Friday, November 7, 2025
Home Blog Page 85

ಸಾಹಿತ್ಯ ಭೀಷ್ಮನಿಗೆ ಕಂಬನಿ ಧಾರೆ, ನಾಳೆ ಚಾಮುಂಡಿ ತಪ್ಪಲಿನಲ್ಲಿ ಅಂತ್ಯಕ್ರಿಯೆ

ಬೆಂಗಳೂರು, ಸೆ.25-ಕನ್ನಡ ಸಾರಸ್ವತ ಲೋಕದ ದಿಗ್ಗಜ, ಮೇರು ಸಾಹಿತಿ, ಕಾದಂಬರಿ ಕಾರ , ಸರಸ್ವತಿ ಸಮಾನ್‌ ಪ್ರಶಸ್ತಿ ಪುರಸ್ಕೃತ, ಪದಭೂಷಣ ಡಾ. ಎಸ್‌‍.ಎಲ್‌.ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಅವರ ಅಪಾರ ಅಭಿಮಾನಿ ಬಳಗ, ಗಣ್ಯರು, ಸಾಹಿತಿಗಳು, ಕಲಾವಿದರು ಕಂಬನಿ ಮಿಡಿದರು.

ನಿನ್ನೆ ನಿಧನರಾದ ಭೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಾಹಿತ್ಯಾಭಿಮಾನಿಗಳು, ಓದುಗರು, ರಾಜಕೀಯ ಗಣ್ಯರು, ಕಲಾವಿದರು, ಹಿರಿ-ಕಿರುತೆರೆಯ ನಟ-ನಟಿಯರು ಆಗಮಿಸಿ ಅಗಲಿದ ಮೇರು ಸಾಹಿತಿಗೆ ಅಶ್ರುತರ್ಪಣ ಅರ್ಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿರಿಯ ನಟಿಯರಾದ ತಾರಾ ಅನುರಾಧ, ಮಾಳವಿಕಾ ಅವಿನಾಶ್‌, ದೂರದರ್ಶನ, ಆಕಾಶವಾಣಿ ಕಲಾವಿದರು, ಹಿರಿಯ ಪತ್ರಕರ್ತರು ಸೇರಿದಂತೆ ಬೃಹತ್‌ ಅಭಿಮಾನಿ ಬಳಗವೇ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಭೈರಪ್ಪನವರ ಕಾದಂಬರಿಗಳು, ಸಾಹಿತ್ಯದ ಬಗ್ಗೆ ಗುಣಗಾನ ಮಾಡುತ್ತಾ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು. ಭೈರಪ್ಪನವರು ತಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪರಿಯನ್ನು ತಮದೇ ಆದ ರೀತಿಯಲ್ಲಿ ಓದುಗರು ಬಣ್ಣಿಸಿದರು.

ಅವರ ತವರೂರಾದ ಹಾಸನ ಜಿಲ್ಲೆಯ ಸಂತೇಶಿವರ ಗ್ರಾಮದಿಂದಲೂ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ಜೊತೆಗೆ ಅವರು ಕಾರ್ಯನಿರ್ವಹಿಸಿದ ಮೈಸೂರು, ದೂರದ ದೆಹಲಿ ಸೇರಿದಂತೆ ವಿವಿಧೆಡೆಯಿಂದ ಸ್ನೇಹಿತರು, ಬಂಧು-ಬಾಂಧವರು ಆಗಮಿಸಿ ಅಗಲಿದ ಚೇತನಕ್ಕೆ ಕಂಬನಿ ಮಿಡಿದರು.

ಇಂದು ಮಧ್ಯಾಹ್ನದವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಮೈಸೂರಿಗೆ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಅಲ್ಲಿ ಸಂಜೆ ಕಲಾಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.ನಾಳೆ ರಾಜ್ಯ ಸರ್ಕಾರದ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪನವರ ಅಂತ್ಯಕ್ರಿಯೆ ನೆರವೇರಲಿದೆ.

ಭೈರಪ್ಪ ನಿಧನಕ್ಕೆ ದೇವೇಗೌಡರ ಸಂತಾಪ
ಬೆಂಗಳೂರು, ಸೆ.25- ಖ್ಯಾತ ಕಾದಂಬರಿಕಾರ ಎಸ್‌‍.ಎಲ್‌. ಭೈರಪ್ಪನವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್‌.ಡಿ.ಕುಮಾರ
ಸ್ವಾಮಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಸರಸ್ವತಿ ಸಮಾನ್‌ ಪುರಸ್ಕೃತರಾದ, ಪದಭೂಷಣ ಡಾ.ಎಸ್‌‍.ಎಲ್‌‍.ಭೈರಪ್ಪ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು ಎಂದು ದೇವೇಗೌಡರು ತಮ ಶೋಕ ಸಂದೇಶದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಉತ್ಕೃಷ್ಟ ಕಾದಂಬರಿಗಳನ್ನು ನೀಡಿ, ಲಕ್ಷಾಂತರ ಓದುಗರ ಮನಗೆದ್ದಿದ್ದ, ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ. ಮೃತರ ಆತಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ದೇವೇಗೌಡರು ಕಂಬನಿ ಮಿಡಿದಿದ್ದಾರೆ.

ಪ್ರಖ್ಯಾತ ಕಾದಂಬರಿಕಾರ ಎಸ್‌‍.ಎಲ್‌.ಭೈರಪ್ಪ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್‌‍.ಡಿ. ಕುಮಾರಸ್ವಾಮಿ ಅವರು, ಅವರ ಅಗಲಿಕೆಯಿಂದ ಬಹುದೊಡ್ಡ ಶೂನ್ಯ ಸೃಷ್ಟಿಯಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಪರ್ವ ಮತ್ತು ಉತ್ತರಕಾಂಡ ಕಾದಂಬರಿಗಳ ಮೂಲಕ ಮಹಾಭಾರತ ಹಾಗೂ ರಾಮಾಯಣವನ್ನು ನೋಡುವ ಮತ್ತು ಓದುವ ಕ್ರಮವನ್ನೇ ಬದಲಿಸಿದ ಅಭಿಜಾತ ಕಾದಂಬರಿಕಾರ ಸರಸ್ವತಿ ಸಮಾನ ಪುರಸ್ಕೃತರು, ಪದಭೂಷಣ ಎಸ್‌‍.ಎಲ್‌‍. ಭೈರಪ್ಪನವರು ನಿಧನರಾದರೆಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು ಎಂದು ಹೆಚ್‌ಡಿಕೆ ತಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಭೈರಪ್ಪನವರ ಕಾದಂಬರಿಗಳನ್ನು ನಾನು ನಿಕಟವಾಗಿ ಓದಿದ್ದೇನೆ. ಅವರ ಕಥನ ಶೈಲಿ, ಪಾತ್ರ ಸೃಷ್ಟಿಯ ಪ್ರತಿಭೆಗೆ ಮಾರು ಹೋಗಿದ್ದೇನೆ. ಅವರು ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದಲ್ಲೇ ಬರೆದ ಅಪ್ಪಟ ಭಾರತೀಯ ಕಾದಂಬರಿಕಾರರು. ಮೇಲಾಗಿ ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದ ಅಮರ ಪ್ರತಿಭೆ ಎಂಬ ಹೆಮೆ ನನ್ನದು. ಅವರ ಅಗಲಿಕೆಯಿಂದ ಬಹುದೊಡ್ಡ ಶೂನ್ಯ ಸೃಷ್ಟಿಯಾಗಿದೆ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಭೈರಪ್ಪನವರ ನಿಧನ ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಆತಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಲಂಕಾದಲ್ಲಿ ಭಾರತೀಯ ಸೇರಿದಂತೆ 7 ಬೌದ್ಧ ಸನ್ಯಾಸಿಗಳ ಸಾವು

