Tuesday, September 2, 2025
Homeರಾಷ್ಟ್ರೀಯ | Nationalಜೈಲಾಧಿಕಾರಿಗಳ ಮೇಲೆ ಗುಂಡು ಹಾರಿಸಿ ಶಾಸಕ ಪರಾರಿ

ಜೈಲಾಧಿಕಾರಿಗಳ ಮೇಲೆ ಗುಂಡು ಹಾರಿಸಿ ಶಾಸಕ ಪರಾರಿ

Punjab AAP MLA Harmeet Pathanmajra Escapes Police Custody After Firing at Officers

ಚಂಡೀಘಡ,ಸೆ.2– ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಪಂಜಾಬ್‌ನ ಆಡಳಿತಾರೂಢ ಎಎಪಿ ಪಕ್ಷದ ಶಾಸಕ ಹರ್ಮೀತ್‌ ಸಿಂಗ್‌ ಧಿಲ್ಲೋನ್‌ ಪಠಾಣ
ಮಾಜ್ರಾ ಕರ್ನಾಲ್‌ನಲ್ಲಿ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಜೈಲಿನಿಂದ ಪರಾರಿ ಯಾಗಿದ್ದಾರೆ.

ಪಟಿಯಾಲದ ಸನೂರ್‌ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರನ್ನು ಸ್ಥಳೀಯ ಠಾಣೆಗೆ ಕರೆದೊಯ್ಯುತ್ತಿದ್ದಾಗ ಶಾಸಕರ ಸಹಾಯಕರು ಗುಂಡು ಹಾರಿಸಿ ಒಬ್ಬ ಪೊಲೀಸ್‌‍ ಅಧಿಕಾರಿಗೆ ಗಾಯಗೊಳಿಸಿದ್ದಾರೆ.ಪಠಾಣ್‌ಮಜ್ರಾ ಮತ್ತೊಬ್ಬ ಅಧಿಕಾರಿಯ ಮೇಲೆ ವಾಹನ ಚಲಾಯಿಸಿ ನಂತರ ಸ್ಕಾರ್ಪಿಯೋ ಎಸ್‌‍ಯುವಿಯಲ್ಲಿ ತನ್ನ ಸಹಚರರೊಂದಿಗೆ ಪರಾರಿಯಾಗಿದ್ದಾರೆ. ಪರಾರಿಯಾಗಲು ಬಳಸಲಾದ ಫಾರ್ಚೂನರ್‌ ಅನ್ನು ನಂತರ ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಶಾಸಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಜಿರಾಕ್‌ಪುರ ಮೂಲದ ಮಹಿಳೆಯೊಬ್ಬರು, ತನ್ನ ಜೊತೆ ಸಂಬಂಧ ಬೆಳೆಸುವ ಮೊದಲು ತಾನು ವಿಚ್ಛೇದಿತ ಎಂದು ತಪ್ಪಾಗಿ ಬಿಂಬಿಸಿಕೊಂಡಿದ್ದಕ್ಕಾಗಿ ಪಠಾಣ್‌ಮಜ್ರಾನ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಲಾಗಿತ್ತು.

2021ರಲ್ಲಿ ವಿವಾಹಿತನಾಗಿದ್ದಾಗಲೇ ಪಠಾಣ್‌ಮಜ್ರಾ ತನ್ನನ್ನು ಮದುವೆಯಾಗಿದ್ದ, ಲೈಂಗಿಕವಾಗಿ ಶೋಷಿಸಿದ್ದ. ಅಶ್ಲೀಲ ವಸ್ತುಗಳನ್ನು ಕಳುಹಿಸಿದ ಮತ್ತು ಬೆದರಿಕೆ ಹಾಕಿದ್ದ ಎಂಬ ಆರೋಪವಿದ್ದು, ಎಫ್‌ಐಆರ್‌ನಲ್ಲಿ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್‌ ಬೆದರಿಕೆ ಆರೋಪಗಳನ್ನು ಉಲ್ಲೇಖಿಸಲಾಗಿದೆ.

ಆದಾಗ್ಯೂ, ಶಾಸಕರು ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ. ಎಪಿಯ ದೆಹಲಿ ನಾಯಕತ್ವವು ಪಂಜಾಬ್‌ ಅನ್ನು ಅಕ್ರಮವಾಗಿ ಆಳುತ್ತಿದೆ ಎಂದು ಧ್ವನಿ ಎತ್ತಿದ್ದಕ್ಕಾಗಿ ಗುರಿಯಾಗಿಸಿಕೊಳ್ಳಲಾಗಿದೆ. ಅವರು ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಬಹುದು, ನಾನು ಜೈಲಿನಲ್ಲಿ ಉಳಿಯಬಹುದು, ಆದರೆ ನನ್ನ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎಂದು ಫೇಸ್‌‍ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.ಅವರ ವಕೀಲ ಸಿಮ್ರನ್‌ಜೀತ್‌ ಸಿಂಗ್‌ ಸಗ್ಗು ಕೂಡ ದೂರುದಾರರು ನ್ಯಾಯಾಲಯದಲ್ಲಿ ಲಿವ್‌-ಇನ್‌ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ, ಆರೋಪಗಳು ಆಧಾರರಹಿತವೆಂದು ಕರೆದಿದ್ದಾರೆಂದು ವಾದಿಸಿದ್ದರು.

ಪಟಿಯಾಲದಲ್ಲಿ ಪ್ರವಾಹ ನಿರ್ವಹಣೆ ಕುರಿತು ಶಾಸಕರು ಇತ್ತೀಚೆಗೆ ತಮದೇ ಸರ್ಕಾರದೊಂದಿಗೆ ಘರ್ಷಣೆ ನಡೆಸಿದ್ದರು. ಟ್ಯಾಂಗ್ರಿಯಂತಹ ನದಿಗಳನ್ನು ಹೂಳೆತ್ತುವಂತೆ ಪದೇ ಪದೇ ಮಾಡಿದ ಮನವಿಗಳನ್ನು ಹಿರಿಯ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದರು. ಇದು ಹಳ್ಳಿಗಳಲ್ಲಿ ಪ್ರವಾಹವನ್ನು ಇನ್ನಷ್ಟು ಹದಗೆಡಿಸಿದೆ ಎಂದು ಎಚ್ಚರಿಸಿದರು. ಪ್ರತೀಕಾರವಾಗಿ ಅವರ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು ಸ್ಥಳೀಯ ಪೊಲೀಸ್‌‍ ಅಧಿಕಾರಿಗಳನ್ನು ವರ್ಗಾಯಿಸಲಾಯಿತು ಎಂದು ಅವರು ಆರೋಪಿಸಿದರು.

RELATED ARTICLES

Latest News