Friday, November 7, 2025
Home Blog Page 77

ವಿದೇಶದಿಂದ ಅಂಚೆ ಮೂಲಕ ಪಾರ್ಸಲ್‌ ಬಂದಿದ್ದ 9.93 ಕೋಟಿ ಮೌಲ್ಯದ ಡ್ರಗ್ಸ್ ವಶ : 7 ಮಂದಿ ಬಂಧನ

ಬೆಂಗಳೂರು,ಸೆ.29- ಅಂಚೆ ಕಚೇರಿಗೆ ವಿದೇಶದಿಂದ ಪಾರ್ಸಲ್‌ ಮೂಲಕ ಬಂದಿದ್ದ 1 ಕೋಟಿ ರೂ.ಮೌಲ್ಯದ ಹೈಡ್ರೋ ಗಾಂಜಾ ಸೇರಿದಂತೆ ಒಟ್ಟು 9.93 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡು ಇಬ್ಬರು ವಿದೇಶಿ ಪ್ರಜೆಗಳು ಸೇರಿ ಏಳು ಡ್ರಗ್‌ ಪೆಡ್ಲರ್‌ ಗಳನ್ನು ಬಂಧಿಸಿದ್ದಾರೆ.ಕೆಜಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಅಂಚೆ ಕಚೇರಿಗೆ ವಿದೇಶದಿಂದ ಮಾದಕ ವಸ್ತು ಪಾರ್ಸಲ್‌ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪಾರ್ಸಲ್‌ನನ್ನು ತೆಗೆದು ನೋಡಿದಾಗ ಅದರಲ್ಲಿ ಮಾದಕ ವಸ್ತು 1.22 ಕೆಜಿ ಹೈಡ್ರೋ ಗಾಂಜಾ ಹಾಗೂ ಇನ್ನಿತರೆ ವಸ್ತುಗಳು ಕಂಡು ಬಂದಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು 1 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕೆಜಿನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿಬಿ ಗೆ ವರ್ಗಾವಣೆ: ವಿದೇಶದಿಂದ ಅಂಚೆ ಕಚೇರಿಗೆ ಬಂದಿರುವ ಮಾದಕ ವಸ್ತುವಿನ ಬಗ್ಗೆ ಮುಂದಿನ ತನಿಖೆಗಾಗಿ ಸಿಸಿಬಿಗೆ ವರ್ಗಾಹಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಯಾವ ದೇಶದಿಂದ ಈ ಪಾರ್ಸಲ್‌ ಬಂದಿದೆ. ಯಾರು ಈ ಮಾದಕ ವಸ್ತುವನ್ನು ಯಾರಿಗೆ ಅಂಚೆ ಮೂಲಕ ಕಳುಹಿಸಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಇಬ್ಬರು ವಿದೇಶಿ ಪ್ರಜೆಗಳ ಬಂಧನ:
ಮೆಡಿಕಲ್‌ ವೀಸಾ ಹಾಗೂ ಸ್ಟೂಡೆಂಡ್‌ ವೀಸಾ ಪಡೆದು ನೈಜೀರಿಯಾದಿಂದ ಭಾರತಕ್ಕೆ ಬಂದು ನಂತರ ನಗರದಲ್ಲಿ ವಾಸವಾಗಿದ್ದುಕೊಂಡು ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 7.80 ಕೋಟಿ ರೂ.ಮೌಲ್ಯದ 3 ಕೆಜಿ 852 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಹಾಗೂ 41 ಗ್ರಾಂ 82 ಮಿ. ಎಕ್ಸ್ ಟಸಿ ಪಿಲ್ಸ್ ಗಳು ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾ ದೇಶದ ಕೆವಿನ್‌ ರೋಜರ್‌ ಮತ್ತು ಥಾಮಸ್‌‍ ನವೀದ್‌ ಚೀಫ್‌ ಬಂಧಿತ ವಿದೇಶಿ ಪ್ರಜೆಗಳು. 2019 ರಲ್ಲಿ ಮೆಡಿಕಲ್‌ ವೀಸಾ ಪಡೆದು ಭಾರತಕ್ಕೆ ಬಂದಿದ್ದ ವ್ಯಕ್ತಿ ನಂತರದ ದಿನಗಳಲ್ಲಿ ದೆಹಲಿಯಲ್ಲಿ ವಾಸವಿರುವ ವಿದೇಶಿ ಪ್ರಜೆಗಳಿಂದ ಡ್ರಗ್ಸ್ ಗಳನ್ನು ಖರೀದಿಸಿ ಬೆಂಗಳೂರಿಗೆ ಬಂದು ಪರಿಚಯಿಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು.
ಈತನ ವಿರುದ್ಧ 2023 ರಲ್ಲಿ ಎನ್‌ಸಿಬಿ ಘಟಕದಲ್ಲಿ ಎನ್‌ಡಿಪಿಎಸ್‌‍ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ಮತ್ತೊಬ್ಬ ವಿದೇಶಿ ಪ್ರಜೆ 2019 ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಾನೆ. ಈತ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಕೃತ್ಯದಲ್ಲಿ ತೊಡಗಿಕೊಂಡಿದ್ದು, ಈತನ ವಿರುದ್ಧ ಗುಜರಾತ್‌ ರಾಜ್ಯದ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದನು.

ಈತ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿಕೊಂಡಿದ್ದನು.ಈ ಇಬ್ಬರ ವಿರುದ್ಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಟೆಕ್ಕಿ ಬಂಧನ:
ಕೇರಳದಿಂದ ಕಡಿಮೆಬೆಲೆಗೆ ಹೈಡ್ರೋ ಗಾಂಜಾವನ್ನು ಖರೀದಿಸಿ ನಗರದಲ್ಲಿ ಹೆಚ್ಚಿನ ಬೆಲೆಗೆ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ ಸಾಫ್‌್ಟವೇರ್‌ಎಂಜಿನಿಯರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ 75 ಲಕ್ಷ ರೂ.ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಡ್ರಗ್‌ಪೆಡ್ಲರ್‌ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿರುವ ಟೆಕ್ಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೋಜಿನ ಜೀವನಕ್ಕಾಗಿ ಅಧಿಕ ಹಣ ಸಂಪಾದಿಸಲು ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾಗಿ ತಿಳಿಸಿದ್ದಾನೆ.