ಕೊಲಂಬೊ, ಸೆ. 25 (ಪಿಟಿಐ) ವಾಯುವ್ಯ ಶ್ರೀಲಂಕಾದ ಅರಣ್ಯ ಮಠವೊಂದರಲ್ಲಿ ಕೇಬಲ್‌ ಚಾಲಿತ ರೈಲು ಬಂಡಿ ಉರುಳಿಬಿದ್ದ ಪರಿಣಾಮ ಭಾರತೀಯ ಪ್ರಜೆ ಸೇರಿದಂತೆ ಏಳು ಬೌದ್ಧ ಸನ್ಯಾಸಿಗಳು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.

ಕೊಲಂಬೊದಿಂದ ಸುಮಾರು 125 ಕಿ.ಮೀ ದೂರದಲ್ಲಿರುವ ನಿಕಾವೆರಾಟಿಯಾದಲ್ಲಿರುವ ಪ್ರಸಿದ್ಧ ಬೌದ್ಧ ಮಠವಾದ ನಾ ಉಯನ ಅರಣ್ಯ ಸೇನಾಸನಯದಲ್ಲಿ ರಾತ್ರಿ ಈ ಘಟನೆ ಸಂಭವಿಸಿದೆ.
ಈ ಮಠವು ಧ್ಯಾನ ಕೇಂದ್ರಗಳಿಗೆ ಹೆಸರುವಾಸಿಯಾಗಿದೆ ಮತ್ತು ಪ್ರಪಂಚದಾದ್ಯಂತದ ಸಾಧಕರನ್ನು ಆಕರ್ಷಿಸುತ್ತದೆ.

ಮೃತ ಏಳು ಸನ್ಯಾಸಿಗಳಲ್ಲಿ ಒಬ್ಬ ಭಾರತೀಯ, ಒಬ್ಬ ರಷ್ಯನ್‌ ಮತ್ತು ಒಬ್ಬ ರೊಮೇನಿಯನ್‌ ಪ್ರಜೆ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಗಾಯಗೊಂಡ ಆರು ಜನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು.

ಪ್ಯಾಲೆಸ್ತಾನ್‌ ವಿಷಯದಲ್ಲಿ ಭಾರತ ನಾಯಕತ್ವ ಪ್ರದರ್ಶಿಸಬೇಕು ; ಸೋನಿಯಾ ಗಾಂಧಿ

ನವದೆಹಲಿ, ಸೆ. 25 (ಪಿಟಿಐ) ಪ್ಯಾಲೆಸ್ತಾನ್‌ ವಿಷಯದಲ್ಲಿ ಭಾರತ ನಾಯಕತ್ವವನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಕಾಂಗ್ರೆಸ್‌‍ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೋದಿ ಸರ್ಕಾರದ ನಿಲುವನ್ನು ಟೀಕಿಸಿದ್ದಾರೆ.

ಸರ್ಕಾರದ ಕ್ರಮಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ಇಸ್ರೇಲ್‌ ಪ್ರತಿರೂಪ ಬೆಂಜಮಿನ್‌ ನೆತನ್ಯಾಹು ನಡುವಿನ ವೈಯಕ್ತಿಕ ಸ್ನೇಹದಿಂದ ಮತ್ತು ಭಾರತದ ಸಾಂವಿಧಾನಿಕ ಮೌಲ್ಯಗಳು ಅಥವಾ ಅದರ ಕಾರ್ಯತಂತ್ರದ ಹಿತಾಸಕ್ತಿಗಳಿಂದ ನಡೆಸಲ್ಪಡುತ್ತಿರುವಂತೆ ತೋರುತ್ತದೆ ಎಂದು ಅವರು ಹೇಳಿದರು.

ಈ ರೀತಿಯ ವೈಯಕ್ತಿಕಗೊಳಿಸಿದ ರಾಜತಾಂತ್ರಿಕತೆಯು ಎಂದಿಗೂ ಸಮರ್ಥನೀಯವಲ್ಲ ಮತ್ತು ಭಾರತದ ವಿದೇಶಾಂಗ ನೀತಿಯ ಮಾರ್ಗದರ್ಶಿ ದಿಕ್ಸೂಚಿಯಾಗಲು ಸಾಧ್ಯವಿಲ್ಲ. ಪ್ರಪಂಚದ ಇತರ ಭಾಗಗಳಲ್ಲಿ, ವಿಶೇಷವಾಗಿ ಯುನೈಟೆಡ್‌ ಸ್ಟೇಟ್‌್ಸನಲ್ಲಿ? ಇದನ್ನು ಮಾಡಲು ಮಾಡಿದ ಪ್ರಯತ್ನಗಳು ಇತ್ತೀಚಿನ ತಿಂಗಳುಗಳಲ್ಲಿ ಅತ್ಯಂತ ನೋವಿನ ಮತ್ತು ಅವಮಾನಕರ ರೀತಿಯಲ್ಲಿ ವಿಫಲವಾಗಿವೆ ಎಂದು ಅವರು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ರಾಷ್ಟ್ರೀಯ ದಿನಪತ್ರಿಕೆಯಲ್ಲಿ ಪ್ರಕಟವಾದ ಇಸ್ರೇಲ್‌‍-ಪ್ಯಾಲೆಸ್ತಾನ್‌ ಸಂಘರ್ಷದ ಕುರಿತು ಗಾಂಧಿಯವರ ಮೂರನೇ ಲೇಖನ ಇದಾಗಿದ್ದು, ಈ ವಿಷಯದ ಬಗ್ಗೆ ಮೋದಿ ಸರ್ಕಾರದ ನಿಲುವನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ.

