Saturday, October 18, 2025
Homeಇದೀಗ ಬಂದ ಸುದ್ದಿದೀಪಾವಳಿಗೆ ಬೆಂಗಳೂರಿನಿಂದ ಊರಿಗೆ ತೆರಳುತ್ತಿದ್ದವರಿಗೆ ಶಾಕ್, ಖಾಸಗಿ ಬಸ್‌‍ ಮಾಲೀಕರಿಂದ ಮನಸೋಯಿಚ್ಛೆ ಸುಲಿಗೆ

ದೀಪಾವಳಿಗೆ ಬೆಂಗಳೂರಿನಿಂದ ಊರಿಗೆ ತೆರಳುತ್ತಿದ್ದವರಿಗೆ ಶಾಕ್, ಖಾಸಗಿ ಬಸ್‌‍ ಮಾಲೀಕರಿಂದ ಮನಸೋಯಿಚ್ಛೆ ಸುಲಿಗೆ

private bus owners hike Bus fare ahead of Deepavali

ಬೆಂಗಳೂರು,ಅ/19- ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದ ಖಾಸಗಿ ಬಸ್‌‍ ಮಾಲೀಕರು, ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರ ಭಾಗಗಳಿಂದ ದೀಪಾವಳಿ ಹಬ್ಬದ ನಿಮಿತ್ತ ತಮ ತಮ್ಮ ಊರುಗಳಿಗೆ ಹೊರಟಿರುವವರಿಗೆ ದುಪ್ಪಟ್ಟು ದರ ವಸೂಲಿ ಮಾಡುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

ಈ ಮಧ್ಯೆ ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಕೆಎಸ್‌‍ಆರ್‌ಟಿಸಿ 2 ಸಾವಿರ ಹೆಚ್ಚುವರಿ ಬಸ್‌‍ಗಳನ್ನು ನಿಯೋಜನೆ ಮಾಡಿದೆ. ಆದಾಗ್ಯೂ ಅವುಗಳಲ್ಲೂ ಬಹುತೇಕ ಸೀಟ್‌ಗಳನ್ನು ಮುಂಗಡ ಕಾಯ್ದಿರಿಸಲಾಗಿದೆ. ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಖಾಸಗಿ ಬಸ್‌‍ ಮಾಲೀಕರು, ಹಬ್ಬಕ್ಕೆ ಎರಡೂರು ದಿನಗಳ ರಜೆ ಇದೆ ಎಂದು ಮನೆ ಕಡೆ ಹೋಗಲು ಸಜ್ಜಾದವರಿಗೆ ಟಿಕೆಟ್‌ ದರ ಏರಿಸಿ ಶಾಕ್‌ ನೀಡಿದ್ದಾರೆ.

ಖಾಸಗಿ ಬಸ್‌‍ಗಳು ಟಿಕೆಟ್‌ ದರವನ್ನು ಶೇ.50-60ರಷ್ಟು ಹೆಚ್ಚಿಸಿ, ಪ್ರಯಾಣಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿವೆ. ರೈಲು, ಸರಕಾರಿ ಬಸ್‌‍ಗಳಲ್ಲಿ ಹೋಗಲು ಸಾಧ್ಯವಾಗದವರು ಖಾಸಗಿ ಬಸ್‌‍ಗಳಲ್ಲಿ ದುಪ್ಪಟ್ಟು ದರ ಕೊಟ್ಟು ಪ್ರಯಾಣ ಮಾಡುವ ಅನಿವಾರ್ಯತೆ ಇದೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 500-650 ರೂ.ನಷ್ಟಿದ್ದ ಖಾಸಗಿ ಬಸ್‌‍ಗಳ ದರ ಈಗ 1000 ರೂ.ನಿಂದ 2000 ರೂ.ವರೆಗೆ ಏರಿಕೆಯಾಗಿದೆ. ಮಂಗಳೂರಿಗೆ 650 ರೂ.ನಿಂದ 1000 ರೂ.ವರೆಗೆ ಇದ್ದ ದರ 2200ವರೆಗೆ ತಲುಪಿದೆ. ಬೆಂಗಳೂರಿನಿಂದ ಬೆಳಗಾವಿಗೆ ಸಾಮಾನ್ಯ ದಿನಗಳಲ್ಲಿ 920 ರೂ.ನಿಂದ 1500 ರೂ.ವರೆಗಿದ್ದ ದರ 4000 ರೂ.ವರೆಗೆ ಏರಿಕೆ ಮಾಡಲಾಗಿದೆ.

ಪ್ರತಿ ವರ್ಷ ಹಬ್ಬಕ್ಕೆಂದು ಊರಿನತ್ತ ಮುಖಮಾಡುವವರಿಂದ ಖಾಸಗಿ ಬಸ್‌‍ಗಳು ಹಣ ಸುಲಿಗೆ ಮಾಡುತ್ತಿವೆ. ತನಗೂ ದುಪ್ಪಟ್ಟು ದರ ಏರಿಕೆಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಮಾಡಿದಂತೆಯೇ ಈ ಬಾರಿಯೂ ದರ ಏರಿಕೆ ಮಾಡಿದ್ದು, ದುಪ್ಪಟ್ಟಾಗಿಲ್ಲ. ಶೇ.50ರಿಂದ 60 ರಷ್ಟು ಮಾತ್ರ ಏರಿಕೆ ಮಾಡಿದ್ದೇವೆ. ರಾಜ್ಯ ಸರಕಾರ ಈ ಬಾರಿಯೂ ಬಜೆಟ್‌ನಲ್ಲಿ ಖಾಸಗಿ ಬಸ್‌‍ನವರಿಗೆ ಒಂದು ರೂಪಾಯಿ ಕೂಡ ಮೀಸಲಿಟ್ಟಿಲ್ಲ. ಶಕ್ತಿ ಯೋಜನೆ ಜಾರಿಯಾದಾಗಿಂದ ಖಾಸಗಿ ಬಸ್‌‍ ಮಾಲೀಕರು ದೊಡ್ಡ ನಷ್ಟ ಎದುರಿಸುತ್ತಿದ್ದಾರೆ ಎಂದು ಖಾಸಗಿ ಬಸ್‌‍ ಮಾಲೀಕರು ಹೇಳಿದ್ದಾರೆ.

ಹಲವಾರು ಮಾರ್ಗಗಳ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿರುವುದರಿಂದ, ಅನೇಕ ಪ್ರಯಾಣಿಕರು ಕನಿಷ್ಠಪಕ್ಷ ಈ ದೀಪಾವಳಿಗೆ ಉಳಿದ ಸಮಯಕ್ಕಿಂತ ಶೇ.60ರಷ್ಟು ಹೆಚ್ಚು ಟಿಕೆಟ್‌ ಬೆಲೆ ನೀಡಿ ಹೋಗಬೇಕಾಗುತ್ತಿದೆ.

ಉದಾಹರಣೆಗೆ, ಬೆಂಗಳೂರಿನಿಂದ ಹೈದರಾಬಾದ್‌ಗೆ ಸಾಮಾನ್ಯವಾಗಿ 1,200 ರೂ. ಬೆಲೆಯ ಎಸಿ ಸ್ಲೀಪರ್‌ ಟಿಕೆಟ್‌ ಈಗ 1,800 ರಿಂದ 2,000 ರೂ.ಗಳ ನಡುವೆ ನಿಗದಿಪಡಿಸಲಾಗಿದೆ. ಬೆಂಗಳೂರು-ಚೆನ್ನೈ ಮಾರ್ಗವು ಸಾಮಾನ್ಯವಾಗಿ 800 ರಿಂದ 900 ರೂ.ಗಳವರೆಗೆ ಇದ್ದು, 1,400 ರಿಂದ 1,500 ರೂ.ಗಳಿಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ 1,100 ರೂ. ಬೆಲೆಯ ಬೆಂಗಳೂರು-ಬೆಳಗಾವಿ ಟಿಕೆಟ್‌ ಈಗ 1,700 ರೂ.ಗಳಷ್ಟಿದೆ.

ಬೆಂಗಳೂರಿನಿಂದ ಮೈಸೂರಿಗೆ ಎಸಿ ಅಲ್ಲದ ಸ್ಲೀಪರ್‌ ಸೀಟು ಬೆಲೆ ಸುಮಾರು 1,000 ರೂ.ಗಳಷ್ಟಿದೆ.ಬೆಂಗಳೂರು-ಮಂಗಳೂರಿಗೆ, ಎಸಿ ಅಲ್ಲದ ಸ್ಲೀಪರ್ಗಳ ದರಗಳು 1,300 ರೂ.ಗಳಾಗಿದ್ದರೆ, ಎಸಿ ಸ್ಲೀಪರ್‌ಗಳ ದರಗಳು ಸುಮಾರು 2,500 ರೂ.ಗಳಷ್ಟಿವೆ.

ಖಾಸಗಿ ನಿರ್ವಾಹಕರು ಕೋಟಿಗಟ್ಟಲೆ ಹೂಡಿಕೆ ಮಾಡಿ ಉದ್ಯೋಗ ಒದಗಿಸುತ್ತಾರೆ. ಆದರೆ ಸರ್ಕಾರದ ಬೆಂಬಲ ಪಡೆಯುವುದಿಲ್ಲ. ಹಬ್ಬಗಳ ಸಮಯದಲ್ಲಿ ಶುಲ್ಕ ಹೆಚ್ಚಳಕ್ಕೆ ನಮನ್ನು ದೂಷಿಸಲಾಗುತ್ತದೆ, ಇದು ನಮಗೆ ಲಾಭ ಗಳಿಸಲು ಇರುವ ಏಕೈಕ ಸಮಯ. ಕೆಎಸ್‌‍ಆರ್ಟಿಸಿ ಕೂಡ ಫ್ಲೆಕ್ಸಿ-ಫೇರ್‌ ವ್ಯವಸ್ಥೆಯನ್ನು ಅನುಸರಿಸುತ್ತದೆ. ಶಕ್ತಿಯೋಜನೆಯಡಿ ಮರುಪಾವತಿ ಪಡೆಯುತ್ತದೆ. ಆದರೆ ನಮಗೆ ಏನೂ ಸಿಗುವುದಿಲ್ಲ. ತೆರಿಗೆಗಳನ್ನು ಮನ್ನಾ ಮಾಡಿದರೆ, ನಾವು ಪ್ರತಿ ಸೀಟಿಗೆ 50ರಿಂದ 100 ರೂ.ಗಳಷ್ಟು ಕಡಿಮೆ ಶುಲ್ಕ ವಿಧಿಸಬಹುದು ಎಂಬುದು ಅವರ ಅಳಲು.

