗರಭಾವಿಯಲ್ಲಿ ವಾಸ ಇರುವವರನ್ನು ವಿಜ್ಞಾನನಗರಕ್ಕೆ ನಿಯೋಜನೆ ಮಾಡಿದ್ದಾರೆ. ಅಲ್ಲಿಗೆ ಹೋಗಲು ಸುಮಾರು ಒಂದುವರೆ ಗಂಟೆ ಪ್ರಯಾಣ ಮಾಡಬೇಕಿದೆ. ನಾವು ಸಮೀಕ್ಷೆ ಮಾಡುವುದಿಲ್ಲ ಎಂದು ಹೇಳುತ್ತಿಲ್ಲ. ಆದರೆ ಸಮಸ್ಯೆಯನ್ನು ಅರ್ಥೈಸಿಕೊಂಡು ನಿಯೋಜನೆ ಮಾಡಿ. ಅನಗತ್ಯವಾಗಿ ಕಿರುಕುಳ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಗಣತಿದಾರರನ್ನು ನಿಯೋಜನೆ ಮಾಡುವ ಮೊದಲು ಪ್ರತಿಯೊಬ್ಬರಿಂದಲೂ ಅವರು ಕೆಲಸ ಮಾಡುವ ಮತ್ತು ವಾಸದ ಸ್ಥಳ ವಿಳಾಸ ಪಡೆದುಕೊಂಡಿದ್ದಾರೆ. ಅದಕ್ಕೆ ಹತ್ತಿರದ ಪ್ರದೇಶಕ್ಕೆ ನಿಯೋಜನೆ ಮಾಡುವ ಬದಲಿಗೆ, ದೂರದ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಆರಂಭದಲ್ಲಿ 10 ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸಮೀಕ್ಷಾದಾರರಿಗೆ ಸೂಚನೆ ನೀಡಲಾಗಿತ್ತು.

ಆದರೆ ಆಯ್ಕೆ ಮಾಡಿಕೊಂಡ ಪ್ರದೇಶಗಳನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ನಿಯೋಜನೆ ಮಾಡಿದ್ದಾರೆ. ಮಹಿಳೆಯರಿಗಂತೂ ವಿಪರೀತ ತೊಂದರೆಯಾಗಿದೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಅಳಲು ತೊಡಿಕೊಂಡಿದ್ದಾರೆ.ವಿಶೇಷ ಚೇತರಿಗೆ, ವಿಶೇಷ ಚೇತನ ಮಕ್ಕಳನ್ನು ಹೊಂದಿರುವವರನ್ನು ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ

ಟೀಮ್ ಇಂಡಿಯಾ ಏಕದಿನ ತಂಡದ ನಾಯಕನಾಗಿ ಶುಭಮನ್‌ ಗಿಲ್‌‍ ಆಯ್ಕೆ

ಅಹಮದಾಬಾದ್‌,ಅ.4-ಮಹತ್ವದ ಪರಿವರ್ತನೆಯ ನಡೆಯಲ್ಲಿ ಶುಭಮನ್‌ ಗಿಲ್‌ ಅವರನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತೀಯ ಏಕದಿನ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ, ನಾಯಕ ಸ್ಥಾನದಲ್ಲಿದ್ದ ರೋಹಿತ್‌ ಶರ್ಮಾ ಅವರನ್ನು ಕಳಗಿಳಿಸಿ ಸಾಮಾನ್ಯ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿರಾಟ್‌ ಕೊಹ್ಲಿ ಜೊತೆಗೆ ರೋಹಿತ್‌ ಅವರನ್ನು ಬಿಸಿಸಿಐ ಘೋಷಿಸಿದ 15 ಸದಸ್ಯರ ತಂಡದಲ್ಲಿ ಹೆಸರಿಸಲಾಗಿದೆ ಮತ್ತು ಶ್ರೇಯಸ್‌‍ ಅಯ್ಯರ್‌ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

ಇದಲ್ಲದೆ ವೇಗಿ ಜಸ್ಪ್ರೀತ್‌ ಬುಮ್ರಾಅವರಿಗೆ ಏಕದಿನ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ, ಆದರೆ ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್‌ ಅವರನ್ನು ಏಕದಿನ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ.

