Monday, June 2, 2025
Homeರಾಷ್ಟ್ರೀಯ | Nationalರಾಹುಲ್‌ ಗಾಂಧಿ ಭಾರತದ ಪರವಾಗಿ ಮಾತನಾಡಿಲ್ಲ ; ಕಿಶನ್‌ರೆಡ್ಡಿ

ರಾಹುಲ್‌ ಗಾಂಧಿ ಭಾರತದ ಪರವಾಗಿ ಮಾತನಾಡಿಲ್ಲ ; ಕಿಶನ್‌ರೆಡ್ಡಿ

Rahul Gandhi Is Working Against The National Interests, Charges Kishan Reddy

ಹೈದರಾಬಾದ್, ಮೇ 26: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗಳು ಮೇಕ್ ಇನ್ ಇಂಡಿಯಾದ ಮೂಲಾಶಯವನ್ನೇ ಬುಡಮೇಲು ಮಾಡಹೊರಟಂತಿದೆ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಆರೋಪಿಸಿದ್ದಾರೆ.

ಕೆಲವು ವರ್ಷಗಳಿಂದ ರಾಹುಲ್ ಗಾಂಧಿ ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ ಅವು ಭಾರತದ ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸಲು ಮತ್ತು ನಮ್ಮ ಸ್ವದೇಶೀಕರಣ ಪ್ರಯತ್ನಗಳಿಗೆ ಅಡೆತಡೆ ಸೃಷ್ಟಿಸಲು ಮಾಡುತ್ತಿರುವ ಪ್ರಯತ್ನ ಎಂದೆನಿಸುತ್ತದೆ ಎಂದು ಅವರು ಎಕ್ಸ್ ಮಾಡಿದ್ದಾರೆ.

ಬೇರೆ ದೇಶಗಳ ಡೋನ್‌ಗಳನ್ನು ಹೊಗಳುವುದರಿಂದ ಹಿಡಿದು ರಫೇಲ್ ಒಪ್ಪಂದವನ್ನು ಹಗರಣ ಎಂದು ಕರೆಯುವವರೆಗೆ ಅಗ್ನಿವೀರರನ್ನು ಟೀಕಿಸುವುದರಿಂದ ಹಿಡಿದು ನಮ್ಮ ಮೇಕ್ ಇನ್ ಇಂಡಿಯಾ ಪ್ರಯತ್ನಗಳಿಗೆ ಹಾನಿ ಮಾಡುವವರೆಗೆ, ರಾಹುಲ್ ಗಾಂಧಿ ಎಂದಿಗೂ ಭಾರತದ ಪರವಾಗಿ ಮಾತನಾಡಿಲ್ಲ ಎಂದಿದ್ದಾರೆ.

ಭಾರತದವ ಆತ್ಮಸ್ಥೆರ್ಯ ಕುಗ್ಗಿಸಿ ಯಾರ ಪರವಾಗಿ ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ ಎಂದು ಕಿಶನ್ ರೆಡ್ಡಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಆಪರೇಷನ್ ಸಿಂಧೂರ್ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಶನ್ ರೆಡ್ಡಿ ವಾಗ್ದಾಳಿ ನಡೆಸಿದ್ದರು.

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಾಕಿಸ್ತಾನದ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಅನ್ನು ವಿಜಯಶಾಲಿಯನ್ನಾಗಿ ಮಾಡಿತು ಪಾಕಿಸ್ತಾನದಲ್ಲಿ ಭಯೋತ್ಪಾದಕ ನೆಲೆಗಳು ಮತ್ತು ಪ್ರಧಾನ ಕಚೇರಿಗಳು ನಾಶವಾಗಿವೆ, ಇಡೀ ದೇಶವು ಒಗ್ಗಟ್ಟಾಗಿದ್ದು ಸಶಸ್ತ್ರ ಪಡೆಗಳನ್ನು ಬೆಂಬಲಿಸುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು ಪುರಾವೆ ಕೇಳುತ್ತಿದೆ ಎಂದು ಕಿಶನ್ ರೆಡ್ಡಿ ಆರೋಪಿಸಿದ್ದಾರೆ.

RELATED ARTICLES

Latest News