ಸೋಮವಾರ ಹಾಗೂ ಬುಧವಾರ ರಜೆ ಇರುವ ಕಾರಣ ಬಹತೇಕರು ಶುಕ್ರವಾರವೇ ಊರಿಗೆ ತೆರಳಲು ಜನರು ಮುಂದಾಗಿದ್ದರು. ಆದರೆ ಖಾಸಗಿ ಬಸ್‌‍ಗಳಲ್ಲಿ ಟಿಕೆಟ್‌ ದರ ದುಪ್ಪಟ್ಟು ಏರಿಕೆ ಆಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮರ್ಥನೆ:
ಹಬ್ಬಗಳ ಸೀಸನ್‌ನಲ್ಲಿ ಟಿಕೆಟ್‌ ದರ ಏರಿಕೆಯನ್ನು ಖಾಸಗಿ ಬಸ್‌‍ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಖಾಸಗಿ ಬಸ್‌‍ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್‌ ಶರ್ಮ ಪ್ರತಿಕ್ರಿಯಿಸಿದ್ದು, ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಬಸ್‌‍ ಮಾಲೀಕರು ಬೀದಿಗೆ ಬಂದಿದ್ದೇವೆ. ಮೊದಲು ಶಕ್ತಿ ಯೋಜನೆಯನ್ನು ನಿಲ್ಲಿಸಿ. ನಾವು ಮಾತ್ರ ಅಲ್ಲ ಕೆಎಸ್‌‍ಆರ್‌ಟಿಸಿ ಬಸ್ಸಿನವರು ಕೂಡ ಟಿಕೆಟ್‌ ದರ ಹೆಚ್ಚಳ ಮಾಡುತ್ತಾರೆ. ಇದನ್ನು ಬಂಡವಾಳ ಮಾಡಿಕೊಳ್ಳುವ ಆರ್‌ಟಿಒ ಅಧಿಕಾರಿಗಳು, ಸುಳ್ಳು ಕೇಸ್‌‍ಗಳನ್ನು ದಾಖಲಿಸಿ ನಮಗೆ ತೊಂದರೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಬಸ್ಸುಗಳ ಸಾಮಾನ್ಯ ಟಿಕೆಟ್‌ ದರ (ರೂ.ಗಳಲ್ಲಿ)
ಬೆಂಗಳೂರು-ಹಾವೇರಿ: 850-1000
ಬೆಂಗಳೂರು-ದಾವಣಗೆರೆ: 499-2000
ಬೆಂಗಳೂರು-ಕೋಲಾರ: 90-800
ಬೆಂಗಳೂರು-ಶಿವಮೊಗ್ಗ: 550-1000
ಬೆಂಗಳೂರು-ಹಾಸನ: 500-700
ಬೆಂಗಳೂರು-ಮಂಗಳೂರು: 630-1450
ಬೆಂಗಳೂರು-ಮೈಸೂರು: 250-900
ಬೆಂಗಳೂರು-ಹುಬ್ಬಳ್ಳಿ: 650-3000
ಬೆಂಗಳೂರು-ಧಾರವಾಡ: 650-1400
ಬೆಂಗಳೂರು-ಮಂಡ್ಯ: 184-400
ಖಾಸಗಿ ಬಸ್ಸುಗಳ ಈಗಿನ ಟಿಕೆಟ್‌ ದರ (ರೂ.ಗಳಲ್ಲಿ)
ಬೆಂಗಳೂರು-ಹಾವೇರಿ: 1200-4000
ಬೆಂಗಳೂರು-ದಾವಣಗೆರೆ: 1200-4000
ಬೆಂಗಳೂರು-ಕೋಲಾರ: 90-3000
ಬೆಂಗಳೂರು-ಶಿವಮೊಗ್ಗ: 950-4000
ಬೆಂಗಳೂರು-ಹಾಸನ: 1200-1500
ಬೆಂಗಳೂರು-ಮಂಗಳೂರು: 1200-2700
ಬೆಂಗಳೂರು-ಮೈಸೂರು: 250-2500
ಬೆಂಗಳೂರು-ಹುಬ್ಬಳ್ಳಿ: 1500-3800
ಬೆಂಗಳೂರು-ಧಾರವಾಡ:1400-3500

RELATED ARTICLES

Latest News