Sunday, September 8, 2024
Homeರಾಜಕೀಯ | Politicsಸಿದ್ದರಾಮಯ್ಯನವರೇ ನಿಮ್ಮ ಅಹಂಕಾರವೇ ನಿಮನ್ನು ರಾಜಕೀಯ ಅಧಃಪತನಕ್ಕೆ ತಳ್ಳುತ್ತೆ : ಅಶೋಕ್ ಕಿಡಿ

ಸಿದ್ದರಾಮಯ್ಯನವರೇ ನಿಮ್ಮ ಅಹಂಕಾರವೇ ನಿಮನ್ನು ರಾಜಕೀಯ ಅಧಃಪತನಕ್ಕೆ ತಳ್ಳುತ್ತೆ : ಅಶೋಕ್ ಕಿಡಿ

ಬೆಂಗಳೂರು,ಜು.13- ತಾವು ಯಾವ ಸೀಮೆ ಸುಲ್ತಾನರೂ ಅಲ್ಲ, ನವಾಬರೂ ಅಲ್ಲ. ನಿಮ್ಮ ಅಹಂಕಾರವೇ ನಿಮನ್ನ ರಾಜಕೀಯ ಅಧಃಪತನಕ್ಕಿಳಿಸುವುದು ಶತ:ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಕುರಿತು ತಮ ಎಕ್ಸ್ಸ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ಹತ್ತಿದ ಏಣಿಯನ್ನೇ ಒದೆಯುವಷ್ಟು ಅಧಿಕಾರದ ಮದವೇರಿದೆಯೇ ಸಿಎಂನವರೇ? ಅಧಿಕಾರದ ಮದವೇರಿದ ಪಕ್ಷಕ್ಕೆ ಮತದಾರರು ವಸ್ತುಗಳೇ ಹೊರತು ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದಕ್ಕೆ ಚಾಮರಾಜನಗರದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳೇ ಜನರು ತಮ ಸಮಸ್ಯೆಗಳು, ಕುಂದುಕೊರತೆಗಳನ್ನು ಬರೆದು ಅಹವಾಲುಗಳನ್ನು ಕೊಟ್ಟರೆ ಅದನ್ನು ನಿಕೃಷ್ಟವಾಗಿ ಬೀದಿಪಾಲು ಮಾಡುತ್ತೀರಲ್ಲ, ಇದಕ್ಕೇನಾ ಜನ ನಿಮಗೆ ಅಧಿಕಾರ ಕೊಟ್ಟಿರುವುದು? ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ಕುರ್ಚಿ ಜನಸೇವೆ ಮಾಡಲಿ ಎಂದು ಮತದಾರರು ನೀಡಿರುವ ಭಿಕ್ಷೆ ಎಂದು ಅವರು ತಿರುಗೇಟು ನೀಡಿದ್ದಾರೆ.

RELATED ARTICLES

Latest News