ಇಂದೋರ್, ಜೂ. 11: ಮೊದಲ ಪ್ರಯತ್ನದಲ್ಲಿ ಪತಿಯ ಕೊಲೆ ಪ್ರಯತ್ನ ವಿಫಲವಾದರೆ ಮತ್ತೆ ಆತನನ್ನು ಕೊಲೆ ಮಾಡಿಸಲು ಸೋನಮ್ ಪ್ಲಾನ್ ಬಿ ರೆಡಿ ಮಾಡಿಕೊಂಡಿದ್ದಳು ಎಂಬ ಆಘಾತಕಾರಿ ವಿಚಾರ ಪೊಲೀಸರ ತನಿಖೆ ವೇಳೆ ಬಹಿರಂಗಗೊಂಡಿದೆ. ಇಂದೋರ್ನ ರಾಜಾ ರಘುವಂಶಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ವಿಚಾರಣೆಯ ಸಮಯದಲ್ಲಿ ಅನೇಕ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುತಂತ್ರಿ ಸೋನಮ್ ರಘುವಂಶಿ ತನ್ನ ಪತಿಯನ್ನು ಕೊಲ್ಲಲು ಪ್ಲಾನ್ ಬಿ ಅನ್ನು ಸಹ ಸಿದ್ಧಪಡಿಸಿದ್ದಳು. ಆರೋಪಿಗಳು ಅವನನ್ನು ಕೊಲ್ಲಲು ಸಾಧ್ಯವಾಗದಿದ್ದರೆ, ಸೋನಮ್ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ರಾಜ್ನನ್ನು ಕಂದಕಕ್ಕೆ ತಳ್ಳಿ ಕೊಲ್ಲಲು ಬಯಸಿದ್ದಳು ಎನ್ನುವ ಆಘಾತಕಾರಿ ವಿಚಾರ ಬಹಿರಂಗಗೊಂಡಿದೆ. ರಾಜ್ ಕುಶ್ವಾಹ ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದೆ. ರಾಜಾ ರಘುವಂಶಿ ಕೊಲೆ ಪ್ರಕರಣದ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ರಾಜಾ ರಘುವಂಶಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ರಾಜಾನನ್ನು ಕೊಂದ ನಂತರ, ದೇಹವನ್ನು ಶಿಲ್ಲಾಂಗ್ನಲ್ಲಿರುವ ಕಂದಕಕ್ಕೆ ಎಸೆಯಲಾಯಿತು. ಇಂದೋರ್ ಅಪರಾಧ ವಿಭಾಗವು ಆರೋಪಿಯ ತಪ್ಪೊಪ್ಪಿಗೆಯನ್ನು ದೃಢಪಡಿಸಿದೆ.ಆರೋಪಿಗಳನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಲಾಗುತ್ತಿದೆ. ರಾಜಾ ಅವರ ಪತ್ನಿ ಸೋನಮ್ ರಘುವಂಶಿ ಈ ಇಡೀ ಪ್ರಕರಣದ ಸೂತ್ರಧಾರಿ ಎಂದು ಹೇಳಲಾಗುತ್ತಿದೆ. ಶಿಲ್ಲಾಂಗ್ ಪೊಲೀಸರು ಎಲ್ಲಾ ಆರೋಪಿಗಳೊಂದಿಗೆ ದೆಹಲಿಗೆ ತೆರಳಿದ್ದಾರೆ. ಅಲ್ಲಿಂದ ಅವರು ಗುವಾಹಟಿಗೆ ಹೋಗಲಿದ್ದಾರೆ. ನಂತರ ಶಿಲ್ಲಾಂಗ್ ಪೊಲೀಸ್ ತಂಡ ಗುರುವಾರ ಬೆಳಗ್ಗೆ ಅಲ್ಲಿಗೆ ತಲುಪಲಿದೆ.
ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಲಾಂಗ್ ಪೊಲೀಸ್ ತಂಡ ಸೋನಮ್ ಅವರನ್ನು ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ರಾಜಾ ಹತ್ಯೆಯ ನಂತರ ಪತ್ನಿ ಸೋನಮ್ ಇಂದೋರ್ಗೆ ಬಂದಿದ್ದಾರೆಯೇ ಎಂಬುದು ಈ ಎಲ್ಲದರಲ್ಲೂ ದೊಡ್ಡ ಪ್ರಶ್ನೆಯಾಗಿದೆ. ಈ ಕುರಿತು ಎಸಿಪಿ ಪೂನಂ ಚಂದ್ ಯಾದವ್ ಮಾತನಾಡಿ, ಶಿಲ್ಲಾಂಗ್ ಪೊಲೀಸರಿಂದ ಅಂತಹ ಮಾಹಿತಿ ಪಡೆಯುವ ಬಗ್ಗೆ ನಾವು ಕೆಲಸ ಮಾಡುತ್ತೇವೆ. ಇಲ್ಲಿಯವರೆಗೆ ನಮಗೆ ಅಂತಹ ಯಾವುದೇ ಮಾಹಿತಿ ಬಂದಿಲ್ಲ ಎಂದಿದ್ದಾರೆ.
ಕೊಲೆಯ ಮಾಸ್ಟರ್ ಮೈಂಡ್ ರಾಜ್ ಕುಶ್ವಾಹ. ಮದುವೆಗೆ ಮುಂಚೆಯೇ ರಾಜಾ ರಘುವಂಶಿಯ ಕೊಲೆಗೆ ಸಿದ್ಧತೆಮಾಡಿಕೊಂಡಿದ್ದ. ರಾಜಾ ಮತ್ತು ಸೋನಂ ತಮ್ಮ ಹನಿಮೂನ್ಗೆ ಹೊರಡುವ ಮೊದಲೇ ಎಲ್ಲರೂ ಶಿಲ್ಲಾಂಗ್ಗೆ ತೆರಳಿದ್ದರು.ರಾಜ ರಘುವಂಶಿ ಮೇಲೆ ವಿಶಾಲ್ ಮೊದಲು ದಾಳಿ ಮಾಡಿದ್ದ. ವಿಶಾಲ್ ಮನೆಯಿಂದ ವಶಪಡಿಸಿಕೊಂಡ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಈಗ ವಿಧಿವಿಜ್ಞಾನ ತನಿಖೆಯಿಂದ ಅದು ಯಾರ ರಕ್ತ ಎಂದು ತಿಳಿದುಬರುತ್ತದೆ. ಯಾರಿಗೂ ಏನೂ ಅನುಮಾನ ಬರದಂತೆ ರಾಜ್ ಇಂದೋರ್ನಲ್ಲಿಯೇ ಉಳಿದುಕೊಂಡಿದ್ದ ಎಂದು ಪೊಲೀಸರು ಹೇಳುತ್ತಾರೆ.
ಶಿಲ್ಲಾಂಗ್ ಪೊಲೀಸರು ಆರೋಪಿಗಳಿಂದ ಕೆಲವು ತಾಂತ್ರಿಕ ಪುರಾವೆಗಳನ್ನು ಸಹ ಪಡೆದುಕೊಂಡಿದ್ದಾರೆ.ಎಲ್ಲಾ ಆರೋಪಿಗಳನ್ನು ವಿಮಾನದ ಮೂಲಕ ಕರೆದೊಯ್ಯಲಾಯಿತು. ಎಲ್ಲರನ್ನೂ ಇಂದೋರ್ ಅಪರಾಧ ಶಾಖೆಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಏತನ್ಮಧ್ಯೆ, ಇಂದೋರ್ ವಿಮಾನ ನಿಲ್ದಾಣದಲ್ಲಿ ರಾಜಾ ರಘುವಂಶಿ ಕೊಲೆ ಪ್ರಕರಣದ ಆರೋಪಿಯನ್ನು ನೋಡಿದ ಜನರು ಕೋಪಗೊಂಡರು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಆರೋಪಿಯನ್ನು ಥಳಿಸಿದರು. ಇದು ಮಾತ್ರವಲ್ಲದೆ, ವಿಮಾನ ನಿಲ್ದಾಣದಲ್ಲಿ ಒಬ್ಬ ಪ್ರಯಾಣಿಕನು ರಾಜ್ಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ.