Sunday, June 8, 2025
Homeರಾಜ್ಯಆರ್‌ಸಿಬಿ ಸಂಭ್ರಮ ದುರಂತ : ಐಪಿಎಸ್‌‍ಗಳ ಬೆನ್ನಲ್ಲೇ ಐಎಎಸ್‌‍ ತಲೆದಂಡಕ್ಕೆ ಸಿದ್ಧತೆ

ಆರ್‌ಸಿಬಿ ಸಂಭ್ರಮ ದುರಂತ : ಐಪಿಎಸ್‌‍ಗಳ ಬೆನ್ನಲ್ಲೇ ಐಎಎಸ್‌‍ ತಲೆದಂಡಕ್ಕೆ ಸಿದ್ಧತೆ

RCB celebration tragedy : to suspend IAS officers

ಬೆಂಗಳೂರು,ಜೂ.8– ಐಪಿಎಲ್‌ನ ಸರಣಿಯ ವಿಜೇತ ತಂಡವನ್ನು ಅಭಿನಂದಿ ಸಲು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜಿಸಲು ಸಮಯವಕಾಶ ಬೇಕೆಂದು ಡಿಸಿಪಿ ಕರಿ ಬಸವನಗೌಡ ಬರೆದಿದ್ದ ಪತ್ರವನ್ನು ಡಿಪಿಆರ್‌ಎನ ಕಾರ್ಯದರ್ಶಿ ಕಡೆಗಣಿಸಿದಾರೆಂಬ ಆರೋಪ ಕೇಳಿಬಂದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ನಗರ ಪೊಲೀಸ್‌‍ ಆಯುಕ್ತರಾಗಿದ್ದ ಬಿ. ದಯಾನಂದ ಸೇರಿದಂತೆ ಐವರು ಹಿರಿಯ ಅಧಿಕಾರಿಗಳ ತಲೆದಂಡವಾಗಿದೆ. ಡಿಸಿಪಿ ಅವರ ಪತ್ರವನ್ನು ಕಡೆಗಣಿಸಿದ್ದಕ್ಕಾಗಿ ಐಎಎಸ್‌‍ ಅಧೀಕಾರಿ ಸತ್ಯವತಿ ಅವರ ವಿರುದ್ಧ ಕ್ರಮವಾಗಬೇಕೆಂಬ ಚರ್ಚೆಗಳು ಶುರುವಾಗಿವೆ.

ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಕರಿಬಸವನಗೌಡ ಅವರು ಜೂನ್‌ 4 ರಂದು ಡಿಪಿಆರ್‌ಎನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಏಕಾಏಕಿ ಕಾರ್ಯಕ್ರಮ ಮಾಡುವುದು ಸುಲಭ ಸಾಧ್ಯವಲ್ಲ ಎಂದು ಎಚ್ಚರಿಕೆ ನೀಡಿದ್ದರು. ಈ ಪತ್ರದ ಅಂಶಗಳನ್ನು ಸತ್ಯವತಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ತಿಳಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕಾರಣಕ್ಕಾಗಿ ಸತ್ಯವತಿ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಒತ್ತಡಗಳು ಹೆಚ್ಚಿವೆ.

ಡಿಸಿಪಿ ಅವರು ಬರೆದ ಪತ್ರದಲ್ಲಿ ಆರ್‌ಸಿಬಿಗೆ ಭಾರಿ ಪ್ರಮಾಣದ ಅಭಿಮಾನಿಗಳಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯ ಕ್ರಮ ಆಯೋಜಿಸಿದರೆ ಭದ್ರತೆಗೆ ಸಮಸ್ಯೆಯಾಗಿಲಿದೆ. ಪಾಸ್‌‍ಗಳ ವಿತರಣೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ ಕುಟುಂಬದ ಸದಸ್ಯರನ್ನು ಕರೆತರದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

ವಿಧಾನ ಸೌಧ ವೈಟಲ್‌ ಇನ್ಸಟಾಲೇಷನ್‌ ಕಟ್ಟಡವಾಗಿರುವುದರಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹೆಚ್ಚಿಸಬೇಕಿದೆ. ವೇದಿಕೆಯನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಬಳಿಕ ಭದ್ರತೆ ಹಾಗೂ ಸುರಕ್ಷತೆ ಪರಿಶೀಲನೆಗೆ ಬಿಟ್ಟುಕೊಡಬೇಕು. ವಿದ್ಯುತ್‌ ವಿಭಾಗದಿಂದ ಫಿಟ್‌ನೆಸ್‌‍ ಸರ್ಟಿಫಿಕೇಟ್‌ ಅಗತ್ಯವಿದೆ ಎಂಬ ಸಲಹೆ ನೀಡಿದ್ದರು.

ಕಾರ್ಯಕ್ರಮದಲ್ಲಿ ಡ್ರೋನ್‌ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುವುದಿಲ್ಲ. ಭದ್ರತೆಗಾಗಿ ಸಿಬ್ಬಂಧಿ ಹಾಗೂ ಅಧಿಕಾರಿಗಳನ್ನು ಹೊರಭಾಗದಿಂದ ನಿಯೋಜಿಸಬೇಕಿರುವುದರಿಂದಾಗಿ ಸಮಯವಕಾಶದ ಅಗತ್ಯವಿದೆ ಎಂದು ಡಿಸಿಪಿ ತಮ ಪತ್ರದಲ್ಲಿ ಉಲ್ಲೇಖಿಸಿದ್ದರು. ಸರ್ಕಾರ ಇದನ್ನು ಕಡೆಗಣಿಸಿತ್ತು ಎಂಬ ಆರೋಪಗಳಿವೆ.ವಿಧಾನಸೌಧದ ಮುಂಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಸರ್ಕಾರ ಆರಂಭದಿಂದಲೂ ಸಮರ್ಥಿಸಿಕೊಳ್ಳುತ್ತಿದೆ.

ಡಿಸಿಪಿ ಪತ್ರದ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೆ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದ ಬಳಿಯೂ ದುರ್ಘಟನೆಗಳು ಸಂಭವಿಸುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.
ಕಾಳ್ತುಳಿತದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಸರ್ಕಾರ ಈಗ ಐಎಎಸ್‌‍ ಅಧಿಕಾರಿಗಳ ವಿರುದ್ಧವು ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News