ವಿಶ್ವ ವೇದಿಕೆಯಲ್ಲಿ ಭಾರತದ ಸ್ಥಾನವನ್ನು ಒಬ್ಬ ವ್ಯಕ್ತಿಯ ವೈಯಕ್ತಿಕ ವೈಭವವನ್ನು ಹುಡುಕುವ ಮಾರ್ಗಗಳಲ್ಲಿ ಸುತ್ತುವರಿಯಲಾಗುವುದಿಲ್ಲ, ಅಥವಾ ಅದು ತನ್ನ ಐತಿಹಾಸಿಕ ಪ್ರಶಸ್ತಿಗಳ ಮೇಲೆ ಅವಲಂಬಿತವಾಗಿಲ್ಲ. ಇದು ನಿರಂತರ ಧೈರ್ಯ ಮತ್ತು ಐತಿಹಾಸಿಕ ನಿರಂತರತೆಯ ಪ್ರಜ್ಞೆಯನ್ನು ಬಯಸುತ್ತದೆ ಎಂದು ಅವರು ಭಾರತದ ಮೌನ ಧ್ವನಿ, ಪ್ಯಾಲೆಸ್ತಾನ್‌ನೊಂದಿಗಿನ ಅದರ ಬೇರ್ಪಡುವಿಕೆ ಎಂಬ ಶೀರ್ಷಿಕೆಯ ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ದೀರ್ಘಕಾಲದ ಪ್ಯಾಲೆಸ್ತಾನಿ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಈಡೇರಿಸುವ ಮೊದಲ ಹೆಜ್ಜೆ.ವಿಶ್ವಸಂಸ್ಥೆಯ ಸದಸ್ಯರಾಗಿರುವ 193 ದೇಶಗಳಲ್ಲಿ 150 ಕ್ಕೂ ಹೆಚ್ಚು ದೇಶಗಳು ಈಗ ಹಾಗೆ ಮಾಡಿವೆ ಎಂದು ಅವರು ಹೇಳಿದರು.ಪ್ಯಾಲೆಸ್ಟೈನ್‌ ವಿಮೋಚನಾ ಸಂಸ್ಥೆಗೆ ವರ್ಷಗಳ ಬೆಂಬಲದ ನಂತರ, ನವೆಂಬರ್‌ 18, 1988 ರಂದು ಪ್ಯಾಲೆಸ್ಥಾನ್‌ಗೆ ರಾಜ್ಯತ್ವವನ್ನು ಔಪಚಾರಿಕವಾಗಿ ಗುರುತಿಸುವ ಮೂಲಕ ಭಾರತವು ಈ ವಿಷಯದಲ್ಲಿ ನಾಯಕನಾಗಿತ್ತು ಎಂದು ಗಾಂಧಿಯವರು ಒತ್ತಿ ಹೇಳಿದರು.

1971 ರಲ್ಲಿ, ಭಾರತವು ಪೂರ್ವ ಪಾಕಿಸ್ತಾನದಲ್ಲಿ ನರಮೇಧವನ್ನು ತಡೆಯಲು ದೃಢವಾಗಿ ಮಧ್ಯಪ್ರವೇಶಿಸಿತು, ಆಧುನಿಕ ಬಾಂಗ್ಲಾದೇಶದ ಜನನದ ಮಧ್ಯದಲ್ಲಿ ಎಂದು ಅವರು ಗಮನಸೆಳೆದರು.ಇಸ್ರೇಲ್‌‍-ಪ್ಯಾಲೆಸ್ತಾನ್‌ನ ನಿರ್ಣಾಯಕ ಮತ್ತು ಸೂಕ್ಷ್ಮ ವಿಷಯದ ಬಗ್ಗೆಯೂ ಸಹ, ಭಾರತವು ಬಹಳ ಹಿಂದಿನಿಂದಲೂ ಸೂಕ್ಷ್ಮ ಆದರೆ ತತ್ವಬದ್ಧ ಸ್ಥಾನವನ್ನು ಕಾಯ್ದುಕೊಂಡಿದೆ, ಶಾಂತಿ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ತನ್ನ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಮಾಜಿ ಕಾಂಗ್ರೆಸ್‌‍ ಮುಖ್ಯಸ್ಥರು ಹೇಳಿದರು.

ಅಮೆರಿಕದ ಫ್ರೀಮಾಂಟ್‌ನಲ್ಲಿ ಲೈಂಗಿಕ ಅಪರಾಧಿಯನ್ನು ಕೊಂದ ಭಾರತೀಯ

ಕ್ಯಾಲಿಫೋರ್ನಿಯಾ, ಸೆ.25– ಅಮೆರಿಕದ ಫ್ರೀಮಾಂಟ್‌ನಲ್ಲಿ 71 ವರ್ಷದ ನೋಂದಾಯಿತ ಲೈಂಗಿಕ ಅಪರಾಧಿ ಡೇವಿಡ್‌ ಬ್ರಿಮ್ಮರ್‌ನನ್ನು ಇರಿದು ಕೊಂದ ಆರೋಪದ ಮೇಲೆ 29 ವರ್ಷದ ಭಾರತೀಯ ಮೂಲದ ವರುಣ್‌ ಸುರೇಶ್‌ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.

ಈ ದಾಳಿಯನ್ನು ಗುರಿ ಎಂದು ವಿವರಿಸಿದ ಪೊಲೀಸರು, ಸುರೇಶ್‌ನನ್ನು ಸ್ಥಳದಲ್ಲೇ ಬಂಧಿಸಿದರು, ಅಲ್ಲಿ ಅವರಿಂದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಬ್ರಿಮ್ಮರ್‌ ತುರ್ತು ಚಿಕಿತ್ಸೆ ಪಡೆದಿದ್ದರೂ ಬಹು ಇರಿತದ ಗಾಯಗಳಿಂದ ಸಾವನ್ನಪ್ಪಿದ್ದಾನೆ ಎಂದು ಇಂಡಿಪೆಂಡೆಂಟ್‌ ವರದಿ ಮಾಡಿದೆ.’

ಇಲ್ಲಿ ಬಿಡುಗಡೆಯಾದ ನ್ಯಾಯಾಲಯದ ದಾಖಲೆಗಳ ಪ್ರಕಾರ, ವರುಣ್‌ ಸುರೇಶ್‌ ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದು, ಅವರು ಮಕ್ಕಳನ್ನು ನೋಯಿಸುತ್ತಾರೆ ಮತ್ತು ಸಾಯಲು ಅರ್ಹರು ಎಂದು ಹೇಳುತ್ತಾ, ಆಪಾದಿತ ಕೊಲೆಗೆ ತನ್ನ ಸಮರ್ಥನೆಯನ್ನು ಒದಗಿಸುತ್ತಾ, ಲೈಂಗಿಕ ಅಪರಾಧಿಯನ್ನು ಕೊಲ್ಲಲು ತಾನು ಬಹಳ ದಿನಗಳಿಂದ ಬಯಸಿದ್ದೆ ಎಂದು ಹೇಳಿದ್ದಾರೆ.