ಸಿಡ್ನಿ, ಅಡಿಲೇಡ್‌ ಮತ್ತು ಮೆಲ್ಬೋರ್ನ್‌ನಲ್ಲಿ ಅ.19 ರಿಂದ ಅ.25 ರ ನಡುವೆ ಏಕದಿನ ಕ್ರಿಕೆಟ್‌ ಸರಣಿ ನಡೆಯಲಿವೆ ಮತ್ತು ನಂತರ ಐದು ಟಿ-20 ಕ್ರಿಕೆಟ್‌ಸರಣಿಯನ್ನು ನಡೆಯಲಿದೆ.
ಭಾರತೀಯ ಏಕದಿನ ತಂಡ: ಶುಭಮನ್‌ ಗಿಲ್‌ (ನಾಯಕ), ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಶ್ರೇಯಸ್‌‍ ಅಯ್ಯರ್‌ (ವಿಸಿ), ಅಕ್ಷರ್‌ ಪಟೇಲ್‌‍, ಕೆ.ಎಲ್‌ ರಾಹುಲ್‌ (ಡಬ್ಲ್ಯುಕೆ), ನಿತೀಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌, ಕುಲದೀಪ್‌ ಯಾದವ್‌, ಹರ್ಷಿತ್‌ ರಾಣಾ, ಮೊಹಮದ್‌ ಸಿರಾಜ್‌‍, ಅರ್ಶ್‌ದೀಪ್‌ ಸಿಂಗ್‌ ,ಪ್ರಸೀದ್‌ ಕೃಷ್ಣ, ಪ್ರಶ್ರುದೀಪ್‌ ಸಿಂ ಮತ್ತು ಯಶಸ್ವಿ ಜೈಸ್ವಾಲ್‌‍.
ಭಾರತ ಟಿ-20 ತಂಡ: ಸೂರ್ಯಕುಮಾರ್‌ ಯಾದವ್‌ (ನಾಯಕ), ಅಭಿಷೇಕ್‌ ಶರ್ಮಾ, ಶುಬನ್‌ ಗಿಲ್‌ (ಉಪನಾಯಕ), ತಿಲಕ್‌ ವರ್ಮಾ, ನಿತೀಶ್‌ ಕುಮಾರ್‌ ರೆಡ್ಡಿ, ಶಿವಂ ದುಬೆ, ಅಕ್ಷರ್‌ ಪಟೇಲ್‌‍, ಜಿತೇಶ್‌ ಶರ್ಮಾ , ವರುಣ್‌ ಚಕ್ರವರ್ತಿ, ಜಸ್ಪ್ರೀತ್‌ ಬುಮ್ರಾ, ಆರ್ಷದೀಪ್‌ ಸಿಂಗ್‌‍, ಸಂಜುನ್‌ ರಾಧ್ಸನ್‌, ಕುಲದೀಪ್‌ ಸಿಂಗ್‌, ಹಶೀತ್‌ ರಾಣಾ,ರಿಂಕೂ ಸಿಂಗ್‌ ,ಸಂಜು ಸ್ಯಾಂಸನ್‌ ವಾಷಿಂಗ್ಟನ್‌ ಸುಂದರ್‌

ಜಿಎಸ್‌‍ಟಿ ಪರಿಷ್ಕರಣೆಯಿಂದ ದೇಶಿಯ ಉದ್ಯಮ ವಲಯದಲ್ಲಿ ಭಾರಿ ಸಂಚಲನ

ಬೆಂಗಳೂರು, ಅ.4-ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಸರಕು ಸೇವಾ ತೆರಿಗೆ ( ಜಿಎಸ್‌‍ ಟಿ) ಪರಿಷ್ಕರಣೆಯಿಂದ ದೇಶಿಯ ಉದ್ಯಮ ವಲಯದಲ್ಲಿ ಭಾರಿ ಬದಲಾವಣೆಯಾಗಲಿದ್ದು, ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ಭಾಷ್ಯ ಬರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ಸೆಪ್ಟೆಂಬರ್‌ 22 ರಿಂದ ದೇಶಾದ್ಯಂತ ಜಿಎಸ್‌‍ಟಿ ಪರಿಷ್ಕರಣೆಯಾಗಿದ್ದು, ತೆರಿಗೆ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಯನ್ನು ತಂದಿರುವುದು ಹೊಸ ಆರ್ಥಿಕ ಚೇತರಿಕೆಗೆ ಮುನ್ನುಡಿ ಬರೆಯಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸಬ್‌‍ಕಾ ಸಾಥ್‌, ಸಬ್‌‍ಕಾ ವಿಕಾಸ್‌‍, ಸಬ್‌‍ಕಾ ವಿಶ್ವಾಸ್‌‍ ಮತ್ತು ಸಬ್‌‍ಕಾ ಪ್ರಯಾಸ್‌‍ ಎಂಬ ಬದ್ಧತೆಯನ್ನು ಪೂರೈಸುವ ಪ್ರಮುಖ ಹೆಜ್ಜೆಯಾಗಿದೆ ಎಂಬ ವಿಶ್ಲೇಷಣೆಗಳು ಆರಂಭವಾಗಿವೆ.

ಹೊಸ ಜಿಎಸ್‌‍ಟಿ ಸುಧಾರಣೆಯು ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದಲ್ಲದೆ, ಸಾಂಪ್ರದಾಯಿಕ ಕೈಗಾರಿಕೆಗಳು, ಕರಕುಶಲ ವಸ್ತುಗಳು, ಕೃಷಿ ಮತ್ತು ಸಂಸ್ಕರಿಸಿದ ಆಹಾರದ ವಲಯಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುವ ವಿಶಾಲ ಆರ್ಥಿಕ ಕ್ರಮವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ಸಂಕೀರ್ಣ ಸ್ಲ್ಯಾಬ್‌ ರಚನೆಯು ಸಣ್ಣ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಹೊರೆಯಾಗಿ ಪರಿಣಮಿಸಿತ್ತು. ಮೋದಿ ಸರ್ಕಾರವು ಅದನ್ನು ವ್ಯಾಪಾರ ಸ್ನೇಹಿ ರೀತಿಯಲ್ಲಿ ಸರಳೀಕರಿಸಿದೆ. ಇದು ಸಾಮಾನ್ಯ ಜನರ ಜೀವನದಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲತೆಯನ್ನು ತರಲಿದೆ.

