Sunday, September 8, 2024
Homeರಾಷ್ಟ್ರೀಯ | Nationalವರದಕ್ಷಿಣೆಗಾಗಿ ಗರ್ಭಿಣಿ ಮಹಿಳೆಯ ಕೈ ಕಾಲು ಕತ್ತರಿಸಿ ಕೊಲೆ

ವರದಕ್ಷಿಣೆಗಾಗಿ ಗರ್ಭಿಣಿ ಮಹಿಳೆಯ ಕೈ ಕಾಲು ಕತ್ತರಿಸಿ ಕೊಲೆ

ಭೋಪಾಲï,ಜು.23- ವರದಕ್ಷಿಣೆಗಾಗಿ 23 ವರ್ಷದ ಗರ್ಭಿಣಿ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ಕೈಕಾಲುಗಳನ್ನು ಕತ್ತರಿಸಿ, ವಿರೂಪಗೊಂಡ ದೇಹಕ್ಕೆ ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರಾಜ್‍ಗಢ ಜಿಲ್ಲೆಯಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ದುರ್ದೈವಿ ಮಹಿಳೆಯನ್ನು ರೀನಾ ತನ್ವಾರ್ ಎಂದು ಗುರುತಿಸಲಾಗಿದೆ.

ಪತಿ ಮಿಥುನ್ ಮತ್ತು ಅತ್ತೆಯಂದಿರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ರೀನಾ ತನ್ವಾರ್ ಕುಟುಂಬದವರು ಆರೋಪಿಸಿದ್ದಾರೆ. ಕಾಳಿಪೀಠ ಪೆÇಲೀಸ್ ಠಾಣೆ ವ್ಯಾಪ್ತಿಯ ತಂಡಿ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೀನಾಳನ್ನು ಕೊಲೆ ಮಾಡಲಾಗಿದೆ ಎಂದು ಗ್ರಾಮಸ್ಥರು ನಿನ್ನೆ ಮಾಹಿತಿ ನೀಡಿದ್ದಾರೆ ಎಂದು ರೀನಾ ಕುಟುಂಬ ತಿಳಿಸಿದ್ದಾರೆ. ಆಕೆಯ ತಂದೆ ರಾಮಪ್ರಸಾದ್ ತನ್ವಾರ್ ಪೊಲೀಸರೊಂದಿಗೆ ತಂಡಿ ಖುರ್ದ್ ಅನ್ನು ತಲುಪಿದಾಗ, ಆಕೆಯ ಅತ್ತೆಯಂದಿರು ಆಕೆಯ ಉರಿಯುತ್ತಿರುವ ಚಿತೆಯನ್ನು ಬಿಟ್ಟು ಓಡಿಹೋಗಿರುವುದನ್ನು ಅವರು ಕಂಡುಕೊಂಡರು.

ಮನೆಯವರು ಬೆಂಕಿಯನ್ನು ನಂದಿಸಿ ಅರ್ಧ ಸುಟ್ಟ ಆಕೆಯ ದೇಹವನ್ನು ಹೊರತೆಗೆದು ನಂತರ ಬಟ್ಟೆಯಲ್ಲಿ ಸುತ್ತಿ ಶವಪರೀಕ್ಷೆಗೆ ಕಳುಹಿಸಿದರು. ರೀನಾ ತನ್ವರ್ ಐದು ವರ್ಷಗಳ ಹಿಂದೆ ಮಿಥುನ್ ತನ್ವರ್ ಅವರನ್ನು ಮದುವೆಯಾಗಿದ್ದರು. ಆಕೆಗೆ ಒಂದೂವರೆ ವರ್ಷದ ಮಗಳಿದ್ದು, ಎರಡನೇ ಮಗುವಿಗೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯ ಅತ್ತೆಯಂದಿರು ನನ್ನ ಮಗಳಿಗೆ ಹಣದ ಬೇಡಿಕೆಯನ್ನಿಟ್ಟು ಚಿತ್ರಹಿಂಸೆ ನೀಡುತ್ತಿದ್ದರು ಎಂದು ರಾಮಪ್ರಸಾದ್ ತನ್ವಾರ್ ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಾಳಿಪೀಠ ಪೊಲೀಸ್ ಠಾಣೆಯ ಉಸ್ತುವಾರಿ ರಜನೀಶ್ ಸಿರೋಥಿಯಾ ತಿಳಿಸಿದ್ದಾರೆ. ತನಿಖೆಯಲ್ಲಿ ಹೊರಬರುವ ಅಂಶಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ರೀನಾ ತನ್ವಾರ್ ಅವರ ಕುಟುಂಬದವರು ಆಕೆಯ ಅತ್ತೆಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವಿವಾದ ಬಗೆಹರಿಸಲು ಹಣ ಕಳುಹಿಸುತ್ತಿದ್ದಾವು, ಈ ಬಾರಿ ಅವರು ದೂರ ಹೋಗಿದ್ದಾರೆ ಎಂದು ಸಂಬಂಧಿಕರಾದ ವಿಷ್ಣು ತನ್ವರ್ ಹೇಳಿದರು. ನಮಗೆ ಹಳ್ಳಿಯಲ್ಲಿ ಯಾರೋ ಕರೆ ಮಾಡಿದರು, ಅವರು ಅವಳನ್ನು ಕೊಂದು ಸುಡುತ್ತಿದ್ದಾರೆಂದು ಹೇಳಿದರು, ನಾವು ಬಂದಾಗ, ಚಿತೆ ಉರಿಯುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES

Latest News