ಬೆಂಗಳೂರು,ಜೂ.20- ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿ ದಿನೇ ದಿನೇ ವಿಸ್ತ್ರೀರ್ಣಗೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಬೇಕೆಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಇಂದಿಲ್ಲಿ ಹೇಳಿದರು.ನಗರದ ಮೈಸೂರು ರಸ್ತೆಯ ಸಿಎಆರ್ ಕೇಂದ್ರಸ್ಥಾನದ ಮೈದಾನ ದಲ್ಲಿ ಹಮಿಕೊಂಡಿದ್ದ ಪ್ರಥಮ ಮಾಸಿಕ ಕವಾಯಿತಿನಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತೃತವಾಗುತ್ತಿದೆ. ಇದೀಗ ಕುಂಬಳಗೂಡು,ಆವಲಹಳ್ಳಿ ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣೆಗಳು ಸೇರ್ಪಡೆಯಾಗಿವೆ. ದಿನದಿಂದ ದಿನಕ್ಕೆ ಪ್ರದೇಶ ಹೆಚ್ಚಾಗುತ್ತಿದೆ. ಹಾಗಾಗಿ ಕೆಲಸವೂ ಹೆಚ್ಚಾಗುತ್ತಿದೆ. ಆದ್ದರಿಂದ ಉತ್ತಮವಾಗಿ ಕರ್ತವ್ಯ ನಿಭಾಯಿಸಬೇಕೆಂದು ಆಯುಕ್ತರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.
ಈಗಿರುವ 8 ವಿಭಾಗಗಳ ಜೊತೆಗೆ ಮತ್ತೆ ಮೂರು ಹೊಸ ವಿಭಾಗಗಳು ಸದ್ಯದಲ್ಲೇ ಸೇರಲಿವೆ. ಹಾಗಾಗಿ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಮಾಸಿಕ ಪರೇಡ್ಗೆ ಯಾರು ಗೈರಾಗಬಾರದು, ಪರೇಡ್ನಲ್ಲಿ ಪಾಲ್ಗೊಂಡರೆ ಸ್ಪೂರ್ತಿ,ಶಿಸ್ತು ಬರುತ್ತದೆ.ತರಬೇತಿ ವೇಳೆ ನೀವು ಕಲಿತಿರುವುದನ್ನೆ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಿ ಎಂದು ಅವರು ಹೇಳಿದರು.
ನಾವು ಯಾವಾಗಲೂ ಸಾಮಾನ್ಯ ನಾಗರಿಕರಿಗೆ ಒಳ್ಳೆ ಸರ್ವಿಸ್ ಕೊಡುವುದೇ ನಮ ಗುರಿಯಾಗಿರ ಬೇಕು. ಅವರು ನೆಮದಿಯಿಂದ ಇರಲು ನಾವು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ನಾನು 28 ವರ್ಷದ ಹಿಂದೆ ಇದೇ ಸಿಎಆರ್ ಮೈದಾನದಲ್ಲಿ ಪ್ರಥಮ ಬಾರಿಗೆ ತರಬೇತಿ ಪಡೆದಿದ್ದೆ. ಇದೀಗ ಅದೇ ಜಾಗದಲ್ಲಿ ನಾನು ಇಂದು ಕವಾಯತಿನ ವಂದನೆ ಸ್ವೀಕರಿಸುತ್ತಿರುವುದು ಖುಷಿಯಾಗಿದೆ ಎಂದರು.
ಬೆಂಗಳೂರು ನಗರದಲ್ಲಿ ನಾನು ಸಂಚಾರ ವಿಭಾಗದ ಡಿಸಿಪಿಯಾಗಿ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಬೆಂಗಳೂರು ನಗರಕ್ಕೆ ಒಳ್ಳೆಯ ಹೆಸರಿದೆ. ಹಾಗಾಗಿ ಅದೇ ರೀತಿ ನಾವು ಕೆಲಸ ಮಾಡಬೇಕು. ಎಲ್ಲರ ಜೊತೆ ಸೇರಿ ಒಂದು ತಂಡವಾಗಿ ಕೆಲಸ ಮಾಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕು. ನೀವು ಖಂಡಿತ ಒಂದು ತಂಡವಾಗಿ ಕೆಲಸ ಮಾಡುತ್ತೀರೆಂಬ ಭರವಸೆ ಇದೆ.
