ಅಹಮದಾಬಾದ್, ಜೂ. 2- ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯವು ವಿಶ್ವದ ಅತಿ ದೊಡ್ಡ ಮೋದಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದ್ದು ಇಡೀ ಜಗತ್ತಿನ ಕ್ರಿಕೆಟ್ ಪ್ರಿಯರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಪ್ ಗೆಲ್ಲುವ ತವಕದಲ್ಲಿ ರಾಯಲ್ ಚಾಲೆಂಜರ್ರಸ ಬೆಂಗಳೂರು (ಆರ್ಸಿಬಿ) ಮತ್ತು ಪಂಜಾಬ್ ಕಿಂಗ್ಸ್ ನಡುವೆ ನೇರ ಹಣಾಹಣಿ ನಡೆಯಲಿದೆ.
ಯಾರೇ ಗೆದ್ದರೂ ಇದು ಅವರಿಗೆ ಚೊಚ್ಚಲ ಪ್ರಶಸ್ತಿಯಾಗಲಿದೆ. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ನೇರವಾಗಿ ಪಂದ್ಯವನ್ನು ವೀಕ್ಷಿಸಬಹುದಾದ ಮತ್ತು ಟಿ-20 ಕ್ರಿಕೆಟ್ನಲ್ಲೇ ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ಐಪಿಎಲ್ 2 ತಿಂಗಳು 12 ತಂಡಗಳು ಸೆಣಸಾಟ ನಡೆಸಿ ಅಂತಿಮ ಹಂತಕ್ಕೆ ಎರಡು ತಂಡಗಳು ಈಗ ಆಯ್ಕೆಯಾಗಿ ಬಂದು ನಿಂತಿದೆ.
ನಿನ್ನೆ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ 5 ಬಾರಿ ಐಪಿಎಲ್ ಗೆದ್ದಿದ್ದ ಮುಂಬೈ ತಂಡವನ್ನು ಮಣಿಸುವ ಮೂಲಕ ಪಂಜಾಬ್ ಫೈನಲ್ ತಲುಪಿದರೆ ಐಪಿಎಲ್ 18ರ ಆವೃತ್ತಿಯಲ್ಲಿ ಸತತ ಗೆಲುವಿನ ನಾಗಲೋಟದಲ್ಲಿ ಆರ್ಸಿಬಿ ಮೊದಲ ತಂಡವಾಗಿ ಈ ಬಾರಿ ಫೈನಲ್ ಗೆ ಅಡಿ ಇಟ್ಟಿತ್ತು.
ಹೊಸ ತಂಡದ ಸಾರಥ್ಯ ವಹಿಸಿ ಶ್ರೇಯಸ್ ಐಯ್ಯರ್ ಪಂಜಾಬ್ ತಂಡವನ್ನು ಫೈನಲ್ಗೆ ತಂದು ಮತ್ತೊಮೆ ತನ್ನ ಸಾಮಾರ್ಥ್ಯ ಪ್ರದರ್ಶನಕ್ಕೆ ಮುಂದಾದರೆ 18 ನಮದೇ ಎಂಬ ಛಲದಲ್ಲಿ ವಿರಾಟ್ಕೊಹ್ಲಿ ಕನಸು ನನಸು ಮಾಡಲು ಅಚ್ಚರಿ ಎಂಬಂತೆ ಆರ್ಸಿಬಿ ತಂಡದ ನಾಯಕನಾದ ರಜತ್ ಪತ್ತೆದಾರ್ ಕೂಡ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ.
ಎರಡೂ ತಂಡ ಬಲಿಷ್ಠವಾಗಿದ್ದು, ಆರ್ಸಿಬಿಗೆ ಇದು ಸುವರ್ಣವಕಾಶವಾಗಿದೆ. ಅತೀ ಹೆಚ್ಚು ಅಭಿಮಾನ ಬಳಗವನ್ನು ಹೊಂದಿರುವ ಬೆಂಗಳೂರು ತಂಡ ಕಪ್ ನಮದೇ ಎಂಬ ಘೋಷಣೆ ಕೂಗುತ್ತಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಮಿಂಚುತ್ತಿರುವ ಪ್ರತಿಯೊಬ್ಬ ಆಟಗಾರನೂ ಸಮಯಕ್ಕೆ ತಕ್ಕಂತೆ ಆಟ ಪ್ರದರ್ಶಿಸುವ ಜಾಣೆ ಹೊಂದಿದ್ದು, ಈಗಾಗಲೇ ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ತಂಡವನ್ನು ಮಣಿಸಿ ಆರ್ಸಿಬಿ ಫೈನಲ್ ತಲುಪಿತು. ಹೀಗಾಗಿ ಗೆಲುವಿಗೆ ಇನ್ನೊಂದೆ ಹೆಜ್ಜೆ ಎಂಬಂತೆ ಫೈನಲ್ ಪಂದ್ಯದಲ್ಲಿ ಶಕ್ತಿ ಮೀರಿ ಪ್ರದರ್ಶನ ಮಾಡಲು ಎರಡು ತಂಡಗಳು ರಣತಂತ್ರವನ್ನು ಹೆಣೆದಿದೆ.