ಬೆಂಗಳೂರು, ಜೂ.4– ರೋಚಕ ಗೆಲುವು ಸಾಧಿಸಿರುವ ಆರ್ಸಿಬಿ ತಂಡವನ್ನು ಅಭಿನಂದಿಸಲು ನಗರದಲ್ಲಿ ಹಮ್ಮಿಕೊಂಡಿರುವ ವಿಜಯೋತ್ಸವ ಸಮಾರಂಭದ ಭದ್ರತೆಗಾಗಿ ಅಧಿಕಾರಿಗಳೂ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಪೊಲೀಸರ ಜೊತೆಗೆ 20 ಫ್ಲಟೂನ್ ಕೆಎಸ್ಆರ್ಪಿ, 25 ಫಟೂನ್ ಸಿಎಆರ್ ತುಕಡಿಗಳನ್ನು ಬಂದೋಬಸ್ತನಲ್ಲಿ ನಿಯೋಜಿಸಲಾಗಿದೆ.
ನಗರದ ಎಲ್ಲಾ ಡಿಸಿಪಿಗಳು, ಅಡಿಷನಲ್ ಕಮಿಷನರ್, ಜಂಟಿ ಕಮಿಷನರ್ಗಳು ಬಂದೋಬಸ್ತ್ನಲ್ಲಿರುತ್ತಾರೆ.
RCB ಹಬ್ಬ : ಬೆಂಗಳೂರಲ್ಲಿ ರಾಯಲ್ ಚಾಂಪಿಯನ್ಸ್ ಗ್ರ್ಯಾಂಡ್ ಸೆಲೆಬ್ರೆಷನ್ (Live)
ವಿಶೇಷ ವಿಮಾನದಲ್ಲಿ ಆಗಮಿಸುವ ಆರ್ಸಿಬಿ ತಂಡವನ್ನು ಹೆಚ್ ಎಎಲ್ ಏರ್ಪೊರ್ಟ್ನಿಂದ ತಾಜ್ ವೆಸ್ಟೆಂಡ್ ಹೋಟೆಲ್ಗೆ ಕರೆದೊಯ್ಯಲಾಗುತ್ತಿದೆ. ನಂತರ ಈ ಹೋಟೆಲ್ನಿಂದ ವಿಧಾನ ಸೌಧಕ್ಕೆ ಆರ್ಸಿಬಿ ತಂಡವನ್ನು ಕರೆತರಲಾಗುತ್ತದೆ. ತದ ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರೆದೊಯ್ಯವ ಹಿನ್ನೆಲೆಯಲ್ಲಿ, ಈ ಮೂರೂ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಆರ್ಸಿಬಿ ತಂಡದ ವಿಜಯೋತ್ಸವ ಸಮಾರಂಭಕ್ಕೆ ಆಗಮಿಸುವ ಅಭಿಮಾನಿಗಳು ಅತಿರೇಕಕ್ಕೆ ಒಳಗಾಗದೇ ಸೌಜನ್ಯದಿಂದ ವರ್ತಿಸಬೇಕೆಂದು ಅವರು ಸೂಚಿಸಿದ್ದಾರೆ.