Saturday, June 7, 2025
Homeರಾಜ್ಯಸಾಧನಾ ಸಮಾವೇಶಕ್ಕೆ ತೋರಿದ ಮುತುವರ್ಜಿ ಆರ್‌ಸಿಬಿ ವಿಜಯೋತ್ಸವಕ್ಕೆ ಏಕೆ ತೋರಲಿಲ್ಲ..?

ಸಾಧನಾ ಸಮಾವೇಶಕ್ಕೆ ತೋರಿದ ಮುತುವರ್ಜಿ ಆರ್‌ಸಿಬಿ ವಿಜಯೋತ್ಸವಕ್ಕೆ ಏಕೆ ತೋರಲಿಲ್ಲ..?

R Ashok Question Congress Govt

ಬೆಂಗಳೂರು,ಜೂ.6- ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್‌‍ ಸರ್ಕಾರದ ಸಾಧನ ಸಮಾವೇಶಕ್ಕೆ ನೀಡಿದ ಮುತುವರ್ಜಿಯನ್ನು ಆರ್‌ಸಿಬಿ ವಿಜಯೋತ್ಸವಕ್ಕೆ ಸರ್ಕಾರ ಏಕೆ ಕೊಡಿಲಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಸಾಧನ ಸಮಾವೇಶಕ್ಕೆ ಕೊಟ್ಟ ಸಮಯದಲ್ಲಿ ಒಂದು ಪರ್ಸೆಂಟ್‌ನ್ನು ಆರ್‌ಸಿಬಿ ವಿಜಯೋತ್ಸವಕ್ಕೆ ಸರ್ಕಾರ ಕೊಡಲಿಲ್ಲ. ಅಲ್ಲಿನ ಸಿದ್ದತೆಯನ್ನು ಸಿಎಂ, ಡಿಸಿಎಂ ಹಾಗೂ ಸಚಿವರು ಎರಡುಮೂರು ಪರಿಶೀಲಿಸಿದ್ದರು. ಇಲ್ಲಿ ಒಂದು ಗಂಟೆಯಷ್ಟೂ ಸಮಯ ಕೊಡದೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದರು ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಟ್‌ ಬೀಸಿದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಾಲ್‌ ಹಿಡಿದು ಬೌಲ್‌ ಮಾಡುತ್ತಿದ್ದಾರೆ. ಸಂಚ್ಯುರಿ ಬಾರಿಸಲು ಸಿದ್ದರಾಮಯ್ಯ ಕಾತುರರಾಗಿದ್ದಾರೆ. ಇವರನ್ನು ಬೋಲ್‌್ಡ ಮಾಡಲು ಶಿವಕುಮಾರ್‌ ಸಿದ್ದತೆ ನಡೆಸಿದ್ದಾರೆ.

ಇವರೆಡರ ಮಧ್ಯೆ ಹಿಟ್‌ ವಿಕೆಟ್‌ ಆದವರು ನಾವು. ಬಲಿಯಾದವರು ವಿದ್ಯಾರ್ಥಿಗಳು, ಅಮಾಯಕರು ಎಂದು ಬೇಸರ ವ್ಯಕ್ತಪಡಿಸಿದರು. ಆರ್‌ಸಿಬಿ ಸಂಭ್ರಮಾಚರಣೆಗೆ ಮಾಡಿದ್ದು ಆತುರದ ಕ್ರಮ ಎಂದು ಕಾಂಗ್ರೆಸ್‌‍ನ ಒಂದಿಬ್ಬರು ಹೇಳುತ್ತಿದ್ದಾರೆ. ಹೈಕೋರ್ಟ್‌ ಛೀಮಾರಿ ಹಾಕಿದ ನಂತರ ನಗರ ಪೊಲೀಸ್‌‍ ಆಯುಕ್ತ ದಯಾನಂದ್‌ ಸೇರಿದಂತೆ ಐವರು ಪೊಲೀಸ್‌‍ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಜನರೇ ಪೊಲೀಸರ ಪರವಾಗಿ ಕ್ಯಾಂಪೇನ್‌ ಮಾಡುತ್ತಿದ್ದಾರೆ ಎಂದರು.

ಕಾಲ್ತುಳಿತದಲ್ಲಿ ಗಾಯಾಳುಗಳನ್ನು ಎತ್ತಿಕೊಂಡು ಹೋದವರು, ಆಸ್ಪತ್ರೆಗೆ ಸೇರಿಸಿದವರು, ಚಿಕಿತ್ಸೆ ಕೊಡಿಸಿದವರು ಪೊಲೀಸರೇ ಹೊರತು ಕಾಂಗ್ರೆಸಿಗರಲ್ಲ. ಆದರೆ ಮೊಸರು ತಿಂದವರು ನೀವು, ಕೈ ಕೆಸರು ಮಾಡಿಕೊಂಡವರು ಅವರು. ಈಗ ಅಮಾನತು ಮಾಡಿರುವುದು ಸರಿಯೇ? ಈ ದುರಂತದಲ್ಲಿ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದರು. ಕೆಎಸ್‌‍ಸಿಎ ಆಡಳಿತ ಮಂಡಳಿಗೆ ಕಾರ್ಯಕ್ರಮ ಮಾಡಲು ಅನುಮತಿ ನೀಡದಿದ್ದರೆ ಅನಧಿಕೃತ ಕಾರ್ಯಕ್ರಮ ನಡೆದಿದ್ದರೆ ನಿಷೇಧಾಜ್ಞೆಯನ್ನು ಯಾಕೆ ಜಾರಿ ಮಾಡಲಿಲ್ಲ? ಯಾರು ಏನೇ ಹೇಳಲಿ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಪ್ರಾಂಚೈಸಿಯವರಿಗೆ ಹೇಳಿದವರು ಯಾರು ಎಂದು ಪ್ರಶ್ನಿಸಿದರು.

ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಯಾಗಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರರ್ಥ ವಿಧಾನಸೌಧ ಕರ್ನಾಟಕದಲ್ಲಿದೆ. ಕ್ರೀಡಾಂಗಣದಲ್ಲಿ ತಮಿಳುನಾಡಿಲ್ಲಿದೆ ಎಂದರ್ಥವೇ? ಎಷ್ಟೇ ದೊಡ್ಡವರಾದರೂ ಯಾರು ಕಾನೂನಿನಿಗಿಂತ ದೊಡ್ಡವರಲ್ಲ. ಮೊದಲು ಡಿಸಿ ತನಿಖೆ ಎಂದು ಹೇಳಿದರು, ನಂತರ ನಿವೃತ್ತ ನ್ಯಾಯಾಧೀಶರು ಬಳಿಕ ಸಿಐಡಿ ತನಿಖೆ ಎಂದು ಹೇಳಿದ್ದಾರೆ. ಒಂದು ಕೇಸು ಮೂರು ತನಿಖೆಯಂತಾಗಿದೆ. ಸರ್ಕಾರ ತುಘಲಕ್‌ ದರ್ಬಾರ್‌ ನಡೆಸಲು ಸಾಧ್ಯವಿಲ್ಲ. ಮೂಡಾ, ವಾಲೀಕಿ ಹಗರಣದಂತೆ ಇದನ್ನು ಮುಚ್ಚಿ ಹಾಕುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.

RELATED ARTICLES

Latest News