ಆರೋಪಿಯಿಂದ 75 ಲಕ್ಷ ಮೌಲ್ಯದ 500 ಗ್ರಾಂ ಹೈಡ್ರೋ ಗಾಂಜಾ 1 ಕಾರು, ಬೈಕ್‌ ಹಾಗೂ ಮೊಬೈಲ್‌ ವಶಪಡಿಸಿಕೊಂಡಿದ್ದು ಈ ಬಗ್ಗೆ ಮಹದೇವಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಡೆಂಟಲ್‌ ವಿದ್ಯಾರ್ಥಿ ಸೆರೆ:
ಮೋಜಿನ ಜೀವನ ನಡೆಸಲು ಅಧಿಕ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ಹೈಡ್ರೋ ಗಾಂಜಾವನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಡೆಂಟಲ್‌ ಕಾಲೇಜಿನ ವಿದ್ಯಾರ್ಥಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 32ಲಕ್ಷ ರೂ. ಮೌಲ್ಯದ 300 ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಆಡುಗೋಡಿ ವ್ಯಾಪ್ತಿಯಲ್ಲಿ ಡ್ರಗ್‌ಪೆಡ್ಲರ್‌ಬಗ್ಗೆ ಮಾಹಿತಿಯನ್ನು ಕಲೆಹಾಕಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಸ್ಥಳದ ಮೇಲೆ ದಾಳಿ ಮಾಡಿ ಡ್ರಗ್‌ಪೆಡ್ಲರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಡೆಂಟಲ್‌ ಕಾಲೇಜಿನ ವಿದ್ಯಾರ್ಥಿ ಎಂಬುವುದು ಗೊತ್ತಾಗಿದೆ.

ಮೂವರ ಡ್ರಗ್‌ಪೆಡ್ಲರ್‌ಗಳ ಸೆರೆ:
ಅಧಿಕ ಹಣ ಸಂಪಾದನೆಗಾಗಿ ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಮೂವರು ಡ್ರಗ್‌ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ 6 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಪರಿಚಯಿಸ್ಥರಿಗೆ ಅಧಿಕ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದುದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿತರೆ ವ್ಯಕ್ತಿಗಳ ವಿರುದ್ಧ ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡು ಡ್ರಗ್‌ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸಂತ್ರಸ್ತರ ನೆರವಿಗೆ ಸರ್ಕಾರ ಅವಿರತ ಪ್ರಯತ್ನ ನಡೆಯುತ್ತಿದೆ : ಪ್ರಿಯಾಂಕ ಖರ್ಗೆ

ಬೆಂಗಳೂರು, ಸೆ.29- ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಯ ಭೀಮಾನದಿ ಭಾಗದ ಹಲವು ಪ್ರದೇಶಗಳು ಮುಳು ಗಡೆಯಾಗಿದ್ದು, ಜನರ ಪುನರ್‌ ವಸತಿಗೆ ಸರ್ಕಾರ ಅವಿರತ ಪ್ರಯತ್ನ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ತಮ ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ಥ ಪ್ರದೇಶಗಳ ಡ್ರೋನ್‌ ವಿಡಿಯೋಗಳನ್ನು ಹಂಚಿಕೊಂಡಿರುವ ಅವರು, ಕರ್ನಾಟಕದ ಭೀಮಾ ಜಲಾಶಯ ಪ್ರದೇಶಗಳಲ್ಲಿನ ಜಿಲ್ಲೆಗಳ ಪರಿಸ್ಥಿತಿ ಸವಾಲಿನದ್ದಾಗಿದೆ. ನಿರಂತರ ಮಳೆ ಹಾಗೂ ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ, ರಸ್ತೆ ಸಂಪರ್ಕ ಕಡಿತಗೊಂಡಿವೆ ಎಂದು ತಿಳಿಸಿದ್ದಾರೆ.

ಜೀವಗಳ ರಕ್ಷಣೆ ಸರ್ಕಾರದ ಮೊದಲ ಆದ್ಯತೆ. ಸುಮಾರು 8 ಸಾವಿರ ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಆಹಾರ, ನೀರು, ವೈದ್ಯಕೀಯ ಆರೈಕೆ ಒದಗಿಸಲಾಗುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಅವರು ರಕ್ಷಣೆ ಪಡೆದಿದ್ದಾರೆ.

ಜಾನುವಾರುಗಳನ್ನು ರಕ್ಷಿಸಲು ಮತ್ತು ಜೀವನೋಪಾಯಕ್ಕೆ ಹಾನಿ ಕಡಿಮೆ ಮಾಡಲು ಎಸ್‌‍ಡಿಆರ್‌ಎಫ್‌ ಹಾಗೂ ಎಲ್ಲಾ ಇಲಾಖೆಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ತಿಳಿಸಿದ್ದಾರೆ.
ಜನ ಜೀವನ ಸಹಜ ಸ್ಥಿತಿಗೆ ಬರುವವರೆಗೂ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿ ಅಗತ್ಯ ಸಂಪನೂಲಗಳನ್ನು ಒದಗಿಸಲಾಗುವುದು. ತೊಂದರೆಗೊಳಗಾದ ಜನರಜೊತೆ ಸರ್ಕಾರ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

ಹಂಚಿಕೊಳ್ಳಲಾದ ದೃಶ್ಯಗಳಲ್ಲಿ ಭೀಮಾನದಿ ತೀರದ ಭಾಗಗಳಲ್ಲಿ ಕಂಡು ಬರುತ್ತಿರುವ ದೃಶ್ಯಗಳು ಮಳೆಯ ಹಾನಿಯ ತೀವ್ರತೆಯನ್ನು ಅನಾವರಣ ಗೊಳಿಸುತ್ತಿವೆ. ಊರಿಗೆ ಊರೇ ಮುಳುಗಡೆಯಾಗಿದೆ. ರಸ್ತೆ, ಸೇತುವೆ ಹಾಗೂ ಮೂಲ ಸೌಕರ್ಯಗಳು ಕೊಚ್ಚಿಹೋಗಿವೆ.

ಬೆಂಗಳೂರು : ಪತ್ನಿಗೆ 15 ಬಾರಿ ಇರಿದು ಕೊಂದು ಪತಿ ಆತ್ಮಹತ್ಯೆ

ಬೆಂಗಳೂರು, ಸೆ.29- ಪತ್ನಿಗೆ 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ನಗರದ ಜ್ಞಾನಭಾರತಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಲ್ಲಾಳ ಮುಖ್ಯರಸ್ತೆಯ ಪ್ರೆಸ್‌‍ಲೇಔಟ್‌ನಲ್ಲಿ ವಾಸವಾಗಿದ್ದ ಮಂಜು(27) ಕೊಲೆಯಾದ ಮಹಿಳೆ. ಧರ್ಮಶೀಲನ್‌ (29) ಎಂಬಾತನೇ ಪತ್ನಿ ಕೊಲೆ ಮಾಡಿ ಫ್ಯಾನಿಗೆ ನೇಣು ಹಾಕಿಕೊಂಡು ಆತಹತ್ಯೆಗೆ ಶರಣಾದ ಪತಿ.

