ಪುಣೆ, ಮೇ31 – ಆಪರೇಷನ್ ಸಿಂಧೂರ್ ಕುರಿತ ಪೋಸ್ಟ್ಗೆ ಪ್ರತಿಕ್ರಿಯಿಸುವಾಗ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶರ್ಮಿಷ್ಠ ಪನೋಲಿ ಎಂಬ ಕಾನೂನು ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ. ಪೋಸ್ಟ್ ಮಾಡಿದ ವಿಡಿಯೋವನ್ನು ಅಳಿಸಲಾಗಿದ್ದರೂ, ಪನೋಲಿ ಅದನ್ನು ಇನ್ಸಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದರು. ಅದರಲ್ಲಿ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು ಆಗೌರವ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಬರೆಯಲಾಗಿತ್ತು. ಈ ಬಗ್ಗೆ ಕೋಲ್ಕತ್ತಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪೊಲೀಸರು ಪನೋಲಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಈ ಪ್ರಕರಣವು ಶರ್ಮಿಷ್ಟ ಪನೋಲಿ ಎಂಬ ಮಹಿಳೆಯ ಇನ್ಸಾಗ್ರಾಮ್ ವಿಡಿಯೋಗೆ ಸಂಬಂಧಿಸಿದೆ, ಅದು ನಿರ್ದಿಷ್ಟ ಸಮುದಾಯದ ಸದಸ್ಯರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪನೋಲಿ ಮತ್ತು ಆಕೆಯ ಕುಟುಂಬ ಪರಾರಿಯಾಗಿರುವುದರಿಂದ ಆಕೆಗೆ ಕಾನೂನು ನೋಟಿಸ್ ಜಾರಿ ಮಾಡಲು ಪದೇ ಪದೇ ಮಾಡಿದ ಪ್ರಯತ್ನಗಳು ವಿಫಲವಾಗಿದ್ದವು. ಇದರ ನಂತರ, ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತು. ಅದರ ಆಧಾರದ ಮೇಲೆ ಗುರುಗ್ರಾಮದಿಂದ ಆಕೆಯನ್ನು ಬಂಧಿಸಲಾಗಿದೆ.
ಆದಾಗ್ಯೂ ವಿವಾದದ ನಂತರ, ಪನೋಲಿ ಸಾಮಾಜಿಕ ಮಾಧ್ಯಮದಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಿ ವೀಡಿಯೊಗಳು ಮತ್ತು ಪೋಸ್ಟ್ಗಳನ್ನು ಅಳಿಸಿದ್ದರು. ತಮ್ಮ ಎಕ್ಸ್ ನಾನು ಇಲ್ಲಿ ನನ್ನ ಬೇಷರತ್ತಾದ ಕ್ಷಮೆಯಾಚಿಸುತ್ತೇನೆ. ಏನೇ ಬರೆದಿದ್ದರೂ ಅದು ನನ್ನ ವೈಯಕ್ತಿಕ ಭಾವನೆಗಳು ಮತ್ತು ನಾನು ಉದ್ದೇಶಪೂರ್ವಕವಾಗಿ ಯಾರನ್ನೂ ನೋಯಿಸಲು ಬಯಸಲಿಲ್ಲ, ಆದ್ದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅದಕ್ಕಾಗಿ ವಿಷಾದಿಸುತ್ತೇನೆ.
ನಾನು ಸಹಕಾರ ಮತ್ತು ತಿಳುವಳಿಕೆಯನ್ನು ನಿರೀಕ್ಷಿಸುತ್ತೇನೆ. ಇನ್ನು ಮುಂದೆ. ನಾನು ನನ್ನ ಸಾರ್ವಜನಿಕ ಪೋಸ್ಟಲ್ಲಿ ಜಾಗರೂಕನಾಗಿರುತ್ತೇನೆ. ಮತ್ತೊಮ್ಮೆ, ದಯವಿಟ್ಟು ನನ್ನ ಕ್ಷಮೆಯನ್ನು ಸ್ವೀಕರಿಸಿ ಎಂದು ಮನವಿ ಮಾಡಿಕೊಂಡಿದ್ದರು.