1995 ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕಾಗಿ ಒಂಬತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ನೋಂದಾಯಿತ ಲೈಂಗಿಕ ಅಪರಾಧಿ ಡೇವಿಡ್‌ ಬ್ರಿಮ್ಮರ್‌ ಅವರನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಸುರೇಶ್‌ ಕ್ಯಾಲಿಫೋರ್ನಿಯಾದ ಮೇಗನ್‌ ಕಾನೂನು ಡೇಟಾಬೇಸ್‌‍ ಅನ್ನು ಬಳಸಿದ್ದಾರೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ದಾಳಿಯ ಮೊದಲು ಸುರೇಶ್‌ ಮತ್ತು ಬ್ರಿಮ್ಮರ್‌ಗೆ ಯಾವುದೇ ವೈಯಕ್ತಿಕ ಸಂಬಂಧವಿರಲಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದರು.ದಾಳಿಯ ದಿನದಂದು, ಸುರೇಶ್‌ ಚಾಕುವಿನಿಂದ ಶಸ್ತ್ರಸಜ್ಜಿತನಾಗಿ, ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಪತ್ರಗಾರನಂತೆ ನಟಿಸಿ, ಮನೆ ಮನೆಗೆ ಗ್ರಾಹಕರನ್ನು ಆಹ್ವಾನಿಸುತ್ತಾ, ಬ್ಯಾಗ್‌, ನೋಟ್‌ಬುಕ್‌ ಮತ್ತು ಕಾಫಿಯನ್ನು ಹಿಡಿದುಕೊಂಡು ಹೋಗುತ್ತಿದ್ದ. ಡೇವಿಡ್‌ ಬ್ರಿಮ್ಮರ್‌ ಅವರ ಮನೆಯನ್ನು ತಲುಪಿದ ನಂತರ, ಅವರು ತಮ್ಮ ಗುರುತನ್ನು ದೃಢಪಡಿಸಿದರು, ಅವರ ಕೈ ಕುಲುಕಿದರು ಮತ್ತು ನನಗೆ ಸರಿಯಾದ ವ್ಯಕ್ತಿ ಇದ್ದಾನೆ ಎಂದು ನನಗೆ ತಿಳಿದಿತ್ತು ಎಂದು ಹೇಳಿದ್ದರು.

ಬ್ರಿಮ್ಮರ್‌ ಓಡಿಹೋದಾಗ, ಸಹಾಯಕ್ಕಾಗಿ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ವಿಫಲವಾದಾಗ, ಅವರು ನೆರೆಯವರ ಗ್ಯಾರೇಜ್‌ ಮತ್ತು ಅಡುಗೆಮನೆಗೆ ಎರಡು ಬ್ಲಾಕ್‌ಗಳನ್ನು ಓಡಿದರೂ ಸುರೇಶ್‌ ಅವರನ್ನು ಹಿಂಬಾಲಿಸಿ, ಪಶ್ಚಾತ್ತಾಪ ಪಡುವಂತೆ ಹೇಳುತ್ತಾ ಅವರ ಕುತ್ತಿಗೆಗೆ ಇರಿದ ಮತ್ತು ಬ್ರಿಮ್ಮರ್‌ ತೆವಳಲು ಪ್ರಯತ್ನಿಸಿದಾಗ, ಅವರ ಗಂಟಲು ಸೀಳಿದರು. ತನಿಖಾಧಿಕಾರಿಗಳು ಬ್ರಿಮ್ಮರ್‌ ಅವರ ಫೋನ್‌ನಲ್ಲಿ ಕ್ಯಾಲಿಫೋರ್ನಿಯಾದ ಮೇಗನ್‌ ಕಾನೂನು ವೆಬ್‌ಸೈಟ್‌ನಿಂದ ಬಹು ಪ್ರೊಫೈಲ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಕಂಡುಕೊಂಡರು, ಅದರಲ್ಲಿ ಬ್ರಿಮ್ಮರ್‌ ಕೂಡ ಸೇರಿದ್ದಾರೆ.

ಪತ್ನಿ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ

ಯಾದಗಿರಿ,ಸೆ.25-ಪತ್ನಿಯ ಶೀಲ ಶಂಕಿಸಿ ಇಬ್ಬರು ಕಂದಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ಗ್ರಾಮಾಂತರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಸಾನ್ವಿ (5) ಮತ್ತು ಭರತ್‌ (3) ತಂದೆಯ ಕೋಪಕ್ಕೆ ಬಲಿಯಾದ ಮುಗ್ಧ ಮಕ್ಕಳು.

ಶರಣಪ್ಪ ಎಂಬಾತ ಪತ್ನಿಯ ಶೀಲ ಶಂಕಿಸಿ ವಿನಾಕಾರಣ ಜಗಳವಾಡುತ್ತಿದ್ದನು. ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನು. ಹಾಗಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು.

ರಾತ್ರಿ ಸಹ ಶರಣಪ್ಪ ಪತ್ನಿ ಜೊತೆ ಜಗಳವಾಡಿದ್ದಾನೆ. ಇಂದು ಬೆಳಗಿನ ಜಾವ 6 ಗಂಟೆ ಸುಮಾರಿನಲ್ಲಿ ಪತ್ನಿ ಬಹಿರ್ದೆಸೆಗೆ ಹೋಗಿದ್ದಾಗ, ಕೋಪದ ಕೈಗೆ ಬುದ್ದಿ ಕೊಟ್ಟು ಮಲಗಿದ್ದ ತನ್ನ ಪುಟ್ಟ-ಪುಟ್ಟ ಮೂವರು ಮಕ್ಕಳ ಮೇಲೆ ಕೊಡಲಿಯಿಂದ ಮನಬಂದಂತೆ ಹೊಡೆದು ಕೊಡಲಿ ಸಮೇತ ಪರಾರಿಯಾಗಿದ್ದಾನೆ.

ಕೊಡಲಿ ಏಟಿನಿಂದ ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಮಗ ಹೇಮಂತ್‌ (8) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅಪ್ಪ-ಅಮನ ಜಗಳದಲ್ಲಿ ಏನೂ ಅರಿಯದ ಕಂದಮಗಳು ಪ್ರಾಣ ಕಳೆದುಕೊಂಡಿರುವುದು ದುರ್ದೈವ.

ಈ ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್‌‍ಪಿ ಹಾಗೂ ಪಿಎಸ್‌‍ಐ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶರಣಪ್ಪನ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

ಅನೇಕ ಅಡೆತಡೆಗಳ ಬಳಿಕ ಕ್ರಮೇಣ ಚುರುಕುಗೊಳ್ಳುತ್ತಿದೆ ಜಾತಿ ಸಮೀಕ್ಷೆ

ಬೆಂಗಳೂರು, ಸೆ.25– ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಂತ ಹಂತವಾಗಿ ಚುರುಕುಗೊಳ್ಳುತ್ತಿದೆ. ಸರ್ವರ್‌ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಇಂದು ಸಂಜೆಯ ಒಳಗೆ ಇತ್ಯರ್ಥವಾಗಲಿವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ದಿನವಾದ ನಿನ್ನೆ 71 ಸಾವಿರ ಜನರ ಸಮೀಕ್ಷೆಯಾಗಿತ್ತು. ಇಂದು ಬೆಳಗ್ಗೆ ಮಾಹಿತಿ ತೆಗೆದುಕೊಂಡಾಗ ಎರಡು ಮೂರು ಗಂಟೆಯಲ್ಲೇ 1.93 ಲಕ್ಷ ಜನರ ಸಮೀಕ್ಷೆಯಾಗಿದೆ. ಪ್ರತಿ ದಿನ ಸರಾಸರಿ 10 ಲಕ್ಷ ಜನರ ಸಮೀಕ್ಷೆ ನಡೆಸುವ ಗುರಿಯಿದೆ ಎಂದು ಹೇಳಿದರು.