ದಿನನಿತ್ಯದ ಕೆಲಸ-ಕಾರ್ಯಗಳಲ್ಲಿ ಅಡೆಚಣೆಗಳಿರುತ್ತವೆ. ಸಮಯದ ಕೊರತೆಯಿರುತ್ತದೆ.ಅವುಗಳನ್ನೆಲ್ಲಾ ನಿಭಾಯಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ನಗರದ ನಾಗರಿಕರಿಗೆ ಉತ್ತಮ ವಾತಾವರಣ ಕಲ್ಪಿಸುವುದು ನಮೆಲ್ಲರ ಜವಾಬ್ದಾರಿ. ಪೊಲೀಸ್ ಸೇವೆಗೆ ಬಂದ ಮೇಲೆ ಕರ್ತವ್ಯ ನಿಭಾಯಿಸ ಬೇಕು,ನೀವು ಉತ್ತಮವಾಗಿ ಸೇವೆ ಸಲ್ಲಿಸುತ್ತೀರೆಂಬ ಭರವಸೆ ಇದೆ. ನಿಮಗೆ ನನ್ನ ಕಡೆಯಿಂದ ಏನೇ ಸಹಾಯ ಬೇಕಾದರೂ ಮಾಡುತ್ತೇನೆ ಎಂದು ಅವರು ಹೇಳಿದರು.
ಒಗ್ಗಟ್ಟಿನಲ್ಲಿ ಬಲವಿದೆ, ಬೆಂಗಳೂರು ನಗರದ ಶಾಂತಿ ಮತ್ತು ಸುವ್ಯವಸ್ಥೆಗೆ ಒಗ್ಗಟ್ಟಿನಿಂದ ಕೆಲಸ ಮಾಡೋಣ, ಉತ್ತಮವಾಗಿ ಸೇವೆ ಸಲ್ಲಿಸೋಣ ಎಂದು ಅವರು ಹೇಳಿದರು. ಠಾಣೆಗೆ ಬರುವವರನ್ನು ಸೌಜನ್ಯದಿಂದ ಮಾತನಾಡಿಸಿ, ಅವರು ಮೊದಲೇ ನೋವಿನಲ್ಲಿರುತ್ತಾರೆ, ಅವರಿಗೆ ತೊಂದರೆ ಕೊಡಬೇಡಿ, ಅವರ ದೂರುಗಳನ್ನು ಆಲಿಸಿ ಸಹಾಯ ಮಾಡಿ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಯುಕ್ತರು ಕಿವಿ ಮಾತು ಹೇಳಿದರು.
- ದ್ವೇಷ ರಾಜಕಾರಣಕ್ಕೆ ಕಾಲವೇ ಉತ್ತರ ನೀಡಲಿದೆ : ಹೆಚ್ಡಿಕೆ
- ಲಿವಿಂಗ್ ಟು ಗೆದರ್ ಸಹವಾಸ : ಮಗುವಿಗೆ ಜನ ನೀಡಿ ಪ್ರಾಣ ಬಿಟ್ಟ ಯುವತಿ
- ಮಾವಿಗೆ ಬೆಂಬೆಲ ಬೆಲೆ ಘೋಷಿಸಲು ಸಚಿವ ಕೆ.ಹೆಚ್.ಮುನಿಯಪ್ಪ ಒತ್ತಾಯ
- ವ್ಯಾಪಕ ಚರ್ಚೆ ಕಾರಣವಾಯ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್ ರಾಜೀನಾಮೆ
- ಜಮೀರ್ ರಾಜೀನಾಮೆಗೆ ಶರವಣ ಆಗ್ರಹ