ನವದೆಹಲಿ,ಜೂ.30- ಭಾರತೀಯ ರೈಲ್ವೆ ಇಲಾಖೆ ಕೆಲ ವರ್ಷಗಳ ನಂತರ ಹೆಚ್ಚಿಸಿರುವ ನೂತನ ಪ್ರಯಾಣ ದರ ನಾಳೆಯಿಂದ ದೇಶದಾದ್ಯಂತ ಜಾರಿಗೆ ಬರಲಿದ್ದು, ಪ್ರಯಾಣಿಕರ ಜೇಬಿಗೆ ಕೊಂಚ ಕತ್ತರಿ ಬೀಳಲಿದೆ. ಈ ಏರಿಕೆಯು ಪ್ರಯಾಣಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ. ಅದರಲ್ಲೂ ದಿನನಿತ್ಯ ರೈಲಿನಲ್ಲಿ ಪ್ರಯಾಣಿಸುವವರಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ. ಇನ್ನು ಮಾಸಿಕ ಪಾಸ್ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಮೇಲ್/ಎಕ್್ಸಪ್ರೆಸ್ ರೈಲುಗಳ ದರವು ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಾಗಲಿದೆ. ಎಸಿ ಕ್ಲಾಸ್ಗೆ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಳವಾಗಲಿದೆ. ಕರ್ನಾಟಕದ ಹಲವು ರೈಲು ಮಾರ್ಗಗಳ ಟಿಕೆಟ್ ದರವೂ ಪರಿಷ್ಕರಣೆಯಾಗಲಿದೆ. ಆದರೆ, ಸಬರ್ಬನ್ ಟಿಕೆಟ್ಗಳು ಮತ್ತು 500 ಕಿ.ಮೀ. ವರೆಗಿನ ಎರಡನೇ ದರ್ಜೆಯ ಪ್ರಯಾಣಕ್ಕೆ ಯಾವುದೇ ದರ ಏರಿಕೆ ಇರುವುದಿಲ್ಲ. ಮಾಸಿಕ ಪಾಸ್ ಟಿಕೆಟ್ಗಳ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 500 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ ಪ್ರಯಾಣಿಸಿದರೆ, ಪ್ರತಿ ಕಿ.ಮೀ.ಗೆ ಅರ್ಧ ಪೈಸೆ ಹೆಚ್ಚಳವಾಗಲಿದೆ.
ಇದಲ್ಲದೆ, ಭಾರತೀಯ ರೈಲ್ವೆ ಇಲಾಖೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ಗೆ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಇದು ನಾಳೆಯಿಂದ ಜಾರಿಗೆ ಬರಲಿದೆ. ಜೂನ್ 10 ರಂದು ರೈಲ್ವೆ ಸಚಿವಾಲಯವು ಹೊರಡಿಸಿದ ನಿರ್ದೇಶನದ ಪ್ರಕಾರ, ಯೋಜನೆಯ ಪ್ರಯೋಜನಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.
ಉಪನಗರ ರೈಲು ಮತ್ತು ಮಾಸಿಕ ಪಾಸ್ ದರದಲ್ಲಿ ಯಾವುದೇ ಏರಿಕೆ ಇರುವುದಿಲ್ಲ. ಸಾಮಾನ್ಯ ರೈಲುಗಳ ಸೆಕೆಂಡ್ ಕ್ಲಾಸ್ ಬೋಗಿಗಳಲ್ಲಿ 500 ಕಿ.ಮೀ.ವರೆಗೆ ಯಾವುದೇ ದರ ಏರಿಕೆ ಇರುವುದಿಲ್ಲ. ಒಂದು ವೇಳೆ ಪ್ರಯಾಣದ ದೂರ 500 ಕಿ.ಮೀ. ದಾಟಿದರೆ, ಪ್ರತಿ ಕಿ.ಮೀ.ಗೆ ಅರ್ಧ ಪೈಸೆ ಹೆಚ್ಚಾಗಲಿದೆ.ಹೊಸ ದರ ನಿಯಮಗಳ ಕುರಿತು ಸಾಫ್್ಟವೇರ್ನಲ್ಲಿ ಬದಲಾವಣೆಗಳನ್ನು ಮಾಡಲು ರೈಲ್ವೆ ಸಚಿವಾಲಯವು ಸಿಆರ್ ಐಎಸ್ ಮತ್ತು ಐಆರ್ಸಿಟಿಸಿ ಗೆ ಸೂಚನೆ ನೀಡಿದೆ. ಎಲ್ಲ ಬದಲಾವಣೆಗಳ ಬಗ್ಗೆ ವಲಯ ಪ್ರಬಂಧಕರಿಗೆ ಮಾಹಿತಿ ನೀಡುವಂತೆ ತಿಳಿಸಿದೆ.