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ ಮಧ್ಯೆ ಕಳೆದ ರಾತ್ರಿ ಜಗಳವಾಗಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಧರ್ಮಶೀಲನ್‌ ದುಬೈನಲ್ಲಿ ಪೆಂಟರ್‌ರಾಗಿ ಕೆಲಸಮಾಡುತ್ತಿದ್ದು, ಮಂಜು ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಒಂದು ತಿಂಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದು ಪ್ರೆಸ್‌‍ಲೇಔಟ್‌ನಲ್ಲಿ ದಂಪತಿ ವಾಸವಾಗಿದ್ದರು. ತಮಿಳುನಾಡು ಮೂಲದ ಧರ್ಮಶೀಲನ್‌ ವೃತ್ತಿಯಲ್ಲಿ ಪೆಂಟರ್‌ ಕೆಲಸ ಮಾಡುತ್ತಿದ್ದು, ಮದ್ಯವೆಸನಿಯಾಗಿದ್ದ. ಪದೆಪದೇ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಪತ್ನಿಗೆ ಮನಬಂದಂತೆ ಅನೇಕ ಬಾರಿ ಇರಿದು, ಕೊಲೆ ಮಾಡಿದ್ದಾನೆ. ನಂತರ ಆತನೂ ಸಹ ಅದೇ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾನೆ.ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಜ್ಞಾನಭಾರತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನೆರೆ ಸಂತ್ರಸ್ತರ ನಿರ್ಲಕ್ಷ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು,ಸೆ.29– ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.

ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ ಸೇರಿದಂತೆ ಮಳೆ ಪೀಡಿತ ಪ್ರದೇಶಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ನೇತೃತ್ವದ ಎರಡು ತಂಡ ಮಳೆ ಪೀಡಿತ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸಿ ಸರ್ಕಾರದ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದರು.

ಒಂದು ಕಡೆ ಮುಂಗಾರು ಅವಧಿ ಪೂರ್ಣಗೊಳ್ಳುತ್ತಿದ್ದು, ಇನ್ನೊಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಆದರೂ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಅನೇಕ ಕಡೆ ಸಾವುನೋವು ಉಂಟಾಗಿದೆ. ಕೆಲವು ಕಡೆ ಮನೆಗಳು ಕುಸಿದು ಬಿದ್ದಿದ್ದು ನೂರಾರು ಜನ ನಿರಾಶ್ರಿತರಾಗಿದ್ದಾರೆ. ಶಾಲೆಗಳು, ಅಂಗನವಾಡಿ ಕೇಂದ್ರಗಳು ಸಹ ಕುಸಿದು ಬಿದ್ದಿವೆ.

ಕನಿಷ್ಟಪಕ್ಷ ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸಂತ್ರಸ್ತರನ್ನು ಭೇಟಿ ಮಾಡಿ ಕಷ್ಟಸುಖ ವಿಚಾರಿಸಿಲ್ಲ. ಸರ್ಕಾರ ಗಾಢ ನಿದ್ರೆಯಲ್ಲಿದ್ದು, ಎಚ್ಚೆತ್ತುಕೊಳ್ಳುವ ಕೆಲಸವನ್ನು ಪ್ರತಿಪಕ್ಷ ಮಾಡುತ್ತದೆ ಎಂದು ಬಿಜೆಪಿ ಹೇಳಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸರ್ಕಾರ ಮಳೆ ಪೀಡಿತ ಪ್ರದೇಶಗಳನ್ನು ನಿರ್ಲಕ್ಷ್ಯ ಮಾಡಿದೆ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಜಿಲ್ಲಾಧಿಕಾರಿಗಳ ಖಜಾನೆಯಲ್ಲಿರುವ ಹಣವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ಕೊಡಬೇಕು. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ. ಎಲ್ಲದಕ್ಕೂ ಕೇಂದ್ರದ ಕಡೆ ಬೆರಳು ತೋರಿದರೆ ಸರ್ಕಾರ ದಿವಾಳಿಯಾಗಿದೆಯೇ ಎಂದು ಪ್ರಶ್ನೆ ಮಾಡಿದರು.

ಪ್ರವಾಸ ತಂಡಗಳು
ತಂಡ-1: ಬಿ.ವೈ.ವಿಜಯೇಂದ್ರ, ಮೇಲನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಸಂಸದ ಉಮೇಶ್‌ ಜಾಧವ್‌, ಮೇಲನೆ ಸದಸ್ಯೆ ಭಾರತಿ ಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ಎ.ಎಸ್‌‍. ಪಾಟೀಲ್‌ ನಡಹಳ್ಳಿ ಅವರು ಒಂದು ತಂಡವಾಗಿ ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್‌ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ತಂಡ-2: ಆರ್‌.ಅಶೋಕ್‌, ಜಗದೀಶ್‌ ಶೆಟ್ಟರ್‌, ಶಾಸಕರಾದ ಅರವಿಂದ ಬೆಲ್ಲದ್‌, ಸಿ.ಟಿ.ರವಿ, ಶಶಿಕಲಾ ಜೊಲ್ಲೆ, ಸಿದ್ದು ಸವದಿ, ಅಭಯ್‌ ಪಾಟೀಲ್‌, ಸಂಸದರಾದ ರಮೇಶ್‌ ಜಿಗಜಿಣಗಿ, ರಮೇಶ್‌ ಗದ್ದಿಗೌಡರ್‌ ಅವರ ತಂಡವು ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ, ವಿಜಯಪುರ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದೆ. ಮೇಲನೆ ವಿಪಕ್ಷ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಸಂಯೋಜಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಕನ್ನಡದ ಹೆಸರಾಂತ ನಾಟಕಕಾರ, ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ

ಬೆಂಗಳೂರು,ಸೆ.29- ಕನ್ನಡದ ಹೆಸರಾಂತ ನಾಟಕಕಾರ, ರಂಗಭೂಮಿ ಕಲಾವಿದ, ನಿದೇರ್ಶಕ ಹಾಗೂ ಉತ್ತರಕನ್ನಡದ ಆಡು ಭಾಷೆಯ ಮೂಲಕ ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಯಶವಂತ ಸರದೇಶಪಾಂಡೆ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ. ಮನೆಯಲ್ಲಿದ್ದ ಅವರಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು ತಕ್ಷಣವೇ ಕುಟುಂಬದ ಸದಸ್ಯರು ಪೋರ್ಟೀಸ್‌‍ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಮಾಲತಿ, ಪುತ್ರಿ ದೋಸ್ತಿಯನ್ನು ಅಗಲಿದ್ದಾರೆ. ಅವರಿಗೆ 61ವರ್ಷ ವಯಸ್ಸಾಗಿತ್ತು.

