Friday, June 6, 2025
Homeರಾಜ್ಯಆರ್‌ಸಿಬಿ-ಕೆಸಿಎಸ್‌ಎನಿಂದ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ

ಆರ್‌ಸಿಬಿ-ಕೆಸಿಎಸ್‌ಎನಿಂದ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ

RCB-KCSA announces Rs 5 lakh compensation to families of deceased

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೆನ್ನೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟವರಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಆರ್‌ಸಿಬಿ ಆಡಳಿತ ಮಂಡಳಿ ತಿಳಿಸಿದೆ.

ದೇಶಾದ್ಯಂತ ಭಾರಿ ಟೀಕೆಗೆ ಒಳಗಾದ ಈ ಪ್ರಕರಣದಲ್ಲಿ ಆರ್‌ಸಿಬಿ ತನ್ನ ಅಭಿಮಾನಿಗಳಿಗಾಗಿ ಸಂತಾಪ ಸೂಚಿಸಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಯನ್ನು ಘೋಷಣೆ ಮಾಡಿದೆ.

ಇನ್ನು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರಿಗಾಗಿ ಕೂಡ ನೆರವನ್ನು ನೀಡಲಿದ್ದು ಇದಕ್ಕಾಗಿ ವಿಶೇಷ ನಿಧಿಯನ್ನು ಕೂಡ ರಚಿಸಲಾಗುವುದು ಎಂದು ಆರ್‌ಸಿಬಿ ಮ್ಯಾನೇಜ್ಮೆಂಟ್ ಪ್ರಕಟಣೆ ತಿಳಿಸಿದೆ.

ಈಗಾಗಲೇ ಆರ್‌ಸಿಬಿ ತಂಡದ ನಾಯಕ ರಜತ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಕೂಡ ನೆರವು ನೀಡಲು ಮುಂದಾಗುತ್ತಿದ್ದಾರೆ ಎಂಬ ಮೂಲಗಳು ತಿಳಿಸಿವೆ. ದೇಶದ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಬಿಸಿಸಿಐ ಕೂಡ ಇದಕ್ಕೆ ಸ್ಪಂದಿಸಬೇಕು ಮತ್ತು ಐಪಿಎಲ್ ಕೋಶವು ಕೂಡ ಇದರ ಬಗ್ಗೆ ಗಂಭೀರ ಚಿಂತನೆ ಮಾಡಿ ಪರಿಹಾರ ಮೊತ್ತವನ್ನು ನೀಡಬೇಕು ಎಂಬ ಒತ್ತಡ ಅಭಿಮಾನಿ ವೃದ್ಧ ದಿಂದ ಕೇಳಿ ಬಂದಿದೆ.

ಇದೆ ವೇಳೆ ರಾಜ್ಯ ಸರ್ಕಾರ ಕೂಡ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಕೆಸಿಎಸ್‌ಎ ಕೂಡ ತಲಾ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದು ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ಪರಿಹಾರ ಘೋಷಣೆ ಮಾಡಿದ್ದಂತಾಗಿದೆ.

RELATED ARTICLES

Latest News