Saturday, May 17, 2025
Homeರಾಜ್ಯಸರಕು ಸಾಗಣೆ ಹಡಗಿನಲ್ಲಿ ಕಾರವಾರಕ್ಕೆ ಬಂದ ಪಾಕ್‌ ಪ್ರಜೆಗೆ ಭಾರತ ಪ್ರವೇಶ ನಿರಾಕರಣೆ

ಸರಕು ಸಾಗಣೆ ಹಡಗಿನಲ್ಲಿ ಕಾರವಾರಕ್ಕೆ ಬಂದ ಪಾಕ್‌ ಪ್ರಜೆಗೆ ಭಾರತ ಪ್ರವೇಶ ನಿರಾಕರಣೆ

Pak national onboard ship docking at Karnataka port denied entry into India

ಕಾರವಾರ, ಮೇ 16- ಕರ್ನಾಟಕದ ಕಾರವಾರ ಬಂದರಿಗೆ ಬಂದ ಎಂಟಿ ಆರ್‌ ಓಷನ್‌ ಎಂಬ ಸರಕು ಸಾಗಣೆ ಹಡಗಿನಲ್ಲಿ ಆಗಮಿಸಿದ ಪಾಕಿಸ್ತಾನಿ ಪ್ರಜೆಯೊಬ್ಬರಿಗೆ ಬಂದರು ಅಧಿಕಾರಿಗಳು ಭಾರತ ಪ್ರವೇಶ ನಿರಾಕರಿಸಿದ್ದಾರೆ ಎಂದು ಭಾರತೀಯ ಕರಾವಳಿ ಕಾವಲು ಪಡೆ ತಿಳಿಸಿದೆ.

ಇರಾಕ್‌ನಿಂದ ಬಿಟುಮೆನ್‌ ಸಾಗಿಸುತ್ತಿದ್ದ ಹಡಗನ್ನು ಮೇ 12 ರಂದು 14 ಭಾರತೀಯ ಸಿಬ್ಬಂದಿ, ಇಬ್ಬರು ಸಿರಿಯನ್ನರು ಮತ್ತು ಒಬ್ಬ ಪಾಕಿಸ್ತಾನಿ ಪ್ರಜೆಯೊಂದಿಗೆ ಕಾರವಾರಕ್ಕೆ ಬಂದಿತ್ತು. ಹಡಗಿನ ಕ್ಯಾಪ್ಟನ್‌ ಕೂಡ ಭಾರತೀಯರಾಗಿದ್ದರು. ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಬಂಧಗಳು ಹದಗೆಡುತ್ತಿರುವ ಕಾರಣ ಪಾಕಿಸ್ತಾನಿ ಮತ್ತು ಸಿರಿಯನ್‌ ಪ್ರಜೆಗಳು ಹಡಗಿನಿಂದ ಇಳಿಯಬಾರದು ಎಂದು ಪೊಲೀಸ್‌‍ ಇನ್‌್ಸಪೆಕ್ಟರ್‌ ನಿಶ್ಚಲ್‌ ಕುಮಾರ್‌ ಸೂಚನೆ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಸೂಚನೆಯಂತೆ, ಅವರ ಮೊಬೈಲ್‌ ಫೋನ್‌ಗಳನ್ನು ಕ್ಯಾಪ್ಟನ್‌ ವಶಪಡಿಸಿಕೊಂಡರು. ಇರಾಕಿ ವಾಣಿಜ್ಯ ಹಡಗು ಬಂದರಿನಲ್ಲಿ ಬಿಟುಮೆನ್‌ ಇಳಿಸಿದ ನಂತರ ಇರಾಕ್‌ಗೆ ಹೊರಟಿತು ಎಂದು ಕಾರವಾರ ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನಿ ಪ್ರಜೆಗಳು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ ಮತ್ತು ಅವರ ವೀಸಾಗಳನ್ನು ಸಹ ರದ್ದುಗೊಳಿಸಿದೆ. ಪಹಲ್ಗಾಮ್‌ ದಾಳಿಯಲ್ಲಿ ಇಪ್ಪತ್ತಾರು ಜನರು ಸಾವನ್ನಪ್ಪಿದ್ದಾರೆ. ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್‌ ಸಿಂಧೂರ್‌ ಅನ್ನು ಪ್ರಾರಂಭಿಸಿದೆ.

RELATED ARTICLES

Latest News