ಆಧಾರ್ ಕಡ್ಡಾಯ :
ತತ್ಕಾಲ್ ಟಿಕೆಟ್ ಕಾಯ್ದಿರಿಸಬೇಕಾದರೆ ಆಧಾರ್ ದೃಢೀಕರಣ ಅಗತ್ಯ ಎಂದು ರೈಲ್ವೆ ಸಚಿವಾಲಯವು ಜೂನ್ 10 ರಂದು ಪ್ರಕಟಿಸಿತ್ತು. ಇದು ಕೂಡಾ ನಾಳೆಯಿಂದಲೇ ಜಾರಿಗೆ ಬರಲಿದೆ. ಜುಲೈ 15 ರಿಂದ ತತ್ಕಾಲ್ ಟಿಕೆಟ್ ಬುಕ್ ಮಾಡಲು ಆಧಾರ್ ಆಧಾರಿತ ಒಟಿಪಿ ದೃಢೀಕರಣದ ಅಗತ್ಯವಿದೆ. ಐಆರ್ಸಿಟಿಸಿ ಅಧಿಕೃತ ಬುಕಿಂಗ್ ಏಜೆಂಜ್ಗಳು ತತ್ಕಾಲ್ ಟಿಕೆಟ್ ಬುಕಿಂಗ್ ಆರಂಭದ ಮೊದಲ ಅರ್ಧ ಗಂಟೆ ಬಳಸಲು ಸಾಧ್ಯವಿಲ್ಲ.
ಎಸಿ ಕ್ಲಾಸ್ ಕಾಯ್ದಿರಿಸುವಿಕೆಯಲ್ಲಿ ಬೆಳಗ್ಗೆ 10 ರಿಂದ 10:30 ರವರೆಗೆ ನಿರ್ಬಂಧ ಇರುತ್ತದೆ. ನಾನ್ ಎಸಿ ಆದರೆ ಬೆಳಗ್ಗೆ 11 ರಿಂದ 11:30 ರವರೆಗೆ ನಿರ್ಬಂಧ ಇರುತ್ತದೆ. ಈ ಸಮಯದಲ್ಲಿ ಏಜೆಂಟ್ಗಳಿಗೆ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಇರುವುದಿಲ್ಲ.ಭಾರತೀಯ ರೈಲ್ವೆಯ ಕಾರ್ಯಾಚರಣೆ ವೆಚ್ಚ ಒಂದು ಕಿ.ಮೀ.ಗೆ 1.38 ರೂ. ಇದೆ. ಆದರೆ, ಈಗಿನ ಟಿಕೆಟ್ ದರ ಪ್ರತಿ ಕಿ.ಮೀ.ಗೆ 73 ಪೈಸೆ ಮಾತ್ರ ಇದೆ.
ರೈಲ್ವೆ ಸಚಿವ ವೈಷ್ಣವ್ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಪ್ರಸ್ತುತ ನಾಲ್ಕು ಗಂಟೆಗಳ ವ್ಯವಸ್ಥೆಯ ಬದಲಿಗೆ ರೈಲು ನಿರ್ಗಮನಕ್ಕೆ ಎಂಟು ಗಂಟೆಗಳ ಮೊದಲು ರಿಸರ್ವ್ ಪಟ್ಟಿ ಸಿದ್ಧಪಡಿಸಲು ಕೆಲಸ ಮಾಡುತ್ತಿದ್ದಾರೆ.
