Tuesday, March 25, 2025
Homeರಾಷ್ಟ್ರೀಯ | Nationalಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಗುಜರಿ ವ್ಯಾಪಾರಿ ಬಂಧನ

ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಗುಜರಿ ವ್ಯಾಪಾರಿ ಬಂಧನ

Scrap vendor arrested for attempted to murder a police officer

ಬೆಂಗಳೂರು,ಮಾ.23- ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ಮೇಲೆಯೇ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಗುಜರಿ ವ್ಯಾಪಾರಿಯೊಬ್ಬನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.ಕೆ.ಪಿ ಅಗ್ರಹಾರ, ಭುವನೇಶ್ವರಿ ನಗರದ ನಿವಾಸಿ ಮಹದೇವ ಸ್ವಾಮಿ ಅಲಿಯಾಸ್‌‍ ರಾಮಾಚಾರಿ (33) ಬಂಧಿತ ಗುಜರಿ ವ್ಯಾಪಾರಿ.

ಕಳೆದ ಮಾ.3ರ ಮಧ್ಯರಾತ್ರಿ 12.30ರ ಸಂದರ್ಭದಲ್ಲಿ ರಾಜಾಜಿನಗರ ವೆಸ್ಟ್‌ ಆಫ್‌ ಕಾರ್ಡ್‌ ರೆಸ್ತೆಯಲ್ಲಿ ಇಬ್ಬರು ಪೊಲೀಸರು ವಾಹನ ತಪಾಸಣೆ ವೇಳೆ ಆರೋಪಿ ತನ್ನ ಟಾಟಾ ಆಲ್ಲೋಜ್‌ ಕಾರನ್ನು ಪೊಲೀಸರ ದ್ವಿಚಕ್ರ ವಾಹನಕ್ಕೆ ಗುದ್ದಿ ಪರಾರಿಯಾಗಿದ್ದ.

ತಪಾಸಣೆ ಮಾಡುತ್ತಿದ್ದ ಇಬ್ಬರು ಪೊಲೀಸರಿಗೂ ಗಾಯಗಳಾಗಿದ್ದವು. ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್‌‍ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.ಪಶ್ಚಿಮ ವಿಭಾಗದ ಉಪ ಪೊಲೀಸ್‌‍ ಆಯುಕ್ತರಾದ ಗಿರೀಶ್‌ಅವರ ಮಾರ್ಗದರ್ಶನದಲ್ಲಿ, ವಿಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತರಾದ ಚಂದನ್‌ ಕುಮಾರ್‌ ಎನ್‌ ರವರ ಸೂಚನೆಯಂತೆ, ಮಾಗಡಿ ರಸ್ತೆ ಪೊಲೀಸ್‌‍ ಠಾಣೆಯ ಪೊಲೀಸ್‌‍ ಇನ್‌್ಸಪೆಕ್ಟರ್‌ ರಾಜು, ಪಿಎಸ್‌‍ಐ ಮಂಜುನಾಥ್‌ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಕಾರನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News