ಸರದೇಶಪಾಂಡೆ ಅವರ ನಿಧನದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಖ್ಯಾತ ಕನ್ನಡ ರಂಗಭೂಮಿ ನಟ, ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಅತ್ಯಂತ ಜನಪ್ರೀಯ ನಾಟಕಕಾರರಾಗಿದ್ದ ನಮ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆಲ್‌ ದಿ ಬೆಸ್ಟ್‌ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಇವರು ಪಾತ್ರವಹಿಸುತ್ತಿದ್ದರು ಎಂದು ಅವರು ಬರೆದುಕೊಂಡಿದ್ದಾರೆ.

ರಂಗ ಕಲಾವಿದ ಯಶವಂತ ಸರದೇಶಪಾಂಡೆ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. 1965 ಜೂನ್‌ 13ರಂದು ಶ್ರೀಧರರಾವ್‌ ಸೆರದೇಶಪಾಂಡೆ, ಕಲ್ಪನಾದೇವಿ ಅವರ ತಂದೆತಾಯಿಗಳು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೀಕಿನ ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪದವಿ ಹಾಗೂ ನ್ಯೂಯಾರ್ಕ್‌ ವಿಶ್ವವಿದ್ಯಾಯದಿಂದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದಿದ್ದರು.

ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್‌, ಮಿಡ್‌ಸಮರ್‌ ನೈಟ್‌್ಸಡ್ರೀಮ್‌, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ್ದಾರೆ. ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ ಇವರಿಗೆ ಸೇರುತ್ತದೆ.

ರೇಡಿಯೋ, ದೂರದರ್ಶನ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ ನಾಟಕಗಳ ನಿರ್ದೇಶಕ, ನಟ, ಆಲ್‌ ದಿ ಬೆಸ್ಟ್‌, ರಾಶಿ ಚಕ್ರ, ಸಹಿ ರೀ ಸಹಿ, ದಿಲ್‌ ಮಾಂಗೆ ಮೋರ್‌ ನಗೆ ನಾಟಕಗಳನ್ನು ತಿಳಿಹಾಸ್ಯದ ಜೊತೆಗೆ ಎಂ.ಟಿ.ಆರ್‌ ಸಹಯೋಗದೊಡನೆ ರಂಗ ಸಂಭ್ರಮದ ಕಾರ್ಯಕ್ರಮಗಳನ್ನು ಯೋಜಿಸಿದ್ದಾರೆ.

ರಾಶಿ ಚಕ್ರ ನಗೆ ನಾಟಕದಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುವ ಏಕವ್ಯಕ್ತಿ ಅಭಿನಯ, ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್‌, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯಿಸಿದ್ದರು.

ಸಿನಿಮಾದಲ್ಲೂ ಛಾಪು ಮೂಡಿಸಿದ್ದ ದೇಶಪಾಂಡೆ
ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್‌, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಸಹಿ ರೀ ಸಹಿ (ಮೂಲ:ಮರಾಠಿ) ಕಾಲಚಕ್ರ ಐಡಿಯಾ ಮಾಡ್ಯಾರ ಎಂಬ ಚಲನಚಿತ್ರ ನಿರ್ಮಾಣ, ರಾಮ ಶ್ಯಾಮ ಭಾಮ ಎಂಬ ಚಲನಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕಮಲಹಾಸನ್‌ ರ ಪಾತ್ರದಲ್ಲಿ ಉತ್ತರಕರ್ನಾಟಕದ ಆಡುಭಾಷೆಯನ್ನು ಆಡಿಸಿದ್ದಾರೆ.

ವಿದ್ಯಾಭ್ಯಾಸ:
ಹೆಗ್ಗೋಡು ನಿನಾಸಂ ರಂಗಭೂಮಿ ಸಂಸ್ಥೆಯಲ್ಲಿ ರಂಗಭೂಮಿ ಕಲೆಗಳಲ್ಲಿ ಡಿಪ್ಲೊಮಾ 1985-86 ನ್ಯೂಯಾರ್ಕ್‌ ವಿಶ್ವವಿದ್ಯಾಲಯ, 1996ರಲ್ಲಿ ಸಿನಿಮಾ ಮತ್ತು ನಾಟಕ ಬರವಣಿಗೆಯಲ್ಲಿ ಪ್ರಮಾಣಪತ್ರ ಕೋರ್ಸ್‌ ಪಡೆದಿದ್ದರು.

ಪ್ರಶಸ್ತಿಗಳು
ರಾಜ್ಯೋತ್ಸವ ಪ್ರಶಸ್ತಿ 2010 ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ, ಸನ್‌ಫೀಸ್ಟ್‌-ಉದಯ ಪ್ರಶಸ್ತಿ 2006 ಅತ್ಯುತ್ತಮ ಸಂಭಾಷಣೆಗಾಗಿ – ರಾಮ ಶಾಮ ಭಾಮ ಚಿತ್ರ, 2003 ರಲ್ಲಿ ಆರ್ಯಭಟ್ಟ ಪ್ರಶಸ್ತಿ, 2005 ರಲ್ಲಿ ಮಯೂರ್‌ ಪ್ರಶಸ್ತಿ, 2008 ರಲ್ಲಿ ಅಭಿನಯ ಭಾರತಿ ಪ್ರಶಸ್ತಿ, 2008 ರಲ್ಲಿ ರಂಗಧ್ರುವ ಪ್ರಶಸ್ತಿ, 2008 ರಲ್ಲಿ ಗ್ಲೋಬಲನ್‌ ಪ್ರಶಸ್ತಿಗಳು ಬಂದಿದ್ದವು.
ನಾಟಕಗಳು: ಜನಪ್ರಿಯ ರಂಗಕರ್ಮಿ, ಸಿರ್ದೇಶಪಾಂಡೆಯವರ ಬಹುತೇಕ ನಾಟಕಗಳು 500 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ ಮತ್ತು ಆಲ್‌ ದಿ ಬೆಸ್ಟ್‌ , ರಾಶಿಚಕ್ರ , ಒಲವೇ ಜೀವನ ಶಾಕ್ಷಾತ್ಕಾರ , ನೀನಾನಾದ್ರೆ ನಾನೀನೇನಾ , ಸಹಿ ರಿ ಸಹಿ , ಒಂದಾತ ಭಟ್ರು , ಅಂಧಾಯುಗ , ಸಾಹೇಬರು ಮಂದೆ ಡೋರ್‌ ಮಿಸ್ಸಿಂಗ್‌ , ಮಿಸ್ಸಿಂಗ್‌ ಮಂಡ್ರೆಡ್‌ ಡು ಹೆಚ್‌, ಮಿಸ್ಸಿಂಗ್‌ ಮಂಡ್ರೆಡ್‌ ಡೋರ್‌ ಕನ್ನಡ ನಾಟಕಗಳನ್ನು ಒಳಗೊಂಡಿದೆ.