ಕರ್ನಾಟಕದ ಸಣ್ಣ ಪ್ರಮಾಣದ ಕೈಗಾರಿಕೆಗಳು ಜಿಎಸ್‌‍ಟಿ ಕಡಿತದಿಂದ ಪ್ರಯೋಜನ ಪಡೆಯಲಿವೆ. ಮೈಸೂರು ರೇಷ್ಮೆ, ಇಳಕಲ್‌‍, ಮೊಳಕಾಲೂರು ರೇಷ್ಮೆ ಸೀರೆಗಳು ಶೇ. 5ರ ಸ್ಲ್ಯಾಬ್‌‍ನಲ್ಲಿರುತ್ತವೆ. ವಿಶ್ವಪ್ರಸಿದ್ಧ ಚನ್ನಪಟ್ಟಣ ಮತ್ತು ಕಿನ್ನಾಳೆ ಗೊಂಬೆ, ಆಟಿಕೆಗಳು ಶೇ.12 ರಿಂದ ಶೇ. 5 ರಷ್ಟು ಸ್ಲ್ಯಾಬ್‌‍ಗೆ ಇಳಿಕೆಯಾಗಿವೆ.

ಮೈಸೂರು ಪಾಕ್‌ ಮತ್ತು ಧಾರವಾಡ ಪೇಡಾದಂತಹ ಸಿಹಿತಿಂಡಿಗಳು ಮೊದಲಿಗಿಂತ ಸಿಹಿಯಾಗಿರುತ್ತವೆ. ಇದಲ್ಲದೆ, ಪ್ಲಾಂಟರ್‌ಗಳು ಮತ್ತು ರೈತರ ಮುಖಗಳಲ್ಲಿ ಮಂದಹಾಸ ಮೂಡಿಸಿವೆ. ಏಕೆಂದರೆ, ಏಲಕ್ಕಿ, ಕರಿಮೆಣಸು, ಕಾಫಿ, ಕಿತ್ತಳೆ, ದಾಳಿಂಬೆ, ನಂಜನಗೂಡು ರಸಬಾಳೆ, ಕಮಲಪುರುಷ ಕೆಂಪು ಬಾಳೆಹಣ್ಣು, ಇಂಡಿ, ನಿಂಬೆ ಈಗ ಮೊದಲಿಗಿಂತಲೂ ಅಗ್ಗದ ದರದಲ್ಲಿ ಸಿಗಲಿವೆ.

ಬೀದರ್‌ ನಿವಾಸಿಗಳ ಬಿದರಿವೇರ್‌, ಮೈಸೂರು ಗುಲಾಬಿ ಮರದ ಒಳಸೇರಿಸುವಿಕೆ, ಗ್ಯಾಂಗಿಫಾಕಾರ್ಡ್‌ ಮೇಲಿನ ಜಿಎಸ್‌‍ಟಿ ಕೂಡ ಕಡಿಮೆಯಾಗಿದೆ. ಇದು ಮುಂಬರುವ ದಿನಗಳಲ್ಲಿ ಗ್ರಾಹಕರ ಕೊಂಡುಕೊಳ್ಳುವ ಸಂಖ್ಯೆಯಲ್ಲಿ ಭಾರಿ ಏರಿಕೆಗೆ ಕಾರಣವಾಗುತ್ತದೆ ಎಂಬ ನಿರೀಕ್ಷೆ ಇದೆ.

ಜಮು ಮತ್ತು ಕಾಶೀರದಲ್ಲಿ, ಈ ಸುಧಾರಣೆಯು ತೋಟಗಾರಿಕೆ, ವಾಲ್ನಟ್‌, ಚೆರ್ರಿ, ಕೇಸರಿ ಉದ್ಯಮಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ. ತೆರಿಗೆ ಕಡಿತದೊಂದಿಗೆ ಸ್ಥಳೀಯ ರೈತರು ತಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು.ಇದರಿಂದಾಗಿ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಹಿಮಾಚಲಪ್ರದೇಶದ ಸಾಂಪ್ರದಾಯಿಕ ಉತ್ಪನ್ನಗಳಾದ ಕಾಂಗ್ರಾ ಚಹಾ, ಕಪ್ಪು ಜೀರಿಗೆ, ಕುಲ್ಲು ಶಾಲುಗಳು ಮತ್ತು ಕಾಂಗ್ರಾ ವರ್ಣಚಿತ್ರಗಳು ಈಗ ಶೇ.5 ರಷ್ಟು ಜಿಎಸ್‌‍ಟಿ ಇದ್ದು, ಗ್ರಾಹಕರನ್ನು ಆಕರ್ಷಿಸುತ್ತವೆ.

ಇದು ರಾಜ್ಯದ ರೈತರು ಮತ್ತು ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುತ್ತದೆ ಮತ್ತು ಸ್ಥಳೀಯ ಕೈಗಾರಿಕೆಗಳನ್ನು ಬಲಪಡಿಸುತ್ತದೆ. ಉತ್ತರಾಖಂಡದಲ್ಲಿ ಬೇಎಲೆಗಳು, ಮುನ್ಸಾರಿ ರಾಜಾ, ನೈನಿತಾಲ್‌ ಲಿಚಿ ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ಶೇ.5ರಷ್ಟು ತೆರಿಗೆಯ ಅಡಿಯಲ್ಲಿ ತರಲಾಗಿದೆ. ಈ ಕ್ರಮವು ರಾಜ್ಯದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕೈಗಾರಿಕೆಗಳನ್ನು ಆರ್ಥಿಕವಾಗಿ ಬಲಪಡಿಸುತ್ತದೆ.

