ನವದೆಹಲಿ, ಜು. 16- ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಕಾಲ ಇದ್ದು, ಇದೀಗ ಭೂಮಿಗೆ ಮರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಆಗಸ್ಟ್ 17ರ ವೇಳೆಗೆ ಭಾರತಕ್ಕೆ ಬರುವ ಸಾಧ್ಯತೆಗಳಿವೆ.ಬಾಹ್ಯಾಕಾಶ ಯಾನದಿಂದ ಭೂಮಿಗೆ ಬಂದಿರುವ ಶುಭಾಂಶು ಮುಂದಿನ ತಿಂಗಳು ಆಗಸ್ಟ್ 17 ರೊಳಗೆ ಭಾರತಕ್ಕೆ ಮರಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.
ಶುಭಾಂಶು ಅವರ ಈ ಸಾಧನೆಯೊಂದಿಗೆ, ಭಾರತದ ಮಾನವಸಹಿತ ಬಾಹ್ಯಾಕಾಶ ಹಾರಾಟ ಗಗನಯಾನ ಕಾರ್ಯಾಚರಣೆಯ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲು ಸಿದ್ಧತೆಗಳು ಪ್ರಾರಂಭವಾಗಿವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋದ ಎರಡನೇ ಭಾರತೀಯ ಗಗನಯಾತ್ರಿ ಶುಭಾಂಶು.ಅವರಿಗಿಂತ ಮೊದಲು, ರಾಕೇಶ್ ಶರ್ಮಾ 1984 ರಲ್ಲಿ ಸೋವಿಯತ್ ರಷ್ಯಾದ ಕಾರ್ಯಾಚರಣೆಯ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದರು.
ಶುಭಾಂಶು ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮತ್ತು ಭೂಮಿಯ ಕಕ್ಷೆಯಲ್ಲಿ ಹೆಚ್ಚು ಕಾಲ (20 ದಿನಗಳು) ಉಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು. 40 ವರ್ಷಗಳ ನಂತರ ಹಂಗೇರಿ ಮತ್ತು ಪೋಲೆಂಡ್ನ ಗಗನಯಾತ್ರಿಗಳನ್ನು ಸಹ ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು.ಶುಭಾಂಶು ಮತ್ತು ಆಕ್ಸಿಯಮ್-4 ಮಿಷನ್ನ ಇತರ ಮೂವರು ಗಗನಯಾತ್ರಿಗಳು ಭಾರತೀಯ ಕಾಲಮಾನ ಮಧ್ಯಾಹ್ನ 3.01 ಕ್ಕೆ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಇಳಿದಿದ್ದರು.
ಆಕ್ಸಿಯಮ್ -4 ರ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ದಡಕ್ಕೆ ಕರೆದೊಯ್ಯುವ ಮೊದಲು, ಹಡಗಿನಲ್ಲಿ ಹಲವಾರು ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಯಿತು. ಭೂಮಿಯ ಮೇಲಿನ ಪುನರ್ವಸತಿಯ ಭಾಗವಾಗಿ ನಾಲ್ವರು ಗಗನಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಏಳು ದಿನಗಳ ಕಾಲ ಪ್ರತ್ಯೇಕವಾಗಿರಬೇಕಾಗುತ್ತದೆ.
ಆಕ್ಸಿಯಮ್ -4 ಮಿಷನ್ ಅಡಿಯಲ್ಲಿ, ಸ್ಪೇಸ್ಎಕ್್ಸ ಕಂಪನಿಯ ಡ್ರ್ಯಾಗನ್ ಗ್ರೇಸ್ ಬಾಹ್ಯಾಕಾಶ ನೌಕೆ ಜೂನ್ 25 ರಂದು ಫ್ಲೋರಿಡಾದಿಂದ ಹೊರಟು 28 ಗಂಟೆಗಳ ಪ್ರಯಾಣದ ನಂತರ ಜೂನ್ 26 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿತ್ತು.ಈ ಆಕ್ಸಿಯಮ್ -4 ಬಾಹ್ಯಾಕಾಶ ಕಾರ್ಯಾಚರಣೆಗಾಗಿ ಭಾರತವು 550 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತ್ತು. ಈ ಕಾರ್ಯಾಚರಣೆಯಿಂದ ಪಡೆದ ಅನುಭವವು ಮಾನವ ಬಾಹ್ಯಾಕಾಶ ಹಾರಾಟದ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ.
ಇಸ್ರೋ 2027 ರಲ್ಲಿ ಗಗನ ಯಾನ್ ಮಿಷನ್ ಅನ್ನು ಪ್ರಾರಂಭಿಸಲಿದೆ. ಇದು ಟೆಕ್ಸಾಸ್ ಮೂಲದ ಸ್ಟಾರ್ಟ್ಅಪ್ ಆಕ್ಸಿಯಮ್ ಸ್ಪೇಸ್ನ ನಾಲ್ಕನೇ ಮಿಷನ್ ಆಗಿದ್ದು, ಇದುಲಾಸ್ ಏಂಜಲೀಸ್ ಬಳಿ ಪ್ರಧಾನ ಕಚೇರಿಯನ್ನು ಹೊಂದಿರುವ ಎಲೋನ್ ಮಸ್ಕ್ ಅವರ ಖಾಸಗಿ ರಾಕೆಟ್ ಉದ್ಯಮವಾದ ಸ್ಪೇಸ್X ಸಹಯೋಗದೊಂದಿಗೆ ನಡೆಯಿತು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-07-2025)
- ರೌಡಿ ಬಿಕ್ಲುಶಿವ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
- ನೈರುತ್ಯ ವಿಭಾಗದ ಡಿಸಿಪಿ ಕಚೇರಿ ಕಾರ್ಯಾರಂಭ
- ವೈಭವದಿಂದ ಜರುಗಿದ ಚಾಮುಂಡೇಶ್ವರಿ ವರ್ಧಂತಿ ಉತ್ಸವ
- ಕೊಡಗು, ಉತ್ತರ ಕನ್ನಡದಲ್ಲಿ ಮಳೆ ಅಬ್ಬರ, ಶಾಲೆಗಳಿಗೆ ರಜೆ