ಸರ್ವರ್‌ನ ನಿಧಾನಗತಿಯ ಸಮಸ್ಯೆ ಇದ್ದು, ಅದನ್ನು ಸರಿಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಬಹುತೇಕ ಎಲ್ಲಾ ತೊಂದರೆಗಳು ನಿವಾರಣೆಯಾಗಲಿವೆ ಎಂದರು.
ಕಟ್ಟಕಡೆಯ ಮನುಷ್ಯನಿಗೂ ಸೌಲಭ್ಯ ಒದಗಿಸಬೇಕೆಂಬ ಉದ್ದೇಶದಿಂದ ಸರ್ಕಾರ ಸಮೀಕ್ಷೆ ಮಾಡುತ್ತಿದೆ. ಇದು ಜಾತಿ ಜನಗಣತಿ ಅಲ್ಲ. ಸಮೀಕ್ಷೆಗಾಗಿ ಸಿದ್ಧಪಡಿಸಿರುವ 60 ಪ್ರಶ್ನೆಗಳಲ್ಲಿ ಜಾತಿಯೂ ಒಂದು. ಉಳಿದ 59 ಪ್ರಶ್ನೆಗಳ ಬಗ್ಗೆ ಏಕೆ ಚರ್ಚೆಯಾಗುತ್ತಿಲ್ಲ? ಎಂದು ಅವರು ಮರು ಪ್ರಶ್ನಿಸಿದರು.

ವಿರೋಧ ಪಕ್ಷಗಳಿಗೆ ಚರ್ಚೆ ಮಾಡಲು ಯಾವುದೇ ವಿಚಾರಗಳಿಲ್ಲ. ರಾಜ್ಯದಲ್ಲಿ ಎರಡೂವರೆ ವರ್ಷ ಕಾಂಗ್ರೆಸ್‌‍ ಆಡಳಿತದಲ್ಲಿ ಜನ ಸಮೃದ್ಧಿಯಾಗಿದ್ದಾರೆ, ಕಾಂಗ್ರೆಸ್‌‍ ಪರವಾದ ಒಲವು ಹೊಂದಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯಶಸ್ವಿಯಾಗಿ ಅದರಿಂದ ಮತ್ತಷ್ಟು ಸೌಲಭ್ಯಗಳು ಸಿಕ್ಕರೆ, ಜನ ಕಾಂಗ್ರೆಸ್‌‍ನತ್ತ ವಾಲುತ್ತಾರೆ ಎಂಬ ಆತಂಕದಿಂದ ಬಿಜೆಪಿಯವರು ದಿನ ಬೆಳಗಾದರೆ ಸಮೀಕ್ಷೆಯನ್ನು ಟೀಕಿಸಲಾರಂಭಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಸಮೀಕ್ಷೆಯ ಮಾದರಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಯಥಾಸ್ಥಿತಿಯಲ್ಲಿ ನಡೆಯುತ್ತಿದೆ. 1561 ಜಾತಿಗಳನ್ನು ಕ್ರೋಢಿಕರಿಸಿದ್ದು, ಸ್ವಯಂ ಪ್ರೇರಿತ ಅಲ್ಲ. ಈ ಹಿಂದೆ ಕಾಂತರಾಜು ಆಯೋಗದ ಸಮೀಕ್ಷೆಯಲ್ಲೇ ಧರ್ಮ ಹಾಗೂ ಉಪ ಜಾತಿಗಳ ಮಾಹಿತಿ ಇತ್ತು ಎಂದು ಹೇಳಿದರು.

ಆರಂಭಿಕ ಹಂತದಲ್ಲಿ ಒಂದಿಷ್ಟು ಸಮಸ್ಯೆಗಳಿದ್ದವು. ಎಲ್ಲವನ್ನೂ ಸರಿಪಡಿಸಲಾಗುತ್ತಿದೆ. ಈಗ ಸಮೀಕ್ಷೆ ಸುಲಲಿತವಾಗಿ ನಡೆಯುತ್ತಿದೆ. ಅ.7ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಒಂದು ವೇಳೆ ನಿಗದಿತ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ಆ ಸಂದರ್ಭದಲ್ಲಿ ಕಾಲಾವಧಿಯ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚೆ ನಡೆಸಲಾಗುವುದು ಎಂದರು.

ಸಚಿವ ಸಂಪುಟಸಭೆಯಲ್ಲಿ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುವುದು ತಪ್ಪು ಮಾಹಿತಿ. ಸಮೀಕ್ಷೆ ನಡೆಯಬೇಕು ಎಂದು ಎಲ್ಲರೂ ಒಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಕೆಲವರು ಸಲಹೆ ನೀಡಿದ್ದಾರೆ. ಅದನ್ನು ಆಯೋಗ ಪರಿಗಣಿಸಲಿದೆ ಎಂದರು. ಜಿಎಸ್‌‍ಟಿ ವಿಚಾರವಾಗಿ ಕೇಂದ್ರದ ನಡವಳಿಕೆ ಹಾಸ್ಯಾಸ್ಪದ ಮತ್ತು ಅಸಹ್ಯಕರವಾಗಿದೆ. ಈ ಮೊದಲು ತೆರಿಗೆಯನ್ನು ದುಬಾರಿಯಾಗಿ ಹೆಚ್ಚಿಸಿ, ಅನಂತರ ಕಡಿಮೆ ಮಾಡುವುದು, ಅದನ್ನು ಉಳಿತಾಯ ಉತ್ಸವ ಎಂದು ಆಚರಿಸುವುದು ಹಾಸ್ಯಸ್ಪದ ಎಂದು ತಿರುಗೇಟು ನೀಡಿದರು.

ಗೃಹಜ್ಯೋತಿ ಫಲಾನುಭವಿಗಳ ಸಂಖ್ಯೆ ಕಡಿತಕ್ಕೆ ಗ್ಯಾರಂಟಿ ಸರ್ಕಾರ ಷಡ್ಯಂತ್ರ : ಆರ್‌.ಆಶೋಕ್‌ ಆರೋಪ

ಬೆಂಗಳೂರು,ಸೆ.25- ಗೃಹಜ್ಯೋತಿ ಫಲಾನುಭವಿಗಳ ಸಂಖ್ಯೆ ಕಡಿತಕ್ಕೆ ಕಾಂಗ್ರೆಸ್‌‍ ಸರ್ಕಾರದ ಷಡ್ಯಂತ್ರ ನಡೆಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಆಶೋಕ್‌ ಅರೋಪಿಸಿದ್ದಾರೆ.

ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡುವ ಮೂಲಕ ಬಡವರ ಅನ್ನಭಾಗ್ಯಕ್ಕೆ ಕತ್ತರಿ ಹಾಕುತ್ತಿರುವ ಕಾಂಗ್ರೆಸ್‌‍ ಸರ್ಕಾರ ಈಗ 30 ದಿನಗಳ ಬದಲಾಗಿ, 40 ದಿನಗಳಿಗೆ ವಿದ್ಯುತ್‌ ಮೀಟರ್‌ ರೀಡಿಂಗ್‌ ತೆಗೆದುಕೊಳ್ಳುವ ಮೂಲಕ ಫಲಾನುಭವಿಗಳ ವಿದ್ಯುತ್‌ ಬಳಕೆಯ ಸರಾಸರಿ ಮಿತಿ ಏರಿಸಿ, ಗೃಹಿಜ್ಯೋತಿ ಯೋಜನೆಯಿಂದ ಅನರ್ಹಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್‌‍ ಸರ್ಕಾರ ಈಗ ಒಂದೊಂದೇ ಗ್ಯಾರೆಂಟಿ ಯೋಜನೆಯನ್ನು ಹಿಂಬಾಗಿಲ ಮೂಲಕ ಬಂದ್‌ ಮಾಡಲು ಹೊರಟಿದೆ ಎಂದು ಆರೋಪ ಮಾಡಿದ್ದಾರೆ.

ಏಷ್ಯಾ ಕಪ್‌ ಪಂದ್ಯದ ವೇಳೆ ಪ್ರಚೋದನಕಾರಿ ವರ್ತನೆ ತೋರಿದ ಪಾಕ್ ಕ್ರಿಕೆಟಿಗರ ವಿರುದ್ಧ ಐಸಿಸಿಗೆ ದೂರು

ನವದೆಹಲಿ,ಸೆ.25– ಕಳೆದ ಭಾನುವಾರ ನಡೆದಿದ್ದ ಏಷ್ಯಾ ಕಪ್‌ ಸೂಪರ್‌ ಪಂದ್ಯದ ವೇಳೆ ಉದ್ಧಟತನ ಮೆರೆದಿದ್ದ ಪಾಕಿಸ್ತಾನ ಕ್ರಿಕೆಟಿಗರಾದ ಸಾಹಿಬ್ಝಾದ ಫರ್ಹಾನ್‌ ಮತ್ತು ಹ್ಯಾರಿಸ್‌‍ ರೌಫ್‌‍ಅವರ ಪ್ರಚೋದನಕಾರಿ ವರ್ತನೆಗಾಗಿ ಭಾರತವು ಐಸಿಸಿಗೆ ಅಧಿಕೃತ ದೂರು ನೀಡಿದೆ. ಬಿಸಿಸಿಐ ಮತ್ತು ಐಸಿಸಿಗೆ ಭಾರತವು ಎರಡು ಸಂಸ್ಥೆಗೂ ದೂರು ಸಲ್ಲಿಸಿದೆ. ಐಸಿಸ್‌‍ಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದೆ.

ಸಾಹಿಬ್ಝಾದ ಮತ್ತು ರೌಫ್‌ ಈ ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದರೆ ಐಸಿಸಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ವಿಚಾರಣೆಗಾಗಿ ಅವರು ಐಸಿಸಿ ಎಲೈಟ್‌ ಪ್ಯಾನಲ್‌ ರೆಫರಿ ರಿಚಿ ರಿಚರ್ಡ್ಸನ್‌ ಮುಂದೆ ಹಾಜರಾಗಬೇಕಾಗಬಹುದು.

ಪಹಲ್ಗಾಂ ಉಗ್ರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿ, ಪಾಕ್‌ಗೆ ತಕ್ಕ ಉತ್ತರ ನೀಡಿತ್ತು. ಆದರೆ ಕಾರ್ಯಾಚರಣೆ ವೇಳೆ ಭಾರತದ 60 ಫೈಟರ್‌ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕ್‌ ಸೇನೆ ಸುಳ್ಳು ಹೇಳಿತ್ತು. ಇದೇ ಸುಳ್ಳನ್ನು ಈಗ ಪಾಕಿಸ್ತಾನ ಕ್ರಿಕೆಟಿಗರೂ ಪ್ರಚಾರ ಮಾಡುತ್ತ ಭಾರತ ಮೇಲೆ ಹಗೆ ತೀರಿಸಲು ಮುಂದಾಗಿದ್ದಾರೆ. ಅಲ್ಲದೆ, ಸ್ವತಃ ಪಾಕ್‌ ಸೇನೆಯೇ ಅಲ್ಲಿನ ಕ್ರಿಕೆಟ್‌ ತಂಡಗಳಿಗೆ ಈ ರೀತಿ ಸಂಭ್ರಮಿಸಲು ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಸೂರ್ಯಕುಮಾರ್‌ ವಿರುದ್ಧ ದೂರು ನೀಡಿದ ಪಿಸಿಬಿ :
ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ತಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ಆಪರೇಷನ್‌ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಭಾರತೀಯ ಸಶಸ್ತ್ರ ಪಡೆಗಳಿಗೆ ತಮ ತಂಡದ ಗೆಲುವನ್ನು ಅರ್ಪಿಸಿದ್ದಕ್ಕಾಗಿ ಭಾರತೀಯ ನಾಯಕ ಸೂರ್ಯಕುಮಾರ್‌ ಯಾದವ್‌ ವಿರುದ್ಧ ಪ್ರತೀಕಾರದ ಸಂಕೇತವಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಐಸಿಸಿಗೆ ಅಧಿಕೃತ ದೂರು ನೀಡಿದೆ ಎಂದು ವರದಿಯಾಗಿದೆ.

ಸೂರ್ಯಕುಮಾರ್‌ ಯಾದವ್‌ ಅವರ ಹೇಳಿಕೆಗಳು ರಾಜಕೀಯ ಎಂದು ಪಿಸಿಬಿ ಆರೋಪಿಸಿದೆ. ಆದರೆ ತಾಂತ್ರಿಕವಾಗಿ ಹೇಳಿಕೆ ನೀಡಿದ ಏಳು ದಿನಗಳಲ್ಲಿ ದೂರು ದಾಖಲಿಸಬೇಕಾಗಿದೆ. ಪಾಕ್‌ ಕ್ರಿಕೆಟ್‌ ಮಂಡಳಿ ಯಾವಾಗ ದೂರು ದಾಖಲಿಸಿದೆ ಎನ್ನುವುದು ತಿಳಿದುಬಂದಿಲ್ಲ.

ವಂಚನೆ ಪ್ರಕರಣದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ದಂಪತಿಗೆ ಸಮನ್ಸ್

ನವದೆಹಲಿ,ಸೆ.25– ವಂಚನೆ ಪ್ರಕರಣದಲ್ಲಿ ಬಾಲಿವುಡ್‌ ನಟಿ ಹಾಗೂ ಕರ್ನಾಟಕ ಕರಾವಳಿ ಬೆಡಗಿ ಶಿಲ್ಪಶೆಟ್ಟಿಗೆ ಮುಂಬೈನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲು) ದ ಪೊಲೀಸರು ವಿಚಾರಣೆಗಾಗಿ ಹಾಜರಾಗುವಂತೆ ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್‌ ಕುಂದ್ರಾ ವಿರುದ್ಧದ 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಮುಂಬೈನ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಹೊಸ ವಿವರಗಳನ್ನು ಬಹಿರಂಗಪಡಿಸಿದೆ.

