Tuesday, July 2, 2024
Homeರಾಷ್ಟ್ರೀಯ3ನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಮೋದಿ ಮನ್‌ ಕೀ ಬಾತ್‌ : ಇಲ್ಲಿದೆ ಹೈಲೈಟ್ಸ್

3ನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಮೋದಿ ಮನ್‌ ಕೀ ಬಾತ್‌ : ಇಲ್ಲಿದೆ ಹೈಲೈಟ್ಸ್

ನವದೆಹಲಿ, ಜೂ. 30 (ಪಿಟಿಐ) ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಜನರು ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ ಅಚಲವಾದ ನಂಬಿಕೆಯನ್ನು ಮರುಸ್ಥಾಪಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ.

ಚುನಾವಣೆಯ ನಂತರ ಮೊದಲ ಬಾರಿಗೆ ನಡೆಸಿಕೊಟ್ಟ ಮನ್‌ ಕಿ ಬಾತ್‌ ರೇಡಿಯೋ ಭಾಷಣದಲ್ಲಿ ಪ್ರಧಾನಿ ಈ ಹೇಳಿಕೆಯನ್ನು ನೀಡಿದ್ದಾರೆ. ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆಗೆ ಮುನ್ನ ರೇಡಿಯೋ ಪ್ರಸಾರಕ್ಕೆ ಬ್ರೇಕ್‌ ಬಿದ್ದಿತ್ತು.

ಇಂದು, ನಮ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ ಅಚಲವಾದ ನಂಬಿಕೆಯನ್ನುಮರುಕಳಿಸುವುದಕ್ಕಾಗಿ ನಾನು ದೇಶವಾಸಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು. 2024ರ ಚುನಾವಣೆ ವಿಶ್ವದಲ್ಲೇ ಅತಿ ದೊಡ್ಡ ಚುನಾವಣೆಯಾಗಿದೆ ಎಂದರು.

ಇಂತಹ ದೊಡ್ಡ ಚುನಾವಣೆ ವಿಶ್ವದ ಯಾವುದೇ ದೇಶದಲ್ಲಿ ನಡೆದಿಲ್ಲ. 65 ಕೋಟಿಗೂ ಹೆಚ್ಚು ಜನರು ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.ಚುನಾವಣಾ ಆಯೋಗಕ್ಕೆ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಅಭಿನಂದನೆ ಸಲ್ಲಿಸಿದರು.

ರೇಡಿಯೋ ಭಾಷಣದಲ್ಲಿ ಪ್ರಧಾನ ಮಂತ್ರಿಗಳು ವಿಶ್ವ ಪರಿಸರ ದಿನದಂದು ಮರಗಳನ್ನು ನೆಡಲು ಪ್ರಾರಂಭಿಸಲಾದ ಏಕ್‌ ಪೆಡ್‌ ಮಾ ಕೆ ನಾಮ್‌‍ ನಂತಹ ಉಪಕ್ರಮಗಳ ಕುರಿತು ಮಾತನಾಡಿದರು.ಜನರು ತಮ ತಾಯಂದಿರ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಇತರರನ್ನು ಪ್ರೇರೇಪಿಸುವುದನ್ನು ನೋಡಲು ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದರು.

ಅವರು 1857 ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಮುಂಚೆಯೇ 1855 ರಲ್ಲಿ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಸಂತಾಲ್‌ ದಂಗೆಯನ್ನು ಮುನ್ನಡೆಸಿದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಾದ ವೀರ್‌ ಸಿಧು ಮತ್ತು ಕನ್ಹು ಅವರಿಗೆ ಗೌರವ ಸಲ್ಲಿಸಿದರು.

ಮುಂದಿನ ತಿಂಗಳು ನಡೆಯಲಿರುವ ಪ್ಯಾರಿಸ್‌‍ ಒಲಿಂಪಿಕ್‌್ಸನಲ್ಲಿ ಭಾಗವಹಿಸಲಿರುವ ಭಾರತೀಯ ಅಥ್ಲೀಟ್‌ಗಳನ್ನು ಪ್ರಧಾನಿ ಹುರಿದುಂಬಿಸಿದರು.ಭಾರತದ ಕ್ರೀಡಾಪಟುಗಳು 900ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಅವರು ಗಮನಿಸಿದರು.

ಪ್ಯಾರಿಸ್‌‍ ಒಲಿಂಪಿಕ್‌್ಸನಲ್ಲಿ ತನ್ನ ಆಟಗಾರರು ಅತ್ಯುತ್ತಮ ಪ್ರದರ್ಶನವನ್ನು ನೀಡಬೇಕೆಂದು ದೇಶವು ನಿರೀಕ್ಷಿಸುತ್ತದೆ ಎಂದು ಅವರು ಜನರನ್ನು ಪ್ರೇರೇಪಿಸಲು ಚೀಯರ್‌ಫಾರ್‌ಭಾರತ್‌ ಹ್ಯಾಶ್‌ಟ್ಯಾಗ್‌ ಅನ್ನು ಬಳಸಬೇಕೆಂದು ಒತ್ತಾಯಿಸಿದರು

RELATED ARTICLES

Latest News