2008 ರ ರಾಜ್ಯ ಚುನಾವಣೆಗಳ ಸಮಯದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಮತ್ತು ಪ್ರಣಾಳಿಕೆಯನ್ನು ಪ್ರಚಾರ ಮಾಡಲು ಸಿರ್ದೇಶ್‌ಪಾಂಡೆ ತಮ ನಾಟಕಗಳನ್ನು ಬಳಸಿದ್ದರು.

ಸಿನಿಮಾಗಳು:
ಸಿರ್ದೇಶಪಾಂಡೆ ಅವರು ಐಡಿಯಾ ಮಾಡ್ಯಾರ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದ್ದರು. ರಾಮ ಶಾಮ ಭಾಮ , ಮಠ , ಜೂಟಾಟಟ , ಧಿಮಾಕು , ಶ್ರೀ ದಾನಮದೇವಿ , ಸ್ಟೂಡೆಂಟ್‌ , ತುತ್ತೂರಿ ಮತ್ತು ಅತಿಥಿ ಚಿತ್ರಗಳಿಗೆ ತಮ ಚಿತ್ರಕಥೆಗಳನ್ನು ಬರೆಯುವ ಮೂಲಕ ಕೊಡುಗೆ ನೀಡಿದ್ದರು. ಅತಿಥಿ ಚಿತ್ರದ ಸಹ ನಿರ್ದೇಶಕರೂ ಆಗಿದ್ದರು. ಅವರು ಹಿಂದಿಯಲ್ಲಿ ಶಾದಿ ಕೆ ಆಫ್ಟರ್‌ ಎಫೆಕ್ಟ್‌್ಸ ಮತ್ತು ಮರಾಠಿಯಲ್ಲಿ ಆನ್‌ ಡ್ಯೂಟಿ ಚೋವಿಸ್ತಾಸ್‌‍ನಂತಹ ವಿವಿಧ ಭಾಷೆಗಳಲ್ಲಿ ಸಿನಿಮಾಗಳಿಗಾಗಿ ಕೆಲಸ ಮಾಡಿದ್ದರು. ತಮ ಹೊಸ ಯೋಜನೆಯಾದ ಹಾಡು ಹಕ್ಕಿ ಹಾಡು ಎಂಬ ಕನ್ನಡ ಚಲನಚಿತ್ರ ನಿರ್ಮಾಣದಲ್ಲಿ ನಿರತರಾಗಿದ್ದಾರೆ . ಅವರು ಪ್ರಸ್ತುತ ಮಕ್ಕಳ ಆಧಾರಿತ ಚಲನಚಿತ್ರ ವೆರಿ ಗುಡ್‌ ಚಿತ್ರೀಕರಣದಲ್ಲಿದ್ದರು.

ಅಡ್ಡ ಹೆಸರುಗಳು:
ಶಿವಮೊಗ್ಗ ರಂಗಭೂಮಿ ಪ್ರಿಯರಿಂದ ನಗೇಯ ಸರ್ದಾರ್‌, ಉಡುಪಿ ಮಣಿಪಾಲದ ಜನರಿಂದ ೞನಗೇ ನಾಟಕಗಳ ಬಾದ್‌ಶಾ, ಬಳ್ಳಾರಿ ಕಲಾ ಪ್ರಿಯರಿಂದ ೞನಗೇಗಡಲ ನಾವಿಕ ಕರ್ನಾಟಕ ಪತ್ರಿಕಾ ಮಾಧ್ಯಮದಿಂದ ರಂಗಭೂಮಿಯ ಸೂಪರ್‌ ಸ್ಟಾರ್‌ ಒಲಿತು ಬಂದಿತ್ತು.ಉತ್ತಮ ಸಂಭಾಷಣೆ ರಚನೆಗಾಗಿ ಸನ್‌ಫೀಸ್ಟ್‌ ಉದಯ ಟಿವಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮಯೂರ ಪ್ರಶಸ್ತಿ, ನಗೆ ಸರದಾರ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ.

ಏಷ್ಯಾ ಕಪ್‌ ವಿಜೇತ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ರೂ. ಬಹುಮಾನ

ನವದೆಹಲಿ, ಸೆ.30- ಏಷ್ಯಾ ಕಪ್‌ ವಿಜೇತ ಭಾರತೀಯ ಕ್ರಿಕೆಟ್‌ ತಂಡ ಮತ್ತು ಅದರ ಸಹಾಯಕ ಸಿಬ್ಬಂದಿಗೆ ಬಿಸಿಸಿಐ ರೂ. 21 ಕೋಟಿ ಬಹುಮಾನ ಮೊತ್ತವನ್ನು ನೀಡಲಿದೆ.
ಕಳೆದ ದುಬೈನಲ್ಲಿ ನಡೆದ ಪಂದ್ಯಾವಳಿಯ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ನಂತರ ಮಂಡಳಿಯು ತನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಈ ಘೋಷಣೆ ಮಾಡಿದೆ.

ಮೂರು ಹೊಡೆತಗಳು. 0 ಉಡುಗೊರೆ .ಏಷ್ಯಾ ಕಪ್‌ ಚಾಂಪಿಯನ್‌್ಸ ಸಂದೇಶ ರವಾನಿಸಲಾಗಿದೆ. ) ತಂಡ ಮತ್ತು ಸಹಾಯಕ ಸಿಬ್ಬಂದಿಗೆ 21 ಕೋಟಿ ಬಹುಮಾನ ಎಂದು ಮಂಡಳಿಯು ಪಾಕಿಸ್ತಾನ ವಿರುದ್ಧ ಭಾರತದ ಅಜೇಯ ಸರಣಿಯನ್ನು ಉಲ್ಲೇಖಿಸಿ ಪೋಸ್ಟ್‌ ಮಾಡಿದೆ.