ತಮಿಳುನಾಡಿನಲ್ಲಿ ಜವಳಿ ಉದ್ಯಮ, ಹಾಗೆಯೇ ವಿರೂಪಾಕ್ಷ ಬೆಟ್ಟದ ಬಾಳೆಹಣ್ಣುಗಳು, ಈರೋಡ್‌ ಅರಿಶಿನ, ತಂಜಾವೂರು ವರ್ಣಚಿತ್ರಗಳು ಮತ್ತು ಅರುಂಬಾವೂರು ಮರದ ಕೆತ್ತನೆಗಳು ಶೇ.5ರಷ್ಟು ತೆರಿಗೆಯಿಂದ ಪ್ರಯೋಜನ ಪಡೆಯುತ್ತವೆ. ಇದು ರೈತರು ಮತ್ತು ಕುಶಲಕರ್ಮಿಗಳ ಸ್ಪರ್ಧಾತಕತೆಯನ್ನು ಹೆಚ್ಚಿಸುತ್ತದೆ ಮತ್ತು ರಾಜ್ಯದ ಆರ್ಥಿಕತೆಯನ್ನು ಬಲಪಡಿಸುತ್ತದೆ.

ಮಹಾರಾಷ್ಟ್ರದಲ್ಲಿ ಕೊಲ್ಹಾಪುರಿ ಚಪ್ಪಲಿಗಳು, ಪೈಥಾನಿ ಸೀರೆಗಳು, ವಾರ್ಲಿ ವರ್ಣಚಿತ್ರಗಳು, ನಾಗ್ಪುರ ಕಿತ್ತಳೆ, ಅಲ್ಫೋನ್ಸೊಮಾವು ಮತ್ತು ವೈಗೈ ಅರಿಶಿನವು ಈಗ ಶೇ. 5ರಷ್ಟು ತೆರಿಗೆಯನ್ನು ಹೊಂದಿವೆ. ಕಡಿಮೆ ಉತ್ಪಾದನಾ ವೆಚ್ಚಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.

ಕಾಶೀರದಲ್ಲಿ ಕಾಶೀರಿ ಪಶಿನಾ, ಕಾನಿ ಶಾಲುಗಳು, ಕಾಶೀರ ಪೇಪಿಯರ್‌ ಮಾಚೆ, ಕೇಸರಿ, ಒಣಗಿದ ಹಣ್ಣುಗಳು ಮತ್ತು ಡೇರಿ ಉತ್ಪನ್ನಗಳು ಈಗ ಶೇ.5 ರಷ್ಟು ತೆರಿಗೆಯನ್ನು ಹೊಂದಿವೆ. ಲಡಾಖ್‌ನಲ್ಲಿ, ಪಶಿನಾ ಜವಳಿ, ಮರದ ಕೆತ್ತನೆಗಳು, ಥಂಗ್ಕಾ ವರ್ಣಚಿತ್ರಗಳು, ಡೇರಿ ಮತ್ತು ಕೃಷಿ ಯಂತ್ರೋಪಕರಣಗಳು ಸಹ ಶೇ.5ರ ಜಿಎಸ್‌‍ ಟಿ ಅಡಿಯಲ್ಲಿವೆ.

ಉತ್ತರ ಪ್ರದೇಶದಲ್ಲಿ ಕ್ರೀಡಾ ಉಪಕರಣಗಳು, ಕೈಮಗ್ಗ ಮತ್ತು ಚರ್ಮದ ಕೈಗಾರಿಕೆಗಳು ಕಡಿಮೆಯಾದ ತೆರಿಗೆಗಳಿಂದ ಪ್ರಯೋಜನ ಪಡೆಯುತ್ತವೆ. ಇದು ಕೈಗಾರಿಕೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತಕವಾಗಿಸುತ್ತದೆ.ಯುವಕರಿಗೆ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತದೆ.

ಗುಜರಾತ್‌ನ ಜವಳಿ ಮತ್ತು ವಜ್ರ ಕ್ಷೇತ್ರಗಳಿಗೆ ವಿಶೇಷ ಪರಿಹಾರ ಸಿಕ್ಕಿದೆ. ಉತ್ಪಾದನಾ ವೆಚ್ಚಗಳು ಕಡಿಮೆಯಾಗುತ್ತವೆ. ರಫ್ತು ಹೆಚ್ಚಾಗುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದು ಮೋದಿಜಿ ಅವರ ಮೇಕ್‌ಇನ್‌ ಇಂಡಿಯಾ ದೃಷ್ಟಿಕೋನವನ್ನು ಸಾಕಾರಗೊಳಿಸುವ ಒಂದು ಹೆಜ್ಜೆಯಾಗಿದೆ. ಮಹಾರಾಷ್ಟ್ರದಲ್ಲಿ ಆಟೋಮೊಬೈಲ್‌ ಮತ್ತು ಆಹಾರ ಸಂಸ್ಕರಣಾ ವಲಯಗಳು ಹೊಸ ವೇಗವನ್ನು ಪಡೆದುಕೊಂಡಿವೆ. ಹೂಡಿಕೆದಾರರ ಸ್ನೇಹಿ ವಾತಾವರಣವನ್ನು ಸೃಷ್ಟಿಸಲಾಗುವುದು, ಇದು ಕೈಗಾರಿಕಾ ಅಭಿವೃದ್ಧಿಯ ಹೊಸ ಅಲೆಗೆ ಕಾರಣವಾಗುತ್ತದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಿಸಿದ ಟಿಕೆಟ್‌ ಜಾಗರೂಕತೆಯಿಂದ ಇಟ್ಟುಕೊಳ್ಳುವಂತೆ ವೀಕ್ಷಕರಿಗೆ ಸರ್ಕಾರ ಸೂಚನೆ

