Friday, June 6, 2025
Homeರಾಜ್ಯRCB ವಿಜಯೋತ್ಸವ ದುರಂತಕ್ಕೆ ಸಾಮಾಜಿಕ ಮಾಧ್ಯಮವೂ ಒಂದು ಕಾರಣ..?

RCB ವಿಜಯೋತ್ಸವ ದುರಂತಕ್ಕೆ ಸಾಮಾಜಿಕ ಮಾಧ್ಯಮವೂ ಒಂದು ಕಾರಣ..?

Social media also a reason for the RCB Celebration tragedy..?

ಬೆಂಗಳೂರು, ಜೂ.5- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿಯ ವಿಜಯೋತ್ಸವ ಆಚರಣೆ ಮತ್ತು ಪ್ರಯಾಣದ ವೇಳಾಪಟ್ಟಿಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಧ್ಯಮ ಸಲಹೆ ಬೆಳಗಿನ ಜಾವದಿಂದಲೇ ಹರಿದಾಡುತ್ತಿದ್ದದ್ದು ಕೂಡ ಈ ದುರಂತಕ್ಕೆ ಕಾರಣವಾಗಿದೆ. ಉಚಿತ ಪ್ರವೇಶ ಪಾಸ್‌ಗಳನ್ನು ಪಡೆಯಲು ಹಾಜರಿದ್ದವರಿಗೆ ಇದ್ದಕ್ಕಿದ್ದಂತೆ ಟಿಕೆಟ್ ಜಿನ್ ಎಂಬ ಅಪ್ಲಿಕೇಶನ್ ಅನ್ನು ಡೌನೋಡ್ ಮಾಡಿಕೊಳ್ಳಲು ತಿಳಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿತು ಎಂದು ಕಾಲ್ತುಳಿತದಲ್ಲಿ ಗಾಯಗೊಂಡವರ ಸ್ನೇಹಿತರು ಹಾಗೂ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ಮತ್ತು ಅನೇಕರು ಕಳಪೆ ಮೊಬೈಲ್ ನೆಟ್ವರ್ಕ್ಳೊಂದಿಗೆ ಹೋರಾಡುತ್ತಿದ್ದರು. ಗೇಟ್‌ಗಳು ತೆರೆಯುವ ಕೆಲವೇ ನಿಮಿಷಗಳ ಮೊದಲು ಈ ಪ್ರಕಟಣೆ ಬಂದಿತು ಮತ್ತು ಜನಸಂದಣಿ ಹೆಚ್ಚುತ್ತಲೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಗೇಟ್‌ಗಳು ತೆರೆಯುತ್ತಿದಂತೆ ಜನರು ಒಳಗೆ ಏಕಾಏಕಿ ಧಾವಿಸಿದರು ಮತ್ತು ಸಮಯಕ್ಕೆ ಸರಿಯಾಗಿ ಪಾಸ್‌ಗಳನ್ನು ಪಡೆಯಲು ಸಾಧ್ಯವಾಗದವರು ಬ್ಯಾರಿಕೇಡ್‌ಗಳ ಮೇಲೆ ಹಾರಲು ಪ್ರಾರಂಭಿಸಿದರು.

ಇದು ಭೀತಿ ಮತ್ತು ಕಾಲ್ತುಳಿತದಂತಹ ಪರಿಸ್ಥಿತಿಯನ್ನು ಉಂಟುಮಾಡಿತು.ಮೆರವಣಿಗೆ ಗೊಂದಲ: ನಿನ್ನೆ ಬೆಳಗ್ಗೆ 11.56 ಕ್ಕೆ ಬೆಂಗಳೂರು ಸಂಚಾರ ಪೊಲೀಸರು ಕೀಡಾಂಗಣದಲ್ಲಿ ವಿಜಯೋತ್ಸವ ಮೆರವಣಿಗೆ ಇರುವುದಿಲ್ಲ ಆದರೆ ಅಭಿನಂದನಾ ಕಾರ್ಯಕ್ರಮ ಮಾತ್ರ ನಡೆಯಲಿದೆ ಎಂದು ಘೋಷಿಸಿದರು.

ಆದಾಗ್ಯೂ, ಮಧ್ಯಾಹ್ನ 3.14 ಕ್ಕೆ ಆರ್‌ಸಿಬಿ ತಂಡದ ಆಡಳಿತ ಮಂಡಳಿಯು ಸಂಜೆ 5 ಗಂಟೆಗೆ ವಿಜಯೋತ್ಸವ ಮೆರವಣಿಗೆ ನಡೆಸುವುದಾಗಿ ಘೋಷಿಸಿತು. ವಿಕ್ಷರಿ ಪೆರೇಡ್ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಚರಣೆಗಳು ನಡೆಯಲಿದೆ. ಎಲ್ಲರೂ ರೋಡ್ ಶೋ ಅನ್ನು ಶಾಂತಿಯುತವಾಗಿ ಆನಂದಿಸಲು ಪೊಲೀಸರು ಮತ್ತು ಇತರ ಅಧಿಕಾರಿಗಳು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ನಾವು ಎಲ್ಲಾ ಅಭಿಮಾನಿಗಳನ್ನು ವಿನಂತಿಸುತ್ತೇವೆ.