ರಾಜ್‌ ಕುಂದ್ರಾ ಒಟ್ಟು ಮೊತ್ತದಲ್ಲಿ ಸುಮಾರು 15 ಕೋಟಿ ರೂಪಾಯಿಗಳನ್ನು ಶಿಲ್ಪಾ ಶೆಟ್ಟಿ ಅವರ ಕಂಪನಿಯ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.ಹೀಗಾಗಿ ಅವರಿಗೆ ಸಮನ್‌್ಸ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ, ಇಷ್ಟು ದೊಡ್ಡ ಮೊತ್ತದ ವರ್ಗಾವಣೆಯ ಉದ್ದೇಶ ಮತ್ತು ಅದು ಯಾವುದೇ ಜಾಹೀರಾತು ಅಥವಾ ಕಾನೂನುಬದ್ಧ ವ್ಯವಹಾರ ವೆಚ್ಚಕ್ಕೆ ಸಂಬಂಧಿಸಿದೆಯೇ ಎಂಬುದನ್ನು ನಿರ್ಧರಿಸುವುದು ನಿರ್ಣಾಯಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಕೆಂದರೆ ಈ ಮೊತ್ತವನ್ನು ಸಾಮಾನ್ಯ ಪ್ರಚಾರ ಚಟುವಟಿಕೆಗಳಿಗೆ ಖರ್ಚು ಮಾಡುವುದು ಅಸಾಮಾನ್ಯವಾಗಿದೆ. ಶೆಟ್ಟಿ ಅವರ ಕಂಪನಿಯು ಯಾವ ಆಧಾರದ ಮೇಲೆ ಇಷ್ಟು ಹೆಚ್ಚಿನ ಮೌಲ್ಯದ ಬಿಲ್‌ ನೀಡಿದೆ ಎಂಬುದನ್ನು ತನಿಖೆಯು ಪರಿಶೀಲಿಸುತ್ತದೆ.

ಇಒಡಬ್ಲ್ಯೂ ವಿನಂತಿಸಿದ ಅಗತ್ಯ ದಾಖಲೆಗಳನ್ನು ರೆಸಲ್ಯೂಷನ್‌ ಪರ್ಸನಾಲಿಟೀಸ್‌‍ (ಆರ್‌ಪಿ) ಇನ್ನೂ ಒದಗಿಸಿಲ್ಲ ಎಂದು ವಿಚಾರಣೆಯು ಬಹಿರಂಗಪಡಿಸಿದೆ. ಆರಂಭದಲ್ಲಿ ಆರ್ಪಿಯನ್ನು ವಿಚಾರಣೆಗೆ ಕರೆಯಲಾಗಿತ್ತು, ಆದರೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸದ ಕಾರಣ ತನಿಖೆ ನಿಧಾನವಾಯಿತು.

ಒಬ್ಬ ಉದ್ಯಮಿಗೆ ಉದ್ದೇಶಪೂರ್ವಕವಾಗಿ ಶೇ. 26 ರಷ್ಟು ಷೇರುಗಳನ್ನು ನಿರಾಕರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲದಿದ್ದರೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ಬಹಿರಂಗಪಡಿಸುವ ಅಗತ್ಯವಿತ್ತು. ಹೆಚ್ಚುವರಿಯಾಗಿ, 60 ಕೋಟಿ ರೂ.ಗಳಲ್ಲಿ ಒಂದು ಭಾಗವನ್ನು ಸಹೋದರಿ ಕಂಪನಿಗಳಿಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.

ಇದು ಹೆಚ್ಚಿನ ಪರಿಶೀಲನೆಗೆ ಕಾರಣವಾಗಿದೆ.ತನಿಖೆ ಮುಂದುವರಿದಂತೆ ಹೆಚ್ಚಿನ ವಿಚಾರಣೆಗಾಗಿ ಈ ವಾರದ ಕೊನೆಯಲ್ಲಿ ರಾಜ್‌ ಕುಂದ್ರಾ ಅವರನ್ನು ಮತ್ತೆ ಕರೆಸಲುಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.ಇದಕ್ಕೂ ಮುನ್ನ, 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತನಿಖೆಯಲ್ಲಿರುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್‌ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್‌ ಔಟ್‌ ಸಕ್ರ್ಯುಲರ್‌ (ಎಲ್‌‍ಒಸಿ) ಹೊರಡಿಸಿದ್ದರು.

ಅಗ್ನಿ-ಪ್ರೈಮ್‌ ಕ್ಷಿಪಣಿಯ ಪರೀಕ್ಷೆ ಯಶಸ್ವಿ : ಮಹತ್ವದ ಮೈಲಿಗಲ್ಲು ಸಾಧಿಸಿದ ಡಿಆರ್‌ಡಿಒ

ಬಾಲಸೋರ್‌,ಸೆ.25– ಒಡಿಶಾದ ಬಾಲಸೋರ್‌ ನಲ್ಲಿರುವ ಇಂಟಿಗ್ರೇಟೆಡ್‌ ಟೆಸ್ಟ್‌ ರೇಂಜ್‌ನಲ್ಲಿ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಡೆಸಿದ ಅಗ್ನಿ-ಪ್ರೈಮ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆಯೊಂದಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ.

ಈ ಪರೀಕ್ಷೆಯನ್ನು ಡಿಆರ್‌ಡಿಒ, ಎಸ್‌‍ಎಪ್‌ಸಿ ಮತ್ತು ಭಾರತೀಯ ಸಶಸ್ತ್ರ ಪಡೆಗಳು ಜಂಟಿಯಾಗಿ ನಡೆಸಿವೆ. ಈ ಪರೀಕ್ಷೆಯು ಭಾರತದ ಆತನಿರ್ಭರ ಭಾರತ ಯೋಜನೆಯ ಭಾಗವಾಗಿದೆ. ಇದು ಅಗ್ನಿ ಸರಣಿಯ ಆರನೇ ಕ್ಷಿಪಣಿಯಾಗಿದ್ದು, ಇದನ್ನು ಈಗಾಗಲೇ ಭಾರತೀಯ ಸೇನೆಯಲ್ಲಿ ನಿಯೋಜಿಸಲಾಗಿದೆ.