ಬೆಂಗಳೂರು, ಅ.4-ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿನ ಚಲನಚಿತ್ರ ಪ್ರದರ್ಶನದ ಟಿಕೆಟ್‌ ಮೇಲೆ ವಿಧಿಸಿದ್ದ 200 ರೂ.ಮಿತಿಗೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ಮುಂದುವರೆದಿದ್ದು,
ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಸಿನಿಮಾ ವೀಕ್ಷಿಸುವವರು ತಮ್ಮ ಟಿಕೆಟ್‌ ಮತ್ತು ಹಣ ಪಾವತಿಸಿದ ದಾಖಲೆಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳುವಂತೆ ಚಿತ್ರ ವೀಕ್ಷಕರಿಗೆ ರಾಜ್ಯ ಸರ್ಕಾರ ಸೂಚಿಸಿದೆ.

ಚಲನಚಿತ್ರ ವೀಕ್ಷಣೆಗೆ ದುಬಾರಿ ಟಿಕೆಟ್‌ ದರ ನಿಗದಿ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳ ವೀಕ್ಷಣೆಯ ಟಿಕೆಟ್‌ ದರವನ್ನು ಗರಿಷ್ಠ 200 ರೂ.ಗೆಮಿತಿಗೊಳಿಸಿ ಆದೇಶಿಸಿದೆ. ಅದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.ಅದರ ಜೊತೆಗೆ ಮಲ್ಟಿಪ್ಲೆಕ್ಸ್ ಗಳು ಮಾರಾಟವಾದ ಪ್ರತಿ ಟಿಟ್‌ಗೆ ಸಮಗ್ರ ಮತ್ತು ಲೆಕ್ಕ ಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸುವಂತೆ ನಿರ್ದೇಶಿಸಿದೆ.

ಒಂದು ವೇಳೆ ಭಾರತೀಯ ಮಲ್ಟಿಪ್ಲೆಕ್ಸ್ ಗಳ ಸಂಘ ಮತ್ತು ಇತರರು ರಾಜ್ಯ ಸರ್ಕಾರ ನಿಗದಿಪಡಿಸಿದ ಮಿತಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿ, ರಾಜ್ಯ ಸರ್ಕಾರದ ಪರ ತೀರ್ಪು ಬಂದರೆ, ಮಲ್ಟಿಪ್ಲೆಕ್ಸ್ ಗಳು ಎಲೆಕ್ಟ್ರಾನಿಕ್‌ ವಿಧಾನಗಳ ಮೂಲಕ ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಟಿಕೆಟ್‌ಗಳನ್ನು ಬುಕ್‌ ಮಾಡಿದ ಗ್ರಾಹಕರಿಗೆ ಬುಕ್ಕಿಂಗ್‌ಗೆ ಬಳಸಿದ ಪಾವತಿ ವಿಧಾನದ ಮೂಲಕವೇ ಮರುಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.
ಪ್ರತಿವಾದಿ ಸಂಖ್ಯೆ 1 ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮಲ್ಟಿಪ್ಲೆಕ್‌್ಸಗಳು, ಮಾರಾಟವಾದ ಪ್ರತಿಯೊಂದು ಟಿಕೆಟ್‌ಗೆ ಸಮಗ್ರ ಮತ್ತು ಲೆಕ್ಕಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸಲು ನಿರ್ದೇಶಿಸಲಾಗಿದೆ.

ಮಾರಾಟದ ದಿನಾಂಕ ಮತ್ತು ಸಮಯ, ಆನ್‌ಲೈನ್‌ ಅಥವಾ ಭೌತಿಕ ಕೌಂಟರ್‌ಗಳಲ್ಲಿ ಬುಕಿಂಗ್‌ ಮಾಡಿರುವ ವಿವರ, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌, ಯುಪಿಐ ನೆಟ್‌ ಬ್ಯಾಂಕಿಂಗ್‌ ಅಥವಾ ನಗದು ಪಾವತಿ ಮಾಡಿರುವ ವಿವರ, ಸಂಗ್ರಹಿಸಿದ ಮೊತ್ತ, ಜಿಎಸ್‌‍ಟಿ ಘಟಕ, ಎಲ್ಲಾ ನಗದು ವಹಿವಾಟುಗಳಿಗೆ ಡಿಜಿಟಲ್‌ ಆಗಿ ಪತ್ತೆಹಚ್ಚಬಹುದಾದ ರಸೀದಿಗಳನ್ನು ನೀಡಬೇಕು ಮತ್ತು ಪ್ರತಿದಿನ ಕ್ಯಾಶ್‌ ರಿಜಿಸ್ಟರ್‌ಗಳನ್ನು ಮಲ್ಟಿಪ್ಲೆಕ್‌್ಸನ ವ್ಯವಸ್ಥಾಪಕರು ಪ್ರತಿ ಸಹಿ ಮಾಡಬೇಕು.