ಆದಾಗ್ಯೂ, ನಿಧಿಯ ಹಂಚಿಕೆ ನಿಖರವಾದ ವಿವರಗಳನ್ನು ಸಂಸ್ಥೆ ನೀಡಿಲ್ಲ.ಅಜೇಯ ಚಾಂಪಿಯನ್‌ಗಳು. ಪಾಕ್‌ ವಿರುದ್ಧ 3-0 ಅಂತರದ ಪ್ರಾಬಲ್ಯ ಸಾಧಿಸಿದ ಟೀಮ್‌ ಇಂಡಿಯಾಗೆ ಅಭಿನಂದನೆಗಳು. ತಿಲಕ್‌ ವರ್ಮಾ ಮತ್ತು ಇತರ ತಂಡದ 18 ಆಟಗಾರರು ಅದ್ಭುತ ಪ್ರದರ್ಶನ. ಒತ್ತಡದ ನಡುವೆಯೂ ಉತ್ತಮ ಪ್ರದರ್ಶನ, ಎಂದು ಮಂಡಳಿಯ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಪೋಸ್ಟ್‌ ಮಾಡಿದ್ದಾರೆ.

ಪಾಕ್ ವಿರುದ್ಧ ಗೆಲುವು ತಂದುಕೊಟ್ಟ ತಿಲಕ್‌ ವರ್ಮಾ ಗುಣಗಾನ ಮಾಡಿದ ನಾಯ್ಡು ಮತ್ತು ಜಗನ್‌

ಅಮರಾವತಿ, ಸೆ. 29 (ಪಿಟಿಐ) ಏಷ್ಯಾ ಕಪ್‌ ಫೈನಲ್‌ನಲ್ಲಿ ಪಂದ್ಯ ಗೆಲ್ಲುವ ಪ್ರದರ್ಶನ ನೀಡಿದ ಭಾರತೀಯ ಕ್ರಿಕೆಟಿಗ ತಿಲಕ್‌ ವರ್ಮಾ ಅವರನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಮತ್ತು ವೈಎಸ್‌‍ಆರ್‌ಸಿಪಿ ಅಧ್ಯಕ್ಷ ವೈಎಸ್‌‍ ಜಗನ್‌ ಮೋಹನ್‌ ರೆಡ್ಡಿ ಅಭಿನಂದಿಸಿದ್ದಾರೆ.

ಸಾಂಪ್ರಾದಾಯಿಕ ಎದುರಾಳಿ ಪಾಕ್‌ ವಿರುದ್ಧ ಏಷ್ಯಾ ಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವರ್ಮಾ ಅವರ ಪ್ರತಿಭೆಯನ್ನು ಮುಖ್ಯಮಂತ್ರಿ ಶ್ಲಾಘಿಸಿದ್ದಾರೆ, ಅವರ ಅಸಾಧಾರಣ ಇನ್ನಿಂಗ್‌್ಸ ಪಾಕಿಸ್ತಾನದ ವಿರುದ್ಧ ಭಾರತವನ್ನು ಗೆಲುವಿನತ್ತ ಕೊಂಡಾಡಿದೆ ಎಂದು ಗುಣಗಾನ ಮಾಡಿದ್ದಾರೆ.

ಎಂತಹ ತಾರೆ! ನಮ್ಮ ತೆಲುಗು ಹುಡುಗ ತಿಲಕ್‌ ವರ್ಮಾ, ಪಂದ್ಯ ಗೆಲ್ಲುವ ಇನ್ನಿಂಗ್‌್ಸನೊಂದಿಗೆ ಮೈದಾನವನ್ನು ಸಂಪೂರ್ಣವಾಗಿ ಹೊಂದಿದ್ದಾರೆ. ಅವರ ಹಿಡಿತ ಮತ್ತು ಪ್ರತಿಭೆ ಸ್ಪೂರ್ತಿದಾಯಕವಾಗಿದೆ ಎಂದು ನಾಯ್ಡು ಎಕ್‌್ಸ ಮಾಡಿದ್ದಾರೆ.

ಈ ಪ್ರದರ್ಶನವು ತೆಲುಗು ಯುವಕರು ಹೊಂದಿರುವ ಬೆಂಕಿ ಮತ್ತು ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಶ್ಲಾಘಿಸಿದ್ದಾರೆ. ವರ್ಮಾ ತಮ್ಮ ಸಾಧನೆಯಿಂದ ಇಡೀ ರಾಜ್ಯವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ನಾಯ್ಡು ತಿಳಿಸಿದ್ದಾರೆ.

ಇದನ್ನೇ ಪ್ರತಿಧ್ವನಿಸುತ್ತಾ, ಪಾಕಿಸ್ತಾನದ ವಿರುದ್ಧದ ಏಷ್ಯಾ ಕಪ್‌ 2025 ರ ಫೈನಲ್‌ನಲ್ಲಿ ಗಮನಾರ್ಹ ಗೆಲುವಿಗಾಗಿ ಭಾರತ ತಂಡಕ್ಕೆ ರೆಡ್ಡಿ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಪಂದ್ಯಾವಳಿಯಾದ್ಯಂತ ವರ್ಮಾ ಅವರ ಸ್ಥಿರ ಪ್ರತಿಭೆಯನ್ನು ಶ್ಲಾಘಿಸಿದರು.ನಮ್ಮದೇ ತೆಲುಗು ತಾರೆ ತಿಲಕ್‌ ವರ್ಮಾ ಅವರಿಗೆ ವಿಶೇಷ ಗೌರವ ಮತ್ತು ಫೈನಲ್‌ನಲ್ಲಿ ಅವರ ನಿರ್ಣಾಯಕ ಪ್ರದರ್ಶನ ಮತ್ತು ಸ್ಥಿರವಾದ ಪ್ರತಿಭೆಗಾಗಿ ವಿಶೇಷ ಪ್ರಯತ್ನ. ನಿಜಕ್ಕೂ ಶ್ಲಾಘನೀಯ ಪ್ರಯತ್ನ ಎಂದು ರೆಡ್ಡಿ ತಿಳಿಸಿದ್ದಾರೆ.