ಈ ಹೊಸ ಪೀಳಿಗೆಯ ಕ್ಷಿಪಣಿಯನ್ನು ರೈಲು ಆಧಾರಿತ ಮೊಬೈಲ್‌ ಲಾಂಚರ್‌ನಿಂದ ಉಡಾಯಿಸಲಾಯಿತು. ಪರೀಕ್ಷೆಯು ಸಂಪೂರ್ಣ ಯಶಸ್ವಿಯಾಗಿದೆ. 2,000 ಕಿ.ಮೀ.ವರೆಗಿನ ವ್ಯಾಪ್ತಿಗಾಗಿ ವಿನ್ಯಾಸಗೊಳಿಸಲಾದ ಈ ಕ್ಷಿಪಣಿಯು ಚಲನಶೀಲತೆ ಮತ್ತು ತ್ವರಿತ ನಿಯೋಜನೆಯನ್ನು ಹೆಚ್ಚಿಸಲು ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉಡಾವಣೆಯ ಕುರಿತು ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದು, ಭಾರತವು ರೈಲು ಆಧಾರಿತ ಮೊಬೈಲ್‌ ಲಾಂಚರ್‌ ವ್ಯವಸ್ಥೆಯಿಂದ ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್‌ ಕ್ಷಿಪಣಿಯ ಯಶಸ್ವಿ ಉಡಾವಣೆಯನ್ನು ನಡೆಸಿದೆ. ಈ ಮುಂದಿನ ಪೀಳಿಗೆಯ ಕ್ಷಿಪಣಿಯನ್ನು 2000 ಕಿ.ಮೀ.ವರೆಗಿನ ವ್ಯಾಪ್ತಿಯನ್ನು ಕ್ರಮಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ವಿವಿಧ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.ಈ ಸಾಧನೆಗಾಗಿ ಅವರು
ಡಿಆರ್‌ಡಿಒ – ಇಂಡಿಯಾ ಸ್ಟ್ರಾಟೆಜಿಕ್‌ ಫೋರ್ಸಸ್‌‍ ಕಮಾಂಡ್‌ (ಎಸ್‌‍ ಎಪ್‌ ಸಿ) ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ್ದಾರೆ.

ಈ ಯಶಸ್ವಿ ಹಾರಾಟ ಪರೀಕ್ಷೆಯು ಭಾರತವನ್ನು ಮೂವ್‌ ರೈಲ್‌ ನೆಟ್‌ವರ್ಕ್‌ನಿಂದ ಕ್ಯಾನಿಸ್ಟರೈಸ್ಡ್‌ ಲಾಂಚ್‌ ಸಿಸ್ಟಮ್‌ ಅನ್ನು ಅಭಿವೃದ್ಧಿಪಡಿಸಿದ ಸಾಮಥ್ರ್ಯ ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿಸಿದೆ ಎಂದು ಬರೆಯಲಾಗಿದೆ. ಪರೀಕ್ಷೆಯು ಎಲ್ಲಾ ಉದ್ದೇಶಗಳನ್ನು ಪೂರೈಸಿದೆ. ಈ ಪ್ರಯೋಗವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್‌ ಲಾಂಚರ್‌ನಿಂದ ನಡೆಸಲಾಗಿರುವುದರಿಂದ ಇದನ್ನು ವಿಶಿಷ್ಟ ಎಂದು ಕರೆಯಲಾಗುತ್ತದೆ.

ಇದು ಪ್ರಸ್ತುತ ಕೆಲವೇ ರಾಷ್ಟ್ರಗಳು ಹೊಂದಿರುವ ರಕ್ಷಣಾ ಸಾಮಥ್ರ್ಯವಾಗಿದೆ
ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್‌ ಲಾಂಚರ್‌ನಿಂದ ನಡೆಸಲಾದ ಈ ರೀತಿಯ ಮೊದಲ ಉಡಾವಣೆಯು ಯಾವುದೇ ಪೂರ್ವ-ಷರತ್ತುಗಳಿಲ್ಲದೆ ರೈಲು ಜಾಲದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಬಳಕೆದಾರರಿಗೆ ದೇಶಾದ್ಯಂತ ಚಲನಶೀಲತೆಯನ್ನು ಹೊಂದಲು ಮತ್ತು ಕಡಿಮೆ ಗೋಚರತೆಯೊಂದಿಗೆ ಕಡಿಮೆ ಪ್ರತಿಕ್ರಿಯೆ ಸಮಯದೊಳಗೆ ಉಡಾವಣೆ ಮಾಡಲು ಅನುವು ಮಾಡಿಕೊಡುತ್ತದೆ.

ಅಗ್ನಿ-ಪ್ರೈಮ್‌ ಎಂದರೇನು? :
ಅಗ್ನಿ-ಪ್ರೈಮ್‌ ಅಗ್ನಿ ಸರಣಿಯ ಅತ್ಯಂತ ಮುಂದುವರಿದ ಕ್ಷಿಪಣಿಯಾಗಿದೆ. ಇದು ಮಧ್ಯಂತರ ವ್ಯಾಪ್ತಿಯನ್ನು ಹೊಂದಿದ್ದು, 2,000 ಕಿಲೋಮೀಟರ್‌ಗಳವರೆಗಿನ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ. ಇದು ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.

ನಿಖರವಾದ ಗುರಿ:
ಈ ಸುಧಾರಿತ ಸಂಚರಣೆ ವ್ಯವಸ್ಥೆಯು ಶತ್ರು ನೆಲೆಗಳ ಮೇಲೆ ನಿಖರವಾದ ಗುರಿಯನ್ನು ಇಟ್ಟು ದಾಳಿ ಮಾಡುತ್ತದೆ.

ವೇಗದ ಪ್ರತಿಕ್ರಿಯೆ:
ಕಡಿಮೆ ಗೋಚರವಾಗಿದ್ದರೂ ಸಹ, ಕಡಿಮೆ ಸಮಯದಲ್ಲಿ ಉಡಾವಣೆ ಮಾಡಬಹುದು.

ಗಟ್ಟಿಮುಟ್ಟಾದ ವಿನ್ಯಾಸ:
ಮಳೆ, ಧೂಳು ಅಥವಾ ಶಾಖದಿಂದ ರಕ್ಷಿಸುವ ಬಾಕ್‌್ಸನಲ್ಲಿ (ಮುಚ್ಚಿದ ಪೆಟ್ಟಿಗೆ) ಸಂಗ್ರಹಿಸಲಾಗಿದೆ. ಈ ಕ್ಷಿಪಣಿಯನ್ನು ಭಾರತದ ಸ್ಟ್ರಾಟೆಜಿಕ್‌ ಫೋರ್ಸಸ್‌‍ ಕಮಾಂಡ್‌ ಗಾಗಿ ಉದ್ದೇಶಿಸಲಾಗಿದೆ. ಒಡಿಶಾದ ಚಾಂಡಿಪುರ ಇಂಟಿಗ್ರೇಟೆಡ್‌ ಟೆಸ್ಟ್‌ ರೇಂಜ್ನಿಂದ ಈ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯ ಪ್ರಮುಖ ಅಂಶವೆಂದರೆ ಇದು ರೈಲು ಆಧಾರಿತ ಮೊಬೈಲ್‌ ಲಾಂಚರ್‌. ಇದು ವಿಶೇಷವಾಗಿ ವಿನ್ಯಾಸಗೊಳಿಸಲಾದ ವ್ಯವಸ್ಥೆಯಾಗಿದೆ. ಯಾವುದೇ ಸಿದ್ಧತೆ ಇಲ್ಲದೆ ರೈಲು ಜಾಲದಲ್ಲಿ ಓಡಬಹುದು. ದೇಶಾದ್ಯಂತ ಚಲನಶೀಲತೆಯನ್ನು ಒದಗಿಸುತ್ತದೆ. ಅಂದರೆ ಇದನ್ನು ಕಾಡು, ಪರ್ವತಗಳು ಅಥವಾ ಬಯಲು ಪ್ರದೇಶಗಳಲ್ಲಿ ಸುಲಭವಾಗಿ ಸಾಗಿಸಬಹುದು.