ಗೌರಿಬಿದನೂರು,ಜು.8- ಪಶ್ಚಿಮ ಬಂಗಾಳದಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ತಾಲ್ಲೂಕಿನ ತೊಂಡೇಬಾವಿ ಗ್ರಾಮದ ಯೋಧ ಗಂಗಾಧರಪ್ಪ (54) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಕಳೆದ 30 ವರ್ಷಗಳಿಂದ ಐಟಿಬಿಪಿ ಯೋಧನಾಗಿ ದೇಶ ಸೇವೆ ಸಲ್ಲಿಸುತ್ತಿದ್ದು, ಸಿಕ್ಕಿಂ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ಗಡಿ ಪ್ರದೇಶದಲ್ಲಿ ಅವರು ಕಾರ್ಯ ನಿರ್ವಸಿದ್ದಾರೆ.
ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದು, ತಾಲ್ಲೂಕಿನ ಜನತೆ ಕಂಬನಿ ಮಿಡಿದಿದ್ದಾರೆ.
ಸೇನೆಯ ಸಿಬ್ಬಂದಿಯ ಶೇಷ ವಾಹನದಲ್ಲಿ ತೊಂಡೇಬಾಗೆ ಗಂಗಾಧರಪ್ಪ ಪಾರ್ಥಿವ ಶರೀರವನ್ನು ತಂದಾಗ ತಾಲೂಕು ಆಡಳಿತ ಸರ್ಕಾರಿ ಗೌರವಗಳಿಂದ ಬರಮಾಡಿಕೊಂಡು, ಗ್ರೇಡ್-ತಹಸೀಲ್ದಾರ್ ಆಶಾ ಗೌರವ ಸಲ್ಲಿಸಿದರು, ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು, ನಂತರ ಸರಕಾರಿ ಗೌರವಗಳೊಂದಿಗೆ ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿ ಮೃತ ಯೋಧನಿಗೆ ಗೌರವ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ, ಎಸ್ಸೆಗಳಾದ ಮೂರ್ತಿ, ಪ್ರಭಾಕರ್ ಮತ್ತು ಸಿಬ್ಬಂದ್ದಿಗಳು ಈ ಸಂದರ್ಭಲ್ಲಿ ಮೃತರ ಕುಟುಂಬಕ್ಕೆ ಸ್ವಾಂತನ ಹೇಳಿದರು.
ಸಂತಾಪ:
ಕ್ಷೇತ್ರದ ಶಾಸಕ ಕೆ.ಎಚ್ .ಪುಟ್ಟಸ್ವಾಮಿಗೌಡ, ಮಾಜಿ ಶಾಸಕರಾದ ಎನ್.ಎಚ್.ಶಿವಶಂಕರರೆಡ್ಡಿ, ಎನ್.ಜ್ಯೋತಿರೆಡ್ಡಿ, ಬಿಜೆಪಿ ಮುಖಂಡ ಎನ್.ಎಂ.ರನಾರಾಯಣರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಮಂಜುನಾಥರೆಡ್ಡಿ, ಮುಖಂಡ ಸಿ.ಆರ್.ನರಸಿಂಹಮೂರ್ತಿ ಮುಂತಾದವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.
- ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಹಿತ ಮರೆತ ಡಿಎಂ-ಡಿಸಿಎಂ : ಬೊಮ್ಮಾಯಿ
- ಸರ್ಕಾರದ ವಿರುದ್ಧ ಸಿಡಿದೆದ್ದು ಬೀದಿಗಿಳಿದ 25 ಸಾವಿರ ಮಹಾನಗರ ಪಾಲಿಕೆ ನೌಕರರು
- ಟೆಕ್ಸಾಸ್ ಪ್ರವಾಹಕ್ಕೆ 100 ಮಂದಿ ಬಲಿ
- ಪ್ರಿಯತಮನೊಂದಿಗೆ ಸೇರಿ ಪತಿ ಕೊಂದಿದ್ದ ಪತ್ನಿ : ಸಾಕ್ಷಿ ಹೇಳಿದ 3 ವರ್ಷದ ಮಗು
- ರೈಲ್ವೆ ಪ್ಲಾಟ್ಫಾರ್ಮ್ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಯೋಧನಿಗೆ ಸೇನೆ ಶ್ಲಾಘನೆ