ಬೆಂಗಳೂರು,ಜು.7-ಪತಿಯ ಕುಡಿತದ ಚಟದಿಂದ ಕುಟುಂಬ ನಿರ್ವಹಿಸಲಾಗದೇ ತಾಯಿಯೇ ತನ್ನ ಕರುಳ ಕುಡಿಯನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನೆಲಮಂಗಲದಲ್ಲಿ ನಡೆದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನಾಗಕಲ್ಲು ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಪವನ್-ರಾಧೆ ದಂಪತಿ ನಾಗಕಲ್ಲು ಗ್ರಾಮದಲ್ಲಿ ನೆಲೆಸಿದ್ದು, ಪವನ್ ಬಡತನದಿಂದ ಮನೆ ನಿಭಾಯಿಸಲಾಗದೆ ಕುಡಿತಕ್ಕೆ ದಾಸನಾಗಿದ್ದ. ಪತಿಯ ವರ್ತನೆಯಿಂದ ಪತ್ನಿ ಬೇಸತ್ತಿದ್ದಳು.
ಒಂದು ಕಡೆ ಬಡತನ, ಮತ್ತೊಂದು ಕಡೆ ಪತಿಯ ಕುಡಿತದ ಚಟದಿಂದ ಕುಟುಂಬ ನಿರ್ವಹಣೆ ಸಾಧ್ಯವಾಗದೆ ಮಗುವಿನ ಆರೈಕೆ ಕಷ್ಟವಾಗಿ ಹೆತ್ತ ತಾಯಿಯೇ ತನ್ನ ಒಂದೂವರೆ ತಿಂಗಳ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ತಡರಾತ್ರಿ ಹತ್ಯೆ ಮಾಡಿದ್ದಾಳೆ. ಇಂದು ಬೆಳಗ್ಗೆ ಸುದ್ದಿ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
- ಕ್ರಿಕೆಟ್ಗೆ ವಿದಾಯ ಹೇಳಿದ ಚೇತೇಶ್ವರ ಪೂಜಾರ
- ದೆಹಲಿಗೂ ಹೋಗಿತ್ತು ತಲೆಬುರುಡೆ! ಚಿನ್ನಯ್ಯ ಬಂಧನದ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್
- ತೆರಿಗೆ ಹೊರೆ ಕಡಿತಕ್ಕೆ ಸೆ.3ರಿಂದ ಜಿಎಸ್ಟಿ ಸಭೆ, ದೀಪಾವಳಿ ಗಿಫ್ಟ್
- ಡಿಡಿಓಗಳ ಹಂತದಲ್ಲೆ ಆರು ತಿಂಗಳ ಒಳಗಿನ ಮುದ್ರಾಂಕ ಶುಲ್ಕ ಮರುಪಾವತಿ
- ಆನ್ಲೈನ್ ಗೇಮಿಂಗ್ ನಿಯಂತ್ರಣ ಮಸೂದೆ : ನೆಮ್ಮದಿಯ ನಿಟ್ಟುಸಿರುಬಿಟ್ಟ ಕುಟುಂಬಗಳು, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 2 ಲಕ್ಷ ಮಂದಿ