Friday, October 17, 2025
Homeಜಿಲ್ಲಾ ಸುದ್ದಿಗಳು | District News28 ದಿನಗಳಲ್ಲಿ ಮಲೆ ಮಹದೇಶ್ವರನ ಹುಂಡಿಗೆ ಹರಿದು ಬಂತು 2.27 ಕೋಟಿ ರೂ. ಕಾಣಿಕೆ

28 ದಿನಗಳಲ್ಲಿ ಮಲೆ ಮಹದೇಶ್ವರನ ಹುಂಡಿಗೆ ಹರಿದು ಬಂತು 2.27 ಕೋಟಿ ರೂ. ಕಾಣಿಕೆ

Rs 2.27 crores Donation collected in Male Mahadeshwara. Donation temple within 28 days

ಹನೂರು,ಅ.17-ತಾಲ್ಲೂಕಿನ ಪ್ರಸಿದ್ದ ಪುಣ್ಯಯಾತ್ರ ಸ್ಥಳ ಶ್ರೀಕ್ಷೇತ್ರ ಮಲೆ ಮಹದೇಶ್ವರಬೆಟ್ಟ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, 28 ದಿನಗಳಲ್ಲಿ 2.27 ಕೋಟಿ ರೂ. ಸಂಗ್ರಹವಾಗಿದೆ. ಇದಲ್ಲದೆ 9 ವಿದೇಶಿ ನೋಟುಗಳು 2 ಸಾವಿರ ರೂ. ಮುಖ ಬೆಲೆ 9 ನೋಟುಗಳು ಸಹ ದೊರೆತಿವೆ.

ಸಾಲೂರು ಬೃಹನಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 28 ದಿನಗಳಲ್ಲಿ 2,27,24,757.00 ಕೋಟಿ ರೂ. ನಗದು ರೂಪದಲ್ಲಿ (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ 46 ಗ್ರಾಂ ಚಿನ್ನ, 01 ಕೆ.ಜಿ 350 ಗ್ರಾಂ ಬೆಳ್ಳಿ ಹುಂಡಿಯಲ್ಲಿ ದೊರೆತಿದೆ.

ಭಕ್ತರಿಂದ ಹರಕೆ ರೂಪದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಣಿಕೆ ಸಂದಿರುವುದು ಮಹಾಲಯ ಅಮಾವಾಸೆ, ಆಯುಧ ಪೂಜೆ, ಹುಣಿಮೆ ರಜೆ ದಿನಗಳಂದು ಎಂದು ಮಂಡಳಿ ತಿಳಿಸಿದೆ.
ಸರ್ಕಾರ ಶಕ್ತಿ ಯೋಜನೆ ಮಹಿಳೆಯರ ಉಚಿತ ಪ್ರಯಾಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದರಿಂದ ದೊಡ್ಡ ಮೊತ್ತದ ಹಣ ಸಂಗ್ರಹವಾಗಿದೆ.
ಬಸ್‌‍ ನಿಲ್ದಾಣದ ವಾಣಿಜ್ಯ ಕಟ್ಟಡದಲ್ಲಿ ಸಿಸಿಕ್ಯಾಮರಾ ಹಾಗೂ ಪೊಲೀಸರ ಕಣ್ಗಾವಲಿನಲ್ಲಿ ಪ್ರಾಧಿಕಾರದ ಸಿಬ್ಬಂಧಿಗಳು ಹಾಗೂ ಕೊಳ್ಳೇಗಾಲ ಬ್ಯಾಂಕ್‌ ಆಫ್‌ ಬರೋಡ ಸ್ಥಳೀಯ ಶಾಖೆ ಸಿಬ್ಬಂದಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.

ಪ್ರಾಧಿಕಾರದ ಉಪಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್‌, ಲೆಕ್ಕಧೀಕ್ಷಕ ಗುರುಮಲ್ಲಯ್ಯ, ಸರಗೂರು ಮಹದೇವಸ್ವಾಮಿ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿ ಕಲ್ಯಾಣಮ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್‌‍ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಮರಿಸ್ವಾಮಿ ಕಾಗಲವಾಡಿ ಭಾಗ್ಯಮ ಕುಪ್ಯಾ ಮಹದೇವಪ್ಪ ಕೀಳನಪುರ ಗಂಗನ ತಿಮಯ್ಯ ಹಾರೋಹಳ್ಳಿ ಹಾಜರಿದ್ದರು.

RELATED ARTICLES

Latest News