ಅರ್ಜಿದಾರರು ಅಂತಿಮ ತೀರ್ಪಿನಲ್ಲಿ ನಿರ್ಬಂಧದ ಬಾಕಿ ಇರುವ ಸಮಯದಲ್ಲಿ ಎಲೆಕ್ಟ್ರಾನಿಕ್‌ ವಿಧಾನಗಳ ಮೂಲಕ (ಅನ್ವಯವಾಗುವ ಜಿಎಸ್‌‍ಟಿ ಹೊರತುಪಡಿಸಿ) ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಟಿಕೆಟ್‌ಗಳನ್ನು ಬುಕ್‌ ಮಾಡಿದ ವೈಯಕ್ತಿಕ ಗ್ರಾಹಕರಿಗೆ ಬುಕಿಂಗ್‌ಗೆ ಬಳಸುವ ಅದೇ ಪಾವತಿ ವಿಧಾನದ ಮೂಲಕ ಮರುಪಾವತಿಸಬೇಕು.

ಪ್ರತಿವಾದಿ ಸಂಖ್ಯೆ 1 ಇಂದಿನಿಂದ 45 ದಿನಗಳಲ್ಲಿ ಪರವಾನಗಿ ಪ್ರಾಧಿಕಾರಕ್ಕೆ ಮರುಪಾವತಿ ಪ್ರಕ್ರಿಯೆ ಯೋಜನೆಯನ್ನು ಅನುಮೋದನೆಗಾಗಿ ಸಲ್ಲಿಸಬೇಕು. ಇದು ಗ್ರಾಹಕರಿಗೆ ಮರುಪಾವತಿ ಮಾಡುವ ಕಾರ್ಯವಿಧಾನವನ್ನು ವಿವರಿಸುತ್ತದೆ. ಪರವಾನಗಿ ಪ್ರಾಧಿಕಾರದಿಂದ ಅನುಮೋದನೆಯ ನಂತರ ಅದನ್ನು ಅಂತಿಮ ಅನುಮೋದನೆಗಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ.

ನ್ಯಾಯಾಲಯದ ತೀರ್ಪಿನನ್ವಯ, ಹಾಲಿ ಚಲನಚಿತ್ರ ಪ್ರದರ್ಶನಕ್ಕೆ ನೀಡಿರುವ ದರಕ್ಕೆ ಸಂಬಂಧಿಸಿದಂತೆ ಭೌತಿಕವಾಗಿ ಅಥವಾ ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಪಡೆದ ಟಿಕೆಟ್‌ಗಳನ್ನು ಭದ್ರವಾಗಿ ಕಾಯ್ದಿರಿಸಿಕೊಳ್ಳತಕ್ಕದ್ದು, ಹಾಗೆಯೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಎಲ್ಲಾ ರೀತಿಯಾ ಸಿನಿಮಾ ಟಿಕೆಟ್‌ಗಳ ಮಾರಾಟದ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸಬೇಕಾಗಿರುತ್ತದೆ.

ಈ ಪ್ರಕರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ರಿಟ್‌ ಅರ್ಜಿ / ಅಪೀಲು ಸಂಬಂಧದಲ್ಲಿ ನೀಡುವ ಅಂತಿಮ ಆದೇಶದಲ್ಲಿ ಅರ್ಜಿದಾರರಿಗೆ ಹಿನ್ನಡೆಯಾದಲ್ಲಿ ಗ್ರಾಹಕರಿಂದ ಸಂಗ್ರಹವಾದ ಹೆಚ್ಚುವರಿ ಮೊಬಲಗನ್ನು ಅವರುಗಳು ಪಾವತಿಸಿದ ವಿಧಾನದಲ್ಲಿಯೇ ಹಿಂದಿರುಗಿಸಲು ಅನುಕೂಲವಾಗುವಂತೆ ಅರ್ಜಿದಾರರು, ರಾಜ್ಯ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮೇಲಿನ ನಿರ್ದೇಶನಗಳನ್ನುನೀಡಿದೆ.

ಶಿವನ ಆಕ್ಷೇಪಾರ್ಹ ಚಿತ್ರ ಪೋಸ್ಟ್‌ ಮಾಡಿದ್ದವನ ಬಂಧನ

ಬಲಿಯಾ, ಅ. 4 (ಪಿಟಿಐ) ಸಾಮಾಜಿಕ ಮಾಧ್ಯಮದಲ್ಲಿ ಲಾರ್ಡ್‌ ಶಿವನ ಆಕ್ಷೇಪಾರ್ಹ ಚಿತ್ರ ಪ್ರಸಾರ ಮಾಡಿದ ವ್ಯಕ್ತಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.ಬಲಿಯಾ ಜಿಲ್ಲೆಯ ಪಕಾಡಿ ಪ್ರದೇಶದ ಮೇಯುಲಿ ಗ್ರಾಮದ ನಿವಾಸಿ ಸಂದೀಪ್‌ ಗೌತಮ್‌ ಅಲಿಯಾಸ್‌‍ ರಂಜನ್‌ ಬಂಧಿತ ಆರೋಪಿಯಾಗಿದ್ದಾನೆ.

ಈತ ಹಿಂದೂಗಳ ಪರಮ ದೈವವಾದ ಶಿವನ ಆಕ್ಷೇಪಾರ್ಹ ಚಿತ್ರವನ್ನು ಫೇಸ್‌‍ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ.ಈ ಕುರಿತಂತೆ ಸ್‌‍ಬ್‌‍-ಇನ್‌ಸ್ಪೆಕ್ಟರ್‌ ಮುಖೇಶ್‌ ಯಾದವ್‌ ಅವರ ದೂರಿನ ಆಧಾರದ ಮೇಲೆ, ಗೌತಮ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ 353 (2) (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಚರಣೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಸನೇ ತಕೈಚಿ ಆಯ್ಕೆ ಸಾಧ್ಯತೆ..?