ದೂರದ ಸ್ಥಳಗಳಿಂದ ಅಥವಾ ಪ್ರಮುಖ ನಗರಗಳ ಉಪನಗರಗಳಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ದೂರದ ರೈಲುಗಳನ್ನು ಸರಿಯಾದ ಸಮಯಕ್ಕೆ ಕ್ಯಾಚ್ ಮಾಡಲು ಸಾಧ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ವೇಟಿಂಗ್ ಲಿಸ್ಟ್ನಲ್ಲಿ ದೃಢೀಕರಿಸದಿದ್ದಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಇದು ಹೆಚ್ಚಿನ ಸಮಯವನ್ನು ಒದಗಿಸುತ್ತದೆ ಎಂದು ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ನವೀಕರಿಸಿದ ಪ್ರಯಾಣಿಕರ ಟಿಕೆಟ್, ರಿಸರ್ವೇಷನ್ ವ್ಯವಸ್ಥೆಯು ಪ್ರತಿ ನಿಮಿಷಕ್ಕೆ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕಿಂಗ್ಗಳನ್ನು ಅನುಮತಿಸುತ್ತದೆ. ಇದು ಪ್ರಸ್ತುತ ಪ್ರತಿ ನಿಮಿಷಕ್ಕೆ 32,000 ಟಿಕೆಟ್ಗಳಿಂದ ಸರಿಸುಮಾರು ಐದು ಪಟ್ಟು ಹೆಚ್ಚಾಗುತ್ತದೆ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.
ಹೊಸ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಬಹುಭಾಷಾ ಮತ್ತು ಬಳಕೆದಾರ ಸ್ನೇಹಿ ಬುಕಿಂಗ್ ಮತ್ತು ವಿಚಾರಣಾ ಇಂಟರ್ಫೇಸ್ ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ. ಹೊಸ ಬಳಕೆದಾರರು ತಮ ಸೀಟಿನ ಆಯ್ಕೆ ಹಾಗೂ ಟಿಕೆಟ್ ದರದ ಕ್ಯಾಲೆಂಡರ್ ನೋಡಲು ಇದರಲ್ಲಿ ಸಾಧ್ಯವಾಗಲಿದೆ. ಇದು ದಿವ್ಯಾಂಗರು, ವಿದ್ಯಾರ್ಥಿಗಳು ಮತ್ತು ರೋಗಿಗಳು ಇತ್ಯಾದಿಗಳಿಗೆ ಸಂಯೋಜಿತ ಸೌಲಭ್ಯಗಳನ್ನು ಸಹ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೃಢೀಕೃತ ಬಳಕೆದಾರರಿಗೆ ಮಾತ್ರ ತತ್ಕಾಲ್ ಬುಕಿಂಗ್ :
ತತ್ಕಾಲ್ ಬುಕಿಂಗ್ಗಳಿಗಾಗಿ ಹಾಗೂ ಸುವ್ಯವಸ್ಥಿತ ದೃಢೀಕರಣಕ್ಕಾಗಿ ಭಾರತೀಯ ರೈಲ್ವೆಯು ಜುಲೈ 1, 2025 ರಿಂದ ಐಖಅಖಿಅ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ನಲ್ಲಿ ದೃಢೀಕೃತ ಬಳಕೆದಾರರಿಗೆ ಮಾತ್ರ ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಲು ಅನುಮತಿಸುತ್ತದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.ಜುಲೈ ಅಂತ್ಯದಿಂದ ತತ್ಕಾಲ್ ಬುಕಿಂಗ್ಗಳಿಗಾಗಿ ಆಧಾರಿತ ದೃಢೀಕರಣ ಚಾಲನೆ ನೀಡಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟದಲ್ಲಿ ದರ ಹೆಚ್ಚಳದ ಪಟ್ಟಿ:
ಬೆಂಗಳೂರು ಕಲಬುರಗಿ (2 ಕ್ಲಾಸ್ ) – 5.5 ರೂ.
ಬೆಂಗಳೂರು ವಿಜಯಪುರ (2 ಕ್ಲಾಸ್ ) – 7.1 ರೂ.
ಬೆಂಗಳೂರು ಮೈಸೂರು (ಎಸಿ ಕೋಚ್) – 2.8 ರೂ.
ಬೆಂಗಳೂರು ಹುಬ್ಬಳ್ಳಿ (ಎಸಿ ಕೋಚ್) – 9.4 ರೂ.
ಬೆಂಗಳೂರು ಮಂಗಳೂರು (ಎಸಿ ಕೋಚ್) – 8.2 ರೂ.
ಬೆಂಗಳೂರು ಕಲಬುರಗಿ (ಎಸಿ ಕೋಚ್) – 11 ರೂ.
ಬೆಂಗಳೂರು ವಿಜಯಪುರ (ಎಸಿ ಕೋಚ್) – 14.2 ರೂ.