ನಿಝಾಮ್ಸೌ ನಗರದ ಬಲಶಾಲಿ ಎಡಗೈ ಬೌಲರ್‌ ತಿಲಕ್‌ ವರ್ಮಾ, ನಿನ್ನೆ ದುಬೈನಲ್ಲಿ ನಡೆದ ರೋಮಾಂಚಕ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದ ನಂತರ ಭಾರತವನ್ನು ಒಂಬತ್ತನೇ ಏಷ್ಯಾ ಕಪ್‌ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಏಷ್ಯಾಕಪ್‌ನಿಂದ ಬರುವ ಹಣವನ್ನು ಸೇನೆಗೆ ಮತ್ತು ಪಹಲ್ಗಾಮ್‌ ದಾಳಿ ಸಂತ್ರಸ್ಥರಿಗೆ ನೀಡಿದ ಸೂರ್ಯ

ದುಬೈ, ಸೆ. 29 (ಪಿಟಿಐ) ಪಾಕ್‌ ವಿರುದ್ಧ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಗೆದ್ದಿರುವ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯದಿಂದ ಬರುವ ಲಾಭಾಂಶವನ್ನು ದೇಶದ ಸಶಸ್ತ್ರ ಪಡೆಗಳಿಗೆ ಮತ್ತು ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ದಾನ ಮಾಡಲು ಭಾರತ ಕ್ರಿಕೆಟ್‌ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ತೀರ್ಮಾನಿಸಿದ್ದಾರೆ.

ನಿನ್ನೆ ರಾತ್ರಿ ಇಲ್ಲಿ ನಡೆದ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತು.ನಮ್ಮ ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್‌ ಭಯೋತ್ಪಾದಕ ದಾಳಿಯಿಂದ ಬಳಲುತ್ತಿರುವ ಬಲಿಪಶುಗಳ ಕುಟುಂಬಗಳನ್ನು ಬೆಂಬಲಿಸಲು ಈ ಪಂದ್ಯಾವಳಿಯ ನನ್ನ ಪಂದ್ಯ ಶುಲ್ಕವನ್ನು ದಾನ ಮಾಡಲು ನಾನು ನಿರ್ಧರಿಸಿದ್ದೇನೆ ಎಂದು ಅವರು ಎಕ್‌್ಸ ಮಾಡಿದ್ದಾರೆ.

ನೀವು ಯಾವಾಗಲೂ ನನ್ನ ಆಲೋಚನೆಗಳಲ್ಲಿರುತ್ತೀರಿ. ಜೈ ಹಿಂದ್‌‍, ಎಂದು 35 ವರ್ಷದ ಆಟಗಾರ ಹೈ-ವೋಲ್ಟೇಜ್‌ ಗೆಲುವಿನ ನಂತರ ತಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಟಿ20 ಸ್ವರೂಪದಲ್ಲಿ ಭಾರತದ ಆಟಗಾರರು ಪ್ರತಿ ಪಂದ್ಯಕ್ಕೆ ನಾಲ್ಕು ಲಕ್ಷ ರೂ. ಪಡೆಯಲು ಅರ್ಹರು, ಅಂದರೆ ಸೂರ್ಯಕುಮಾರ್‌ ಕಾಂಟಿನೆಂಟಲ್‌ ಈವೆಂಟ್‌ನಲ್ಲಿ ಆಡಿದ ಏಳು ಪಂದ್ಯಗಳಿಗೆ ಒಟ್ಟು 28 ಲಕ್ಷ ರೂ. ದೇಣಿಗೆ ಪಡೆಯುತ್ತಾರೆ.ಭಾರತೀಯ ತಂಡವು ಇಡೀ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡದೊಂದಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳಲು ದೃಢವಾಗಿ ನಿರಾಕರಿಸಿತು.

ಏಷ್ಯಾ ಕಪ್‌ನಲ್ಲಿ ಸಲ್ಮಾನ್‌ ಅಲಿ ಅಘಾ ನೇತೃತ್ವದ ಪಾಕ್‌ ತಂಡವನ್ನು ಸೋಲಿಸುವಲ್ಲಿ ಭಾರತ ಕ್ರಿಕೆಟ್‌ ತಂಡ ಯಶಸ್ವಿಯಾಗಿದೆ. ಸೆಪ್ಟೆಂಬರ್‌ 14 ರಂದು ನಡೆದ ಗುಂಪು ಪಂದ್ಯದಲ್ಲಿ ತಮ್ಮ ತಂಡವು ಸಾಂಪ್ರದಾಯಿಕ ವೈರಿಗಳನ್ನು ಸೋಲಿಸಿದ ನಂತರ ಅವರು ಪಹಲ್ಗಾಮ್‌ ದಾಳಿಯ ಸಂತ್ರಸ್ತರಿಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಯಾದವ್‌ ಗೌರವ ಸಲ್ಲಿಸಿದರು.

ಇದರಿಂದ ಕೋಪಗೊಂಡ ಪಾಕಿಸ್ತಾನ ಅವರು ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿತು ಮತ್ತು ಐಸಿಸಿಗೆ ನೀಡಿದ ದೂರಿನಲ್ಲಿ ಅವರ ಮೇಲೆ ನಿಷೇಧ ಹೇರುವಂತೆ ಕೋರಿತ್ತು.ನಂತರ ವಿಶ್ವ ಸಂಸ್ಥೆಯು ರಾಜಕೀಯವಾಗಿ ಅರ್ಥೈಸಬಹುದಾದ ಯಾವುದೇ ಹೇಳಿಕೆ ನೀಡುವುದನ್ನು ತಡೆಯುವಂತೆ ಮತ್ತು ಆ ದಿನದ ಪಂದ್ಯ ಶುಲ್ಕದಲ್ಲಿ ಶೇ. 30 ರಷ್ಟು ದಂಡವನ್ನು ವಿಧಿಸುವಂತೆ ಕೇಳಿಕೊಂಡಿತು.ಕಳೆದ ವಾರ ಐಸಿಸಿ ವಿಚಾರಣೆಯ ಸಮಯದಲ್ಲಿ ಸೂರ್ಯಕುಮಾರ್‌ ತಪ್ಪಿತಸ್ಥನಲ್ಲ ಎಂದು ಒಪ್ಪಿಕೊಂಡ ನಂತರ ಬಿಸಿಸಿಐ ಅವರ ಮೇಲಿನ ದಂಡವನ್ನು ಪ್ರಶ್ನಿಸಿದೆ.