ಟೋಕಿಯೋ, ಅ.4- ಜಪಾನ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನಿ ಆಯ್ಕೆಯಾಗುವ ಸಾಧ್ಯತೆಗಳಿವೆ.ಜಪಾನ್‌ನ ಆಡಳಿತ ಪಕ್ಷವು ಸನೇ ತಕೈಚಿ ಅವರನ್ನು ಹೊಸ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಅವರೇ ಜಪಾನ್‌ ಪ್ರಧಾನಿ ಪಟ್ಟ ಏರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜಪಾನ್‌ನ ಮಾಜಿ ಆರ್ಥಿಕ ಭದ್ರತಾ ಸಚಿವೆಯಾಗಿದ್ದ ಸನೇ ತಕೈಚಿ ಅವರನ್ನು ಹೊಸ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅಲ್ಲಿನ ಆಡಳಿತ ಪಕ್ಷ ತಿಳಿಸಿದೆ.
ಇದರಿಂದಾಗಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗುವ ಸಾಧ್ಯತೆಯಿದೆ.

ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಆಂತರಿಕ ಮತದಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯಿಜುಮಿ ಅವರ ಪುತ್ರ ಕೃಷಿ ಸಚಿವ ಶಿಂಜಿರೊ ಕೊಯಿಜುಮಿ ಅವರನ್ನು ತಕೈಚಿ ಸೋಲಿಸಿದ್ದರು.

62 ಸಾವಿರ ಕೋಟಿ ರೂ.ಗಳ ಪಿಎಂ-ಎಸ್‌‍ಇಟಿಯು ಯೋಜನೆಗೆ ಮೋದಿ ಚಾಲನೆ

ನವದೆಹಲಿ, ಅ. 4 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಇಂದು 62,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯುವ ಕೇಂದ್ರಿತ ಉಪಕ್ರಮಗಳನ್ನು ಅನಾವರಣಗೊಳಿಸಿದರು.ಅದರಲ್ಲೂ ಚುನಾವಣೆ ಸಮೀಪಿಸುತ್ತಿರುವ ಬಿಹಾರಕ್ಕೆ ವಿಶೇಷ ಒತ್ತು ನೀಡಿ ಈ ಯೋಜನೆ ರೂಪಿಸಿರುವುದು ವಿಶೇಷವಾಗಿದೆ.

60,000 ಕೋಟಿ ರೂ. ಹೂಡಿಕೆಯೊಂದಿಗೆ ಕೇಂದ್ರ ಪ್ರಾಯೋಜಿತ ಯೋಜನೆಯಾದ ಪಿಎಂ-ಎಸ್‌‍ಇಟಿಯು (ಪ್ರಧಾನ್‌ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾವಕಾಶ ಪರಿವರ್ತನೆ ಅಪ್‌ಗ್ರೇಡ್ಡ್‌‍ ಐಟಿಐಗಳು) ಅನ್ನು ಮೋದಿ ಇಂದು ಉದ್ಘಾಟಿಸಿದರು.200 ಹಬ್‌ ಐಟಿಐಗಳು ಮತ್ತು 800 ಸ್ಪೋಕ್‌ ಐಟಿಐಗಳನ್ನು ಒಳಗೊಂಡ ಹಬ್‌‍-ಅಂಡ್‌-ಸ್ಪೋಕ್‌ ಮಾದರಿಯಲ್ಲಿ 1,000 ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಗುರಿಯನ್ನು ಇದು ಹೊಂದಿದೆ.

ಒಟ್ಟಾರೆಯಾಗಿ, ಪಿಎಂ-ಎಸ್‌‍ಇಟಿಯು ಭಾರತದ ಐಟಿಐ ಪರಿಸರ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸುತ್ತದೆ, ಇದು ವಿಶ್ವ ಬ್ಯಾಂಕ್‌ ಮತ್ತು ಏಷ್ಯನ್‌ ಅಭಿವೃದ್ಧಿ ಬ್ಯಾಂಕಿನ ಜಾಗತಿಕ ಸಹ-ಹಣಕಾಸು ಬೆಂಬಲದೊಂದಿಗೆ ಸರ್ಕಾರಿ ಸ್ವಾಮ್ಯದ ಆದರೆ ಉದ್ಯಮ-ನಿರ್ವಹಣೆಯಾಗಿರುತ್ತದೆ ಎಂದು ಪಿಎಂಒ ಹೇಳಿಕೆ ಈ ಹಿಂದೆ ತಿಳಿಸಿದೆ.

