Sunday, September 8, 2024
Homeರಾಷ್ಟ್ರೀಯ | NationalAAP ಪಕ್ಷವನ್ನು ಹತ್ತಿಕ್ಕಲು ಬಿಜೆಪಿ "ಆಪರೇಷನ್‌ ಜಾಡು" ಆರಂಭಿಸಿದೆ : ಕೇಜ್ರಿವಾಲ್‌

AAP ಪಕ್ಷವನ್ನು ಹತ್ತಿಕ್ಕಲು ಬಿಜೆಪಿ “ಆಪರೇಷನ್‌ ಜಾಡು” ಆರಂಭಿಸಿದೆ : ಕೇಜ್ರಿವಾಲ್‌

ನವದೆಹಲಿ, ಮೇ 19-ಆಮ್‌ ಆದಿ ಪಕ್ಷವನ್ನು ಹತ್ತಿಕ್ಕಲು ಬಿಜೆಪಿ ಆಪರೇಷನ್‌ ಜಾಡು ಆರಂಭಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿಯ ಬಿಜೆಪಿ ಕೇಂದ್ರ ಕಚೇರಿ ಮುಂದೆ ಎಎಪಿಯ ಪ್ರತಿಭಟನಾ ಮೆರವಣಿಗೆಗೆ ಮುನ್ನ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದೆ ದೊಡ್ಡ ಸವಾಲುಗಳು ಎದುರಾಗಲಿವೆ ಮತ್ತು ಅವುಗಳನ್ನು ಎದುರಿಸಲು ಕಾರ್ಯಕರ್ತರು ಸಿದ್ಧರಾಗಬೇಕೆಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಎಎಪಿಯ ಉದಯದ ಬಗ್ಗೆ ಚಿಂತಿತರಾಗಿದ್ದಾರೆ, ಪಕ್ಷವು ತುಂಬಾ ವೇಗವಾಗಿ ಏರಿದೆ, ಅವರು ಪಕ್ಷವನ್ನು ಹತ್ತಿಕ್ಕಲು ಅವರು ಆಪರೇಷನ್‌ ಜಾಡು ಆರಂಭಿಸಿದ್ದಾರೆ, ಮುಂದಿನ ದಿನಗಳಲ್ಲಿ ನಮ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿ,ನಮ ಕಚೇರಿ ಜಪ್ತಿ ಮಾಡಿ, ರಸ್ತೆಯನ್ನು ಸಹ ಕಿತ್ತುಕೊಳ್ಳುತ್ತಾರೆ ಎಂದು ಅವರು ಹೇಳಿದರು.

ದಯವಿಟ್ಟು ಅವುಗಳನ್ನು ಎದುರಿಸಲು ಸಿದ್ಧರಾಗಿರಿ, ನಾವು ಈ ಹಿಂದೆ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ನಮಗೆ ಭಗವಾನ್‌ ಹನುಮಂತ ಮತ್ತು ದೇವರ ಆಶೀರ್ವಾದವಿದೆ. ಸತ್ಯದ ಹಾದಿಯಲ್ಲಿ ನಡೆಯಿರಿ. ನಾವು ಸಮಾಜಕ್ಕಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದರು.

ಶಾಂತಿಯುತವಾಗಿ ಬಿಜೆಪಿ ಕೇಂದ್ರ ಕಚೇರಿಗೆ ಪಾದಯಾತ್ರೆ ನಡೆಸುತ್ತೇವೆ, ಪೊಲೀಸರು ತಡೆದರೆ ಆ ಜಾಗದಲ್ಲೇ ಕೂರುತ್ತೇವೆ. ಅರ್ಧ ಗಂಟೆ ಕಾದು ನೋಡುತ್ತೇವೆ, ಬಂಧಿಸದಿದ್ದರೆ ಸೋಲು. ನಮೆಲ್ಲರನ್ನೂ ಜೈಲಿಗೆ ಕಳುಹಿಸಿ ಪಕ್ಷ ಕೊನೆಗೊಳ್ಳುತ್ತೋ ಅಥವಾ ಇನ್ನೆಷ್ಟು ಏರುತ್ತದೋ ನೀವೇ ನೋಡಿ, ಎಂದರು.

ತಾವು ತಿಹಾರ್‌ ಜೈಲಿನಲ್ಲಿದ್ದ ಅವಧಿಯನ್ನು ನೆನಪಿಸಿಕೊಂಡ ಕೇಜ್ರಿವಾಲ್‌ ಅವರು ಭಗವದ್ಗೀತೆಯನ್ನು ಎರಡು ಬಾರಿ ಮತ್ತು ರಾಮಾಯಣವನ್ನು ಒಮೆ ಓದಿದ್ದಾರೆ ಎಂದು ಹೇಳಿದರು

RELATED ARTICLES

Latest News