ಉಚಿತ ಪಾಸ್‌ಗಳು (ಸೀಮಿತ ಪ್ರವೇಶ) ಲಭ್ಯವಿದೆ ಎಂದು ಅದು ಎಕ್ಸ್‌ಪೋಸ್ಟ್‌ನಲ್ಲಿ ತಿಳಿಸಿದೆ. ಯಾವುದೇ ವಿಜಯೋತ್ಸವದ ಪರೇಡ್ ನಡೆಯುವುದಿಲ್ಲ ಮತ್ತು ಟಿಕೆಟ್ ಹೊಂದಿರುವವರಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದರೂ, ಅಭಿಮಾನಿಗಳು ಕ್ರೀಡಾಂಗಣದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅವರಲ್ಲಿ ಹಲವರು ಪ್ರದೇಶ ಪಡೆಯಲು ಗೇಟ್ಗಳನ್ನು ಹಾರಿದರು ಎಂದು ಮೂಲಗಳು ತಿಳಿಸಿವೆ.

ಕಸ್ತೂರ್ ಬಾ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಎಲ್ಲಾ ದಿಕ್ಕುಗಳಿಂದ ಜನಸಮೂಹವು ಕ್ರೀಡಾಂಗಣದ ಕಡೆಗೆ ಧಾವಿಸಿತ್ತು. ಕೀಡಾಂಗಣದ ಹೊರಗೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಗಿಂತ ಜನಸಂದಣಿ ಹೆಚ್ಚು ಸಂಖ್ಯೆಯಲ್ಲಿತ್ತು ಎಂದು ಮೂಲಗಳು ತಿಳಿಸಿವೆ.

ಪಾಸ್‌ಗಳ ಗೊಂದಲ:
ಕೀಡಾಂಗಣಕ್ಕೆ ಪ್ರದೇಶ ಟಿಕೆಟ್ ಸಿಗದ ಹಲವಾರು ಅಭಿಮಾನಿಗಳು ಟಿಕೆಟ್ ಹೊಂದಿದ್ದವರೊಂದಿಗೆ ಆವರಣಕ್ಕೆ ನುಗ್ಗಲು ಪ್ರಯತ್ನಿಸಿದಾಗ ಆರಂಭಿಕ ಅವ್ಯವಸ್ಥೆ ನಂತರ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೀಗೆ ಗೊಂದಲ ಉಂಟಾದಾಗ, ಕೆಲವರು ನೆಲಕ್ಕೆ ಬಿದ್ದರು, ಕೆಲವರು ಕೀಡಾಂಗಣಕ್ಕೆ ಪ್ರವೇಶಿಸಲು ಬೃಹತ್ ಗೇಟ್‌ಗಳನ್ನು ಹತ್ತಲು ಪ್ರಯತ್ನಿಸುವಾಗ ಗಾಯಗೊಂಡರು.

ಸೇರಿದ್ದು ಸುಮಾರು 2 ಲಕ್ಷ ಜನ!
ಚಿನ್ನಸ್ವಾಮಿ ಕ್ರೀಡಾಂಗಣವು 35,000 ಜನರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಹೊಂದಿದೆ, ಆದರೆ 2-3 ಲಕ್ಷ ಜನರು ಸೇರಿದ್ದರು. ಇದುವೇ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪಂದ್ಯ ಮೊನ್ನೆ ಸಂಜೆ ಮುಗಿದು ಆರ್‌ಸಿಬಿ ಗೆದ್ದಾಗ ನಿನ್ನೆ ಈ ಕಾರ್ಯಕ್ರಮವನ್ನು ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿತ್ತು. ಹಾಗೆಂದು ಲಕ್ಷಗಟ್ಟಲೆ ಜನರು ಬರುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದ ಸಾಮರ್ಥ್ಯಕ್ಕೆ ಸಮಾನ ಸಂಖ್ಯೆಯ ಜನರು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಜನರು ಸೇರುತ್ತಾರೆ ಎಂದು ನಿರೀಕ್ಷಿಸಿದ್ದೆವು ಎನ್ನುತ್ತಾರೆ ಸಿಎಂ ಸಿದ್ದರಾಮಯ್ಯ.

ಸನ್ಮಾನ ಕಾರ್ಯಕ್ರಮ ನಡೆಯುತ್ತಿದ್ದ ವಿಧಾನಸೌಧದ ಮೇಲೆ ಪೊಲೀಸರು ಪ್ರಮುಖವಾಗಿ ಗಮನ ಹರಿಸಿದ್ದರು.ವಿಐಪಿಗಳ ಬಂದೋಬಸ್ ನೋಡಿಕೊಳ್ಳಲಾಗುತ್ತಿತ್ತು. ಕ್ರೀಡಾಂಗಣದ ಬಳಿಯ ರಸ್ತೆಯಲ್ಲಿ ಜನಸಂದಣಿ ನಿಯಂತ್ರಿಸಲು ಯಾವುದೇ ಹಿರಿಯ ಅಧಿಕಾರಿಗಳು ಇರಲಿಲ್ಲ,

RELATED ARTICLES

Latest News