ಯೋಜನೆಯ ಅನುಷ್ಠಾನದ ಮೊದಲ ಹಂತದಲ್ಲಿ, ಬಿಹಾರದ ಪಾಟ್ನಾ ಮತ್ತು ದರ್ಭಂಗಾದಲ್ಲಿರುವ ಐಟಿಐಗಳ ಮೇಲೆ ವಿಶೇಷ ಗಮನ ಹರಿಸಲಾಗುವುದು. ಈ ಕಾರ್ಯಕ್ರಮದ ವಿಶೇಷ ಒತ್ತು ಬಿಹಾರದಲ್ಲಿ ಪರಿವರ್ತನಾತ್ಮಕ ಯೋಜನೆಗಳ ಮೇಲೆ ಇರುತ್ತದೆ, ಇದು ರಾಜ್ಯದ ಶ್ರೀಮಂತ ಪರಂಪರೆ ಮತ್ತು ಯುವ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಮೋದಿಯವರು ಬಿಹಾರದ ಪರಿಷ್ಕೃತ ಮುಖ್ಯಮಂತ್ರಿ ನಿಶ್ಚಿತ ಸ್ವಯಂ ಸಹಾಯತ ಭತ್ತ ಯೋಜನೆಯನ್ನು ಪ್ರಾರಂಭಿಸಿದರು, ಇದರ ಅಡಿಯಲ್ಲಿ ಸುಮಾರು ಐದು ಲಕ್ಷ ಪದವೀಧರರು ಎರಡು ವರ್ಷಗಳವರೆಗೆ ತಲಾ 1,000 ರೂ.ಗಳ ಮಾಸಿಕ ಭತ್ಯೆಯನ್ನು ಉಚಿತ ಕೌಶಲ್ಯ ತರಬೇತಿಯೊಂದಿಗೆ ಪಡೆಯುತ್ತಾರೆ.

ಅವರು ಮರುವಿನ್ಯಾಸಗೊಳಿಸಲಾದ ಬಿಹಾರ ವಿದ್ಯಾರ್ಥಿ ಕ್ರೆಡಿಟ್‌ ಕಾರ್ಡ್‌ ಯೋಜನೆಯನ್ನು ಸಹ ಪ್ರಾರಂಭಿಸಿದರು, ಇದು 4 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಶಿಕ್ಷಣ ಸಾಲಗಳನ್ನು ಒದಗಿಸುತ್ತದೆ, ಇದು ಉನ್ನತ ಶಿಕ್ಷಣದ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.ಈ ಯೋಜನೆಯಡಿಯಲ್ಲಿ 3.92 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ 7,880 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಸಾಲಗಳನ್ನು ಪಡೆದಿದ್ದಾರೆ.

ರಾಜ್ಯದಲ್ಲಿ ಯುವ ಸಬಲೀಕರಣವನ್ನು ಮತ್ತಷ್ಟು ಬಲಪಡಿಸುತ್ತಾ, 18 ರಿಂದ 45 ವರ್ಷದೊಳಗಿನ ಜನರಿಗೆ ಶಾಸನಬದ್ಧ ಆಯೋಗವಾದ ಬಿಹಾರ ಯುವ ಆಯೋಗವನ್ನು ಮೋದಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು ಎಂದು ಅದು ಹೇಳಿದೆ.

ಕೇಂದ್ರ ಮತ್ತು ರಾಜ್ಯದ ಎನ್‌ಡಿಎ ಸರ್ಕಾರಗಳ ಹಲವಾರು ಅಭಿವೃದ್ಧಿ ಮತ್ತು ಕಲ್ಯಾಣ ಉಪಕ್ರಮಗಳ ಕೇಂದ್ರಬಿಂದು ಬಿಹಾರ.ಜಾಗತಿಕವಾಗಿ ಸ್ಪರ್ಧಾತ್ಮಕ ಕಾರ್ಯಪಡೆಯನ್ನು ಸೃಷ್ಟಿಸಲು ಉದ್ಯಮ-ಆಧಾರಿತ ಕೋರ್ಸ್‌ಗಳು ಮತ್ತು ವೃತ್ತಿಪರ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರಧಾನಮಂತ್ರಿಯವರು ಜನ್‌ ನಾಯಕ್‌ ಕರ್ಪೂರಿ ಠಾಕೂರ್‌ ಕೌಶಲ್ಯ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿದರು.

ಜಾತಿ ಗಣತಿ ಕಾರ್ಯದಿಂದ ವಾಪಸ್‌‍ ಮನೆಗೆ ತೆಳುವಾಗ ರಸ್ತೆ ಅಪಘಾತದಲ್ಲಿ ಶಿಕ್ಷಕಿ ಸಾವು

ಬಾಗಲಕೋಟೆ,ಅ.4– ಜಾತಿ ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಕೆಲಸ ಮುಗಿಸಿ ವಾಪಸ್‌‍ ಮನೆಗೆ ತೆಳುವಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ತಿಮ್ಮಾಪೂರ ಕ್ರಾಸ್‌‍ ಬಳಿ ನಡೆದಿದೆ.ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮದ ದಾನಮ ವಿಜಯಕುಮಾರ ನಂದರಗಿ (52) ಸಾವನ್ನಪ್ಪಿರುವ ಶಿಕ್ಷಕಿ.

ಬಾಗಲಕೋಟೆ ತಾಲೂಕಿನ ರಾಂಪೂರ ಸರ್ಕಾರಿ ಆಶ್ರಯ ಕಾಲೋನಿ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಅವರು ನಿನ್ನೆ ಸಂಜೆ ಕೆಲಸ ಮುಗಿಸಿ ರಾತ್ರಿ ಪುತ್ರನ ಜೊತೆ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ಗಣತಿ ಕಾರ್ಯದ ಒತ್ತಡದಲ್ಲಿದ್ದ ದಾನಮ ಮಗ ವಿಕಾಸ್‌‍ ಬೈಕ್‌ ಹೋಗುವಾಗ ಹದಗೆಟ್ಟ ರಸ್ತೆಯಿಂದಾಗು ಆಯತಪ್ಪಿ ವಾಹನದಿಂದ ಜಾರಿ ಕೆಳಗೆ ಬಿದ್ದಿದ್ದಾರೆ.ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.