ಮಗುವನ್ನು ರಸ್ತೆ ಬದಿಯಲ್ಲಿ ಬಿಟ್ಟು ಅಣೆಕಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಂಪತಿ

ಭೂಪಾಲ್‌,ಸೆ.29- ಎರಡು ವರ್ಷದ ಮಗನನ್ನು ರಸ್ತೆಬದಿಯಲ್ಲಿ ಬಿಟ್ಟು ದಂಪತಿ ಅಣೆಕಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಲ್ತೈ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶುಭಮ್‌ ಕರ್ದಾತೆ (25) ಮತ್ತು ಅವರ ಪತ್ನಿ ರೋಶ್ನಿ (24) ಆತಹತ್ಯೆ ಮಾಡಿಕೊಂಡಿರುವ ದಂಪತಿ. ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಬುಕಾಖೇಡಿ ಅಣೆಕಟ್ಟೆಯಿಂದ ಜಿಗಿದು ಆತಹತ್ಯೆ ಮಾಡಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಇವರಿಬ್ಬರು ಪ್ರೇಮ ವಿವಾಹವಾಗಿದ್ದು, ಕೌಟುಂಬಿಕ ಕಲಹಗಳಿಂದ ಜಿಗುಪ್ಸೆಗೊಂಡಿದ್ದರು. ಬೆಳಗ್ಗೆ ಕೂಡ ಜಗಳವಾಡಿ ರೋಶ್ನಿ ಮಗುವಿನೊಂದಿಗೆ ಮನೆಯಿಂದ ಹೊರಹೋಗಿದ್ದಾರೆ. ಶುಭಮ್‌ ಆಕೆಯನ್ನೇ ಹಿಂಬಾಲಿಸಿ ಇಬ್ಬರೂ ಬುಕಾಖೇಡಿ ಅಣೆಕಟ್ಟೆ ಬಳಿ ಬಂದಿದ್ದಾರೆ.

ನಂತರ ಶುಭಮ್‌ ತನ್ನ ಮಾವ, ಹತನಾಪುರದ ಮುನ್ನಾ ಪರಿಹಾರ್‌ಗೆ ಕರೆ ಮಾಡಿ ಮಗುವನ್ನು ಕರೆದುಕೊಂಡು ಹೋಗಲು ಅಣೆಕಟ್ಟಿಗೆ ಬರುವಂತೆ ಹೇಳಿದ್ದಾರೆ.ಮೋಟಾರ್‌ ಸೈಕಲ್‌ನಲ್ಲಿ ಬಂದ ಮಾವ ಕೂಡಲೇ ದಂಪತಿಗಳು ಒಟ್ಟಿಗೆ ಅಣೆಕಟ್ಟಿಗೆ ಹಾರಿದ್ದಾರೆ. ಕೂಡಲೇ ಮಗುವನ್ನು ತನ್ನ ಆರೈಕೆಯಲ್ಲಿ ತೆಗೆದುಕೊಂಡು ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆ ತಂಡವು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಲ್ತೈ ಪೊಲೀಸ್‌‍ ಠಾಣೆಯ ಉಸ್ತುವಾರಿ ದೇವಕರನ್‌ ಡೆಹೆರಿಯಾ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲೊಂದು ಮರ್ಯಾದಾ ಹತ್ಯೆ

ಮುಜಫರ್‌ನಗರ, ಸೆ. 29 (ಪಿಟಿಐ) ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲೊಂದು ಮರ್ಯಾದಾ ಹತ್ಯಾ ಪ್ರಕರಣ ನಡೆದಿದೆ.ಕುಟುಂಬದ ಹೆಸರಿಕೆ ಕಳಂಕ ತಂದ ಆರೋಪದ ಮೇಲೆ ಅಪ್ರಾಪ್ತ 17 ವರ್ಷದ ಬಾಲಕಿಯನ್ನು ಆಕೆಯ ತಂದೆ ಮತ್ತು ಸಹೋದರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕಂಧ್ಲಾ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಅಂಬೆಹ್ತಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಎನ್‌ ಪಿ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

12 ನೇ ತರಗತಿಯ ವಿದ್ಯಾರ್ಥಿನಿ ಮುಸ್ಕಾನ್‌ ಎಂದು ಗುರುತಿಸಲಾದ ಸಂತ್ರಸ್ತೆಯನ್ನು ಆಕೆಯ ತಂದೆ ಜುಲ್ಫಾಮ್‌ ಮತ್ತು 15 ವರ್ಷದ ಸಹೋದರ ತಮ್ಮ ಮನೆಯ ಮೇಲಿನ ಮಹಡಿಗೆ ಕರೆದೊಯ್ದು, ಅಲ್ಲಿ ಆಕೆಯನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಸಿಂಗ್‌ ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಜುಲ್ಫಾಮ್‌ ಮತ್ತು ಅವರ ಅಪ್ರಾಪ್ತ ಮಗನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಎಸ್‌‍ಪಿ ಹೇಳಿದರು.
ಇಬ್ಬರನ್ನೂ ಬಂಧಿಸಲಾಗಿದೆ ಮತ್ತು ಅಪರಾಧದಲ್ಲಿ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.ಕುಟುಂಬದ ಹೆಸರಿಗೆ ಕಳಂಕ ತಂದಿದ್ದಕ್ಕಾಗಿ ತನ್ನ ಮಗಳನ್ನು ಕೊಂದಿದ್ದಾಗಿ ಆರೋಪಿ ತಂದೆ ಒಪ್ಪಿಕೊಂಡಿದ್ದಾನೆ ಎಂದು ಸಿಂಗ್‌ ಹೇಳಿದರು.

ಸ್ಥಳೀಯರ ಪ್ರಕಾರ, ಮುಸ್ಕಾನ್‌ ಆ ಪ್ರದೇಶದ ಹುಡುಗನೊಂದಿಗೆ ಸಂಬಂಧ ಹೊಂದಿದ್ದಳು, ಅದನ್ನು ಅವಳ ಕುಟುಂಬ ವಿರೋಧಿಸಿತು. ನಿನ್ನೆ ಸಂಜೆ, ಆಕೆಯ ತಂದೆ ಆಕೆ ಫೋನ್‌ನಲ್ಲಿ ಚಾಟ್‌ ಮಾಡುವುದನ್ನುನೋಡಿದಾಗ ಕೋಪಗೊಂಡು ಆಕೆಯ ಕೊಲೆ ಮಾಡಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ಹೇಳಿದರು.